ಮಹಾರಾಜರ ಕೃತಿಗಳು ಮಾನವೀಯತೆಯ ಸವಾಲುಗಳಿಗೆ ಆಧ್ಯಾತ್ಮಿಕ ಪರಿಹಾರಗಳನ್ನು ನೀಡುತ್ತವೆ: ಪ್ರಧಾನಮಂತ್ರಿ
ಸಾಂಸ್ಕೃತಿಕ ಬೇರುಗಳನ್ನು ಬಲಪಡಿಸುವ ಜತೆಗೆ ಯುವ ಶಕ್ತಿ ಚಾಲನಾ ಭಾರತವನ್ನು ಅಭಿವೃದ್ಧಿಪಡಿಸಿದೆ: ಪ್ರಧಾನಮಂತ್ರಿ
ಸಮಾಜ ಮತ್ತು ರಾಷ್ಟ್ರಕ್ಕಾಗಿ ಒಂಬತ್ತು ನಿರ್ಣಯಗಳನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ಜೈ ಜಿನೇಂದ್ರ!

ಈ ಪವಿತ್ರ ಸಮಾರಂಭದಲ್ಲಿ ನಮ್ಮ ಸ್ಫೂರ್ತಿಯ ಸೆಲೆಯಾದ ಪೂಜ್ಯ ಭುವನಭಾನು ಸುರೀಶ್ವರ್ ಜಿ ಮಹಾರಾಜ್ ಅವರ ಪಾದಗಳಿಗೆ ನಾನು ಮೊದಲು ನಮಸ್ಕರಿಸುತ್ತೇನೆ. ಈ ಸಮಾರಂಭದಲ್ಲಿ ಉಪಸ್ಥಿತರಿರುವ ಪ್ರಶಾಂತಮೂರ್ತಿ ಸುವಿಶಾಲ ಗಚ್ಛಾಧಿಪತಿ ಪೂಜ್ಯ ಶ್ರೀಮದ್ ವಿಜಯ್ ರಾಜೇಂದ್ರ ಸುರೀಶ್ವರ ಜೀ ಮಹಾರಾಜ್, ಪೂಜ್ಯ ಗಚ್ಛಾಧಿಪತಿ ಶ್ರೀ ಕಲ್ಪತರು ಸುರೀಶ್ವರ್ ಜಿ ಮಹಾರಾಜ್, ಸರಸ್ವತಿ ಕೃಪಾಪಾತ್ರ ಪರಮ ಪೂಜ್ಯ ಆಚಾರ್ಯ ಭಗವಂತ ಶ್ರೀಮದ್ ವಿಜಯರತ್ನ ಸುಂದರ ಸುರೀಶ್ವರ ಜೀ ಮಹಾರಾಜರು ಮತ್ತು ಇಲ್ಲಿ ನೆರೆದಿರುವ ಎಲ್ಲಾ ಸಾಧು ಸಂತರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಶ್ರೀ ಕುಮಾರ್‌ಪಾಲ್‌ಭಾಯ್ ಶಾ, ಕಲ್ಪೇಶ್‌ಭಾಯ್ ಶಾ, ಸಂಜಯ್‌ಭಾಯ್ ಶಾ, ಮತ್ತು ಕೌಶಿಕ್‌ಭಾಯ್ ಸಾಂಘ್ವಿ ಸೇರಿದಂತೆ ಉರ್ಜಾ ಮಹೋತ್ಸವ ಸಮಿತಿಯ ಎಲ್ಲ ಸದಸ್ಯರನ್ನು ನಾನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ, ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪೂಜ್ಯ ಸಂತರೆ, ಇಂದು ನಾವು ಶ್ರೀಮದ್ ವಿಜಯರತ್ನ ಸುಂದರ್ ಸುರೀಶ್ವರ್ ಜಿ ಮಹಾರಾಜ್ ಅವರ 500ನೇ ಪುಸ್ತಕದ ಬಿಡುಗಡೆ ಕಾರ್ಯಕ್ರಮ ವೀಕ್ಷಿಸುವ ಸೌಭಾಗ್ಯವನ್ನು ಪಡೆದಿದ್ದೇವೆ. ಮಹಾರಾಜ್ ಸಾಹಿಬ್ ಜ್ಞಾನವನ್ನು ಕೇವಲ ಗ್ರಂಥಗಳಿಗೆ ಸೀಮಿತಗೊಳಿಸದೆ, ಅದನ್ನೇ ಬದುಕಿದ್ದಾರೆ, ಇತರರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸಿದ್ದಾರೆ. ಅವರ ವ್ಯಕ್ತಿತ್ವವು ಸಂಯಮ, ಸರಳತೆ ಮತ್ತು