ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 175 ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು 100 ಪಾಲಿಟೆಕ್ನಿಕ್‌ಗಳನ್ನು ಒಳಗೊಂಡು 275 ತಾಂತ್ರಿಕ ಸಂಸ್ಥೆಗಳಲ್ಲಿ 'ತಾಂತ್ರಿಕ ಶಿಕ್ಷಣದಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ಸುಧಾರಣೆ' (MERITE) ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ. ರಾಷ್ಟ್ರೀಯ ಶೈಕ್ಷಣಿಕ ನೀತಿ-2020 (NEP-2020) ಗೆ ಅನುಗುಣವಾಗಿ ಮಧ್ಯಪ್ರವೇಶಗಳನ್ನು ಅನುಷ್ಠಾನಗೊಳಿಸುವ ಮೂಲಕ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ  ತಾಂತ್ರಿಕ ಶಿಕ್ಷಣದಲ್ಲಿ ಗುಣಮಟ್ಟ, ಸಮಾನತೆ ಮತ್ತು ಆಡಳಿತವನ್ನು ಸುಧಾರಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇದು 2025-26 ರಿಂದ 2029-30 ರವರೆಗಿನ ಅವಧಿಗೆ ಒಟ್ಟು 4200 ಕೋಟಿ ರೂ.ಗಳ ಆರ್ಥಿಕ ಹೊರೆಯನ್ನು ಹೊಂದಿರುವ 'ಕೇಂದ್ರ ವಲಯ ಯೋಜನೆ'ಯಾಗಿದೆ. 4200 ಕೋಟಿ ರೂ.ಗಳಲ್ಲಿ, ವಿಶ್ವ ಬ್ಯಾಂಕಿನಿಂದ ಸಾಲವಾಗಿ 2100 ಕೋಟಿ ರೂ.ಗಳ ಬಾಹ್ಯ ನೆರವು ಇರುತ್ತದೆ.

ಪ್ರಯೋಜನಗಳು:

ಈ ಯೋಜನೆಯಡಿಯಲ್ಲಿ ಅಂದಾಜು 275 ಸರ್ಕಾರಿ/ಸರ್ಕಾರದ ಅನುದಾನಿತ ತಾಂತ್ರಿಕ ಸಂಸ್ಥೆಗಳನ್ನು ಆಯ್ಕೆ ಮಾಡಿ ಬೆಂಬಲಿಸುವ ನಿರೀಕ್ಷೆಯಿದೆ. ಇದರಲ್ಲಿ ಆಯ್ದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು (NITಗಳು), ರಾಜ್ಯ ಎಂಜಿನಿಯರಿಂಗ್ ಸಂಸ್ಥೆಗಳು, ಪಾಲಿಟೆಕ್ನಿಕ್‌ಗಳು ಮತ್ತು ಸಂಯೋಜಿತ  ತಾಂತ್ರಿಕ ವಿಶ್ವವಿದ್ಯಾಲಯಗಳು (ATUಗಳು) ಸೇರಿವೆ. ಇದಲ್ಲದೆ ತಾಂತ್ರಿಕ ಶಿಕ್ಷಣ ವಲಯವನ್ನು ನಿರ್ವಹಿಸುವ ರಾಜ್ಯ/ಕೇಂದ್ರಾಡಳಿತ ಇಲಾಖೆಗಳನ್ನು ಸಹ ಎಮ್.ಇ.ಆರ್.ಐ.ಟಿ.ಇ. (MERITE) ಯೋಜನೆಯ ಮೂಲಕ ಬೆಂಬಲಿಸಲಾಗುತ್ತದೆ. ಇದಲ್ಲದೆ, ಸುಮಾರು 7.5 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ.

