Inaugurates Joka-Taratala stretch of Purple Line of Kolkata Metro
Dedicates four railway projects to the nation
Lays foundation stone for redevelopment of the New Jalpaiguri Railway Station
“Land from where the call of Vande Matram originated, saw the flagging off of Vande Bharat today”
“Modern sewage treatment plants are being developed keeping in mind the requirements of future”
“A nationwide campaign is going on to transform the Indian Railway”
“In 21st Century for rapid development of the country, rapid growth and reform of Railways is essential”
“Metro Rail system is an example of India’s speed and scale today”
“Construction of new airports, waterways, ports and roads is being carried out to ensure seamless connectivity for the citizens”
“India is working toward boosting its Jal Shakti today”
“On 13th January a cruise will set sail from Kashi to Dibrugarh via Bangladesh. The 3200 km long journey is the first-of-its-kind in the entire world and a reflection of the growing cruise tourism in the country”
“People of Bengal follow the spirit of ‘Nation First’ in tourism also”
“Whole world is looking at India with great hope. To maintain this trust, every Indian has to exert all his might”

ನಮಸ್ಕಾರ,

ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಸಿ.ವಿ.ಆನಂದ ಬೋಸ್ ಅವರೇ, ಮುಖ್ಯಮಂತ್ರಿ ಗೌರವಾನ್ವಿತ ಮಮತಾ ಬ್ಯಾನರ್ಜಿ ಅವರೇ ಹಾಗೂ  ನನ್ನ ಕೇಂದ್ರ ಸಂಪುಟದ ಸಹೋದ್ಯೋಗಿ ಅಶ್ವಿನಿ ವೈಷ್ಣವ್, ಸುಭಾಷ್ ಸರ್ಕಾರ್, ನಿಸಿತ್ ಪ್ರಮಾಣಿಕ್, ಜಾನ್ ಬಾರ್ಲಾ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಸಂಸದ ಪ್ರಸೂನ್, ವೇದಿಕೆಯ ಮೇಲೆ ಕುಳಿತಿರುವ ಇತರ ಸಹೋದ್ಯೋಗಿಗಳೇ.. ಮಹಿಳೆಯರೇ ಮತ್ತು ಪುರುಷರೇ..ಈ ದೇಶದ ಸಜ್ಜನರೇ...

ಇಂದು ನಾನು ನಿಮ್ಮೆಲ್ಲರೊಂದಿಗೆ ಮುಖಾಮುಖಿಯಾಗಬೇಕಾಯಿತು, ಆದರೆ ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ನಿಮ್ಮೆಲ್ಲರ ನಡುವೆ ಬರಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ನಾನು ಬಂಗಾಳದ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ.  ಕೊಲ್ಕತ್ತಾದ ಐತಿಹಾಸಿಕ ಭೂಮಿಯಾದ ಬಂಗಾಳದ ಪವಿತ್ರ ಭೂಮಿಗೆ ನಮನ ಸಲ್ಲಿಸುವ ಅವಕಾಶ ಇಂದು ನನಗೆ ಸಿಕ್ಕಿದೆ.  ಸ್ವಾತಂತ್ರ್ಯ ಚಳವಳಿಯ ಇತಿಹಾಸವು ಬಂಗಾಳದ ಪ್ರತಿಯೊಂದು ಕಣದಲ್ಲೂ ಅಡಕವಾಗಿದೆ. ವಂದೇ ಮಾತರಂ ಪಠಿಸಿದ ಭೂಮಿಯಾಗಿರಿವ ಈ ಪಶ್ಚಿಮ ಬಂಗಾಳದಲ್ಲಿ ಇಂದು ವಂದೇ ಭಾರತ್ ರೈಲಿಗೆ ಇದೀಗ ಫ್ಲ್ಯಾಗ್ ಆಫ್ ಮಾಡಲಾಗಿದೆ. ಇಂದು, ಅಂದರೆ ಡಿಸೆಂಬರ್ 30 ರ ದಿನಾಂಕವು ಇತಿಹಾಸದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.  ಡಿಸೆಂಬರ್ 30, 1943 ರಂದು ನೇತಾಜಿ ಸುಭಾಷ್ ಅವರು ಅಂಡಮಾನ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಭಾರತದ ಸ್ವಾತಂತ್ರ್ಯದ ಧ್ವಜವನ್ನು ಹಾರಿಸಿದ್ದ ದಿನವೂ ಕೂಡ ಇದಾಗಿದೆ ಎಂಬುದು ಸ್ಮರಣೀಯ..

