ಭಾರತ ವಿಶ್ವದ ಅತ್ಯಂತ ಪ್ರಾಚೀನ ನಾಗರೀಕತೆ: ಪ್ರಧಾನಮಂತ್ರಿ
ಭಾರತವು ಸೇವೆ-ಆಧಾರಿತ ದೇಶ, ಮಾನವತೆ-ಆಧಾರಿತ ದೇಶ: ಪ್ರಧಾನಮಂತ್ರಿ
ನಮ್ಮ ಸರ್ಕಾರ ಪ್ರಾಕೃತ ಭಾಷೆಗೆ 'ಶಾಸ್ತ್ರೀಯ ಭಾಷೆ' ಸ್ಥಾನಮಾನ ನೀಡಿದೆ: ಪ್ರಧಾನಮಂತ್ರಿ
ಭಾರತದ ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಅಭಿಯಾನವನ್ನು ನಾವು ನಡೆಸುತ್ತಿದ್ದೇವೆ: ಪ್ರಧಾನಮಂತ್ರಿ
ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಲು, ಇನ್ನೂ ಹೆಚ್ಚಿನ ದೊಡ್ಡ ಕೆಲಸಗಳನ್ನು ಮಾಡಬೇಕಾಗಿದೆ: ಪ್ರಧಾನಮಂತ್ರಿ
ನಮ್ಮ ಎಲ್ಲಾ ಪ್ರಯತ್ನಗಳು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಾಯಸ್' ಎಂಬ ಮಂತ್ರದೊಂದಿಗೆ 'ಜನ್ ಭಾಗೀಧಾರಿ'ಯ ಉತ್ಸಾಹದಲ್ಲಿರುತ್ತವೆ: ಪ್ರಧಾನಮಂತ್ರಿ

ಓಂ ನಮಃ! ಓಂ ನಮಃ! ಓಂ ನಮಃ!

ಶ್ರವಣಬೆಳಗೊಳದ ಸ್ವಾಮಿ ಚಾರುಕೀರ್ತಿ ಜಿ ಮುಖ್ಯಸ್ಥರಾದ ಪರಮ ಶ್ರದ್ಧೆಯ ಆಚಾರ್ಯ ಶ್ರೀ ಪ್ರಜ್ಞಾಸಾಗರ ಮಹಾರಾಜ್ ಜಿ, ನನ್ನ ಸಹೋದ್ಯೋಗಿ ಗಜೇಂದ್ರ ಸಿಂಗ್ ಶೇಖಾವತ್ ಜಿ, ನನ್ನ ಸಹ ಸಂಸದ ನವೀನ್ ಜೈನ್ ಜಿ, ಭಗವಾನ್ ಮಹಾವೀರ ಅಹಿಂಸಾ ಭಾರತಿ ಟ್ರಸ್ಟ್‌ ಅಧ್ಯಕ್ಷ ಪ್ರಿಯಾಂಕ್ ಜೈನ್ ಜಿ, ಕಾರ್ಯದರ್ಶಿ ಮಮತಾ ಜೈನ್ ಜಿ, ಇತರೆ ಗೌರವಾನ್ವಿತ ಗಣ್ಯರೆ, ಪೂಜ್ಯ ಸಾಧು ಸಂತರೆ, ಮಹಿಳೆಯರೆ ಮತ್ತು ಮಹನೀಯರೆ, ಜೈ ಜಿನೇಂದ್ರ!

ಇಂದು ನಾವೆಲ್ಲರೂ ಭಾರತದ ಆಧ್ಯಾತ್ಮಿಕ ಸಂಪ್ರದಾಯದಲ್ಲಿ ಒಂದು ಮಹತ್ವದ ಸಂದರ್ಭಕ್ಕೆ ಸಾಕ್ಷಿಯಾಗಿದ್ದೇವೆ. ಪೂಜ್ಯ ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರ ಜನ್ಮ ಶತಮಾನೋತ್ಸವ, ಅವರ ಶಾಶ್ವತ ಸ್ಫೂರ್ತಿಗಳಿಂದ ತುಂಬಿರುವ ಈ ಪವಿತ್ರ ಹಬ್ಬ ಮತ್ತು ಈ ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವ ಕಾರ್ಯಕ್ರಮವು ಒಟ್ಟಾಗಿ ಅಸಾಧಾರಣ ಪ್ರೇರಣೆಯ ವಾತಾವರಣ ಸೃಷ್ಟಿಸುತ್ತಿದೆ. ಈ ಸಭೆಯಲ್ಲಿ ಭೌತಿಕವಾಗಿ ಹಾಜರಿರುವವರ ಜತೆಗೆ, ಲಕ್ಷಾಂತರ ಜನರು ಆನ್‌ಲೈನ್‌ನಲ್ಲಿ ನಮ್ಮೊಂದಿಗೆ ಸೇರಿದ್ದಾರೆ. ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ, ಇಂದು ಇಲ್ಲಿರಲು ನನಗೆ ಅವಕಾಶ ನೀಡಿದ್ದಕ್ಕಾಗಿ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

 

ಸ್ನೇಹಿತರೆ,

ಈ ದಿನವು ಇನ್ನೊಂದು ಕಾರಣಕ್ಕಾಗಿ ವಿಶೇಷ ಮಹತ್ವ ಹೊಂದಿದೆ. ಇದೇ ದಿನಾಂಕದಂದು ಅಂದರೆ 1987 ಜೂನ್ 28ರಂದು ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರಿಗೆ ಆಚಾರ್ಯ ಎಂಬ ಬಿರುದು ನೀಡಲಾಯಿತು. ಅದು ಕೇವಲ ಬಿರುದಾಗಿರದೆ, ಇದು ಜೈನ ಸಂಪ್ರದಾಯವನ್ನು ಚಿಂತನೆ, ಸಂಯಮ ಮತ್ತು ಕರುಣೆಗೆ ಸಂಪರ್ಕಿಸುವ ಪವಿತ್ರ ಧಾರೆಯ ಹರಿವಾಗಿತ್ತು. ಇಂದು ನಾವು ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವಾಗ, ಈ ದಿನಾಂಕವು ಆ ಐತಿಹಾಸಿಕ ಕ್ಷಣವನ್ನು ನೆನಪಿಸುತ್ತದೆ. ಈ ಸಂದರ್ಭದಲ್ಲಿ, ನಾನು ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರ ಪಾದಗಳಿಗೆ ನಮಸ್ಕರಿಸುತ್ತೇನೆ, ಅವರ ಆಶೀರ್ವಾದಗಳು ನಮ್ಮೆಲ್ಲರ ಮೇಲೆ ಶಾಶ್ವತವಾಗಿ ಉಳಿಯಲಿ ಎಂದು ಪ್ರಾರ್ಥಿಸುತ್ತೇನೆ.