ಸ್ಪಷ್ಟತೆಯ ಗಮನಾರ್ಹ ಸಂಯೋಗವಾಗಿದೆ. ಅವರು ಬರೆಯುವಾಗ, ಅವರ ಮಾತುಗಳು ಅನುಭವದ ಆಳವನ್ನು ಹೊತ್ತೊಯ್ಯುತ್ತವೆ, ಅವರು ಮಾತನಾಡುವಾಗ ಅವರ ಧ್ವನಿಯು ಕರುಣೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ,  ಮೌನದಲ್ಲೂ ಅವರು ಮಾರ್ಗದರ್ಶನ ನೀಡುತ್ತಾರೆ. ಅವರ 500ನೇ ಪುಸ್ತಕ "ಪ್ರೇಮ್ನು ವಿಶ್ವ, ವಿಶ್ವನೋ ಪ್ರೇಮ್"(ಪ್ರೀತಿಯ ಜಗತ್ತು, ವಿಶ್ವದ ಪ್ರೀತಿ  ವಿಷಯವೇ ಸ್ವತಃ ಬಹಳಷ್ಟು ಹೇಳುತ್ತದೆ. ನಮ್ಮ ಸಮಾಜ, ನಮ್ಮ ಯುವಕರು ಮತ್ತು ಒಟ್ಟಾರೆಯಾಗಿ ಮಾನವತೆಯು ಈ ಸೃಷ್ಟಿಯಿಂದ ಪ್ರಯೋಜನ ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ. ಈ ವಿಶೇಷ ಸಂದರ್ಭದಲ್ಲಿ ಊರ್ಜಾ ಮಹೋತ್ಸವವು ಜನರಲ್ಲಿ ಹೊಸ ಚಿಂತನೆಯ ಶಕ್ತಿಯನ್ನು ಹರಡುತ್ತದೆ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಮಹಾರಾಜ್ ಸಾಹಿಬ್ ಅವರ 500 ಕೃತಿಗಳು ಅಸಂಖ್ಯಾತ ಚಿಂತನೆಯ ರತ್ನಗಳಿಂದ ತುಂಬಿದ ವಿಶಾಲ ಸಾಗರದಂತಿವೆ. ಈ ಪುಸ್ತಕಗಳು ಮಾನವತೆಯ ಅನೇಕ ಸಮಸ್ಯೆಗಳಿಗೆ ಸರಳ ಮತ್ತು ಆಧ್ಯಾತ್ಮಿಕ ಪರಿಹಾರಗಳನ್ನು ಒದಗಿಸುತ್ತವೆ. ಸಮಯ ಮತ್ತು ಸಂದರ್ಭವನ್ನು ಅವಲಂಬಿಸಿ, ಪ್ರತಿಯೊಂದು ಪಠ್ಯವು ಮಾರ್ಗದರ್ಶನದ ದಾರಿದೀಪವಾಗಿ ಕಾರ್ಯ ನಿರ್ವಹಿಸುತ್ತದೆ. ನಮ್ಮ ತೀರ್ಥಂಕರರು ಮತ್ತು ಹಿಂದಿನ ಆಚಾರ್ಯರು ನೀಡಿದ ಪ್ರೀತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಜೊತೆಗೆ ಅಹಿಂಸೆ, ಸ್ವಾರ್ಥ ಮತ್ತು ಬಹುಮುಖತೆಯ ಬೋಧನೆಗಳನ್ನು ಈ ಬರಹಗಳಲ್ಲಿ ಆಧುನಿಕ ಮತ್ತು ಸಮಕಾಲೀನ ರೂಪದಲ್ಲಿ ಕಾಣಬಹುದು. ವಿಶೇಷವಾಗಿ ಇಂದು ಜಗತ್ತು ವಿಭಜನೆ ಮತ್ತು ಸಂಘರ್ಷದಿಂದ ಹೋರಾಡುತ್ತಿರುವಾಗ, "ಪ್ರೇಮ್ನು ವಿಶ್ವ, ವಿಶ್ವನೋ ಪ್ರೇಮ್" ಕೇವಲ ಪುಸ್ತಕವಲ್ಲ, ಅದು ಒಂದು ಮಂತ್ರವಾಗಿದೆ. ಈ ಮಂತ್ರವು ನಮಗೆ ಪ್ರೀತಿಯ ಶಕ್ತಿಯನ್ನು ಪರಿಚಯಿಸುತ್ತದೆ. ಜಗತ್ತು ತುಂಬಾ ಹತಾಶವಾಗಿ ಬಯಸುವ ಶಾಂತಿ ಮತ್ತು ಸಾಮರಸ್ಯದ ಮಾರ್ಗವನ್ನು ತೋರಿಸುತ್ತದೆ.