2018 ರಲ್ಲಿ, ಈ ಘಟನೆಯ 75 ನೇ ವಾರ್ಷಿಕೋತ್ಸವದಂದು, ನಾನು ಅಂಡಮಾನ್‌ಗೆ ಹೋಗಿದ್ದೆ, ಒಂದು ದ್ವೀಪಕ್ಕೂ ಕೂಡ  ನೇತಾಜಿ ಅವೆ ಹೆಸರಿಡಲಾಗಿದೆ.  ಮತ್ತು ಈಗ ದೇಶವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಈ ಸಮಯದಲ್ಲಿ ದ್ವೀಪವು ಸಹ ತನ್ನ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ.  ಈ ಅಮೃತ ಮಹೋತ್ಸವದಲ್ಲಿ ದೇಶವು 475 ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.  ಇಂದು, ಈ ಹೌರಾ-ಹೊಸ ಜಲ್ಪೈಗುರಿ ವಂದೇ ಭಾರತ್ ರೈಲುಗಳಲ್ಲಿ ಒಂದನ್ನು ಕೋಲ್ಕತ್ತಾದಿಂದ ಇಲ್ಲಿ ಪ್ರಾರಂಭಿಸಲಾಗಿದೆ.  ಇಂದು  ರೈಲ್ವೆ ಮತ್ತು ಮೆಟ್ರೋ ಸಂಪರ್ಕಕ್ಕೆ ಸಂಬಂಧಿಸಿದ ಇತರ ಯೋಜನೆಗಳನ್ನು ಸಹ ಉದ್ಘಾಟಿಸಲಾಗಿದೆ ಮತ್ತು ಶಿಲಾನ್ಯಾಸವನ್ನು ಮಾಡಲಾಗಿದೆ.  ಸುಮಾರು 5,000 ಕೋಟಿ ವೆಚ್ಚದಲ್ಲಿ ಜೋಕಾ-ಬಿಬಿಡಿ ಬಾಗ್ ಮೆಟ್ರೋ ಯೋಜನೆ ಕಾಮಗಾರಿ ನಡೆಯುತ್ತಿದೆ.  ಈ ಪೈಕಿ ಜೋಕಾ-ತಾರಾಟ್ಲಾ ಮೆಟ್ರೋ ಮಾರ್ಗ ಪೂರ್ಣಗೊಂಡಿದೆ.  ಇದರಿಂದ ನಗರದ ಜನ ಜೀವನ ಸುಗಮವಾಗಲಿದೆ.

ಒಡನಾಡಿಗಳೇ...

ಇನ್ನು ಸ್ವಲ್ಪ ದಿನಗಳ ಬಳಿಕ, ಗಂಗಾ ಮಾತೆಯ (ನದಿಯ) ಸ್ವಚ್ಛತೆ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಪಶ್ಚಿಮ ಬಂಗಾಳಕ್ಕೆ ಹಸ್ತಾಂತರಿಸುವ ಅವಕಾಶವು ಸಹ ನನ್ನ ಪಾಲಿನದ್ದಾಗಲಿದೆ.  ನಮಾಮಿ ಗಂಗೆ ಮಿಷನ್ ಅಡಿಯಲ್ಲಿ, ಪಶ್ಚಿಮ ಬಂಗಾಳದಲ್ಲಿ 25 ಕ್ಕೂ ಹೆಚ್ಚು ಒಳಚರಂಡಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.  ಈ ಪೈಕಿ 11 ಯೋಜನೆಗಳು ಈಗಾಗಲೇ ಪೂರ್ಣಗೊಂಡಿದ್ದು, 7 ಯೋಜನೆಗಳು ಇಂದು ಪೂರ್ಣಗೊಳ್ಳುತ್ತಿವೆ.  ಇಂದು 1.5 ಸಾವಿರ ಕೋಟಿ ವೆಚ್ಚದಲ್ಲಿ 5 ಹೊಸ ಯೋಜನೆಗಳ ಕಾಮಗಾರಿಯೂ ಆರಂಭವಾಗಿದೆ.  ಇದರಲ್ಲಿ ಮುಖ್ಯವಾದದ್ದು ಆದಿ ಗಂಗಾ ನದಿಯ ಪುನರುಜ್ಜೀವನ.  ಪ್ರಸ್ತುತ ಆದಿ ಗಂಗಾ ನದಿಯ ಸ್ಥಿತಿ ದುರದೃಷ್ಟವಶಾತ್ ತುಂಬಾ ಕೆಟ್ಟದಾಗಿದೆ ಎಂದು ನನಗೆ ತಿಳಿಸಲಾಗಿದೆ.  ಅದರಲ್ಲಿ ಬೀಳುವ ಕಸ ಮತ್ತು ಕೊಳಚೆಯನ್ನು ಸ್ವಚ್ಛಗೊಳಿಸಲು 600 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಧುನಿಕ ಮೂಲಸೌಕರ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ.