ಸ್ನೇಹಿತರೆ,

ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರ ಜನ್ಮ ಶತಮಾನೋತ್ಸವದ ಈ ಆಚರಣೆಯು ಸಾಮಾನ್ಯ ಘಟನೆಯಲ್ಲ. ಇದು ಒಂದು ಯುಗದ ನೆನಪುಗಳನ್ನು ಹೊಂದಿದೆ, ಇದು ಒಬ್ಬ ಮಹಾನ್ ತಪಸ್ವಿಯ ಜೀವನ ಚಕ್ರವನ್ನು ಪ್ರತಿಧ್ವನಿಸುತ್ತದೆ. ಈ ಐತಿಹಾಸಿಕ ಸಂದರ್ಭವನ್ನು ಸ್ಮರಿಸಲು, ವಿಶೇಷ ಸ್ಮರಣಾರ್ಥ ನಾಣ್ಯಗಳು ಮತ್ತು ಅಂಚೆ ಚೀಟಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ನಾನು ನನ್ನ ಎಲ್ಲಾ ದೇಶವಾಸಿಗಳನ್ನು ಅಭಿನಂದಿಸುತ್ತೇನೆ. ಆಚಾರ್ಯ ಶ್ರೀ ಪ್ರಜ್ಞಾ ಸಾಗರ್ ಜಿ ಅವರಿಗೆ ನಾನು ವಿಶೇಷವಾಗಿ ನನ್ನ ಗೌರವ ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಿಮ್ಮ ಮಾರ್ಗದರ್ಶನದಲ್ಲಿ ಇಂದು ಕೋಟ್ಯಂತರ ಅನುಯಾಯಿಗಳು ಪೂಜ್ಯ ಗುರುಗಳು ತೋರಿಸಿದ ಉದಾತ್ತ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ, ನೀವು ನನಗೆ 'ಧರ್ಮ ಚಕ್ರವರ್ತಿ' ಎಂಬ ಬಿರುದು ನೀಡಲು ಆಯ್ಕೆ ಮಾಡಿಕೊಂಡಿದ್ದೀರಿ. ನಾನು ಈ ಗೌರವಕ್ಕೆ ಅರ್ಹನೆಂದು ನಾನು ಭಾವಿಸುವುದಿಲ್ಲ. ಆದರೆ ಋಷಿಮುನಿಗಳಿಂದ ನಾವು ಪಡೆಯುವ ಯಾವುದೇ ವಿಷಯವನ್ನು ಪವಿತ್ರ ಕೊಡುಗೆಯಾಗಿ ಸ್ವೀಕರಿಸುವುದು ನಮ್ಮ ಸಾಂಸ್ಕೃತಿಕ ಮೌಲ್ಯವಾಗಿದೆ. ಆದ್ದರಿಂದ, ನಾನು ಈ ಗೌರವವನ್ನು ದೈವಿಕ ಕೊಡುಗೆಯಾಗಿ ವಿನಮ್ರವಾಗಿ ಸ್ವೀಕರಿಸಿ, ಭಾರತ ಮಾತೆಯ ಪಾದಗಳಿಗೆ ವಿನಮ್ರವಾಗಿ ಅರ್ಪಿಸುತ್ತೇನೆ.

ಸ್ನೇಹಿತರೆ,

ಅಂತಹ ದೈವಿಕ ಆತ್ಮದ ಬಗ್ಗೆ ಮಾತನಾಡುವುದು - ನಾವು ನಮ್ಮ ಜೀವನದುದ್ದಕ್ಕೂ ಅವರ ಮಾತುಗಳನ್ನು ಪವಿತ್ರ ಮಾರ್ಗದರ್ಶನವೆಂದು ಸ್ವೀಕರಿಸಿದ್ದೇವೆ, ನಮ್ಮ ಹೃದಯಗಳು ಭಾವನಾತ್ಮಕವಾಗಿ ಬಂಧಿತವಾಗಿವೆ, ಅನಿವಾರ್ಯವಾಗಿ ಭಾವನೆಗಳನ್ನು ಕೆರಳಿಸುತ್ತದೆ. ಈಗಲೂ ಸಹ, ಆಚಾರ್ಯ ಶ್ರೀ ವಿದ್ಯಾನಂದ್ ಜಿ ಮುನಿರಾಜ್ ಬಗ್ಗೆ ಮಾತನಾಡುವ ಬದಲು, ಇಂದು ಅವರ ಮಾತನ್ನು ಕೇಳುವ ಅದೃಷ್ಟ ನಮಗೆ ಸಿಕ್ಕಿದೆ ಎಂದು ನಾನು ಬಯಸುತ್ತೇನೆ. ಅಂತಹ ಮಹಾನ್ ವ್ಯಕ್ತಿತ್ವದ ಜೀವನ ಪ್ರಯಾಣವನ್ನು ಪದಗಳಲ್ಲಿ ವ್ಯಾಖ್ಯಾನಿಸುವುದು ಸುಲಭದ ಕೆಲಸವಲ್ಲ. ಅವರು 1925 ಏಪ್ರಿಲ್ 22ರಂದು ಕರ್ನಾಟಕದ ಪವಿತ್ರ ಭೂಮಿಯಲ್ಲಿ ಜನಿಸಿದರು. ಅವರಿಗೆ 'ವಿದ್ಯಾನಂದ' ಎಂಬ ಆಧ್ಯಾತ್ಮಿಕ ನಾಮಾಂಕಿತ ನೀಡಲಾಯಿತು, ಅವರ ಜೀವನವು ಜ್ಞಾನ ಮತ್ತು ಆನಂದದ ವಿಶಿಷ್ಟ ಸಂಗಮವಾಯಿತು. ಅವರ ಭಾಷಣವು ಆಳವಾದ ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸಿತ್ತು. ಆದರೆ ಅವರ ಮಾತುಗಳು ತುಂಬಾ ಸರಳವಾಗಿದ್ದು ಯಾರಾದರೂ ಅವುಗಳನ್ನು ಅರ್ಥ ಮಾಡಿಕೊಳ್ಳಬಹುದು. 150ಕ್ಕೂ ಹೆಚ್ಚು ಗ್ರಂಥಗಳ ಲೇಖಕರಾದ ಅವರು, ಸಾವಿರಾರು ಕಿಲೋಮೀಟರ್ ಆಧ್ಯಾತ್ಮಿಕ ಪ್ರಯಾಣಗಳನ್ನು ಕಾಲ್ನಡಿಗೆಯಲ್ಲಿ ಕೈಗೊಂಡರು, ಲಕ್ಷಾಂತರ ಯುವಕರನ್ನು ಸ್ವಯಂ ಸಂಯಮ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಸಂಪರ್ಕಿಸುವ ದೊಡ್ಡ ಧ್ಯೇಯವನ್ನು ಪ್ರಾರಂಭಿಸಿದರು. ಆಚಾರ್ಯ ಶ್ರೀ ವಿದ್ಯಾನಂದ್ ಜಿ ಮುನಿರಾಜ್ ನಿಜವಾಗಿಯೂ ಯುಗದ ವ್ಯಕ್ತಿ, ಒಬ್ಬ ದಾರ್ಶನಿಕ. ಅವರ ಆಧ್ಯಾತ್ಮಿಕ ಪ್ರಭೆಯನ್ನು ವೈಯಕ್ತಿಕವಾಗಿ ಅನುಭವಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಕಾಲಕಾಲಕ್ಕೆ, ಅವರು ನನಗೆ ಮಾರ್ಗದರ್ಶನ ನೀಡಿದರು, ಅವರ ಆಶೀರ್ವಾದಗಳು ಯಾವಾಗಲೂ ನನ್ನ ಮೇಲೆ ಇರುತ್ತವೆ. ಇಂದು ಈ ಶತಮಾನೋತ್ಸವ ವೇದಿಕೆಯಲ್ಲಿ ನಿಂತಾಗ, ನಾನು ಇನ್ನೂ ಅವರಿಂದ ಅದೇ ಪ್ರೀತಿ ಮತ್ತು ಆತ್ಮೀಯತೆಯನ್ನು ಅನುಭವಿಸಬಲ್ಲೆ.

