ವೈಜ್ಞಾನಿಕ ಪರಿಶೋಧನೆ ಮತ್ತು ಶುಕ್ರನಲ್ಲಿನ ವಾತಾವರಣ, ಭೂವಿಜ್ಞಾನದ ಉತ್ತಮ ತಿಳುವಳಿಕೆಗಾಗಿ ಶುಕ್ರಗ್ರಹ ಅಭಿಯಾನಕ್ಕೆ ಸಂಪುಟ ಅನುಮೋದನೆ ಮತ್ತು ಅದರ ದಟ್ಟವಾದ ವಾತಾವರಣದಲ್ಲಿ ಅನ್ವೇಷಣೆ ಮಾಡುವ ದೊಡ್ಡ ಪ್ರಮಾಣದ ವಿಜ್ಞಾನದ ದತ್ತಾಂಶವನ್ನು ಇದು ಉತ್ಪಾದಿಸುತ್ತದೆ ಮತ್ತು ತೀವ್ರತೆರನಾದ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದ ವೈಜ್ಞಾನಿಕ ದತ್ತಾಂಶ ಪರಿಶೋಧನೆಗೆ ಸಹಕಾರಿಯಾಗಲಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶುಕ್ರ ಗ್ರಹದ ಕ್ಷಕ್ಷೆಯ ಅಭಿಯಾನ[ವಿಒಎಂ]ಕ್ಕೆ  ಅನುಮೋದನೆ ನೀಡಲಾಗಿದೆ. ಇದು ಚಂದ್ರ ಮತ್ತು ಮಂಗಳವನ್ನು ಮೀರಿ ಶುಕ್ರನನ್ನು ಅನ್ವೇಷಿಸುವ ಮತ್ತು ಅಧ್ಯಯನ ಮಾಡುವ ಸರ್ಕಾರದ ದೃಷ್ಟಿಯತ್ತ ಮಹತ್ವದ ಹೆಜ್ಜೆಯಾಗಿದೆ. ಶುಕ್ರ, ಭೂಮಿಗೆ ಹತ್ತಿರವಿರುವ ಗ್ರಹ ಮತ್ತು ಭೂಮಿಯಂತೆಯೇ ಪರಿಸ್ಥಿತಿಗಳಲ್ಲಿ ರೂಪುಗೊಂಡಿದೆ ಎಂದು ನಂಬಲಾಗಿದೆ, ಗ್ರಹಗಳ ಪರಿಸರವು ಹೇಗೆ ವಿಭಿನ್ನವಾಗಿ ವಿಕಸನಗೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಒಂದು ಅನನ್ಯ ಅವಕಾಶವನ್ನು ನೀಡಲಿದೆ.

ಶುಕ್ರನ ಮೇಲ್ಮೈ ಮತ್ತು ಉಪಮೇಲ್ಮೈ, ವಾತಾವರಣದ ಪ್ರಕ್ರಿಯೆಗಳು ಮತ್ತು ಶುಕ್ರನ ಪರಿಸ್ಥಿತಿ ಮೇಲೆ ಸೂರ್ಯನ ಪ್ರಭಾವದ ಬಗ್ಗೆ ಉತ್ತಮ ತಿಳುವಳಿಕೆಗಾಗಿ ಶುಕ್ರ ಗ್ರಹದ ಕಕ್ಷೆಯಲ್ಲಿ ವೈಜ್ಞಾನಿಕ ಬಾಹ್ಯಾಕಾಶ ನೌಕೆಯನ್ನು ಪರಿಭ್ರಮಿಸಲು ಬಾಹ್ಯಾಕಾಶ ಇಲಾಖೆಯು 'ವೀನಸ್ ಆರ್ಬಿಟರ್ ಮಿಷನ್' ಅನ್ನು ಪೂರೈಸಲಿದೆ. ಶುಕ್ರನ ರೂಪಾಂತರದ ಆಧಾರವಾಗಿರುವ ಕಾರಣಗಳ ಅಧ್ಯಯನವು ಒಮ್ಮೆ ವಾಸಯೋಗ್ಯವಾಗಿದೆ ಮತ್ತು ಭೂಮಿಗೆ ಹೋಲುತ್ತದೆ ಎಂದು ನಂಬಲಾಗಿದೆ, ಇದು ಶುಕ್ರ ಮತ್ತು ಭೂಮಿ ಎರಡರ ಸಹೋದರ ಗ್ರಹಗಳ ವಿಕಾಸವನ್ನು ಅರ್ಥಮಾಡಿಕೊಳ್ಳಲು ಅಮೂಲ್ಯವಾದ ಕ್ರಮವಾಗಿದೆ.