ನಾವು ಸಾಮಾನ್ಯವಾಗಿ ವ್ಯಕ್ತಿಯ ಜೀವನದಲ್ಲಿ ಪ್ರಿವೆಂಟಿವ್ ಹೆಲ್ತ್‌ಕೇರ್ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ ಮತ್ತು ರೋಗವೇ ಬಾರದಂತೆ ದಿನಚರಿ ಇರಬೇಕು ಎಂದು ಹೇಳುತ್ತೇವೆ.  ಅದೇ ರೀತಿ ನದಿ ಶುಚಿಗೊಳಿಸುವುದರೊಂದಿಗೆ ಕೇಂದ್ರ ಸರ್ಕಾರವೂ ಸಹ ರೋಗಗಳನ್ನು ತಡೆಗಟ್ಟಲು ಹೆಚ್ಚಿನ ಒತ್ತು ನೀಡುತ್ತಿದೆ.  ಮತ್ತು ಈ ತಡೆಗಟ್ಟುವಿಕೆಯ ದೊಡ್ಡ ಮತ್ತು ಆಧುನಿಕ ಮಾರ್ಗವೆಂದರೆ ಹೆಚ್ಚು ಹೆಚ್ಚು ಆಧುನಿಕ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಹೊಂದಿರುವುದಾಗಿದೆ.

ಮುಂಬರುವ 10-15 ವರ್ಷಗಳ ಅಗತ್ಯಗಳ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಇಂದು ದೇಶದಲ್ಲಿ ಆಧುನಿಕ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.  ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ ನಾವು ದೇಶವನ್ನು ಮುಂದೆ ನೋಡುವ ಚಿಂತನೆ ಮತ್ತು ಅನುಸಂಧಾನದೊಂದಿಗೆ ಮುನ್ನಡೆಸಬೇಕಾಗಿದೆ.

ಒಡನಾಡಿಗಳೇ...

ಈ 21 ನೇ ಶತಮಾನದಲ್ಲಿ ಭಾರತದ ಕ್ಷಿಪ್ರ ಅಭಿವೃದ್ಧಿಗೆ, ಭಾರತೀಯ ರೈಲ್ವೇಯ ತ್ವರಿತ ಅಭಿವೃದ್ಧಿ, ಭಾರತೀಯ ರೈಲ್ವೇಯಲ್ಲಿ ತ್ವರಿತ ಸುಧಾರಣೆ, ಇವೆಲ್ಲವೂ ಬಹಳ ಮುಖ್ಯವಾಗಿದೆ.  ಅದಕ್ಕಾಗಿಯೇ ಇಂದು ಕೇಂದ್ರ ಸರ್ಕಾರವು ಭಾರತೀಯ ರೈಲ್ವೆಯನ್ನು ಆಧುನೀಕರಿಸಲು, ರೈಲ್ವೆ ಮೂಲಸೌಕರ್ಯಗಳನ್ನು ಆಧುನೀಕರಿಸಲು ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ.  ಇಂದು, ಭಾರತೀಯ ರೈಲ್ವೆಯ ಪುನಶ್ಚೇತನಕ್ಕಾಗಿ ರಾಷ್ಟ್ರವ್ಯಾಪಿ ಅಭಿಯಾನವು ಭಾರತದಲ್ಲಿ ನಡೆಯುತ್ತಿದೆ.

ಇಂದು ದೇಶದಲ್ಲಿ ವಂದೇ ಭಾರತ್, ತೇಜಸ್, ಹಮ್ಸಫರ್ ನಂತಹ ಆಧುನಿಕ ರೈಲುಗಳು ನಿರ್ಮಾಣವಾಗುತ್ತಿವೆ.  ಇಂದು ವಿಸ್ಟಾ-ಡೋಮ್ ಕೋಚ್‌ಗಳು ರೈಲು ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುತ್ತಿವೆ.  ಇಂದು ಸುರಕ್ಷಿತ, ಆಧುನಿಕ ಕೋಚ್‌ಗಳ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳವಾಗಿದೆ.  ಇಂದು ರೈಲು ನಿಲ್ದಾಣವೂ ವಿಮಾನ ನಿಲ್ದಾಣದಂತೆ ಅಭಿವೃದ್ಧಿಯಾಗುತ್ತಿದೆ.  ಈ ಪಟ್ಟಿಯಲ್ಲಿ ಹೊಸ ಜಲ್ಪೈಗುರಿ ನಿಲ್ದಾಣವೂ ಸೇರಿದೆ.

