"ವಂದೇ ಭಾರತ್ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪರಂಪರೆಯನ್ನು ಬೆಸೆಯುತ್ತದೆ"
" ಭಾರತವು ಎಲ್ಲದರಲ್ಲೂ ಉತ್ತಮವಾದುದನ್ನು ಬಯಸುವುದರ ಪ್ರತೀಕ ವಂದೇ ಭಾರತ್ ಎಕ್ಸ್‌ಪ್ರೆಸ್ "
"ವಂದೇ ಭಾರತ್‌ ನವ ಭಾರತದ ಸಾಮರ್ಥ್ಯ ಮತ್ತು ಸಂಕಲ್ಪದ ಸಂಕೇತವಾಗಿದೆ"
"ಸಂಪರ್ಕಕ್ಕೆ ಸಂಬಂಧಿಸಿದ ಮೂಲಸೌಕರ್ಯವು ಎರಡು ಸ್ಥಳಗಳನ್ನು ಸಂಪರ್ಕಿಸುವುದು ಮಾತ್ರವಲ್ಲದೆ ಕನಸುಗಳನ್ನು ವಾಸ್ತವದೊಂದಿಗೆ ಜೋಡಿಸುತ್ತದೆ ಮತ್ತು ಸಬ್ಕಾ ವಿಕಾಸವನ್ನು ಖಚಿತಪಡಿಸುತ್ತದೆ"
“ಎಲ್ಲಿ ಗತಿ (ವೇಗ) ಇರುತ್ತದೆಯೋ ಅಲ್ಲಿ ಪ್ರಗತಿ (ಪ್ರಗತಿ) ಇರುತ್ತದೆ. ಪ್ರಗತಿಯಿಂದ ಸಮೃದ್ಧಿ ಖಚಿತವಾಗುತ್ತದೆ”
"ಕಳೆದ 7-8 ವರ್ಷಗಳಲ್ಲಿ ಮಾಡಿದ ಕೆಲಸಗಳು ಮುಂಬರುವ 7-8 ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ ಪರಿವರ್ತನೆ ತರುತ್ತವೆ"

ನಮಸ್ಕಾರ! ತೆಲಂಗಾಣ ರಾಜ್ಯಪಾಲ ಡಾ. ತಮಿಳಿಸೈ ಸೌಂದರರಾಜನ್ ಜಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜಿ, ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಜಿ, ತೆಲಂಗಾಣ ಸಚಿವರಾದ ಮೊಹಮ್ಮದ್ ಮಹಮ್ಮದ್ ಅಲಿಗಾರು ಮತ್ತು ಟಿ. ಶ್ರೀನಿವಾಸ್ ಯಾದವ್, ಸಂಸತ್ತಿನ ನನ್ನ ಸಹೋದ್ಯೋಗಿಗಳು ಮತ್ತು ನನ್ನ ಸ್ನೇಹಿತರಾದ ಬಂಡಿ ಸಂಜಯ್ ಗಾರು ಮತ್ತು ಕೆ. ಲಕ್ಷ್ಮಣ್ ಗಾರು, ಇತರ ಎಲ್ಲ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!

ನಮಸ್ಕಾರ!

