ಕೋಟ್ಯಂತರ ಜನರ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ವಿವಿಧ ಸರ್ಕಾರೇತರ ಸಂಸ್ಥೆಗಳು ಸಾಮೂಹಿಕ ಯೋಗ ಪ್ರದರ್ಶನಗಳನ್ನು ಆಯೋಜಿಸಿವೆ.
ಮೈಸೂರಿನಲ್ಲಿ ಪ್ರಧಾನಮಂತ್ರಿ ಅವರ ಯೋಗ ಕಾರ್ಯಕ್ರಮವು 'ಒಂದು ಸೂರ್ಯ, ಒಂದು ಭೂಮಿ' ಪರಿಕಲ್ಪನೆಯನ್ನು ಒತ್ತಿಹೇಳುವ 'ಗಾರ್ಡಿಯನ್ ಯೋಗ ರಿಂಗ್' ಎಂಬ ನವೀನ ಕಾರ್ಯಕ್ರಮದ ಭಾಗವಾಗಿದೆ.
"ಯೋಗವು ಕೇವಲ ಒಬ್ಬ ವ್ಯಕ್ತಿಗಾಗಿ ಅಲ್ಲ ಇಡೀ ಮಾನವಕುಲಕ್ಕಾಗಿ"
"ಯೋಗವು ನಮ್ಮ ಸಮಾಜಕ್ಕೆ, ರಾಷ್ಟ್ರಗಳಿಗೆ, ಜಗತ್ತಿಗೆ ಶಾಂತಿಯನ್ನು ತರುತ್ತದೆ ಮತ್ತು ಯೋಗವು ನಮ್ಮ ಬ್ರಹ್ಮಾಂಡಕ್ಕೆ ಶಾಂತಿಯನ್ನು ತರುತ್ತದೆ"
"ಯೋಗ ದಿನವನ್ನು ವ್ಯಾಪಕವಾಗಿ ಸ್ವೀಕರಿಸುವುದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ನೀಡಿದ ಭಾರತದ ಅಮೃತ್ ಚೈತನ್ಯವನ್ನು ಒಪ್ಪಿಕೊಂಡಿದೆ"
"ಭಾರತದ ಐತಿಹಾಸಿಕ ತಾಣಗಳಲ್ಲಿ ಸಾಮೂಹಿಕ ಯೋಗದ ಅನುಭವವು ಭಾರತದ ಗತಕಾಲ, ಭಾರತದ ವೈವಿಧ್ಯತೆ ಮತ್ತು ಭಾರತದ ವಿಸ್ತರಣೆಯನ್ನು ಒಟ್ಟುಗೂಡಿಸಿದಂತೆ ''
"ಯೋಗದ ಅಭ್ಯಾಸಗಳು ಆರೋಗ್ಯ, ಸಮತೋಲನ ಮತ್ತು ಸಹಕಾರಕ್ಕೆ ಅದ್ಭುತ ಸ್ಫೂರ್ತಿಯನ್ನು ನೀಡುತ್ತಿವೆ"
"ಯೋಗಕ್ಕೆ ಸಂಬಂಧಿಸಿದ ಅನಂತ ಸಾಧ್ಯತೆಗಳನ್ನು ಅರಿತುಕೊಳ್ಳುವ ಸಮಯ ಇಂದು"
"ನಾವು ಯೋಗವನ್ನು ಬದುಕಲು ಪ್ರಾರಂಭಿಸಿದಾಗ, ಯೋಗ ದಿನವು ನಮ್ಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ಆಚರಿಸುವ ಮಾಧ್ಯಮವಾಗುತ್ತದೆ".
ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯದ (ಕರ್ನಾಟಕ) ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌ ಜೀ, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಜೀ, ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಜೀ, ರಾಜಮಾತಾ ಪ್ರಮೋದಾ ದೇವಿ, ಸಚಿವ ಶ್ರೀ ಸರ್ಬಾನಂದ ಸೋನೊವಾಲ್‌ ಜೀ. 8ನೇ ಅಂತಾರಾಷ್ಟ್ರೀಯ ಯೋಗ ದಿನದಂದು ದೇಶದ ಮತ್ತು ವಿಶ್ವದ ಸಮಸ್ತ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳು.