ಇಂದು ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ, ರೈಲು ಮಾರ್ಗಗಳ ವಿದ್ಯುದೀಕರಣ ಹಿಂದೆಂದೂ ನಡೆಯದ ವೇಗದಲ್ಲಿ ನಡೆಯುತ್ತಿದೆ.  ದೇಶದಲ್ಲಿ ಬರಲಿರುವ ಪೂರ್ವ ಮತ್ತು ಪಶ್ಚಿಮ ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿವೆ.  ಸುರಕ್ಷತೆ, ಶುಚಿತ್ವ, ದಕ್ಷತೆ, ಸಮನ್ವಯತೆ, ಸಮಯಪಾಲನೆ, ಅನುಕೂಲತೆ ಇರಲಿ, ಭಾರತೀಯ ರೈಲ್ವೆ ಇಂದು ಹೊಸ ಗುರುತನ್ನು ಸೃಷ್ಟಿಸಲು ನಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಕಳೆದ ಎಂಟು ವರ್ಷಗಳಲ್ಲಿ ಭಾರತೀಯ ರೈಲ್ವೇ ಆಧುನಿಕತೆಯ ತಳಹದಿಯ ಮೇಲೆ ಕೆಲಸ ಮಾಡಿದೆ.  ಈಗ ಮುಂಬರುವ ಎಂಟು ವರ್ಷಗಳಲ್ಲಿ ಭಾರತೀಯ ರೈಲ್ವೇ ಆಧುನಿಕತೆಯ ಹೊಸ ಪಯಣವನ್ನು ಪ್ರಾರಂಭಿಸುವುದನ್ನು ನಾವು ನೋಡುತ್ತೇವೆ.  ಭಾರತದಂತಹ ಯುವ ದೇಶಕ್ಕಾಗಿ, ಭಾರತೀಯ ರೈಲ್ವೆ ಕೂಡ ಯುವ ಅವತಾರವನ್ನು ತೆಗೆದುಕೊಳ್ಳಲಿದೆ.  ಮತ್ತು ಖಂಡಿತವಾಗಿಯೂ 475 ಕ್ಕೂ ಹೆಚ್ಚು ವಂದೇ ಭಾರತ್ ರೈಲುಗಳು ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.

ಒಡನಾಡಿಗಳು,

ಸ್ವಾತಂತ್ರ್ಯದ ನಂತರದ ಏಳು ದಶಕಗಳಲ್ಲಿ, 20 ಸಾವಿರ ರೂಟ್ ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಯಿತು.  ಮತ್ತೊಂದೆಡೆ, 2014 ರಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ, ಕಳೆದ 7-8 ವರ್ಷಗಳಲ್ಲಿ, 32 ಸಾವಿರಕ್ಕೂ ಹೆಚ್ಚು ಮಾರ್ಗ ಕಿಲೋಮೀಟರ್ ರೈಲು ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ.  ಇದು ದೇಶದ ಕೆಲಸದ ವೇಗ, ರೈಲ್ವೆ ಆಧುನೀಕರಣದ ವೇಗ.  ಮತ್ತು ಈ ವೇಗವನ್ನು ಹೆಚ್ಚಿಸಲು, ಈಗ ವಿಶ್ವದ ಅತ್ಯಂತ ಶಕ್ತಿಶಾಲಿ ಎಲೆಕ್ಟ್ರಿಕ್ ಇಂಜಿನ್‌ಗಳನ್ನು ಭಾರತದಲ್ಲಿ ತ್ವರಿತವಾಗಿ ತಯಾರಿಸಲಾಗುತ್ತಿದೆ.

 ಒಡನಾಡಿಗಳೇ...

 ಇಂದಿನ ಭಾರತದ ವೇಗ ಮತ್ತು ಪ್ರಮಾಣಕ್ಕೆ ಇನ್ನೊಂದು ಸಾಕ್ಷಿ ನಮ್ಮ ಮೆಟ್ರೋ ರೈಲು ವ್ಯವಸ್ಥೆ.  ಕೋಲ್ಕತ್ತಾದ ಜನರಿಗೆ ಮೆಟ್ರೋ ರೈಲು ದಶಕಗಳಿಂದ ಸಾರ್ವಜನಿಕ ಸಾರಿಗೆಯ ಅತ್ಯುತ್ತಮ ವಿಧಾನವಾಗಿದೆ ಎಂದು ತಿಳಿದಿದೆ.  2014ರ ಮೊದಲು ದೇಶದ ಒಟ್ಟು ಮೆಟ್ರೋ ಜಾಲ 250 ಕಿ.ಮೀ.ಗಿಂತ ಕಡಿಮೆ ಇತ್ತು.  ಮತ್ತು ದಿಲ್ಲಿ-ಎನ್‌ಸಿಆರ್‌ ಇದರಲ್ಲಿ ಹೆಚ್ಚಿನ ಪಾಲು ಹೊಂದಿತ್ತು.  ಕೇಂದ್ರ ಸರ್ಕಾರ ಕೂಡ ಈ ಪರಿಸ್ಥಿತಿಯನ್ನು ಬದಲಾಯಿಸಿದೆ, ಅದನ್ನು ಬದಲಾಯಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ ಮತ್ತು ಅದನ್ನು ಅತ್ಯಂತ ವೇಗವಾಗಿ ಬದಲಾಯಿಸಿದೆ.