ಈ ಹಬ್ಬದ ವಾತಾವರಣದಲ್ಲಿ ಇಂದು ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಭರ್ಜರಿ ಉಡುಗೊರೆ ಸಿಗುತ್ತಿದೆ. ಒಂದು ರೀತಿಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಂಚಿಕೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಪರ್ಕಿಸಲಿದೆ. ವಂದೇ ಭಾರತ್ ರೈಲಿಗಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರಿಗೆ, ವಿಶೇಷವಾಗಿ ಮಧ್ಯಮ ವರ್ಗದ, ಕೆಳ ಮಧ್ಯಮ ವರ್ಗದ ಮತ್ತು ಮೇಲ್ಮಧ್ಯಮ ವರ್ಗದ ಜನರನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಇಂದು ಸೇನಾ ದಿನವೂ ಆಗಿದೆ. ಪ್ರತಿಯೊಬ್ಬ ಭಾರತೀಯನೂ ತನ್ನ ಸೇನೆಯ ಬಗ್ಗೆ ಹೆಮ್ಮೆಪಡುತ್ತಾನೆ. ದೇಶದ ರಕ್ಷಣೆಯಲ್ಲಿ, ದೇಶದ ಗಡಿ ರಕ್ಷಣೆಯಲ್ಲಿ ಭಾರತೀಯ ಸೇನೆಯ ಕೊಡುಗೆ ಮತ್ತು ಶೌರ್ಯವು ಅಪ್ರತಿಮವಾಗಿದೆ. ಎಲ್ಲಾ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಪೊಂಗಲ್, ಮಾಘ ಬಿಹು, ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಹಬ್ಬಗಳಿಗೆ ಸಂಬಂಧಿಸಿದ ವೈಭವವು ಎಲ್ಲೆಡೆ ಗೋಚರಿಸುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಗೆ ಮತ್ತು ಅಟೋಕ್ನಿಂದ ಕಟಕ್ಗೆ ದೇಶವನ್ನು ಸಂಪರ್ಕಿಸುವ ಪ್ರಮುಖ ಸಂದರ್ಭಗಳು ಮತ್ತು ಹಬ್ಬಗಳಂತೆ, ವಂದೇ ಭಾರತ್ ರೈಲು ಕೂಡ 'ಏಕ ಭಾರತ ಶ್ರೇಷ್ಠ ಭಾರತ'ದ ಚೈತನ್ಯದಲ್ಲಿ ದೇಶದ ವಿವಿಧ ಭಾಗಗಳನ್ನು ಅರ್ಥಮಾಡಿಕೊಳ್ಳಲು, ತಿಳಿದುಕೊಳ್ಳಲು ಮತ್ತು ಸಂಪರ್ಕಿಸಲು ಅವಕಾಶವನ್ನು ಒದಗಿಸುತ್ತದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ನಮ್ಮ ಸಂಸ್ಕೃತಿ ಮತ್ತು ನಂಬಿಕೆಯನ್ನು ಒಂದು ರಾಷ್ಟ್ರವಾಗಿ ಸಂಪರ್ಕಿಸುತ್ತದೆ. ಈ ಹೊಸ ರೈಲು ಹೈದರಾಬಾದ್, ವಾರಂಗಲ್, ವಿಜಯವಾಡ ಮತ್ತು ವಿಶಾಖಪಟ್ಟಣಂನಂತಹ ನಗರಗಳನ್ನು ಸಂಪರ್ಕಿಸುತ್ತದೆ. ಧಾರ್ಮಿಕ ನಂಬಿಕೆ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಸ್ಥಳಗಳು ಈ ಮಾರ್ಗದಲ್ಲಿ ಬರುತ್ತವೆ. ಆದ್ದರಿಂದ, ಭಕ್ತರು ಮತ್ತು ಪ್ರವಾಸಿಗರು ವಂದೇ ಭಾರತ್ ಎಕ್ಸ್ಪ್ರೆಸ್ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಈ ರೈಲಿನಿಂದ ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವಿನ ಪ್ರಯಾಣದ ಸಮಯವೂ ಕಡಿಮೆಯಾಗುತ್ತದೆ.