ಸ್ನೇಹಿತರೆ,

ನಮ್ಮ ಜೈನ ತತ್ವಶಾಸ್ತ್ರದ ಮಾರ್ಗದರ್ಶಿ ತತ್ವವೆಂದರೆ "ಪರಸ್ಪರೋಪಗ್ರಹೋ ಜೀವನಂ" - ಅಂದರೆ ಪ್ರತಿಯೊಂದು ಜೀವನವು ಪರಸ್ಪರ ಸಂಪರ್ಕ ಹೊಂದಿದೆ. ನಾವು ಈ ತತ್ವವನ್ನು ಅರ್ಥ ಮಾಡಿಕೊಂಡಾಗ, ನಮ್ಮ ದೃಷ್ಟಿಕೋನವು ವ್ಯಕ್ತಿಯಿಂದ ಸಾಮೂಹಿಕತೆಗೆ ಬದಲಾಗುತ್ತದೆ. ನಾವು ವೈಯಕ್ತಿಕ ಆಕಾಂಕ್ಷೆಗಳನ್ನು ಮೀರಿ ಸಮಾಜ, ರಾಷ್ಟ್ರ ಮತ್ತು ಮಾನವತೆಯ ಗುರಿಗಳ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ. ಇದೇ ಮನೋಭಾವದಿಂದ, ನೀವು ನೆನಪಿಸಿಕೊಳ್ಳುತ್ತೀರಿ, ನಾನು ನವಕರ ಮಂತ್ರ ದಿನದಂದು ನಿಮ್ಮೊಂದಿಗೆ ಸೇರಿಕೊಂಡಿದ್ದೆ. ಆ ಐತಿಹಾಸಿಕ ಸಂದರ್ಭದಲ್ಲಿ, ಎಲ್ಲಾ 4 ಪಂಗಡಗಳು ಒಟ್ಟಿಗೆ ಬಂದವು, ಮತ್ತು ನಾನು 9 ಮನವಿಗಳನ್ನು, 9 ನಿರ್ಣಯಗಳನ್ನು ಮಾಡಿದ್ದೆ. ಇಂದಿನ ಸಂದರ್ಭವು ಅವುಗಳನ್ನು ಪುನರುಚ್ಚರಿಸಲು ಒಂದು ಅವಕಾಶವಾಗಿದೆ.

ಮೊದಲ ಸಂಕಲ್ಪ - ನೀರು ಉಳಿಸುವುದು.

ಎರಡನೆಯದು - ತಾಯಿಯ ಹೆಸರಿನಲ್ಲಿ ಸಸಿ ನೆಡುವುದು.

ಮೂರನೆಯದು - ಸ್ವಚ್ಛತೆಯ ಧ್ಯೇಯ.

ನಾಲ್ಕನೆಯದು – ಸ್ಥಳೀಯವಾಗಿ ತಯಾರಿಸಿ.

ಐದನೆಯದು - ಭಾರತ ದರ್ಶನ.

ಆರನೆಯದು - ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳುವುದು.

ಏಳನೆಯದು - ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು.

ಎಂಟನೆಯದು - ಯೋಗ ಮತ್ತು ಕ್ರೀಡೆಗಳನ್ನು ದೈನಂದಿನ ಜೀವನದಲ್ಲಿ ತರುವುದು.

ಒಂಬತ್ತನೆಯದು - ಬಡವರಿಗೆ ಸಹಾಯ ಮಾಡಲು ಬದ್ಧರಾಗುವುದು.