 

ಸ್ನೇಹಿತರೆ,

ಭಾರತವು ವಿಶ್ವದ ಅತ್ಯಂತ ಪ್ರಾಚೀನ ಜೀವಂತ ನಾಗರಿಕತೆಯಾಗಿದೆ. ನಮ್ಮ ವಿಚಾರಗಳು ಶಾಶ್ವತ, ನಮ್ಮ ತತ್ವಶಾಸ್ತ್ರವು ಶಾಶ್ವತ, ನಮ್ಮ ದೃಷ್ಟಿಯೂ ಶಾಶ್ವತವಾಗಿರುವುದರಿಂದ ನಾವು ಸಾವಿರಾರು ವರ್ಷಗಳಿಂದ ಶಾಶ್ವತವಾಗಿ ಉಳಿದಿದ್ದೇವೆ. ಈ ಎಲ್ಲಾ ದೃಷ್ಟಿಯ ಮೂಲವೇ ನಮ್ಮ ಋಷಿ ಮುನಿಗಳು, ಸನ್ಯಾಸಿಗಳು, ಸಾಧು ಸಂತರು ಮತ್ತು ಆಚಾರ್ಯರಲ್ಲಿದೆ. ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಈ ಪ್ರಾಚೀನ ಭಾರತೀಯ ಸಂಪ್ರದಾಯದ ಆಧುನಿಕ ದಾರಿದೀಪವಾಗಿದ್ದರು. ಅವರು ಹಲವಾರು ವಿಷಯಗಳಲ್ಲಿ ಪರಿಣತಿ ಹೊಂದಿದ್ದರು, ಹಲವಾರು ಕ್ಷೇತ್ರಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಅವರ ಆಧ್ಯಾತ್ಮಿಕ ತೇಜಸ್ಸು, ಅವರ ಜ್ಞಾನ, ಕನ್ನಡ, ಮರಾಠಿ, ಸಂಸ್ಕೃತ ಮತ್ತು ಪ್ರಾಕೃತದಂತಹ ಭಾಷೆಗಳ ಮೇಲಿನ ಅವರ ಹಿಡಿತ ಅಪಾರವಾಗಿತ್ತು. ಪೂಜ್ಯ ಮಹಾರಾಜ್ ಜಿ ಅವರು ಈಗಷ್ಟೇ ಹೇಳಿದಂತೆ, 18 ಭಾಷೆಗಳ ಜ್ಞಾನ - ಅವರ ಸಾಹಿತ್ಯ ಮತ್ತು ಧಾರ್ಮಿಕ ಕೊಡುಗೆಗಳು, ಸಂಗೀತದ ಮೇಲಿನ ಅವರ ಭಕ್ತಿ ಮತ್ತು ರಾಷ್ಟ್ರೀಯ ಸೇವೆಗೆ ಅವರ ಸಮರ್ಪಣೆ - ಅವರು ಆದರ್ಶಗಳ ಶಿಖರವನ್ನು ತಲುಪದ ಜೀವನದ ಯಾವುದೇ ಆಯಾಮವಿರಲಿಲ್ಲ. ಅವರು ಒಬ್ಬ ಮಹಾನ್ ಸಂಗೀತಗಾರ, ಉಜ್ವಲ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಜೇಯ ದಿಗಂಬರ ಮುನಿ. ಅವರು ಜ್ಞಾನ ಮತ್ತು ಬುದ್ಧಿವಂತಿಕೆಯ ಭಂಡಾರ ಮತ್ತು ಆಧ್ಯಾತ್ಮಿಕ ಆನಂದದ ಚಿಲುಮೆಯೂ ಆಗಿದ್ದರು. ಸುರೇಂದ್ರ ಉಪಾಧ್ಯಾಯರಿಂದ ಹಿಡಿದು ಆಚಾರ್ಯ ಶ್ರೀ ವಿದ್ಯಾನಂದ ಮುನಿರಾಜ್ ಆಗುವವರೆಗಿನ ಅವರ ಪ್ರಯಾಣವು ಸಾಮಾನ್ಯ ಮನುಷ್ಯನನ್ನು ಮಹಾನ್ ಆತ್ಮವಾಗಿ ಪರಿವರ್ತಿಸಿತು ಎಂದು ನಾನು ನಂಬುತ್ತೇನೆ. ನಮ್ಮ ಭವಿಷ್ಯವು ನಮ್ಮ ಪ್ರಸ್ತುತ ನಿರ್ಬಂಧಗಳಿಂದ ಸೀಮಿತವಾಗಿಲ್ಲ ಎಂದು ಇದು ನಮಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಭವಿಷ್ಯವು ನಮ್ಮ ನಿರ್ದೇಶನ, ನಮ್ಮ ಗುರಿಗಳು ಮತ್ತು ನಮ್ಮ ನಿರ್ಣಯದಿಂದ ವ್ಯಾಖ್ಯಾನಿಸಲ್ಪಟ್ಟಿದೆ.