ಕಳೆದ 8 ವರ್ಷಗಳಲ್ಲಿ, ನಾವು 2 ಡಜನ್‌ಗಿಂತಲೂ ಹೆಚ್ಚು ನಗರಗಳಿಗೆ ಮೆಟ್ರೋವನ್ನು ವಿಸ್ತರಿಸಿದ್ದೇವೆ.  ಇಂದು, ದೇಶದ ವಿವಿಧ ನಗರಗಳಲ್ಲಿ ಸುಮಾರು 800 ಕಿಲೋಮೀಟರ್ ಟ್ರ್ಯಾಕ್‌ನಲ್ಲಿ ಮೆಟ್ರೋ ಓಡುತ್ತಿದೆ.  1000 ಕಿಲೋಮೀಟರ್ ಹೊಸ ಮೆಟ್ರೊ ಮಾರ್ಗದ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ.  ಜೋಕಾ-ಬಿಬಿಡಿ ಬಾಗ್ ಮೆಟ್ರೋ ಯೋಜನೆಯು ಕೂಡ ಈ ನಿರ್ಣಯದ ಒಂದು ಭಾಗವಾಗಿದೆ.

ಒಡನಾಡಿಗಳೇ...

ಕಳೆದ ಶತಮಾನದಲ್ಲಿ ಭಾರತಕ್ಕೆ ಇನ್ನೂ ಎರಡು ಪ್ರಮುಖ ಸವಾಲುಗಳಿವೆ, ಇದು ದೇಶದ ಅಭಿವೃದ್ಧಿಯ ಮೇಲೆ ಅತ್ಯಂತ ನಕಾರಾತ್ಮಕ ಪರಿಣಾಮ ಬೀರಿದೆ.  ಮೂಲಸೌಕರ್ಯ ಕಾಮಗಾರಿಗಳಲ್ಲಿ ವಿವಿಧ ಏಜೆನ್ಸಿಗಳ ನಡುವಿನ ಸಮನ್ವಯದ ಕೊರತೆ ಒಂದು ಸವಾಲಾಗಿದೆ.  ಮತ್ತು ಎರಡನೇ ಸವಾಲು ಎಂದರೆ ವಿವಿಧ ಸಾರಿಗೆ ವಿಧಾನಗಳ ನಡುವೆ ಶೂನ್ಯ ಸಮನ್ವಯತೆಯ ಕೊರತೆ.  ಇದರ ಪರಿಣಾಮ ಸರಕಾರದ ಒಂದು ಇಲಾಖೆಗೆ ಇನ್ನೊಂದು ಇಲಾಖೆ ಎಲ್ಲಿಂದ ಹೊಸ ಕಾಮಗಾರಿ ಆರಂಭಿಸಲು ಹೊರಟಿದೆಯೋ ಎಂಬುದು ಗೊತ್ತಿಲ್ಲದೇ ಇರುವುದು.ಇದರಿಂದ  ದೇಶದ ಪ್ರಾಮಾಣಿಕ ತೆರಿಗೆದಾರರು ಇದರ ಭಾರವನ್ನು ಹೊರಬೇಕಾಯಿತು.

ದೇಶದ ಪ್ರಾಮಾಣಿಕ ತೆರಿಗೆದಾರನು ಯಾವಾಗಲೂ ಸರ್ಕಾರದ ಹಣದ ವ್ಯರ್ಥ, ಯೋಜನೆಗಳಲ್ಲಿನ ವಿಳಂಬ, ಭ್ರಷ್ಟಾಚಾರವನ್ನು ದ್ವೇಷಿಸುತ್ತಾನೆ.  ತಾನು ದುಡಿದ ಹಣದಿಂದ ಕಟ್ಟುವ ತೆರಿಗೆ ಬಡವರಿಗೆ ಲಾಭವಾಗದೆಯೇ ಇನ್ಯಾರೋ ಭ್ರಷ್ಟರಿಗೆ ಲಾಭ ಆಗುತ್ತಿರುವುದನ್ನು ಕಂಡಾಗ ಅವರಲ್ಲಿ ಅಸಮಾಧಾನ ಮೂಡುವುದು ಸಹಜ.