ಉದ್ಯೋಗ ಸೃಷ್ಟಿ ಸೇರಿದಂತೆ ಪರಿಣಾಮ:

ಈ ಯೋಜನೆಯಿಂದ ನಿರೀಕ್ಷಿಸಲಾದ ಪ್ರಮುಖ ಫಲಿತಾಂಶಗಳು/ಫಲಿತಾಂಶಗಳು:

i. ಭಾಗವಹಿಸುವ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಜಿಟಲೀಕರಣ ಕಾರ್ಯತಂತ್ರಗಳು,
ii. ತಾಂತ್ರಿಕ ಕೋರ್ಸ್‌ಗಳಲ್ಲಿ ಬಹುಶಿಸ್ತೀಯ ಕಾರ್ಯಕ್ರಮಗಳಿಗೆ ಮಾರ್ಗಸೂಚಿಗಳ ಅಭಿವೃದ್ಧಿ,
iii. ವಿದ್ಯಾರ್ಥಿಗಳ ಕಲಿಕೆ ಮತ್ತು ಉದ್ಯೋಗ ಕೌಶಲ್ಯಗಳಲ್ಲಿ ಹೆಚ್ಚಳ,
iv. ವಿದ್ಯಾರ್ಥಿ ಗುಂಪುಗಳಲ್ಲಿ ವಿದ್ಯಾರ್ಥಿಗಳ ಪರಿವರ್ತನೆಯ ದರದಲ್ಲಿ ಹೆಚ್ಚಳ,
v. ಸಂಶೋಧನೆ ಮತ್ತು ನಾವೀನ್ಯತೆ ಪರಿಸರವನ್ನು ಬಲಪಡಿಸುವುದು,
vi. ದೀರ್ಘಾವಧಿಯ ಪ್ರಯೋಜನಗಳಿಗೆ ಕಾರಣವಾಗುವ ಉತ್ತಮ ಗುಣಮಟ್ಟದ ಭರವಸೆದಾಯಕ ಮತ್ತು ಆಡಳಿತ ಕಾರ್ಯವಿಧಾನಗಳು,
vii. ಮಾನ್ಯತೆಯಲ್ಲಿ ಹೆಚ್ಚಳ ಮತ್ತು ಉತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆ - ಮಟ್ಟದ ಗುಣಮಟ್ಟದ ಭರವಸೆ,
viii. ಸಂಬಂಧಿತ, ಕಾರ್ಮಿಕ ಮಾರುಕಟ್ಟೆ-ಜೋಡಣೆಗೊಂಡ ಪಠ್ಯಕ್ರಮಗಳು ಮತ್ತು ಮಿಶ್ರ ಕೋರ್ಸ್‌ಗಳನ್ನು ಅಭಿವೃದ್ಧಿ ಮತ್ತು ಅನುಷ್ಠಾನ ಮತ್ತು
ix. ಭವಿಷ್ಯದ ಶೈಕ್ಷಣಿಕ ಆಡಳಿತಗಾರರ ಅಭಿವೃದ್ಧಿ,ಅದರಲ್ಲೂ ವಿಶೇಷವಾಗಿ ಮಹಿಳಾ ಅಧ್ಯಾಪಕರು.

ಅನುಷ್ಠಾನ ತಂತ್ರ ಮತ್ತು ಗುರಿಗಳು

ಈ ಯೋಜನೆಯನ್ನು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಜಾರಿಗೆ ತರಲಾಗುವುದು. ಈ ಮಧ್ಯಸ್ಥಿಕೆಗಳು ಎನ್.ಇ.ಪಿ (NEP) -2020 ಕ್ಕೆ ಅನುಗುಣವಾಗಿರುತ್ತವೆ ಮತ್ತು ಭಾಗವಹಿಸುವ ಸಂಸ್ಥೆಗಳ ಗುಣಮಟ್ಟ, ಸಮಾನತೆ ಮತ್ತು ಆಡಳಿತವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಇದನ್ನು ಕೇಂದ್ರ ವಲಯ ಯೋಜನೆಯಾಗಿ ಕಾರ್ಯಗತಗೊಳಿಸಲಾಗುತ್ತದೆ ಮತ್ತು ಕೇಂದ್ರ ಸರ್ಕಾರದಿಂದ ಕೇಂದ್ರ ನೋಡಲ್ ಏಜೆನ್ಸಿಯ ಮೂಲಕ ಭಾಗವಹಿಸುವ ಸಂಸ್ಥೆಗಳಿಗೆ ನಿಧಿ ವರ್ಗಾವಣೆಯ ಸೌಲಭ್ಯವನ್ನು ಹೊಂದಿರುತ್ತದೆ.