ಸ್ನೇಹಿತರೆ,

ಆಚಾರ್ಯ ಶ್ರೀ ವಿದ್ಯಾನಂದ ಮುನಿರಾಜ್ ತಮ್ಮ ಜೀವನವನ್ನು ವೈಯಕ್ತಿಕ ಆಧ್ಯಾತ್ಮಿಕ ಅಭ್ಯಾಸಕ್ಕೆ ಸೀಮಿತಗೊಳಿಸಲಿಲ್ಲ. ಅವರು ತಮ್ಮ ಜೀವನವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಪುನರ್ನಿರ್ಮಾಣಕ್ಕೆ ಮಾಧ್ಯಮವನ್ನಾಗಿ ಮಾಡಿಕೊಂಡರು. ಪ್ರಾಕೃತ ಭವನ ಮತ್ತು ವಿವಿಧ ಸಂಶೋಧನಾ ಕೇಂದ್ರಗಳಂತಹ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ, ಅವರು ಯುವ ಪೀಳಿಗೆಗೆ ಜ್ಞಾನದ ಜ್ವಾಲೆ ಹೊತ್ತಿಸಿದರು. ಅವರು ಜೈನ ಐತಿಹಾಸಿಕ ನಿರೂಪಣೆಯನ್ನು ಅದರ ಸರಿಯಾದ ಸ್ಥಳದಲ್ಲಿ ಪುನಃಸ್ಥಾಪಿಸಿದರು. 'ಜೈನ ದರ್ಶನ' ಮತ್ತು 'ಅನೇಕಾಂತವಾದ'ದಂತಹ ಅವರ ಅಡಿಪಾಯದ ಪಠ್ಯಗಳ ಮೂಲಕ, ಅವರು ತಾತ್ವಿಕ ಪ್ರವಚನಕ್ಕೆ ಆಳ, ಅಗಲ ಮತ್ತು ಎಲ್ಲರ ಒಳಗೊಳ್ಳುವಿಕೆಯನ್ನು ನೀಡಿದರು. ದೇವಾಲಯಗಳ ಪುನಃಸ್ಥಾಪನೆಯಿಂದ ಹಿಡಿದು ಹಿಂದುಳಿದ ಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣದವರೆಗೆ, ಅವರ ಪ್ರತಿಯೊಂದು ಪ್ರಯತ್ನವೂ ಆತ್ಮ ಸಾಕ್ಷಾತ್ಕಾರ ಮತ್ತು ಸಾರ್ವಜನಿಕ ಕಲ್ಯಾಣ ಎರಡಕ್ಕೂ ಸಂಬಂಧಿಸಿದ್ದಾಗಿದೆ.

ಸ್ನೇಹಿತರೆ,

ಆಚಾರ್ಯ ವಿದ್ಯಾನಂದ ಜಿ ಮಹಾರಾಜ್ ಹೇಳುತ್ತಿದ್ದರು - ಜೀವನವು ಸೇವೆಯ ಕ್ರಿಯೆಯಾದಾಗ ಮಾತ್ರ ಆಧ್ಯಾತ್ಮಿಕವಾಗುತ್ತದೆ. ಈ ಚಿಂತನೆಯು ಜೈನ ತತ್ವಶಾಸ್ತ್ರದ ಸಾರದಲ್ಲಿ ಆಳವಾಗಿ ಬೇರೂರಿದೆ. ಇದು ಭಾರತೀಯ ಪ್ರಜ್ಞೆಯಲ್ಲೂ ಅಂತರ್ಗತವಾಗಿದೆ. ಭಾರತವು ಸೇವೆಯ ಭೂಮಿ. ಭಾರತವು ಮಾನವತೆಯಲ್ಲಿ ಬೇರೂರಿರುವ ರಾಷ್ಟ್ರ. ಜಗತ್ತು ಹೆಚ್ಚಿನ ಹಿಂಸೆಯನ್ನು ಹಿಂಸೆಯಿಂದಲೇ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ, ಭಾರತವು ಅಹಿಂಸೆಯ ಶಕ್ತಿಯನ್ನು ಜಗತ್ತಿಗೆ ಬಹಿರಂಗಪಡಿಸಿತು. ನಾವು ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಸೇವೆಯ ಮನೋಭಾವವನ್ನು ಇರಿಸಿದ್ದೇವೆ.

 

ಸ್ನೇಹಿತರೆ,

ನಮ್ಮ ಸೇವಾ ಮನೋಭಾವವು ಬೇಷರತ್ತಾಗಿದ್ದು, ಸ್ವಾರ್ಥವನ್ನು ಮೀರಿದೆ ಮತ್ತು ಹೆಚ್ಚಿನ ಒಳಿತಿನಿಂದ ಪ್ರೇರಿತವಾಗಿದೆ. ಈ ತತ್ವದಿಂದಲೇ ಮಾರ್ಗದರ್ಶಿಸಲ್ಪಟ್ಟ ನಾವು ಇಂದು ದೇಶಾದ್ಯಂತ ಕೆಲಸ ಮಾಡುತ್ತಿದ್ದೇವೆ. ಅದೇ ಆದರ್ಶಗಳು ಮತ್ತು ಅನುಕರಣೀಯ ಜೀವನಗಳಿಂದ ಸ್ಫೂರ್ತಿ ಪಡೆಯುತ್ತಿದ್ದೇವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಲಜೀವನ್ ಮಿಷನ್, ಆಯುಷ್ಮಾನ್ ಭಾರತ್ ಯೋಜನೆ ಅಥವಾ ನಿರ್ಗತಿಕರಿಗೆ ಉಚಿತ ಆಹಾರ ಧಾನ್ಯಗಳು ಹೀಗೆ ಪ್ರತಿಯೊಂದು ಉಪಕ್ರಮವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೇವೆಯ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಈ ಯೋಜನೆಗಳಲ್ಲಿ ಪರಿಪೂರ್ಣತೆ ಸಾಧಿಸುವ ದೃಷ್ಟಿಕೋನದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ಅಂದರೆ ಯಾರೂ ಹಿಂದೆ ಉಳಿಯಬಾರದು, ಎಲ್ಲರೂ ಒಟ್ಟಾಗಿ ಪ್ರಗತಿ ಸಾಧಿಸಬೇಕು. ಇದು ಆಚಾರ್ಯ ಶ್ರೀ ವಿದ್ಯಾನಂದ್ ಜಿ ಮುನಿರಾಜ್ ಅವರ ಸ್ಫೂರ್ತಿ, ಮತ್ತು ಇದು ನಮ್ಮ ಸಾಮೂಹಿಕ ಸಂಕಲ್ಪ.