ಈ ಹಣದ ಅಪವ್ಯಯವನ್ನು ತಡೆಗಟ್ಟುವ ಸಲುವಾಗಿ, ಇಲಾಖೆಗಳು ಮತ್ತು ಸರ್ಕಾರಗಳಲ್ಲಿ ಸಮನ್ವಯವನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅನ್ನು ಜಾರಿಗೆ ತರಲಾಗಿದೆ.  ಈಗ ಬೇರೆ ಬೇರೆ ರಾಜ್ಯ ಸರ್ಕಾರಗಳು, ವಿವಿಧ ಸರ್ಕಾರಿ ಇಲಾಖೆಗಳು, ನಿರ್ಮಾಣ ಸಂಬಂಧಿತ ಏಜೆನ್ಸಿಗಳು ಅಥವಾ ಉದ್ಯಮದ ಜನರು ಎಲ್ಲರೂ ಒಂದೇ ವೇದಿಕೆಯ ಅಡಿಯಲ್ಲಿ ಬರುತ್ತಿದ್ದಾರೆ.

ಪಿಎಂ ಗತಿಶಕ್ತಿಯು ಬಹು-ಮಾದರಿ ಸಂಪರ್ಕದ ಕೆಲಸವನ್ನು ವೇಗಗೊಳಿಸುತ್ತಿದೆ, ದೇಶದ ವಿವಿಧ ಸಾರಿಗೆ ವಿಧಾನಗಳನ್ನು ಸಂಪರ್ಕಿಸುತ್ತದೆ.  ಇಂದು ದೇಶದಲ್ಲಿ ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ಜಲಮಾರ್ಗಗಳು ಮತ್ತು ಹೊಸ ಬಂದರುಗಳು ದಾಖಲೆಯ ವೇಗದಲ್ಲಿ ನಿರ್ಮಾಣವಾಗುತ್ತಿವೆ.  ಮತ್ತು ಇದರಲ್ಲಿರುವ ದೊಡ್ಡ ವಿಷಯವೆಂದರೆ ಈಗ ಅವುಗಳನ್ನು ಒಂದು ಸಾರಿಗೆ ವಿಧಾನವು ಮತ್ತೊಂದು ಸಾರಿಗೆ ವಿಧಾನವನ್ನು ಬೆಂಬಲಿಸುವ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿದೆ.  ಅಂದರೆ, ಹೆದ್ದಾರಿಗಳು ರೈಲು ನಿಲ್ದಾಣಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿರಬೇಕು, ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಿಗೆ ಸಂಪರ್ಕ ಹೊಂದಿರಬೇಕು, ಜನರು ಸಾರಿಗೆ ಸಮಯದಲ್ಲಿ ತಡೆರಹಿತ ಸಂಪರ್ಕವನ್ನು ಪಡೆಯಬೇಕು.

ಒಡನಾಡಿಗಳೇ...

21 ನೇ ಶತಮಾನದಲ್ಲಿ ವೇಗವಾಗಿ ಮುನ್ನಡೆಯಬೇಕಾದರೆ  ನಾವು ನಮ್ಮ ದೇಶದ ಸಾಮರ್ಥ್ಯವನ್ನು ಸರಿಯಾಗಿ ಹಾಗೂ ಸಮರ್ಥವಾಗಿ  ಬಳಸಿಕೊಳ್ಳಬೇಕು.  ದೇಶದ ಜನರಿಗೆ ಜಲಮಾರ್ಗಗಳ ಉದಾಹರಣೆಯನ್ನು ನೀಡಲು ನಾನು ಬಯಸುತ್ತೇನೆ.  ಭಾರತದಲ್ಲಿ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕಾಗಿ ಜಲಮಾರ್ಗಗಳನ್ನು ವ್ಯಾಪಕವಾಗಿ ಬಳಸುತ್ತಿದ್ದ ಸಮಯವಿತ್ತು.  ಅದಕ್ಕಾಗಿಯೇ ಹಲವಾರು ನಗರಗಳು ನದಿಗಳ ದಡದಲ್ಲಿ ನೆಲೆಸಿದವು, ನದಿಗಳ ದಡದಲ್ಲಿ ಅಷ್ಟೊಂದು ಕೈಗಾರಿಕಾ ಅಭಿವೃದ್ಧಿ ನಡೆಯಿತು.  ಆದರೆ ಈ ಸಾಮರ್ಥ್ಯವು ಮೊದಲು ನೂರಾರು ವರ್ಷಗಳ ಗುಲಾಮಗಿರಿಯಿಂದ ನಾಶವಾಗಿತ್ತು. ಮತ್ತು ಆ ನಂತರ ಸ್ವಾತಂತ್ರ್ಯದ ಬಳಿಕ ಸರ್ಕಾರದ ಉದಾಸೀನತೆಯಿಂದ ನಾಶವಾಯಿತು.