ಇಂದು, ಯೋಗ ದಿನದ ಸಂದರ್ಭದಲ್ಲಿ, ನಾನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಆಧ್ಯಾತ್ಮಿಕತೆ ಮತ್ತು ಯೋಗದ ನಾಡು ಮೈಸೂರಿಗೆ ವಂದಿಸುತ್ತೇನೆ! ಮೈಸೂರಿನಂತಹ ಭಾರತದ ಆಧ್ಯಾತ್ಮಿಕ ಕೇಂದ್ರಗಳಿಂದ ಶತಮಾನಗಳಿಂದ ಪೋಷಿಸಲ್ಪಟ್ಟಿರುವ ಯೋಗ ಶಕ್ತಿಯು ಇಂದು ವಿಶ್ವದ ಆರೋಗ್ಯಕ್ಕೆ ನಿರ್ದೇಶನವನ್ನು ನೀಡುತ್ತಿದೆ. ಇಂದು ಯೋಗವು ಜಾಗತಿಕ ಸಹಕಾರಕ್ಕೆ ಸಾಮಾನ್ಯ ಮಾಧ್ಯಮವಾಗುತ್ತಿದೆ. ಇಂದು ಯೋಗವು ಮಾನವರಲ್ಲಿಆರೋಗ್ಯಕರ ಜೀವನಶೈಲಿಯ ಆತ್ಮವಿಶ್ವಾಸವನ್ನು ತುಂಬುತ್ತಿದೆ.

ಬೆಳಗ್ಗೆಯಿಂದ ನಾವು ಯೋಗದ ಚಿತ್ರಗಳನ್ನು ಈಗ ಪ್ರಪಂಚದ ಮೂಲೆ ಮೂಲೆಗಳಿಂದ ನೋಡುತ್ತಿದ್ದೇವೆ, ಇದು ಕೆಲವು ವರ್ಷಗಳ ಹಿಂದಿನವರೆಗೆ ಕೆಲವು ಮನೆಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳಲ್ಲಿ ಮಾತ್ರ ಕಂಡುಬರುತ್ತಿತ್ತು. ಈ ಚಿತ್ರಗಳು ಆಧ್ಯಾತ್ಮಿಕ ಸಾಕ್ಷಾತ್ಕಾರದ ವಿಸ್ತರಣೆಯನ್ನು ಸೂಚಿಸುತ್ತವೆ. ಕಳೆದ ಎರಡು ವರ್ಷಗಳಲ್ಲಿಈ ಶತಮಾನದ ಇಂತಹ ಭಯಾನಕ ಸಾಂಕ್ರಾಮಿಕ ರೋಗವನ್ನು ಜಗತ್ತು ಎದುರಿಸುತ್ತಿರುವ ಸಮಯದಲ್ಲಿಈ ಚಿತ್ರಗಳು ಸ್ವಯಂಪ್ರೇರಿತ, ನೈಸರ್ಗಿಕ ಮತ್ತು ಸಾಮಾನ್ಯ ಮಾನವ ಪ್ರಜ್ಞೆಯನ್ನು ಚಿತ್ರಿಸುತ್ತವೆ! ಇಂತಹ ಪರಿಸ್ಥಿತಿಯಲ್ಲಿ, ದೇಶ, ಉಪಖಂಡ ಮತ್ತು ಇಡೀ ಖಂಡದಾದ್ಯಂತ ಹರಡಿರುವ ಯೋಗ ದಿನದ ಈ ಉತ್ಸಾಹವು ನಮ್ಮ ಚೈತನ್ಯಕ್ಕೆ ಸಾಕ್ಷಿಯಾಗಿದೆ.