ನಮ್ಮ ತೀರ್ಥಂಕರರು, ಋಷಿ ಮುನಿಗಳು, ಸನ್ಯಾಸಿಗಳು, ಸಾಧು ಸಂತರು ಮತ್ತು ಆಚಾರ್ಯರ ಬೋಧನೆಗಳು ಮತ್ತು ಮಾತುಗಳು ಶಾಶ್ವತವಾಗಿದ್ದು, ಪ್ರಸ್ತುತವಾಗಿವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಜೈನ ಧರ್ಮದ ತತ್ವಗಳು - ಪಂಚ ಮಹಾ ವಚನಗಳು, ಅನುವ್ರತ, 3 ರತ್ನಗಳು, 6 ಅಗತ್ಯಗಳು - ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ. ಪ್ರತಿಯೊಂದು ಯುಗದಲ್ಲೂ, ಸಾಮಾನ್ಯ ಜನರು ಸುಲಭವಾಗಿ ಅಳವಡಿಸಿಕೊಳ್ಳುವಂತೆ ಕಾಲಾತೀತ ಬೋಧನೆಗಳನ್ನು ಸರಳಗೊಳಿಸುವ ಅವಶ್ಯಕತೆಯಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಆಚಾರ್ಯ ಶ್ರೀ ವಿದ್ಯಾನಂದ್ ಜಿ ಮುನಿರಾಜ್ ಅವರು ತಮ್ಮ ಜೀವನವನ್ನು ಈ ಧ್ಯೇಯಕ್ಕೆ ಮುಡಿಪಾಗಿಟ್ಟರು. ಅವರು 'ವಚನಾಮೃತ' ಆಂದೋಲನ ಪ್ರಾರಂಭಿಸಿದರು, ದೈನಂದಿನ ಭಾಷೆಯಲ್ಲಿ ಜೈನ ಧರ್ಮ ಗ್ರಂಥಗಳನ್ನು ಪ್ರಸ್ತುತಪಡಿಸಿದರು. ಭಕ್ತಿ ಸಂಗೀತದ ಮೂಲಕ, ಅವರು ಆಳವಾದ ಧಾರ್ಮಿಕ ಪರಿಕಲ್ಪನೆಗಳನ್ನು ಸರಳ ಪದಗಳಲ್ಲಿ ತಿಳಿಸಿದರು. "ಅಬ್ ಹಮ್ ಅಮರ್ ಭಯೇ ನ ಮರೇಂಗೆ, ಹಮ್ ಅಮರ್ ಭಯೇ ನ ಮರೇಂಗೆ, ತನ್ ಕರಣ್ ಮಿಥ್ಯಾತ್ ದಿಯೋ ತಾಜ, ಕ್ಯೂಂ ಕರಿ ದೇಹ್ ಧರೇಂಗೆ"ಯಂತಹ ಅವರ ಭಜನೆಗಳು ನಮಗೆಲ್ಲರಿಗೂ ಬುದ್ಧಿವಂತಿಕೆಯ ಮುತ್ತುಗಳಿಂದ ಪೋಣಿಸಿದ ಆಧ್ಯಾತ್ಮಿಕ ಮಾಲೆಗಳಾಗಿವೆ. ಅಮರತ್ವದಲ್ಲಿನ ಈ ನೈಸರ್ಗಿಕ ನಂಬಿಕೆ, ಅನಂತತೆಯ ಕಡೆಗೆ ನೋಡುವ ಈ ಧೈರ್ಯ - ಇವು ಭಾರತೀಯ ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ನಿಜವಾಗಿಯೂ ಅನನ್ಯವಾಗಿಸುವ ಲಕ್ಷಣಗಳಾಗಿವೆ.

 