ಸಹೋದರ ಸಹೋದರಿಯರೇ,

ವಂದೇ ಭಾರತ್ ರೈಲು ಮತ್ತೊಂದು ವೈಶಿಷ್ಟ್ಯವನ್ನು ಹೊಂದಿದೆ. ಈ ರೈಲು ನವ ಭಾರತದ ಸಂಕಲ್ಪ ಮತ್ತು ಸಾಮರ್ಥ್ಯದ ಸಂಕೇತವಾಗಿದೆ. ಕ್ಷಿಪ್ರ ಬದಲಾವಣೆಯ ಹಾದಿಯಲ್ಲಿ ಸಾಗುತ್ತಿರುವ ಭಾರತದ ಪ್ರತೀಕವಾಗಿದೆ, ತನ್ನ ಕನಸುಗಳು ಮತ್ತು ತನ್ನ ಆಕಾಂಕ್ಷೆಗಳ ಬಗ್ಗೆ ತುಡಿತವನ್ನು ಹೊಂದಿರುವ ಭಾರತ, ವೇಗವಾಗಿ ಚಲಿಸುವ ಮೂಲಕ ತನ್ನ ಗುರಿಯನ್ನು ತಲುಪಲು ಬಯಸುವ ಭಾರತ. ಈ ವಂದೇ ಭಾರತ್ ಎಕ್ಸ್ಪ್ರೆಸ್ ಎಲ್ಲದರಲ್ಲೂ ಒಳ್ಳೆಯದನ್ನು ಬಯಸುವ ಭಾರತವನ್ನು ಸಂಕೇತಿಸುತ್ತದೆ. ಈ ವಂದೇ ಭಾರತ್ ಎಕ್ಸ್ಪ್ರೆಸ್ ತನ್ನ ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ಬಯಸುತ್ತಿರುವ ಭಾರತದ ಸಂಕೇತವಾಗಿದೆ. ಈ ವಂದೇ ಭಾರತ್ ಎಕ್ಸ್ಪ್ರೆಸ್ ಗುಲಾಮಗಿರಿಯ ಮನಸ್ಥಿತಿಯ ಸಂಕೋಲೆಗಳನ್ನು ಮುರಿದು ಸ್ವಾವಲಂಬನೆಯತ್ತ ಸಾಗುತ್ತಿರುವ ಭಾರತದ ಸಂಕೇತವಾಗಿದೆ.

ಸ್ನೇಹಿತರೇ,

ವಂದೇ ಭಾರತವು ವಿಸ್ತರಿಸುತ್ತಿರುವ ವೇಗವನ್ನು ಸಹ ಗಮನಿಸಬೇಕು. ಸಿಕಂದರಾಬಾದ್-ವಿಶಾಖಪಟ್ಟಣಂ ವಂದೇ ಭಾರತ್ 2023 ರ ಮೊದಲ ರೈಲಾಗಿದೆ.  ಇದು 15 ದಿನಗಳಲ್ಲಿ ದೇಶದಲ್ಲಿ ಪ್ರಾರಂಭಿಸಲಾದ ಎರಡನೇ ವಂದೇ ಭಾರತ್ ರೈಲು ಎಂದು ತಿಳಿದು ನೀವು ಸಂತೋಷಪಡುತ್ತೀರಿ. ಭಾರತದಲ್ಲಿ ವಂದೇ ಭಾರತ್ ಅಭಿಯಾನವು ದೇಶದ ಬದಲಾವಣೆಯನ್ನು ಎಷ್ಟು ವೇಗವಾಗಿ ಅರಿತುಕೊಳ್ಳುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ವಂದೇ ಭಾರತ್ ರೈಲನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ಮಿಸಲಾಗಿದೆ. ಅದರ ವೇಗದ ಅಸಂಖ್ಯಾತ ವೀಡಿಯೊಗಳು ಜನರ ಹೃದಯ ಮತ್ತು ಮನಸ್ಸನ್ನು ವಶಪಡಿಸಿಕೊಂಡಿವೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸಿವೆ. ನಾನು ಇನ್ನೊಂದು ಅಂಕಿಅಂಶವನ್ನು ಪ್ರಸ್ತುತಪಡಿಸುತ್ತೇನೆ ಅದು ತುಂಬಾ ಆಸಕ್ತಿದಾಯಕವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಏಳು ವಂದೇ ಭಾರತ್ ರೈಲುಗಳು ಒಟ್ಟು 23 ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿವೆ. ಇದು ಭೂಮಿಯನ್ನು 58 ಬಾರಿ ಸುತ್ತುವುದಕ್ಕೆ ಸಮಾನವಾಗಿದೆ. ಇದುವರೆಗೆ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಈ ರೈಲುಗಳಲ್ಲಿ ಪ್ರಯಾಣಿಸುವ ಜನರ ಸಮಯದ ಉಳಿತಾಯಕ್ಕೆ ಬೆಲೆಕಟ್ಟಲಾಗದು.