ಯೋಗ ಈಗ ಜಾಗತಿಕ ಹಬ್ಬವಾಗಿ ಮಾರ್ಪಟ್ಟಿದೆ. ಯೋಗವು ವೈಯಕ್ತಿಕ-ನಿರ್ದಿಷ್ಟವಲ್ಲ, ಆದರೆ ಇಡೀ ಮಾನವಕುಲಕ್ಕೆ. ಅದಕ್ಕಾಗಿಯೇ, ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ (ಘೋಷವಾಕ್ಯ) - ಮಾನವೀಯತೆಗಾಗಿ ಯೋಗ! ಯೋಗದ ಈ ಸಂದೇಶವನ್ನು ಈ ವಿಷಯದ ಮೂಲಕ ಇಡೀ ಮನುಕುಲಕ್ಕೆ ತಲುಪಿಸಿದ್ದಕ್ಕಾಗಿ ನಾನು ವಿಶ್ವಸಂಸ್ಥೆ ಮತ್ತು ಎಲ್ಲಾ ದೇಶಗಳಿಗೆ ಹೃತ್ಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ. ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ವಿಶ್ವದ ಸಮಸ್ತ ಜನರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ,
ಯೋಗದ ಬಗ್ಗೆ ನಮ್ಮ ಸಂತರು, ಋುಷಿ ಮುನಿಗಳು ಮತ್ತು  ಹೇಳಿದ್ದಾರೆ- ‘‘ತಿಮ್‌ ಯೋಗೇನ್‌ ವಿಂದತಿ’’
ಅಂದರೆ ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಯೋಗದಿಂದ ಶಾಂತಿ ಕೇವಲ ವ್ಯಕ್ತಿಗಳಿಗೆ ಮಾತ್ರ ಅಲ್ಲ. ಯೋಗವು ನಮ್ಮ ಸಮಾಜಕ್ಕೆ ಶಾಂತಿಯನ್ನು ತರುತ್ತದೆ. ಯೋಗವು ನಮ್ಮ ರಾಷ್ಟ್ರಗಳಿಗೆ ಮತ್ತು ಜಗತ್ತಿಗೆ ಶಾಂತಿಯನ್ನು ತರುತ್ತದೆ. ಮತ್ತು, ಯೋಗವು ನಮ್ಮ ಬ್ರಹ್ಮಾಂಡಕ್ಕೆ ಶಾಂತಿಯನ್ನು ಉಂಟು ಮಾಡುತ್ತದೆ. ಇದು ಯಾರಿಗಾದರೂ ಅತಿರೇಕದ ಆಲೋಚನೆ ಎಂದು ಅನಿಸಬಹುದು, ಆದರೆ ನಮ್ಮ ಭಾರತೀಯ ಋುಷಿಮುನಿಗಳು ಇದಕ್ಕೆ ಸರಳ ಮಂತ್ರದ ಮೂಲಕ ಉತ್ತರಿಸಿದ್ದಾರೆ- ‘‘ ಯತ್‌ ಪಿಂಡೆ ತತ್‌ ಬ್ರಹಾಂಡಃ’’

ಈ ಇಡೀ ಬ್ರಹ್ಮಾಂಡವು ನಮ್ಮ ಸ್ವಂತ ದೇಹ ಮತ್ತು ಆತ್ಮದಿಂದ ಪ್ರಾರಂಭವಾಗುತ್ತದೆ. ಬ್ರಹ್ಮಾಂಡವು ನಮ್ಮಿಂದ ಪ್ರಾರಂಭವಾಗುತ್ತದೆ. ಮತ್ತು, ಯೋಗವು ನಮ್ಮೊಳಗಿನ ಎಲ್ಲದರ ಬಗ್ಗೆ ನಮಗೆ ಪ್ರಜ್ಞೆ ಮೂಡಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ. ಇದು ಸ್ವಯಂ-ಜಾಗೃತಿಯಿಂದ ಪ್ರಾರಂಭವಾಗುತ್ತದೆ ಮತ್ತು ಪ್ರಪಂಚದ ಜಾಗೃತಿಗೆ ಮುಂದುವರಿಯುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಪ್ರಪಂಚದ ಬಗ್ಗೆ ಜಾಗೃತರಾದಾಗ, ನಾವು ನಮ್ಮ ಮತ್ತು ಪ್ರಪಂಚದಲ್ಲಿ ಬದಲಾಗಬೇಕಾದ ವಿಷಯಗಳನ್ನು ಗುರುತಿಸಲು ಪ್ರಾರಂಭಿಸುತ್ತೇವೆ.