ಸ್ನೇಹಿತರೆ,

ಆಚಾರ್ಯ ಶ್ರೀ ವಿದ್ಯಾನಂದ್ ಜಿ ಮುನಿರಾಜ್ ಅವರ ಜನ್ಮ ಶತಮಾನೋತ್ಸವ ವರ್ಷವು ಸ್ಫೂರ್ತಿಯ ಸೆಲೆಯಾಗಿ ಮುಂದುವರಿಯುತ್ತದೆ. ಅವರ ಆಧ್ಯಾತ್ಮಿಕ ಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಾತ್ರವಲ್ಲದೆ, ಸಮಾಜ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಅವರ ಕೃತಿಗಳನ್ನು ಮುನ್ನಡೆಸುವುದು ನಮ್ಮ ಕರ್ತವ್ಯ. ಅವರು ತಮ್ಮ ಬರಹಗಳು ಮತ್ತು ಸ್ತೋತ್ರಗಳ ಮೂಲಕ ಪ್ರಾಚೀನ ಪ್ರಾಕೃತ ಭಾಷೆಯನ್ನು ಹೇಗೆ ಪುನರುಜ್ಜೀವನಗೊಳಿಸಿದರು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಪ್ರಾಕೃತವು ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಭಗವಾನ್ ಮಹಾವೀರರು ತಮ್ಮ ಧರ್ಮೋಪದೇಶಗಳನ್ನು ನೀಡಿದ ಭಾಷೆ ಇದು. ಸಂಪೂರ್ಣ ಮೂಲ ಜೈನ ಆಗಮವನ್ನು ಈ ಭಾಷೆಯಲ್ಲಿ ರಚಿಸಲಾಗಿದೆ. ಆದರೆ ನಮ್ಮ ಸ್ವಂತ ಸಂಸ್ಕೃತಿಯ ನಿರ್ಲಕ್ಷ್ಯದಿಂದಾಗಿ, ಈ ಭಾಷೆ ದೈನಂದಿನ ಬಳಕೆಯಿಂದ ಕಣ್ಮರೆಯಾಗಲು ಪ್ರಾರಂಭಿಸಿತ್ತು. ಆಚಾರ್ಯ ಶ್ರೀಗಳಂತಹ ಋಷಿಗಳ ಪ್ರಯತ್ನಗಳನ್ನು ನಾವು ರಾಷ್ಟ್ರೀಯ ಪ್ರಯತ್ನವಾಗಿ ಪರಿವರ್ತಿಸಿದ್ದೇವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ನಮ್ಮ ಸರ್ಕಾರ ಪ್ರಾಕೃತವನ್ನು 'ಶಾಸ್ತ್ರೀಯ ಭಾಷೆ' ಎಂದು ಘೋಷಿಸಿತು. ಇದನ್ನು ಆಚಾರ್ಯ ಜಿ ಕೂಡ ಉಲ್ಲೇಖಿಸಿದ್ದಾರೆ. ಭಾರತದ ಪ್ರಾಚೀನ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಅಭಿಯಾನವನ್ನು ಸಹ ನಾವು ನಡೆಸುತ್ತಿದ್ದೇವೆ. ಇವುಗಳಲ್ಲಿ ಗಮನಾರ್ಹ ಭಾಗವು ಜೈನ ಧರ್ಮಗ್ರಂಥಗಳು ಮತ್ತು ಪೂಜ್ಯ ಆಚಾರ್ಯರಿಗೆ ಸಂಬಂಧಿಸಿದ ಪಠ್ಯಗಳನ್ನು ಒಳಗೊಂಡಿದೆ. ನೀವು ಗಮನಿಸಿದಂತೆ, 50,000ಕ್ಕೂ ಹೆಚ್ಚು ಹಸ್ತಪ್ರತಿಗಳು - ನಮ್ಮ ಸಚಿವಾಲಯ ಕಾರ್ಯದರ್ಶಿ ಇಲ್ಲಿದ್ದಾರೆ, ಅವರು ಖಂಡಿತವಾಗಿಯೂ ಈ ವಿಷಯವನ್ನು ಶ್ರದ್ಧೆಯಿಂದ ಮುಂದುವರಿಸುತ್ತಾರೆ. ನಾವು ಈ ಪ್ರಯತ್ನವನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇವೆ. ನಾವು ಈಗ ಉನ್ನತ ಶಿಕ್ಷಣದಲ್ಲಿಯೂ ಮಾತೃಭಾಷೆಗಳನ್ನು ಉತ್ತೇಜಿಸುತ್ತಿದ್ದೇವೆ. ಅದಕ್ಕಾಗಿಯೇ, ನಾನು ಕೆಂಪುಕೋಟೆಯ ಮೇಲೆ ನಿಂತು, ರಾಷ್ಟ್ರವನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸಬೇಕು ಎಂದು ಘೋಷಿಸಿದ್ದೆ. ಅಭಿವೃದ್ಧಿ ಮತ್ತು ಪರಂಪರೆ ಎರಡರೊಂದಿಗೂ ನಾವು ಮುಂದುವರಿಯಬೇಕು. ಈ ಸಂಕಲ್ಪದಿಂದಲೇ ನಾವು ಭಾರತದ ಸಾಂಸ್ಕೃತಿಕ ಮತ್ತು ಯಾತ್ರಾ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದ್ದೇವೆ. 2024ರಲ್ಲಿ, ನಮ್ಮ ಸರ್ಕಾರವು ಭಗವಾನ್ ಮಹಾವೀರರ 2,550ನೇ ನಿರ್ವಾಣ ಮಹೋತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಿತು. ಈ ಆಚರಣೆಯು ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿ ಅವರಿಂದ ಸ್ಫೂರ್ತಿ ಪಡೆದಿದೆ, ಆಚಾರ್ಯ ಶ್ರೀ ಪ್ರಜ್ಞಾ ಸಾಗರ್ ಜಿ ಅವರಂತಹ ಋಷಿಗಳಿಂದ ಆಶೀರ್ವದಿಸಲ್ಪಟ್ಟಿದೆ. ಮುಂದಿನ ದಿನಗಳಲ್ಲಿ, ನಮ್ಮ ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸಲು ನಾವು ಇಂತಹ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಮುಂದುವರಿಸಬೇಕು. ಈ ಕಾರ್ಯಕ್ರಮದಂತೆಯೇ, ನಮ್ಮ ಎಲ್ಲಾ ಪ್ರಯತ್ನಗಳು ಸಾರ್ವಜನಿಕ ಭಾಗವಹಿಸುವಿಕೆಯ ಮನೋಭಾವದಿಂದ ಮಾರ್ಗದರ್ಶಿಸಲ್ಪಡುತ್ತವೆ ಮತ್ತು "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ಪ್ರಯಾಸ್" ಎಂಬ ಮಂತ್ರದಿಂದ ನಡೆಸಲ್ಪಡುತ್ತವೆ.

 