ಸಹೋದರ ಸಹೋದರಿಯರೇ,

ಸಂಪರ್ಕವು ವೇಗದೊಂದಿಗೆ ನೇರ ಸಂಬಂಧವನ್ನು ಹೊಂದಿದೆ ಮತ್ತು ಇವೆರಡೂ ಅಭಿವೃದ್ಧಿಯ ಮೇಲೆ ನೇರವಾದ ಸಂಬಂಧವನ್ನು ಹೊಂದಿವೆ. ಸಂಪರ್ಕದ ಮೂಲಸೌಕರ್ಯವು ಕೇವಲ ಎರಡು ಸ್ಥಳಗಳನ್ನು ಸಂಪರ್ಕಿಸುವುದಿಲ್ಲ, ಆದರೆ ಇದು ಕನಸುಗಳನ್ನು ವಾಸ್ತವಕ್ಕೆ ಸಂಪರ್ಕಿಸುತ್ತದೆ. ಇದು ಉತ್ಪಾದನೆಯನ್ನು ಮಾರುಕಟ್ಟೆಯೊಂದಿಗೆ ಮತ್ತು ಪ್ರತಿಭೆಯನ್ನು ಸರಿಯಾದ ವೇದಿಕೆಯೊಂದಿಗೆ ಸಂಪರ್ಕಿಸುತ್ತದೆ. ಸಂಪರ್ಕವು ಅದರೊಂದಿಗೆ ಅಭಿವೃದ್ಧಿಯ ಸಾಧ್ಯತೆಗಳನ್ನು ವಿಸ್ತರಿಸುತ್ತದೆ. ಅಂದರೆ ಎಲ್ಲಿ ‘ಗತಿ’ (ವೇಗ) ಇರುತ್ತದೋ ಅಲ್ಲಿ ‘ಪ್ರಗತಿ’ (ಪ್ರಗತಿ) ಇರುತ್ತದೆ ಮತ್ತು ಪ್ರಗತಿ ಇದ್ದಾಗ ಸಮೃದ್ಧಿ ನಿಶ್ಚಿತ. ನಮ್ಮ ದೇಶದಲ್ಲಿ ಅಭಿವೃದ್ಧಿ ಮತ್ತು ಆಧುನಿಕ ಸಂಪರ್ಕದ ಲಾಭವನ್ನು ಕೆಲವೇ ಜನರು ಪಡೆಯುತ್ತಿದ್ದ ಸಮಯವನ್ನು ನಾವು ನೋಡಿದ್ದೇವೆ. ಇದರಿಂದ ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯ ಸಮಯ ಕೇವಲ ಪ್ರಯಾಣ ಮತ್ತು ಸಾರಿಗೆಯಲ್ಲಿ ಕಳೆದು ಸಾಮಾನ್ಯ ನಾಗರಿಕರು, ಮಧ್ಯಮ ವರ್ಗದ ಜನರು ಸಾಕಷ್ಟು ತೊಂದರೆ ಅನುಭವಿಸಿದರು. ಇಂದು ಭಾರತ ಆ ಹಳೆಯ ವಿಧಾನವನ್ನು ಬಿಟ್ಟು ಮುನ್ನಡೆಯುತ್ತಿದೆ. ಇಂದಿನ ಭಾರತದಲ್ಲಿ, ಪ್ರತಿಯೊಬ್ಬರನ್ನು ‘ಗತಿ’ ಮತ್ತು ‘ಪ್ರಗತಿ’ಯೊಂದಿಗೆ ಸಂಪರ್ಕಿಸುವ ಕ್ಷಿಪ್ರ ಪ್ರಯತ್ನಗಳು ನಡೆಯುತ್ತಿವೆ. ವಂದೇ ಭಾರತ್ ರೈಲು ಇದಕ್ಕೆ ದೊಡ್ಡ ಸಾಕ್ಷಿಯಾಗಿದೆ.