ಇವು ವೈಯಕ್ತಿಕ ಜೀವನಶೈಲಿ ಸಮಸ್ಯೆಗಳು ಅಥವಾ ಹವಾಮಾನ ಬದಲಾವಣೆ ಮತ್ತು ಅಂತಾರಾಷ್ಟ್ರೀಯ ಸಂಘರ್ಷಗಳಂತಹ ಜಾಗತಿಕ ಸವಾಲುಗಳಾಗಿರಬಹುದು. ಈ ಸವಾಲುಗಳ ಬಗ್ಗೆ ಯೋಗವು ನಮ್ಮನ್ನು ಪ್ರಜ್ಞಾಪೂರ್ವಕ, ಸಮರ್ಥ ಮತ್ತು ಸಹಾನುಭೂತಿಯಿಂದ ಇರುವಂತೆ ಮಾಡುತ್ತದೆ. ಸಾಮಾನ್ಯ ಪ್ರಜ್ಞೆ ಮತ್ತು ಒಮ್ಮತವನ್ನು ಹೊಂದಿರುವ ಲಕ್ಷಾಂತರ ಜನರು, ಆಂತರಿಕ ಶಾಂತಿ ಹೊಂದಿರುವ ಲಕ್ಷಾಂತರ ಜನರು ಜಾಗತಿಕ ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತಾರೆ. ಯೋಗವು ಜನರನ್ನು ಹೇಗೆ ಸಂಪರ್ಕಿಸುತ್ತದೆ. ಈ ರೀತಿಯಾಗಿ ಯೋಗವು ದೇಶಗಳನ್ನು ಸಂಪರ್ಕಿಸುತ್ತದೆ. ಮತ್ತು ಯೋಗವು ನಮ್ಮೆಲ್ಲರಿಗೂ ಸಮಸ್ಯೆಯನ್ನು ಪರಿಹರಿಸುವಂತಾಗಲು ಹೇಗೆ ಸಾಧ್ಯ.

ಸ್ನೇಹಿತರೇ,
ಈ ಬಾರಿ ಭಾರತದಲ್ಲಿ ನಾವು ಯೋಗ ದಿನವನ್ನು ಆಚರಿಸುತ್ತಿದ್ದೇವೆ, ದೇಶವು ತನ್ನ 75 ನೇ ಸ್ವಾತಂತ್ರ್ಯ ವರ್ಷವನ್ನು ಅಂದರೆ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಯೋಗ ದಿನದ ಈ ಬೃಹತ್‌ ಪ್ರಸರಣ, ಈ ಸ್ವೀಕಾರವು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶಕ್ತಿಯನ್ನು ತುಂಬಿದ ಭಾರತದ ಅಮೃತದ ಸ್ಫೂರ್ತಿಯ ಸ್ವೀಕಾರವಾಗಿದೆ.

ಈ ಉತ್ಸಾಹವನ್ನು ಆಚರಿಸಲು, ಇಂದು ದೇಶದ 75 ವಿವಿಧ ನಗರಗಳ 75 ಐತಿಹಾಸಿಕ ಸ್ಥಳಗಳನ್ನು ಹೊರತುಪಡಿಸಿ, ಇತರ ನಗರಗಳ ಜನರು ಸಹ ಐತಿಹಾಸಿಕ ಸ್ಥಳಗಳಲ್ಲಿ ಯೋಗ ಮಾಡುತ್ತಿದ್ದಾರೆ. ಭಾರತದ ಇತಿಹಾಸಕ್ಕೆ ಸಾಕ್ಷಿಯಾದ ಸ್ಥಳಗಳು, ಸಾಂಸ್ಕೃತಿಕ ಶಕ್ತಿಯನ್ನು ಹಿಡಿದಿಡುವ ಸ್ಥಳಗಳು ಇಂದು ಯೋಗ ದಿನದ ಮೂಲಕ ಒಗ್ಗೂಡುತ್ತಿವೆ.