ಸ್ನೇಹಿತರೆ,

ಇಂದು ನಾನು ನಿಮ್ಮ ನಡುವೆ ನಿಂತಿರುವಾಗ, ನವಕರ್ ಮಹಾಮಂತ್ರ ದಿವಸದ ನೆನಪು ಮಾಡಿಕೊಳ್ಳುವುದು ಸಹಜ. ಆ ದಿನ ನಾವು ನವ(9) ಸಂಕಲ್ಪ ಅಥವಾ ನಿರ್ಣಯಗಳ ಬಗ್ಗೆಯೂ ಮಾತನಾಡಿದ್ದೇವೆ. ಆ ಸಂಕಲ್ಪಗಳನ್ನು ಈಡೇರಿಸಲು ಹೆಚ್ಚಿನ ಸಂಖ್ಯೆಯ ನಾಗರಿಕರು ಕೆಲಸ ಮಾಡುತ್ತಿದ್ದಾರೆ ಎಂಬುದು ನನಗೆ ಸಂತೋಷವಾಗಿದೆ. ಆಚಾರ್ಯ ಶ್ರೀ ವಿದ್ಯಾನಂದ್ ಜಿ ಮುನಿರಾಜ್ ಅವರಿಂದ ನಾವು ಪಡೆಯುವ ಮಾರ್ಗದರ್ಶನವು ಈ 9 ನಿರ್ಣಯಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಆದ್ದರಿಂದ, ಈ ಸಂದರ್ಭದಲ್ಲಿ, ನಾನು ಮತ್ತೊಮ್ಮೆ ಆ 9 ನಿರ್ಣಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮೊದಲ ಸಂಕಲ್ಪವೆಂದರೆ ನೀರನ್ನು ಉಳಿಸುವುದು. ನಾವು ಪ್ರತಿ ಹನಿಯನ್ನು ಗೌರವಿಸಬೇಕು. ಇದು ಭೂಮಿ ತಾಯಿ ಕಡೆಗೆ ತೋರುವ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಎರಡೂ ಆಗಿದೆ. ಎರಡನೆಯದು, ನಮ್ಮ ತಾಯಿಯ ಹೆಸರಿನಲ್ಲಿ ಸಸಿ ನೆಡುವುದು - ಅವರು ನಮ್ಮನ್ನು ನೋಡಿಕೊಂಡಂತೆ ಅದನ್ನು ನಾವು ನೋಡಿಕೊಳ್ಳುವುದು. ಪ್ರತಿಯೊಂದು ಮರವೂ ನಮ್ಮ ತಾಯಿಯ ಆಶೀರ್ವಾದವಾಗಲಿ. ಮೂರನೆಯದು ಸ್ವಚ್ಛತೆ - ಕೇವಲ ಪ್ರದರ್ಶನಕ್ಕಾಗಿ ಅಲ್ಲ, ಇದು ಅಹಿಂಸೆಯ ಪ್ರತಿಬಿಂಬ. ಪ್ರತಿಯೊಂದು ಬೀದಿ, ಪ್ರತಿಯೊಂದು ನೆರೆಹೊರೆ, ಪ್ರತಿಯೊಂದು ನಗರವು ಸ್ವಚ್ಛವಾಗಿರಬೇಕು, ಇದಕ್ಕೆ ಎಲ್ಲರೂ ಭಾಗಿಯಾಗಬೇಕು. ನಾಲ್ಕನೆಯದು 'ಸ್ಥಳೀಯರಿಗಾಗಿ ತಯಾರಿಸುವುದು'. ನಮ್ಮ ಭಾರತೀಯರ ಬೆವರು ಸುರಿಸುವಂತಹ, ನಮ್ಮ ಮಣ್ಣಿನ ಪರಿಮಳ ಹೊಂದಿರುವ ಉತ್ಪನ್ನಗಳನ್ನು ಮಾತ್ರ ಖರೀದಿಸಿ. ನಿಮ್ಮಲ್ಲಿ ಹಲವರು ವ್ಯವಹಾರದಲ್ಲಿದ್ದೀರಿ - ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಆದ್ಯತೆ ನೀಡಬೇಕೆಂದು ನಾನು ವಿಶೇಷವಾಗಿ ನಿಮ್ಮನ್ನು ಒತ್ತಾಯಿಸುತ್ತೇನೆ. ಲಾಭವನ್ನು ಮೀರಿ ನೋಡಿ, ಇತರರಿಗೂ ಸ್ಫೂರ್ತಿ ನೀಡಿ. ಐದನೇ ಸಂಕಲ್ಪ ಭಾರತವನ್ನು ಅನ್ವೇಷಿಸುವುದು. ಜಗತ್ತನ್ನು ಎಲ್ಲಾ ವಿಧಾನಗಳಿಂದ ನೋಡಿ - ಆದರೆ ಮೊದಲು, ನಿಮ್ಮ ಸ್ವಂತ ದೇಶವನ್ನು ತಿಳಿದುಕೊಳ್ಳಿ, ಅರ್ಥ ಮಾಡಿಕೊಳ್ಳಿ ಮತ್ತು ಅನುಭವಿಸಿ. ಆರನೆಯದು ಸಾವಯವ ಕೃಷಿ ಅಳವಡಿಸಿಕೊಳ್ಳುವುದು. ಭೂಮಿ ತಾಯಿಯನ್ನು ವಿಷದಿಂದ ಮುಕ್ತಗೊಳಿಸಿ. ಕೃಷಿಯನ್ನು ರಾಸಾಯನಿಕಗಳಿಂದ ದೂರವಿಡಿ. ಸಾವಯವ ಕೃಷಿಯ ಸಂದೇಶವನ್ನು ಪ್ರತಿ ಹಳ್ಳಿಗೂ ಹರಡಿ. ಪೂಜ್ಯ ಮಹಾರಾಜ್ ಜಿ ಎಂದಿಗೂ ಪಾದರಕ್ಷೆಗಳನ್ನು ಧರಿಸಲಿಲ್ಲ. ಅಂತೆಯೇ, ನಾವು ಕೂಡ ಭೂಮಿ ತಾಯಿಯನ್ನು ರಕ್ಷಿಸಬೇಕು. ಏಳನೆಯದು ಆರೋಗ್ಯಕರ ಜೀವನಶೈಲಿ. ಜಾಗರೂಕತೆಯಿಂದ ತಿನ್ನಿರಿ. ನಿಮ್ಮ ಸಾಂಪ್ರದಾಯಿಕ ಭಾರತೀಯ ಊಟದಲ್ಲಿ ಸಿರಿಧಾನ್ಯ ಸೇರಿಸಿ. ನಿಮ್ಮ ಎಣ್ಣೆ ಸೇವನೆಯನ್ನು ಕನಿಷ್ಠ 10%ರಷ್ಟು ಕಡಿಮೆ ಮಾಡಿ - ಇದು ಬೊಜ್ಜು ಕಡಿಮೆ ಮಾಡಿ, ಶಕ್ತಿಯನ್ನು ಹೆಚ್ಚಿಸುತ್ತದೆ. ಎಂಟನೆಯದು ಯೋಗ ಮತ್ತು ಕ್ರೀಡೆ. ಎರಡನ್ನೂ ನಿಮ್ಮ ದೈನಂದಿನ ದಿನಚರಿಯ ಅವಿಭಾಜ್ಯ ಅಂಗವಾಗಿಸಿ. ಒಂಬತ್ತನೇ ಸಂಕಲ್ಪವೆಂದರೆ, ಬಡವರಿಗೆ ಸಹಾಯ ಮಾಡುವುದು. ಬಡತನದಲ್ಲಿರುವ ಯಾರಿಗಾದರೂ ಕೈ ಹಿಡಿದು ಬೆಂಬಲ ನೀಡುವುದು ಮತ್ತು ಅದನ್ನು ನಿವಾರಿಸಲು ಸಹಾಯ ಮಾಡುವುದು ನಿಜವಾದ ಸೇವೆಯಾಗಿದೆ. ನಾವು ಈ 9 ಸಂಕಲ್ಪಗಳ ಮೇಲೆ ಕಾರ್ಯ ನಿರ್ವಹಿಸಿದರೆ, ನಾವು ಆಚಾರ್ಯ ಶ್ರೀ ವಿದ್ಯಾನಂದ್ ಜಿ ಮುನಿರಾಜ್ ಅವರ ಪರಂಪರೆಯನ್ನು ಮಾತ್ರವಲ್ಲದೆ, ಅವರ ಬೋಧನೆಗಳನ್ನು ಸಹ ಬಲಪಡಿಸುತ್ತೇವೆ ಎಂಬ ವಿಶ್ವಾಸ ನನಗಿದೆ.

 