ಸ್ನೇಹಿತರೇ,

ಇಚ್ಛಾಶಕ್ತಿ ಇದ್ದಾಗ ಅತ್ಯಂತ ಕಷ್ಟಕರವಾದ ಗುರಿಗಳನ್ನೂ ಸಾಧಿಸಬಹುದು. ಎಂಟು ವರ್ಷಗಳ ಹಿಂದೆ ಭಾರತೀಯ ರೈಲ್ವೆಗೆ ಸಂಬಂಧಿಸಿದಂತೆ ನಿರಾಶೆಯು ಮಾತ್ರ ಹೇಗೆ ದೊಡ್ಡದಾಗಿ ಕಾಣುತ್ತಿತ್ತು ಎನ್ನುವುದನ್ನು ನಾವು ನೋಡಿದ್ದೇವೆ. ನಿಧಾನಗತಿಯ ವೇಗ, ಹೊಲಸುಗಳ ರಾಶಿ, ಟಿಕೆಟ್ ಬುಕ್ಕಿಂಗ್ಗೆ ಸಂಬಂಧಿಸಿದ ದೂರುಗಳು ಮತ್ತು ಪ್ರತಿನಿತ್ಯ ಸಂಭವಿಸುವ ಅಪಘಾತಗಳಿಂದ ಭಾರತೀಯ ರೈಲ್ವೇಯಲ್ಲಿ ಸುಧಾರಣೆ ಅಸಾಧ್ಯವೆಂದು ದೇಶದ ಜನರು ತೀರ್ಮಾನಿಸಿದ್ದರು. ರೈಲ್ವೆಯ ಹೊಸ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಬಜೆಟ್ ಕೊರತೆಯ ಬಗೆಗಿನ ನೆಪವನ್ನು  ಹೆಚ್ಚಾಗಿ ಉಲ್ಲೇಖಿಸಲಾಗುತ್ತಿತ್ತು.

ಆದರೆ ಸ್ನೇಹಿತರೇ,

ಸ್ಪಷ್ಟ ಮತ್ತು ಪ್ರಾಮಾಣಿಕ ಉದ್ದೇಶಗಳೊಂದಿಗೆ ಈ ಸವಾಲನ್ನು ಎದುರಿಸಲು ನಾವು ನಿರ್ಧರಿಸಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ಭಾರತೀಯ ರೈಲ್ವೆಯ ಪರಿವರ್ತನೆಯ ಹಿಂದಿನ ಮಂತ್ರವೂ ಇದೇ ಆಗಿದೆ. ಇಂದು ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡುವುದು ಆಹ್ಲಾದಕರ ಅನುಭವವಾಗಿದೆ. ಆಧುನಿಕ ಭಾರತದ ಚಿತ್ರಣವನ್ನು ನೋಡಬಹುದಾದ ಅನೇಕ ರೈಲು ನಿಲ್ದಾಣಗಳು ದೇಶದಲ್ಲಿವೆ. ನಮ್ಮ ಸರ್ಕಾರವು ಕಳೆದ 7-8 ವರ್ಷಗಳಲ್ಲಿ ಆರಂಭಿಸಿದ ಉಪಕ್ರಮಗಳು ಮುಂದಿನ 7-8 ವರ್ಷಗಳಲ್ಲಿ ಭಾರತೀಯ ರೈಲ್ವೇಯನ್ನು ಉತ್ತಮವಾಗಿ ಪರಿವರ್ತಿಸಲಿವೆ. ಇಂದು ಪ್ರವಾಸೋದ್ಯಮವನ್ನು ಉತ್ತೇಜಿಸಲು ವಿಸ್ಟಾಡೋಮ್ ಕೋಚ್ಗಳು ಮತ್ತು ಹೆರಿಟೇಜ್ ರೈಲುಗಳಿವೆ. ರೈತರ ಉತ್ಪನ್ನಗಳನ್ನು ದೂರದ ಮಾರುಕಟ್ಟೆಗಳಿಗೆ ಕೊಂಡೊಯ್ಯಲು ಕಿಸಾನ್ ರೈಲುಗಳನ್ನು ಪ್ರಾರಂಭಿಸಲಾಯಿತು. ಸರಕು ಸಾಗಣೆ ರೈಲುಗಳಿಗಾಗಿ ವಿಶೇಷ ಸರಕು ಸಾಗಣೆ ಕಾರಿಡಾರ್ನ ಕಾಮಗಾರಿಯು ತ್ವರಿತ ಗತಿಯಲ್ಲಿ ನಡೆಯುತ್ತಿದೆ. ದೇಶದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸಲು ಮೆಟ್ರೋ ಜಾಲವು ಎರಡು ಡಜನ್ಗಿಂತಲೂ ಹೆಚ್ಚು ಹೊಸ ನಗರಗಳಲ್ಲಿ ವಿಸ್ತರಿಸುತ್ತಿದೆ. ದೇಶದಲ್ಲಿ ಪ್ರಾದೇಶಿಕ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ನಂತಹ ಭವಿಷ್ಯದ ಆಧುನಿಕ ವ್ಯವಸ್ಥೆಗಳಲ್ಲಿ ಕ್ಷಿಪ್ರ ಕೆಲಸವೂ ನಡೆಯುತ್ತಿದೆ.