ಈ ಕುರಿತಾದ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುವ ಮತ್ತು ಉಡಾವಣೆ ಮಾಡುವ ಜವಾಬ್ದಾರಿ ಇಸ್ರೋದ್ದಾಗಿದೆ. ಇಸ್ರೋದಲ್ಲಿ ಸ್ಥಾಪನೆಯಾಗಿರುವ ವ್ಯವಸ್ಥೆಯ ಮೂಲಕ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮತ್ತು ನಿಗಾ ವಹಿಸಲಾಗುತ್ತದೆ. ಇಲ್ಲಿಂದ ದೊರೆಯುವ ದತ್ತಾಂಶವನ್ನು ಹಾಲಿ ವ್ಯವಸ್ಥೆಯ ಮೂಲಕ ವೈಜ್ಞಾನಿಕ ಸಮುದಾಯಕ್ಕೆ ಪಸರಿಸಲಾಗುತ್ತದೆ.

ಬರುವ 2028 ರ ಮಾರ್ಚ್ ನಲ್ಲಿ ಲಭ್ಯವಿರುವ ಅವಕಾಶದ ಮೇಲೆ ಈ ಕಾರ್ಯಾಚರಣೆಯನ್ನು ಸಾಧಿಸುವ ನಿರೀಕ್ಷೆಯಿದೆ. ಭಾರತೀಯ ಶುಕ್ರ ಗ್ರಹ ಅಭಿಯಾನ ಹಲವಾರು ವೈಜ್ಞಾನಿಕ ಫಲಿತಾಂಶಗಳಿಗೆ ಕಾರಣವಾಗುವ ಕೆಲವು ಅತ್ಯುತ್ತಮ ವೈಜ್ಞಾನಿಕ ಪ್ರಶ್ನೆಗಳಿಗೆ ಉತ್ತರಿಸುವ ನಿರೀಕ್ಷೆಯಿದೆ. ಬಾಹ್ಯಾಕಾಶ ನೌಕೆ ಮತ್ತು ಉಡಾವಣಾ ವಾಹನದ ಸಾಕ್ಷಾತ್ಕಾರವು ವಿವಿಧ ಕೈಗಾರಿಕೆಗಳ ಮೂಲಕವಾಗಿದೆ ಮತ್ತು ಆರ್ಥಿಕತೆಯ ಇತರ ಕ್ಷೇತ್ರಗಳಿಗೆ ದೊಡ್ಡ ಉದ್ಯೋಗಾವಕಾಶ ಮತ್ತು ತಂತ್ರಜ್ಞಾನದ ಪರಿವರ್ತನೆಗೆ ಇದು ಕಾರಣವಾಗುವ ನಿರೀಕ್ಷೆಯಿದೆ.