ಈಗ ಭಾರತವು ಈ ನೀರಿನ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ, ದೇಶದಲ್ಲಿ 100 ಕ್ಕೂ ಹೆಚ್ಚು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ವ್ಯಾಪಾರವಾಗಲಿ ಅಥವಾ ಪ್ರವಾಸೋದ್ಯಮವಾಗಲಿ ಭಾರತದ ನದಿಗಳಲ್ಲಿ ಆಧುನಿಕ ವಿಹಾರಗಳನ್ನು ನಡೆಸಲು ನಾವು ಈ ದಿಕ್ಕಿನಲ್ಲಿ ವೇಗವಾಗಿ ಚಲಿಸುತ್ತಿದ್ದೇವೆ.  ಕೇಂದ್ರ ಸರ್ಕಾರವು ಬಾಂಗ್ಲಾದೇಶ ಸರ್ಕಾರದ ಸಹಯೋಗದೊಂದಿಗೆ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ನಡುವೆ ಜಲಮಾರ್ಗ ಸಂಪರ್ಕವನ್ನು ಸ್ಥಾಪಿಸುವ ಕೆಲಸ ಮಾಡಿದೆ.

ಇಂದು, ನಾನು ದೇಶದ ಜನರಿಗೆ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲು ಬಯಸುತ್ತೇನೆ.  ಜನವರಿ 13, 2023 ರಂದು, ವಾರಣಾಸಿಯ ಕಾಶಿಯಿಂದ 3200 ಕಿಲೋಮೀಟರ್ ಉದ್ದದ ಜಲಮಾರ್ಗದ ಮೂಲಕ ಬಾಂಗ್ಲಾದೇಶದ ಮೂಲಕ ದಿಬ್ರುಗಢವನ್ನು ತಲುಪಲಿದೆ.  ಇದು ಇಡೀ ಪ್ರಪಂಚದಲ್ಲಿ ಈ ರೀತಿಯ ಅಭೂತಪೂರ್ವ ಕ್ರೂಸ್ ಆಗಿರುತ್ತದೆ.  ಇದು ಭಾರತದಲ್ಲಿ ಬೆಳೆಯುತ್ತಿರುವ ಕ್ರೂಸ್ ಪ್ರವಾಸೋದ್ಯಮದ ಪ್ರತಿಬಿಂಬವಾಗಿದೆ.  ಪಶ್ಚಿಮ ಬಂಗಾಳದ ಜನರು ಖಂಡಿತವಾಗಿಯೂ ಇದರ ಪ್ರಯೋಜನ ಪಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ.

ಅಂದಹಾಗೆ, ಇಂದು ನಾನು ವಿಶೇಷವಾಗಿ ಬಂಗಾಳದ ಜನರಿಗೆ ಇನ್ನೊಂದು ವಿಷಯಕ್ಕಾಗಿ ವಂದಿಸಲು ಬಯಸುತ್ತೇನೆ.  ಬಂಗಾಳದ ಜನರು ದೇಶದ ಮಣ್ಣಿನ ಮೇಲೆ ಹೊಂದಿರುವ ಪ್ರೀತಿಯನ್ನು ನಾನು ಯಾವಾಗಲೂ ಮೆಚ್ಚುತ್ತೇನೆ.  ಬಂಗಾಳದ ಜನರು ದೇಶದ ವಿವಿಧ ಭಾಗಗಳನ್ನು ತಿಳಿದುಕೊಳ್ಳಬೇಕು, ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಬೇಕು ಎಂಬ ಉತ್ಸಾಹ ಅದ್ಭುತವಾಗಿದೆ.

ಅನೇಕ ಜನರು ಮೊದಲ ಅವಕಾಶ ಸಿಕ್ಕ ತಕ್ಷಣ ಬೇರೆ ದೇಶಕ್ಕೆ ಭೇಟಿ ನೀಡಲು ಹೋಗುತ್ತಾರೆ, ಆದರೆ ಬಂಗಾಳದ ಜನರು ಯಾವಾಗಲೂ ತಮ್ಮ ದೇಶಕ್ಕೆ ಆದ್ಯತೆ ನೀಡುತ್ತಾರೆ.  ಬಂಗಾಳದ ಜನರು ಪ್ರವಾಸೋದ್ಯಮದಲ್ಲೂ ನೇಷನ್ ಫಸ್ಟ್ (ದೇಶ ಮೊದಲು) ಎಂಬ ಮನೋಭಾವವನ್ನು ಹೊಂದಿದ್ದಾರೆ.  ಮತ್ತು ಇಂದು, ದೇಶದಲ್ಲಿ ಸಂಪರ್ಕವು ಹೆಚ್ಚುತ್ತಿರುವಾಗ, ರೈಲ್ವೇ-ಹೆದ್ದಾರಿಗಳು-ಐವೇಗಳು-ಜಲಮಾರ್ಗಗಳು ಆಧುನಿಕವಾಗುತ್ತಿವೆ, ನಂತರ ಪ್ರಯಾಣದ ಸುಲಭವೂ ಅಷ್ಟೇ ಹೆಚ್ಚುತ್ತಿದೆ.  ಬಂಗಾಳದ ಜನರಿಗೂ ಇದರಿಂದ ದೊಡ್ಡ ಲಾಭವಾಗುತ್ತಿದೆ.