ಸಹೋದರ ಸಹೋದರಿಯರೇ,

ತೆಲಂಗಾಣದಲ್ಲಿ ಕಳೆದ ಎಂಟು ವರ್ಷಗಳಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ಅಭೂತಪೂರ್ವ ಕೆಲಸ ನಡೆದಿದೆ. 2014 ರ ಹಿಂದಿನ ಎಂಟು ವರ್ಷಗಳಲ್ಲಿ ತೆಲಂಗಾಣವು ರೈಲ್ವೆಗೆ 250 ಕೋಟಿಗಿಂತ ಕಡಿಮೆ ಬಜೆಟ್ ಅನ್ನು ಹೊಂದಿತ್ತು, ಆದರೆ ಇಂದು ಈ ಬಜೆಟ್ 3000 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ. ತೆಲಂಗಾಣದ ಮೇದಕ್ನಂತಹ ಅನೇಕ ಪ್ರದೇಶಗಳು ಮೊದಲ ಬಾರಿಗೆ ರೈಲು ಸೇವೆಯ ಮೂಲಕ ಸಂಪರ್ಕ ಹೊಂದಿವೆ. 2014 ರ ಹಿಂದಿನ ಎಂಟು ವರ್ಷಗಳಲ್ಲಿ, ತೆಲಂಗಾಣದಲ್ಲಿ 125 ಕಿಲೋಮೀಟರ್ಗಿಂತಲೂ ಕಡಿಮೆ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ, ಆದರೆ ನಾವು ಕಳೆದ ಎಂಟು ವರ್ಷಗಳಲ್ಲಿ ತೆಲಂಗಾಣದಲ್ಲಿ ಸುಮಾರು 325 ಕಿಮೀ ಹೊಸ ರೈಲು ಮಾರ್ಗಗಳನ್ನು ಪೂರ್ಣಗೊಳಿಸಿದ್ದೇವೆ. ಕಳೆದ ಎಂಟು ವರ್ಷಗಳಲ್ಲಿ ತೆಲಂಗಾಣದಲ್ಲಿ 250 ಕಿಲೋಮೀಟರ್ಗಿಂತಲೂ ಹೆಚ್ಚು 'ಟ್ರ್ಯಾಕ್ ಮಲ್ಟಿ-ಟ್ರ್ಯಾಕಿಂಗ್' ಕೂಡ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ತೆಲಂಗಾಣದಲ್ಲಿ ರೈಲು ಹಳಿಗಳ ವಿದ್ಯುದ್ದೀಕರಣವು ಮೂರಕ್ಕಿಂತ ಹೆಚ್ಚು ಬಾರಿ ನಡೆದಿದೆ. ಅತಿ ಶೀಘ್ರದಲ್ಲೇ ನಾವು ತೆಲಂಗಾಣದ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳ ವಿದ್ಯುದ್ದೀಕರಣ ಕಾರ್ಯವನ್ನು ಪೂರ್ಣಗೊಳಿಸಲಿದ್ದೇವೆ.