ಈ ಮೈಸೂರು ಅರಮನೆಯು ಇತಿಹಾಸದಲ್ಲಿತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದೆ. ಭಾರತದ ಐತಿಹಾಸಿಕ ತಾಣಗಳಲ್ಲಿಸಾಮೂಹಿಕ ಯೋಗದ ಅನುಭವವು ಭಾರತದ ಗತಕಾಲ, ಭಾರತದ ವೈವಿಧ್ಯತೆ ಮತ್ತು ಭಾರತದ ವಿಸ್ತರಣೆಯನ್ನು ಬೆಸೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ, ಈ ಬಾರಿ ನಾವು ‘‘ಗಾರ್ಡಿಯನ್‌ ರಿಂಗ್‌ ಆಫ್‌ ಯೋಗ’’ ಅನ್ನು ಹೊಂದಿದ್ದೇವೆ. ಈ ನವೀನ ‘‘ಗಾರ್ಡಿಯನ್‌ ರಿಂಗ್‌ ಆಫ್‌ ಯೋಗ’’ ಅನ್ನು ಇಂದು ವಿಶ್ವದಾದ್ಯಂತ ಬಳಸಲಾಗುತ್ತಿದೆ. ವಿಶ್ವದ ವಿವಿಧ ದೇಶಗಳಲ್ಲಿನ ಜನರು ಸೂರ್ಯೋದಯ ಮತ್ತು ಸೂರ್ಯನ ಸ್ಥಾನದೊಂದಿಗೆ ಯೋಗದೊಂದಿಗೆ ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಸಂಪರ್ಕಿಸುತ್ತಿದ್ದಾರೆ. ಸೂರ್ಯ ಉದಯಿಸುತ್ತಿದ್ದಂತೆ ಮತ್ತು ಅದರ ಸ್ಥಾನವು ಬದಲಾಗುತ್ತಿದ್ದಂತೆ, ವಿವಿಧ ದೇಶಗಳ ಜನರು ಅದರ ಮೊದಲ ಕಿರಣದೊಂದಿಗೆ ಒಗ್ಗೂಡುತ್ತಿದ್ದಾರೆ ಮತ್ತು ಇಡೀ ಭೂಮಿಯ ಸುತ್ತಲೂ ಯೋಗದ ಉಂಗುರವು ರೂಪುಗೊಳ್ಳುತ್ತಿದೆ. ಇದು  ‘‘  ಗಾರ್ಡಿಯನ್‌ ರಿಂಗ್‌ ಆಫ್‌ ಯೋಗ ’’  . ಯೋಗದ ಈ ಅಭ್ಯಾಸಗಳು ಆರೋಗ್ಯ, ಸಮತೋಲನ ಮತ್ತು ಸಹಕಾರಕ್ಕೆ ಸ್ಫೂರ್ತಿಯ ಅದ್ಭುತ ಮೂಲಗಳಾಗಿವೆ.

