ಪ್ರಧಾನಮಂತ್ರಿ: 2047ರ ವೇಳೆಗೆ ದೇಶದ ಗುರಿ ಏನು?

ವಿದ್ಯಾರ್ಥಿ: ನಾವು ನಮ್ಮ ದೇಶವನ್ನು ಅಭಿವೃದ್ಧಿ ಹೊಂದುವಂತೆ ಮಾಡಬೇಕು.

ಪ್ರಧಾನಮಂತ್ರಿ: ಖಚಿತವಾಗಿ?

ವಿದ್ಯಾರ್ಥಿ: ಹೌದು ಸರ್.

ಪ್ರಧಾನಮಂತ್ರಿ: 2047 ಎಂದು ಏಕೆ ನಿರ್ಧರಿಸಲಾಯಿತು?

ವಿದ್ಯಾರ್ಥಿ: ಅಷ್ಟರೊಳಗೆ ನಮ್ಮ ಪೀಳಿಗೆಯು ಸಿದ್ಧವಾಗಿರುತ್ತದೆ.

ಪ್ರಧಾನಮಂತ್ರಿ: ಒಂದಾಯಿತು, ಇನ್ನೊಂದು?

ವಿದ್ಯಾರ್ಥಿ: ಸ್ವಾತಂತ್ರ್ಯ ಬಂದು 100 ವರ್ಷಗಳು ತುಂಬುತ್ತವೆ.

ಪ್ರಧಾನ ಮಂತ್ರಿ : ಶಭಾಶ್‌ !

ಪ್ರಧಾನಮಂತ್ರಿ: ನೀವು ಸಾಮಾನ್ಯವಾಗಿ ಎಷ್ಟು ಗಂಟೆಗೆ ಮನೆಯಿಂದ ಹೊರಡುತ್ತೀರಾ?

 

ವಿದ್ಯಾರ್ಥಿ : 7:00 ಗಂಟೆಗೆ

ಪ್ರಧಾನಮಂತ್ರಿ: ಹಾಗಾದರೆ, ನೀವು ಊಟದ ಡಬ್ಬಿಯನ್ನು ಜೊತೆಯಲ್ಲಿ ತರುತ್ತೀರಾ?

ವಿದ್ಯಾರ್ಥಿ: ಇಲ್ಲ ಸರ್, ಇಲ್ಲ ಸರ್.

ಪ್ರಧಾನಮಂತ್ರಿ: ಹೇ, ನಾನು ಅದನ್ನು ತಿನ್ನುವುದಿಲ್ಲ, ಹೇಳಿ.

ವಿದ್ಯಾರ್ಥಿ: ಸರ್‌ ನಾನು ತಿಂದು ಬಂದಿದ್ದೇನೆ.

ಪ್ರಧಾನಮಂತ್ರಿ: ನೀವು ತಿಂದು ಬಂದಿದ್ದೀರಾ, ತಂದಿಲ್ಲವೇ? ಸರಿ, ಪ್ರಧಾನಮಂತ್ರಿ ಅದನ್ನೇ ತಿನ್ನುತ್ತಾರೆ ಎಂದು ನೀವು ಭಾವಿಸಿರಬೇಕು.

ವಿದ್ಯಾರ್ಥಿ: ಇಲ್ಲ ಸರ್.

ಪ್ರಧಾನಿ: ಸರಿ, ಇಂದು ಯಾವ ದಿನ?

ವಿದ್ಯಾರ್ಥಿ: ಸರ್, ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ.

ಪ್ರಧಾನಮಂತ್ರಿ : ಹೌದು.

ಪ್ರಧಾನಮಂತ್ರಿ : ಅವರು ಎಲ್ಲಿ ಜನಿಸಿದರು?

ವಿದ್ಯಾರ್ಥಿ: ಒಡಿಶಾ.

ಪ್ರಧಾನಮಂತ್ರಿ :ಒಡಿಶಾದಲ್ಲಿ ಎಲ್ಲಿ?

ವಿದ್ಯಾರ್ಥಿ: ಕಟಕ್

ಪ್ರಧಾನಮಂತ್ರಿ :ಹಾಗಾದರೆ ಇವತ್ತು ಕಟಕ್‌ನಲ್ಲಿ ಒಂದು ದೊಡ್ಡ ಕಾರ್ಯಕ್ರಮ ಇದೆ.