ಐ.ಐ.ಟಿಗಳು ಮತ್ತು ಐ.ಐ.ಎಂಗಳಂತಹ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು ಮತ್ತು ಉನ್ನತ ಶಿಕ್ಷಣ ವಲಯದ ನಿಯಂತ್ರಕ ಸಂಸ್ಥೆಗಳಾದ ಎ.ಐ.ಸಿ.ಟಿ.ಇ, ಎನ್‌.ಬಿ.ಎ ಇತ್ಯಾದಿಗಳು ಸಹ ಯೋಜನೆಯ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಉದ್ಯೋಗ ಸೃಷ್ಟಿ:

ಈ ಉಪಕ್ರಮವು ಸಮಗ್ರ, ಬಹುಮುಖಿ ವಿಧಾನದ ಮೂಲಕ ವಿದ್ಯಾರ್ಥಿಗಳ ಉದ್ಯೋಗ ಗಳಿಕೆ ಸಾಮರ್ಥ್ಯವನ್ನು ಸುಧಾರಿಸಲು ಅವರ ಕೌಶಲ್ಯಗಳನ್ನು ಹೆಚ್ಚಿಸುವುದನ್ನು ಒತ್ತಿಹೇಳುತ್ತದೆ. ಪ್ರಮುಖ ಮಧ್ಯಸ್ಥಿಕೆಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡುವುದು, ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ನವೀಕರಿಸುವುದು, ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿವೆ. ಹೆಚ್ಚುವರಿಯಾಗಿ, ಇನ್‌ಕ್ಯುಬೇಶನ್ ಮತ್ತು ನಾವೀನ್ಯತೆ ಕೇಂದ್ರಗಳು, ಕೌಶಲ್ಯ ಮತ್ತು ತಯಾರಕ ಪ್ರಯೋಗಾಲಯಗಳು ಮತ್ತು ಭಾಷಾ ಕಾರ್ಯಾಗಾರಗಳಿಗೆ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಕ್ರಮಗಳು ಹೊಸ ಪದವೀಧರರ ಉದ್ಯೋಗ ಗಳಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ, ಇದು ಹೆಚ್ಚಿನ ಉದ್ಯೋಗ ಗಳಿಕೆ ದರಗಳಿಗೆ ಕಾರಣವಾಗುತ್ತದೆ ಮತ್ತು ಅಂತಿಮವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ನಿರುದ್ಯೋಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಿನ್ನೆಲೆ:

ದೇಶದ ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಯು ಹೆಚ್ಚಾಗಿ ತಾಂತ್ರಿಕ ಪ್ರಗತಿಯ ಮೇಲೆ ಅವಲಂಬಿತವಾಗಿದೆ, ಇದಕ್ಕೆ ಶೈಕ್ಷಣಿಕ ಮತ್ತು ಸಂಶೋಧನಾ ಮಾನದಂಡಗಳನ್ನು ನವೀಕರಿಸಲು ನಿರಂತರ ಪ್ರಯತ್ನಗಳು ಬೇಕಾಗುತ್ತವೆ. ಸಂಶೋಧನೆಯು ಆಧುನಿಕ ಸವಾಲುಗಳನ್ನು ಎದುರಿಸಲು ಮೂಲಶಕ್ತಿಯಾದ ನಾವೀನ್ಯತೆಯನ್ನು ಬೆಳೆಸುತ್ತದೆ ಮತ್ತು ದೀರ್ಘಕಾಲೀನ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸುತ್ತದೆ. ಈ ವಿಧಾನದೊಂದಿಗೆ ಎಮ್.ಇ.ಆರ್.ಐ.ಟಿ.ಇ. (MERITE) ಯೋಜನೆಯನ್ನು ವಿಶ್ವಬ್ಯಾಂಕ್‌ನ ಸಹಯೋಗದೊಂದಿಗೆ ರೂಪಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ-2020 ರಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಲ್ಪಿಸಲಾದ ಸುಧಾರಣೆಗಳನ್ವಯ ಈ ಮಧ್ಯಸ್ಥಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ. 