ಸ್ನೇಹಿತರೇ,

ಪ್ರಪಂಚದ ಜನರಿಗೆ, ಯೋಗವು ಇಂದು ನಮಗೆ ಕೇವಲ ಜೀವನದ ಒಂದು ಭಾಗವಲ್ಲ. ದಯವಿಟ್ಟು ಅದನ್ನು ಗಮನಿಸಿ; ಯೋಗವು ಕೇವಲ ಜೀವನದ ಒಂದು ಭಾಗವಲ್ಲ, ಆದರೆ ಈಗ ಒಂದು ಜೀವನ ವಿಧಾನವಾಗಿ ಮಾರ್ಪಟ್ಟಿದೆ. ನಮ್ಮ ದಿನವು ಯೋಗದೊಂದಿಗೆ ಪ್ರಾರಂಭವಾಗುತ್ತದೆ. ಒಂದು ದಿನವನ್ನು ಪ್ರಾರಂಭಿಸಲು ಇದಕ್ಕಿಂತ ಉತ್ತಮ ಮಾರ್ಗ ಯಾವುದು? ಆದರೆ, ನಾವು ಯೋಗವನ್ನು ಒಂದು ನಿರ್ದಿಷ್ಟ ಸಮಯ ಮತ್ತು ಸ್ಥಳಕ್ಕೆ ಸೀಮಿತಗೊಳಿಸಬಾರದು. ನಮ್ಮ ಮನೆಯ ಹಿರಿಯರು ಮತ್ತು ನಮ್ಮ ಯೋಗಾಭ್ಯಾಸಿಗಳು ದಿನದ ವಿವಿಧ ಸಮಯಗಳಲ್ಲಿ ಪ್ರಾಣಾಯಾಮ ಮಾಡುವುದನ್ನು ಸಹ ನಾವು ನೋಡಿದ್ದೇವೆ. ಅನೇಕ ಜನರು ಕೆಲಸದ ಮಧ್ಯದಲ್ಲಿತಮ್ಮ ಕಚೇರಿಗಳಲ್ಲಿ ಸ್ವಲ್ಪ ಸಮಯದವರೆಗೆ ದಂಡಾಸನವನ್ನು ಮಾಡುತ್ತಾರೆ ಮತ್ತು ನಂತರ ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ನಾವು ಎಷ್ಟೇ ಒತ್ತಡದಲ್ಲಿದ್ದರೂ, ಕೆಲವು ನಿಮಿಷಗಳ ಧ್ಯಾನವು ನಮ್ಮನ್ನು ವಿಶ್ರಾಂತಿಗೊಳಿಸುತ್ತದೆ ಮತ್ತು ನಮ್ಮ ಉತ್ಪಾದಕತೆಯನ್ನು ಸುಧಾರಿಸುತ್ತದೆ.

ಆದ್ದರಿಂದ, ನಾವು ಯೋಗವನ್ನು ಹೆಚ್ಚುವರಿ ಕೆಲಸವಾಗಿ ತೆಗೆದುಕೊಳ್ಳಬಾರದು. ನಾವು ಯೋಗವನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ, ಯೋಗದೊಂದಿಗೆ ಬದುಕಬೇಕು. ನಾವು ಯೋಗವನ್ನು ಅಭ್ಯಾಸ ಮಾಡಬೇಕು, ಯೋಗವನ್ನು ಅಳವಡಿಸಿಕೊಳ್ಳಬೇಕು ಮತ್ತು ಯೋಗವನ್ನು ಅಭಿವೃದ್ಧಿಪಡಿಸಬೇಕು. ಮತ್ತು ನಾವು ಯೋಗದೊಂದಿಗೆ ಬದುಕಲು ಪ್ರಾರಂಭಿಸಿದಾಗ, ಯೋಗ ದಿನವು ಅದನ್ನು ಪ್ರದರ್ಶಿಸುವ ಮಾಧ್ಯಮವಾಗಿರದೆ, ನಮ್ಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ಆಚರಿಸುವ ಮಾಧ್ಯಮವಾಗುತ್ತದೆ.

ಸ್ನೇಹಿತರೇ,

ಇಂದು ಯೋಗಕ್ಕೆ ಸಂಬಂಧಿಸಿದ ಅನಂತ ಸಾಧ್ಯತೆಗಳನ್ನು ಅರಿತುಕೊಳ್ಳುವ ಸಮಯ. ಇಂದು ನಮ್ಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಕ್ಷೇತ್ರದಲ್ಲಿಹೊಸ ಆಲೋಚನೆಗಳೊಂದಿಗೆ ಬರುತ್ತಿದ್ದಾರೆ. ಈ ದಿಸೆಯಲ್ಲಿ ಆಯುಷ್‌ ಸಚಿವಾಲಯವು ನಮ್ಮ ದೇಶದಲ್ಲಿ‘ಸ್ಟಾರ್ಟ್‌ ಅಪ್‌ ಯೋಗ ಚಾಲೆಂಜ್‌’ ಅನ್ನು ಪ್ರಾರಂಭಿಸಿದೆ. ಯೋಗದ ಗತಕಾಲ, ಯೋಗದ ಪ್ರಯಾಣ ಮತ್ತು ಯೋಗಕ್ಕೆ ಸಂಬಂಧಿಸಿದ ಸಾಧ್ಯತೆಗಳನ್ನು ಅನ್ವೇಷಿಸಲು ಮೈಸೂರಿನ ದಸರಾ ಮೈದಾನದಲ್ಲಿ ನವೀನ ಡಿಜಿಟಲ್‌ ಪ್ರದರ್ಶನವೂ ಇದೆ.