ಶುಕ್ರ ಗ್ರಹದ ಕ್ಷಕ್ಷೆಯ ಅಭಿಯಾನ[ವಿಒಎಂ]ಕ್ಕೆ  ಒಟ್ಟು 1236 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಈ ಪೈಕಿ 824 ಕೋಟಿ ರೂಪಾಯಿ ಬಾಹ್ಯಾಕಾಶ ನೌಕೆಗೆ ವಿನಿಯೋಗವಾಗಲಿರುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ವೆಚ್ಚವು ಅದರ ನಿರ್ದಿಷ್ಟ ಪೇಲೋಡ್‌ಗಳು ಮತ್ತು ತಂತ್ರಜ್ಞಾನದ ಅಂಶಗಳು, ನ್ಯಾವಿಗೇಷನ್ ಮತ್ತು ಸಂಪರ್ಕ ಜಾಲ, ಜಾಗತಿಕ ನೆಲದ ನಿಲ್ದಾಣದ ಬೆಂಬಲ ವೆಚ್ಚ ಮತ್ತು ಉಡಾವಣಾ ವಾಹನದ ವೆಚ್ಚವನ್ನು ಒಳಗೊಂಡಂತೆ ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ಮತ್ತು ಇದು ಸಾಕಾರಗೊಳ್ಳುವುದನ್ನು ಒಳಗೊಂಡಿದೆ.

ಶುಕ್ರನತ್ತ ಪಯಣ

ಈ ಮಿಷನ್ ದೊಡ್ಡ ಪೇಲೋಡ್‌ಗಳು, ಸೂಕ್ತವಾದ ಕಕ್ಷೆಯನ್ನು ಸೇರಿಸುವ ವಿಧಾನಗಳೊಂದಿಗೆ ಭವಿಷ್ಯದ ಗ್ರಹಗಳ ಕಾರ್ಯಾಚರಣೆಗಳಿಗೆ ಭಾರತವನ್ನು ಸಕ್ರಿಯಗೊಳಿಸುತ್ತದೆ. ಬಾಹ್ಯಾಕಾಶ ನೌಕೆ ಮತ್ತು ಉಡಾವಣಾ ವಾಹನದ ಅಭಿವೃದ್ಧಿಯ ಸಮಯದಲ್ಲಿ ಭಾರತೀಯ ಉದ್ಯಮದ ಗಮನಾರ್ಹ ಒಳಗೊಳ್ಳುವಿಕೆಗೆ ಇದು ಕಾರಣವಾಗಲಿದೆ.  ವಿನ್ಯಾಸ, ಅಭಿವೃದ್ದಿ, ಪರೀಕ್ಷೆ, ದತ್ತಾಂಶ ಕಡಿತ, ಮಾಪನಾಂಕ ನಿರ್ಣಯಿಸುವುದು ಮತ್ತಿತರೆ ಚಟುವಟಿಕೆಗಳಲ್ಲಿ ಪೂರ್ವ ಉಡಾವಣೆಗಾಗಿ ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಇದರಡಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದು ಸಹ ಕಲ್ಪನೆಯಾಗಿದೆ. ಈ ಅಭಿಯಾನ ವಿಶಿಷ್ಟ ಸಾಧನಗಳ ಮೂಲಕ  ಭಾರತೀಯ ವಿಜ್ಞಾನ ಸಮುದಾಯಕ್ಕೆ ಹೊಸ ಮತ್ತು ಮೌಲ್ಯಯುತವಾದ ವಿಜ್ಞಾನ ದತ್ತಾಂಶವನ್ನು ನೀಡಲಿದೆ ಮತ್ತು ಆ ಮೂಲಕ ಬೆಳವಣಿಗೆಯಾಗುತ್ತಿರುವ ಹೊಸ ಅವಕಾಶಗಳನ್ನು ಒದಗಿಸಲಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
99.92% villages in India covered with banking outlets within 5 km radius: Govt

Media Coverage

99.92% villages in India covered with banking outlets within 5 km radius: Govt
NM on the go

Nm on the go

Always be the first to hear from the PM. Get the App Now!
...
Prime Minister meets Acharya Shri Padmasagar Surishwar Ji
March 31, 2026

Prime Minister Shri Narendra Modi, today, met Acharya Shri Padmasagar Surishwar Ji Maharaj Sahib and sought his blessings.

The Prime Minister posted on X;

“Met Acharya Shri Padmasagar Surishwar Ji Maharaj Sahib and sought his blessings.”