ಸ್ನೇಹಿತರೆ,

ಇಂದು ಭಾರತವು ವಿಶ್ವದ ಅತ್ಯಂತ ಹೆಚ್ಚಿನ ಯುವ ಜನರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ಯುವ ಶಕ್ತಿಯು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತಿದೆ, ನಮ್ಮ ಸಾಂಸ್ಕೃತಿಕ ಬೇರುಗಳನ್ನು ಬಲಪಡಿಸುತ್ತಿದೆ. ಈ ರೂಪಾಂತರದಲ್ಲಿ, ಮಹಾರಾಜ್ ಸಾಹಿಬ್‌ರಂತಹ ಸಂತರ ಮಾರ್ಗದರ್ಶನ, ಅವರ ಸಾಹಿತ್ಯ ಮತ್ತು ಅವರ ಮಾತುಗಳು - ಯಾವಾಗಲೂ ಆಳವಾದ ಆಧ್ಯಾತ್ಮಿಕ ಅಭ್ಯಾಸದಿಂದ ಸಮೃದ್ಧವಾಗಿವೆ, ಪ್ರಮುಖ ಪಾತ್ರ ವಹಿಸುತ್ತವೆ. ಮತ್ತೊಮ್ಮೆ ನಾನು ಅವರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅವರ 500ನೇ ಪುಸ್ತಕಕ್ಕಾಗಿ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅವರ ಚಿಂತನೆಗಳು ಭಾರತದ ಬೌದ್ಧಿಕ, ನೈತಿಕ ಮತ್ತು ಮಾನವ ಪ್ರಯಾಣವನ್ನು ಬೆಳಗುವುದನ್ನು ಮುಂದುವರಿಸುತ್ತವೆ ಎಂಬ ವಿಶ್ವಾಸ ನನಗಿದೆ.

ನಾನು ನಿಮ್ಮೆಲ್ಲರ ಕ್ಷಮೆ ಕೇಳಬೇಕು. ನಾನು ನಿಜವಾಗಿಯೂ ವೈಯಕ್ತಿಕವಾಗಿ ಬರಲು ಬಯಸಿದ್ದೆ ಮತ್ತು ಅದಕ್ಕಾಗಿ ಬಹಳ ಹಿಂದೆಯೇ ಯೋಜಿಸಿದ್ದೆ, ಆದರೆ ನಿಮಗೆ ತಿಳಿದಿರುವಂತೆ, ನಿಮ್ಮ ನಡುವೆ ಇರಲು ಮತ್ತು ನಿಮ್ಮ ದರ್ಶನ ಪಡೆಯಲು ನನಗೆ ಅವಕಾಶ ನೀಡಿದ್ದು ಮಹಾರಾಜ್ ಸಾಹಿಬ್ ಅವರ ಕೃಪೆಯಿಂದಾಗಿ. ಆದರೂ ಅವರು ನನ್ನ ಕಷ್ಟವನ್ನು ಅರ್ಥ ಮಾಡಿಕೊಂಡರು. ಈ ವೀಡಿಯೊ ಸಂದೇಶದ ಮೂಲಕ ನಿಮ್ಮೊಂದಿಗೆ ಸಂಪರ್ಕ ಸಾಧಿಸಲು, ನಿಮ್ಮನ್ನು ಭೇಟಿ ಮಾಡಲು ಮತ್ತು ನಿಮ್ಮೊಂದಿಗೆ ಮಾತನಾಡಲು ನನಗೆ ಅವಕಾಶ ನೀಡಿದರು. ಇದಕ್ಕಾಗಿಯೂ ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ.

ಜೈ ಜಿನೇಂದ್ರ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI at 10: From payments pipe to backbone of India’s digital financial ecosystem

Media Coverage

UPI at 10: From payments pipe to backbone of India’s digital financial ecosystem
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in a mishap in Katihar, Bihar
April 11, 2026
PM announces ex-gratia from PMNRF

Prime Minister Shri Narendra Modi today expressed profound grief over the tragic mishap in Katihar, Bihar, describing the incident as extremely painful.

The Prime Minister extended his heartfelt condolences to the families who have lost their loved ones and prayed for the earliest recovery of those who sustained injuries. Shri Modi further announced an ex-gratia of Rs. 2 lakh from the Prime Minister’s National Relief Fund (PMNRF) for the next of kin of each deceased, noting that Rs. 50,000 would be provided to those injured in the accident.

The Prime Minister wrote on X:

"The mishap in Katihar, Bihar, is extremely painful. Condolences to those who have lost their loved ones. May the injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000."