ಇದೇ ಫೆಬ್ರವರಿ 22 ರಂದು ನಡೆಯಲಿರುವ ಮನ್ ಕಿ ಬಾತ್ ಗಾಗಿ ಸಲಹೆಗಳನ್ನು ಆಹ್ವಾನಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ಅವರು, ವಿಶ್ವ ರೇಡಿಯೋ ದಿನವು ದೂರದ ಹಳ್ಳಿಗಳಲ್ಲಿರಲಿ ಅಥವಾ ಜನದಟ್ಟಣೆಯ ನಗರಗಳಲ್ಲಿರಲಿ ಜನರಿಗೆ ವಿಶ್ವಾಸಾರ್ಹ ಧ್ವನಿಯಾಗಿರುವ ಮಾಧ್ಯಮವನ್ನು ಸಂಭ್ರಮಿಸುವ ಬಗೆಯಾಗಿದೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ರೇಡಿಯೋ ಸಕಾಲಿಕ ಮಾಹಿತಿಯನ್ನು ನೀಡುತ್ತಿದೆ, ಪ್ರತಿಭೆಗಳನ್ನು ಬೆಳೆಸಿದೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.

”ಮನ್ ಕಿ ಬಾತ್ ಮೂಲಕ ನಮ್ಮ ಜನರ ಸಾಮಾಜಿಕ ಶಕ್ತಿಯನ್ನು ಹೊರತರುವಲ್ಲಿ ರೇಡಿಯೊದ ಸಾಮರ್ಥ್ಯವನ್ನು ನಾನು ಖುದ್ದು ಅನುಭವಿಸಿದ್ದೇನೆ. ಈ ತಿಂಗಳ ಕಾರ್ಯಕ್ರಮವು ಫೆಬ್ರವರಿ 22ರ ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮಕ್ಕಾಗಿ ನಿಮ್ಮ ಸಲಹೆಗಳನ್ನು ಹಂಚಿಕೊಳ್ಳಿ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ  X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ವಿಶ್ವ ರೇಡಿಯೋ ದಿನವು , ಅದು ದೂರದ ಹಳ್ಳಿಗಳಾಗಿರಬಹುದು ಅಥವಾ ಜನದಟ್ಟಣೆಯ ನಗರಗಳಾಗಿರಬಹುದು ಜನರಿಗೆ ವಿಶ್ವಾಸಾರ್ಹ ಧ್ವನಿಯಾಗಿರುವ ಮಾಧ್ಯಮವನ್ನು ಸಂಭ್ರಮಿಸುವ ಬಗೆಯಾಗಿದೆ. ಹಲವು ವರ್ಷಗಳಿಂದ ರೇಡಿಯೋ ಸಕಾಲಿಕ ಮಾಹಿತಿಯನ್ನು ನೀಡಿದೆ, ಪ್ರತಿಭೆಗಳನ್ನು ಬೆಳೆಸಿದೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸಿದೆ. ಈ ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಪ್ರಯತ್ನಗಳನ್ನು ಗುರುತಿಸುವ ದಿನ ಇದಾಗಿದೆ.

#MannKiBaat ಮೂಲಕ ನಮ್ಮ ಜನರ ಸಾಮಾಜಿಕ ಶಕ್ತಿಯನ್ನು ಹೊರತರುವಲ್ಲಿ ರೇಡಿಯೊದ ಸಾಮರ್ಥ್ಯವನ್ನು ನಾನು ಖುದ್ದು ಅನುಭವಿಸಿದ್ದೇನೆ. ಈ ತಿಂಗಳ ಕಾರ್ಯಕ್ರಮವು ಫೆಬ್ರವರಿ 22 ರ ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮಕ್ಕಾಗಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ’’

https://mygov.in/group-issue/inviting-ideas-mann-ki-baat-prime-minister-narendra-modi-22nd-february-2026/?target=inapp&type=group_issue&nid=366266

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Over 51 lakh households benefit under PM Surya Ghar, 28.4 lakh farm pumps solarised: Govt

Media Coverage

Over 51 lakh households benefit under PM Surya Ghar, 28.4 lakh farm pumps solarised: Govt
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlighting determination, perseverance, and continuous effort in overcoming life's challenges
August 13, 2026

Prime Minister Shri Narendra Modi shared a Sanskrit Subhashitam today, highlighting the power of determination, perseverance, and courage in overcoming life's challenges and turning adverse circumstances into favorable ones.

The Prime Minister wrote on X;

"दैवं पुरुषकारेण यः समर्थः प्रबाधितुम्।

न दैवेन विपन्नार्थः पुरुषः सोऽवसीदति॥"

A person who possesses the determination, perseverance and courage to turn adverse circumstances into favorable ones is never defeated by the challenges of life. Instead, through continuous effort and unwavering resolve, he moves forward and ultimately achieves success.