ಸ್ನೇಹಿತರೆ,

ಭಾರತದ ಪ್ರಜ್ಞೆ ಮತ್ತು ನಮ್ಮ ಋಷಿಮುನಿಗಳ ಅನುಭವಗಳಿಂದ ನಾವು ದೇಶದ ಅಮೃತ ಕಾಲವನ್ನು ಕಲ್ಪಿಸಿಕೊಂಡಿದ್ದೇವೆ. ಇಂದು 140 ಕೋಟಿ ಭಾರತೀಯರು ಈ ಅಮೃತ ಸಂಕಲ್ಪ(ಪ್ರತಿಜ್ಞೆಗಳು) ಈಡೇರಿಸಲು ಮತ್ತು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತ ಎಂದರೆ ಪ್ರತಿಯೊಬ್ಬ ಭಾರತೀಯನ ಕನಸುಗಳನ್ನು ಈಡೇರಿಸುವುದಾಗಿದೆ. ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರು ನಮಗೆ ನೀಡಿದ ಸ್ಫೂರ್ತಿ ಇದೇ ಆಗಿದೆ. ಅವರು ತೋರಿಸಿದ ಸ್ಫೂರ್ತಿದಾಯಕ ಹಾದಿಯಲ್ಲಿ ನಡೆಯುವುದು, ಅವರ ಬೋಧನೆಗಳನ್ನು ಆಂತರಿಕಗೊಳಿಸುವುದು ಮತ್ತು ರಾಷ್ಟ್ರನಿರ್ಮಾಣವನ್ನು ನಮ್ಮ ಜೀವನದ ಪ್ರಮುಖ ಉದ್ದೇಶವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಪವಿತ್ರ ಸಂದರ್ಭದ ಶಕ್ತಿಯು ಈ ನಿರ್ಣಯಗಳನ್ನು ಬಲಪಡಿಸುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಇದೀಗ, ಆಚಾರ್ಯ ಶ್ರೀ ಪ್ರಜ್ಞಾ ಸಾಗರ್ ಮಹಾರಾಜ್ ಜಿ ಹೇಳಿದಂತೆ - "ನಮ್ಮನ್ನು ಕೆರಳಿಸಲು ಯಾರು ಧೈರ್ಯ ಮಾಡುತ್ತಾರೆ..." ನಾನು ಅಹಿಂಸೆಯ ಅನುಯಾಯಿಗಳ ನಡುವೆ ಜೈನ ಸಭೆಯಲ್ಲಿ ಇದ್ದೇನೆ. ನಾನು ಅರ್ಧ ವಾಕ್ಯವನ್ನು ಮಾತ್ರ ಮಾತನಾಡಿದೆ, ಉಳಿದದ್ದನ್ನು ನೀವು ಪೂರ್ಣಗೊಳಿಸಿದ್ದೀರಿ. ನನ್ನ ಅರ್ಥವೇನೆಂದರೆ, ನೀವು ಅದನ್ನು ಪದಗಳಲ್ಲಿ ಹೇಳದಿದ್ದರೂ, ಬಹುಶಃ ನೀವು ಆಪರೇಷನ್ ಸಿಂದೂರ್ ಅನ್ನು ಆಶೀರ್ವದಿಸುತ್ತಿರಬಹುದು. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳೊಂದಿಗೆ, ನಾನು ಮತ್ತೊಮ್ಮೆ ಆಚಾರ್ಯ ಶ್ರೀ ವಿದ್ಯಾನಂದ ಜಿ ಮುನಿರಾಜ್ ಅವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತೇನೆ. ತುಂಬು ಧನ್ಯವಾದಗಳು! ಜೈ ಜಿನೇಂದ್ರ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s maternal mortality drops nearly 80% since 1990: Global study

Media Coverage

India’s maternal mortality drops nearly 80% since 1990: Global study
NM on the go

Nm on the go

Always be the first to hear from the PM. Get the App Now!
...
PM Modi’s speech sparks massive enthusiasm in Palakkad, Keralam
March 29, 2026
A BJP-NDA government in Keralam will ensure rapid development. This is Modi’s guarantee: PM Modi in Palakkad
The track record of the Congress and the Left shows that wherever they come to power, everything deteriorates: PM Modi
In Palakkad, PM Modi says that both the UDF and LDF are targeting the BJP because they fear the party will expose their past misdeeds
If the BJP comes to power, all the scams perpetrated by the LDF and UDF will be thoroughly investigated, and justice will be served: PM

Prime Minister Narendra Modi today addressed a massive public gathering in Palakkad, highlighting the growing momentum for change in Keralam and expressing confidence in the rising support for the BJP-led NDA in the state. “I can clearly see a different atmosphere in the state this time. Keralam is sending a message of change,” he said.

Opening his address, the Prime Minister remarked, “The growing popularity of the NDA, the increasing trust in the BJP, and the overwhelming enthusiasm and presence of people here in Palakkad show that the mood of Keralam has now transformed into a movement.” He further emphasized, “Today, the youth, the women and the farmers of Keralam place their faith in the BJP and NDA.”

The PM credited this shift to the people of Keralam and the dedication of party karyakartas. “This transformation is the result of the blessings of the people of Kerala and the tireless efforts of lakhs of BJP karyakartas. Many of our karyakartas have sacrificed their lives due to political violence. I pay my heartfelt tribute to all of them,” he said.

Launching a sharp attack on both the LDF and UDF, PM Modi stated, “For decades, Keralam has been trapped between two faces of selfish politics -LDF and UDF. One is corrupt, the other is more corrupt. One is communal, the other is more communal. Their policies revolve only around vote bank politics, with no concern for Keralam’s development.”

Highlighting what he termed a 'tacit understanding' between the two alliances, the PM added, “For years, LDF and UDF have taken turns to rule and loot. Now both are targeting the BJP, which shows they fear us. They know that once BJP comes to power, their corruption will be exposed.” He asserted that a future NDA government would investigate all scams and deliver justice to the people of Keralam.

PM Modi also pointed to the developmental support extended by the Centre, stating that Keralam has received significantly higher funds in the last decade compared to previous regimes. However, he criticized the state government for poor utilization of these funds.

On development and employment, PM Modi highlighted the state’s immense potential but lamented the lack of industrial growth and job opportunities, which has led to migration. He contrasted this with initiatives taken by the Centre in Palakkad, including the establishment of an IIT, infrastructure upgrades and plans for a smart industrial city.

Focusing on women-led development, PM Modi said, “Empowering women has been a priority for the BJP. From financial inclusion to healthcare and housing, women are at the center of our schemes. We have also ensured greater political participation through the Nari Shakti Vandan Adhiniyam.”

PM Modi exposed Congress misconduct and raised concerns about women’s safety. He said, “In Palakkad, Congress leaders have increasingly posed a safety concern for women. Just yesterday, the party expelled another leader over allegations of exploiting a woman. This reveals an uncomfortable truth about these parties, one that the women of Keralam should be well aware of.”

He also addressed farmers’ concerns, particularly delays in paddy procurement and payments, and highlighted the benefits provided under central schemes like PM-KISAN.

Touching upon global developments, the Prime Minister reassured citizens about the government’s efforts to safeguard Indians abroad amid ongoing conflicts in West Asia. He stressed that the safety and interests of Indian citizens remain the top priority of the NDA government.

“Since the outbreak of the conflict, I have been in constant touch with world leaders. The safety of Indians in affected regions is our top priority, with our embassies working round the clock to ensure their well-being. For the BJP-NDA government, the security of every Indian is paramount. However, the kind of statements being made by the Congress on this sensitive issue are dangerous, as they risk the safety of nearly one crore Indians in Gulf countries for political gain,” he said.

Concluding his address, PM Modi reiterated the vision for a “Viksit Keralam.” “Our resolve is clear- development, dignity and opportunity for every citizen. NDA guarantees an end to forced migration, respect for every youth’s talent, and development free from corruption and political interference. The kind of transformation seen in the rest of India will now be visible in Keralam as well,” he said.