ನೀತಿಯಲ್ಲಿನ ಪ್ರಮುಖ ಸುಧಾರಣಾ ಕ್ಷೇತ್ರಗಳಲ್ಲಿ ಪಠ್ಯಕ್ರಮ, ಶಿಕ್ಷಣಶಾಸ್ತ್ರ, ಮೌಲ್ಯಮಾಪನ, ತಾಂತ್ರಿಕ ಕೋರ್ಸ್‌ಗಳಲ್ಲಿ ಬಹುಶಿಸ್ತೀಯ ಕಾರ್ಯಕ್ರಮಗಳು, ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು, ಭವಿಷ್ಯದ ಶೈಕ್ಷಣಿಕ ಆಡಳಿತಗಾರರ ಅಭಿವೃದ್ಧಿ, ಅಧ್ಯಾಪಕರ ಕೌಶಲ್ಯ ಉನ್ನತೀಕರಣ, ತಾಂತ್ರಿಕ ಶಿಕ್ಷಣದಲ್ಲಿನ ಲಿಂಗತ್ವದ ಅಂತರವನ್ನು ನಿವಾರಿಸುವುದು ಮತ್ತು ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು ಇತ್ಯಾದಿ ಸೇರಿವೆ.

ಭಾಗವಹಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪ್ರಮುಖ ಪಾಲುದಾರರಾಗಿದ್ದಾರೆ. ಯೋಜನೆಯ ಅನುಷ್ಠಾನದಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಹಲವಾರು ಸಭೆಗಳು ಹಾಗು ಸಮಾಲೋಚನೆಗಳಲ್ಲಿ ಸ್ವೀಕರಿಸಿದ ಅವರ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಯನ್ನು ಮಧ್ಯಸ್ಥಿಕೆಗಳನ್ನು ವಿನ್ಯಾಸಗೊಳಿಸುವಾಗ ಪರಿಗಣಿಸಲಾಗಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSMEs’ contribution to GDP rises, exports triple, and NPA levels drop

Media Coverage

MSMEs’ contribution to GDP rises, exports triple, and NPA levels drop
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of grasping the essence of knowledge
January 20, 2026

The Prime Minister, Shri Narendra Modi today shared a profound Sanskrit Subhashitam that underscores the timeless wisdom of focusing on the essence amid vast knowledge and limited time.

The sanskrit verse-
अनन्तशास्त्रं बहुलाश्च विद्याः अल्पश्च कालो बहुविघ्नता च।
यत्सारभूतं तदुपासनीयं हंसो यथा क्षीरमिवाम्बुमध्यात्॥

conveys that while there are innumerable scriptures and diverse branches of knowledge for attaining wisdom, human life is constrained by limited time and numerous obstacles. Therefore, one should emulate the swan, which is believed to separate milk from water, by discerning and grasping only the essence- the ultimate truth.

Shri Modi posted on X;

“अनन्तशास्त्रं बहुलाश्च विद्याः अल्पश्च कालो बहुविघ्नता च।

यत्सारभूतं तदुपासनीयं हंसो यथा क्षीरमिवाम्बुमध्यात्॥”