ಪ್ರಧಾನಮಂತ್ರಿ : ನೇತಾಜಿಯವರ ಯಾವ ಘೋಷಣೆ ನಿಮಗೆ ಪ್ರೇರಣೆ ನೀಡುತ್ತದೆ?

 

ವಿದ್ಯಾರ್ಥಿ: ನಾನು ನಿನಗೆ ಸ್ವಾತಂತ್ರ್ಯ ಕೊಡುತ್ತೇನೆ.

ಪ್ರಧಾನಮಂತ್ರಿ : ನೋಡಿ, ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಈಗ ನಾವು ರಕ್ತ ಕೊಡುವಂತಿಲ್ಲ,  ಹಾಗಾದರೆ ನಾವು ಏನು ನೀಡುತ್ತೇವೆ?

ವಿದ್ಯಾರ್ಥಿ: ಸರ್, ಇದು ಅವರು ಎಂತಹ ನಾಯಕರಾಗಿದ್ದರು ಮತ್ತು ಅವರು ತಮಗಿಂತಲೂ ತಮ್ಮ ದೇಶಕ್ಕೆ ಹೇಗೆ ಆದ್ಯತೆ ನೀಡಿದರು ಎಂಬುದನ್ನು ತೋರಿಸುತ್ತದೆ, ಆದ್ದರಿಂದ ಇದು ನಮಗೆ ಬಹಳಷ್ಟು ಸ್ಫೂರ್ತಿ ನೀಡುತ್ತದೆ.

ಪ್ರಧಾನಮಂತ್ರಿ : ನನಗೆ ಸ್ಫೂರ್ತಿ ಸಿಗುತ್ತದೆ ಆದರೆ ಯಾವ ಯಾವುದು?

ವಿದ್ಯಾರ್ಥಿ: ಸರ್, ನಮ್ಮ ಎಸ್.ಡಿ.ಜಿ.  ಕೋರ್ಸ್ ಮೂಲಕ, ನಾವು ನಮ್ಮ ಇಂಗಾಲದ ಗುರುತನ್ನು ಕಡಿಮೆ ಮಾಡಲು ಬಯಸುತ್ತೇವೆ.

ಪ್ರಧಾನಮಂತ್ರಿ : ಸರಿ, ಭಾರತದಲ್ಲಿ ಏನೇನು ಆಗುತ್ತಿದೆ... ಇಂಗಾಲದ ಗುರುತನ್ನು ಕಡಿಮೆ ಮಾಡಲು ಏನೇನನ್ನು ಮಾಡಲಾಗುತ್ತಿದೆ?

ವಿದ್ಯಾರ್ಥಿ: ಸರ್, ವಿದ್ಯುತ್ ವಾಹನಗಳು ಈಗಾಗಲೇ ಬಂದಿವೆ.

ಪ್ರಧಾನ ಮಂತ್ರಿ: ವಿದ್ಯುತ್ ವಾಹನಗಳು, ಶಭಾಷ್! ಮತ್ತೆ ?

ವಿದ್ಯಾರ್ಥಿ: ಸರ್, ಈಗ ಬಸ್ಸುಗಳು ಕೂಡ ವಿದ್ಯುತ್ ನದಾಗಿವೆ.

ಪ್ರಧಾನಮಂತ್ರಿ:  ವಿದ್ಯುತ್ ಬಸ್ ಗಳು ಬಂದಿವೆ. ಮತ್ತೆ?

ವಿದ್ಯಾರ್ಥಿ: ಹೌದು ಸರ್, ಮತ್ತು ಈಗ...

ಪ್ರಧಾನಮಂತ್ರಿ:  ಭಾರತ ಸರ್ಕಾರ ದೆಹಲಿಯಲ್ಲಿ ಎಷ್ಟು ವಿದ್ಯುತ್ ಬಸ್ಸುಗಳನ್ನು ಒದಗಿಸಿದೆ ಎಂದು ನಿಮಗೆ ತಿಳಿದಿದೆಯೇ?

ವಿದ್ಯಾರ್ಥಿ: ಸರ್, ಬಹಳ ಇವೆ. 

ಪ್ರಧಾನಮಂತ್ರಿ: 1200 ಮತ್ತಷ್ಟು ಕೊಡಲಿದ್ದೇವೆ. ದೇಶಾದ್ಯಂತ, ಸುಮಾರು 10 ಸಾವಿರ ಬಸ್ಸುಗಳು ವಿವಿಧ ನಗರಗಳಲ್ಲಿ.