ಒಡನಾಡಿಗಳೇ...

 ಗುರುದೇವ್ ಟ್ಯಾಗೋರ್ ರಚಿಸಿದ ಪ್ರಸಿದ್ಧ ಸಾಲುಗಳು-

"ಓ ಓಮಾರ್ ದೇಶೇರ್ ಮಾಟಿ, ತೋಮಾರ್ ಪೌರೆ ಠಾಕೈ ಮಾತಾ" 

ಅದೇನೆಂದರೆ, ಓ ನನ್ನ ದೇಶದ ಮಣ್ಣೇ, ನಾನು ನಿನ್ನ ಮುಂದೆ ತಲೆಬಾಗುತ್ತೇನೆ.  ಈ ಸ್ವಾತಂತ್ರ್ಯದ ಅಮೃತದಲ್ಲಿ, ಮಾತೃಭೂಮಿಯನ್ನು ಸರ್ವಶ್ರೇಷ್ಠವಾಗಿ ಉಳಿಸಿಕೊಂಡು ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.  ಇಂದು ಇಡೀ ವಿಶ್ವವೇ ಭಾರತವನ್ನು ಅಪಾರ ನಂಬಿಕೆಯಿಂದ ನೋಡುತ್ತಿದೆ.  ಈ ನಂಬಿಕೆಯನ್ನು ಉಳಿಸಿಕೊಳ್ಳಲು, ಪ್ರತಿಯೊಬ್ಬ ಭಾರತೀಯನು ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಬೇಕಾಗಿದೆ.  ನಾವು ಪ್ರತಿ ದಿನವನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಬಳಸಬೇಕು, ಪ್ರತಿ ಕ್ಷಣವನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಬಳಸಬೇಕು.  ದೇಶ ಸೇವೆ ಮಾಡುವ ಕೆಲಸದಲ್ಲಿ ನಾವು ನಿಲ್ಲಬೇಕಾಗೂ ಇಲ್ಲ, ಹಿಂದೇಟೂ ಹಾಕಬೇಕಾಯಿಯೂ ಇಲ್ಲ.

ಈ ಮಾತುಗಳೊಂದಿಗೆ, ಈ ಅನೇಕ ಯೋಜನೆಗಳಿಗಾಗಿ ನಾನು ಬಂಗಾಳವನ್ನು ಅಭಿನಂದಿಸುತ್ತೇನೆ.  ಮತ್ತೊಮ್ಮೆ ನಾನು ನಿಮ್ಮನ್ನು ಅಭಿನಂದಿಸುವ ಮೂಲಕ ನಾನು ನನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತೇನೆ.

 ಅನಂತ‌ ಅನಂತ. ಹೃತ್ಪೂರ್ವಕ  ಧನ್ಯವಾದಗಳು !

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Startup India recognises 2.07 lakh ventures, 21.9 lakh jobs created

Media Coverage

Startup India recognises 2.07 lakh ventures, 21.9 lakh jobs created
NM on the go

Nm on the go

Always be the first to hear from the PM. Get the App Now!
...
Prime Minister inaugurates the first Emergency Landing Facility (ELF) of the northeast in Dibrugarh, Assam
February 14, 2026

The Prime Minister, Shri Narendra Modi inaugurated the first Emergency Landing Facility (ELF) of the northeast in Dibrugarh, Assam. Shri Modi stated that it is a matter of immense pride that the Northeast gets an Emergency Landing Facility, and is of great importance from a strategic point of view and during times of natural disasters.

The Prime Minister posted on X:

"It is a matter of immense pride that the Northeast gets an Emergency Landing Facility. From a strategic point of view and during times of natural disasters, this facility is of great importance."

"উত্তৰ-পূৰ্বাঞ্চলে ইমাৰ্জেঞ্চি লেণ্ডিং ফেচিলিটি লাভ কৰাটো অপৰিসীম গৌৰৱৰ বিষয়। কৌশলগত দৃষ্টিকোণৰ পৰা আৰু প্ৰাকৃতিক দুৰ্যোগৰ সময়ত এই সুবিধাৰ গুৰুত্ব অতিশয় বেছি।"