ದೇಶದ ಮತ್ತು ವಿಶ್ವದ ಎಲ್ಲಾ ಯುವಕರು ಇಂತಹ ಪ್ರಯತ್ನಗಳ ಭಾಗವಾಗಬೇಕೆಂದು ನಾನು ಕರೆ ನೀಡುತ್ತೇನೆ. 2021ನೇ ಸಾಲಿನ ‘ಯೋಗದ ಉತ್ತೇಜನ ಮತ್ತು ಅಭಿವೃದ್ಧಿಗೆ ಅಸಾಧಾರಣ ಕೊಡುಗೆ’ ಗಾಗಿ ‘ಪ್ರಧಾನ ಮಂತ್ರಿ ಪ್ರಶಸ್ತಿ’ಯ ಎಲ್ಲಾ ವಿಜೇತರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಯೋಗದ ಈ ಶಾಶ್ವತ ಪ್ರಯಾಣವು ಈ ರೀತಿಯ ಶಾಶ್ವತ ಭವಿಷ್ಯದ ದಿಕ್ಕಿನಲ್ಲಿ ಮುಂದುವರಿಯುತ್ತದೆ ಎಂದು ನಾನು ನಂಬುತ್ತೇನೆ.

‘ಸರ್ವೇ ಭವಂತು ಸುಖಿನಾಃ, ಸರ್ವೇ ಸಂತು ನಿರಾಮಯಃ’ ಎಂಬ ಸ್ಫೂರ್ತಿಯೊಂದಿಗೆ ಯೋಗದ ಮೂಲಕ ಆರೋಗ್ಯಕರ ಮತ್ತು ಶಾಂತಿಯುತ ಜಗತ್ತನ್ನು ನಾವು ವೇಗಗೊಳಿಸುತ್ತೇವೆ. ಅದೇ ಉತ್ಸಾಹದಿಂದ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಯೋಗ ದಿನದ ಶುಭಾಶಯಗಳು,

ಅಭಿನಂದನೆಗಳು!

ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Will walk shoulder to shoulder': PM Modi pushes 'Make in India, Partner with India' at Russia-India forum

Media Coverage

'Will walk shoulder to shoulder': PM Modi pushes 'Make in India, Partner with India' at Russia-India forum
NM on the go

Nm on the go

Always be the first to hear from the PM. Get the App Now!
...
Prime Minister pays tribute to Dr. Babasaheb Ambedkar on Mahaparinirvan Diwas
December 06, 2025

The Prime Minister today paid tributes to Dr. Babasaheb Ambedkar on Mahaparinirvan Diwas.

The Prime Minister said that Dr. Ambedkar’s unwavering commitment to justice, equality and constitutionalism continues to guide India’s national journey. He noted that generations have drawn inspiration from Dr. Ambedkar’s dedication to upholding human dignity and strengthening democratic values.

The Prime Minister expressed confidence that Dr. Ambedkar’s ideals will continue to illuminate the nation’s path as the country works towards building a Viksit Bharat.

The Prime Minister wrote on X;

“Remembering Dr. Babasaheb Ambedkar on Mahaparinirvan Diwas. His visionary leadership and unwavering commitment to justice, equality and constitutionalism continue to guide our national journey. He inspired generations to uphold human dignity and strengthen democratic values. May his ideals keep lighting our path as we work towards building a Viksit Bharat.”