ಸ್ನೇಹಿತರೇ,

ಇಂದು ಆರಂಭಿಸಲಾದ ವಂದೇ ಭಾರತ್ ಕೂಡ ಒಂದು ತುದಿಯಿಂದ ಆಂಧ್ರಪ್ರದೇಶಕ್ಕೂ ಸಂಪರ್ಕ ಹೊಂದಿದೆ. ಆಂಧ್ರಪ್ರದೇಶದಲ್ಲಿ ರೈಲು ಜಾಲವನ್ನು ಬಲಪಡಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಆಂಧ್ರಪ್ರದೇಶದಲ್ಲಿ 2014 ಕ್ಕಿಂತ ಹಲವು ಪಟ್ಟು ವೇಗವಾಗಿ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ, ಆಂಧ್ರಪ್ರದೇಶದಲ್ಲಿ 350 ಕಿಲೋಮೀಟರ್ ಹೊಸ ರೈಲು ಮಾರ್ಗಗಳ ನಿರ್ಮಾಣ ಮತ್ತು ಸುಮಾರು 800 ಕಿಲೋಮೀಟರ್ ಮಲ್ಟಿ ಟ್ರ್ಯಾಕಿಂಗ್ ಪೂರ್ಣಗೊಂಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ, ಆಂಧ್ರಪ್ರದೇಶದಲ್ಲಿ ವಾರ್ಷಿಕವಾಗಿ 60 ಕಿಲೋಮೀಟರ್ ರೈಲು ಹಳಿಗಳನ್ನು ವಿದ್ಯುದ್ದೀಕರಿಸಲಾಯಿತು. ಈಗ ಇದು ವಾರ್ಷಿಕವಾಗಿ 220 ಕಿ.ಮೀ.ಗೂ ಹೆಚ್ಚಿದೆ. ಕೇಂದ್ರ ಸರ್ಕಾರದ ಈ ಪ್ರಯತ್ನಗಳು ಜನರ ಬದುಕನ್ನು ಸುಗಮಗೊಳಿಸುವುದರ ಜೊತೆಗೆ ಸುಲಲಿತವಾಗಿ ವ್ಯಾಪಾರ ಮಾಡುವುದನ್ನು ಹಂತಹಂತವಾಗಿ ಹೆಚ್ಚಿಸುತ್ತಿವೆ.  ವೇಗ ಮತ್ತು ಪ್ರಗತಿಯ ಈ ಪ್ರಕ್ರಿಯೆಯು ಹೀಗೆಯೇ ಮುಂದುವರಿಯುತ್ತದೆ. ಈ ನಂಬಿಕೆಯೊಂದಿಗೆ, ನಾನು ಮತ್ತೊಮ್ಮೆ ತೆಲಂಗಾಣ ಮತ್ತು ಆಂಧ್ರಪ್ರದೇಶವನ್ನು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಅಭಿನಂದಿಸುತ್ತೇನೆ ಮತ್ತು ಪ್ರಯಾಣಿಕರಿಗೆ ಶುಭ ಹಾರೈಸುತ್ತೇನೆ. 

ಬಹಳ  ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Vikas Bhi, Virasat Bhi: How JATAN, AI and Digital Archives are revolutionising India’s cultural heritage preservation

Media Coverage

Vikas Bhi, Virasat Bhi: How JATAN, AI and Digital Archives are revolutionising India’s cultural heritage preservation
NM on the go

Nm on the go

Always be the first to hear from the PM. Get the App Now!
...
Prime Minister hosts Commonwealth Games 2026 medal winners
August 09, 2026

The Prime Minister, Shri Narendra Modi today hosted India’s outstanding medal winners from the Commonwealth Games 2026 at 7 Lok Kalyan Marg. Shri Modi interacted with the athletes and heard about their experiences from the Games.

The Prime Minister said that the athletes’ achievements are a source of immense pride for the entire country and will inspire many youngsters to take up sports.

Shri Modi posted on X:

Delighted to host our outstanding medal winners from the Commonwealth Games 2026 at 7, Lok Kalyan Marg. Heard about their experiences from the Games.

Each one of them has made our nation proud through their exceptional performances. Their success will motivate many youngsters.