ಪ್ರಧಾನಮಂತ್ರಿ: ಸರಿ, ನಿಮಗೆ ಪಿ.ಎಂ. ಸೂರ್ಯಘರ್ ಯೋಜನೆ ಬಗ್ಗೆ ತಿಳಿದಿದೆಯೇ? ಇಂಗಾಲದ ಗುರುತನ್ನು ಕಡಿಮೆ ಮಾಡಲು. ನೀವು ಎಲ್ಲರಿಗೂ ಹೇಳುತ್ತೀರಾ, ನಾನು ನಿಮಗೆ ಹೇಳಬೇಕೇ?

ವಿದ್ಯಾರ್ಥಿ: ಹೌದು ಸರ್, ನಿಧಾನವಾಗಿ.

 

ಪ್ರಧಾನಮಂತ್ರಿ: ನೋಡಿ, ಪಿ.ಎಂ. ಸೂರ್ಯಘರ್ ಯೋಜನೆ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದ ಒಂದು ಭಾಗವಾಗಿದೆ, ಆದ್ದರಿಂದ ಪ್ರತಿಯೊಂದು ಮನೆಯಲ್ಲೂ ಸೌರ ಫಲಕವಿದೆ.

ವಿದ್ಯಾರ್ಥಿ: ಹೌದು ಸರ್, ಹೌದು ಸರ್.

ಪ್ರಧಾನಮಂತ್ರಿ: ಸೂರ್ಯನ ಶಕ್ತಿಯಿಂದ ನಾವು ಮನೆಗೆ ಪಡೆಯುವ ವಿದ್ಯುತ್‌ನಿಂದ ಏನಾಗುತ್ತದೆ? ಕುಟುಂಬದ ವಿದ್ಯುತ್ ಬಿಲ್ ಶೂನ್ಯವಾಗುತ್ತದೆ. ನೀವು ಚಾರ್ಜರ್ ಅಳವಡಿಸಿದ್ದರೆ, ಅದು ವಿದ್ಯುತ್ ವಾಹನವಾಗಿದ್ದರೆ, ಅಲ್ಲಿಂದ ಸೌರಶಕ್ತಿಯ ಮೂಲಕ ಚಾರ್ಜಿಂಗ್ ಆಗುತ್ತದೆ, ಆದ್ದರಿಂದ ವಿದ್ಯುತ್ ವಾಹನದ ಬೆಲೆ, ಪೆಟ್ರೋಲ್ ಡೀಸೆಲ್ ಬೆಲೆ ಇರುವುದಿಲ್ಲ, ಯಾವುದೇ ಮಾಲಿನ್ಯ ಇರುವುದಿಲ್ಲ.

ವಿದ್ಯಾರ್ಥಿ: ಹೌದು ಸರ್, ಹೌದು ಸರ್.

ಪ್ರಧಾನಮಂತ್ರಿ: ಮತ್ತು ಬಳಕೆಯ ನಂತರ ವಿದ್ಯುತ್ ಉಳಿದಿದ್ದರೆ, ಸರ್ಕಾರ ಅದನ್ನು ಖರೀದಿಸಿ ನಿಮಗೆ ಹಣ ನೀಡುತ್ತದೆ. ಅಂದರೆ ನೀವು ಮನೆಯಲ್ಲಿ ವಿದ್ಯುತ್ ಉತ್ಪಾದಿಸುವ ಮೂಲಕವೂ ಹಣ ಗಳಿಸಬಹುದು.

ಪ್ರಧಾನಮಂತ್ರಿ: ಜೈ ಹಿಂದ್.

ವಿದ್ಯಾರ್ಥಿ: ಜೈ ಹಿಂದ್.

ಪ್ರಧಾನಮಂತ್ರಿ: ಜೈ ಹಿಂದ್.

ವಿದ್ಯಾರ್ಥಿ: ಜೈ ಹಿಂದ್.

ಪ್ರಧಾನಮಂತ್ರಿ: ಜೈ ಹಿಂದ್.

ವಿದ್ಯಾರ್ಥಿ: ಜೈ ಹಿಂದ್.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
ET@Davos 2026: ‘India has already arrived, no longer an emerging market,’ says Blackstone CEO Schwarzman

Media Coverage

ET@Davos 2026: ‘India has already arrived, no longer an emerging market,’ says Blackstone CEO Schwarzman
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಜನವರಿ 2026
January 23, 2026

Viksit Bharat Rising: Global Deals, Infra Boom, and Reforms Propel India to Upper Middle Income Club by 2030 Under PM Modi