ಟ್ರೋಫಿ ಗೆದ್ದು, ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿ
ತಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವ ಮೂಲಕ ಇತರರನ್ನು ಪ್ರೇರೇಪಿಸುವಂತೆ ಆಟಗಾರರಿಗೆ ಪ್ರಧಾನಮಂತ್ರಿ ಕರೆ, ಪ್ರತಿ ಆಟಗಾರ್ತಿಯೂ ಒಂದು ವರ್ಷದಲ್ಲಿ ಮೂರು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಭೇಟಿ ನೀಡಲು ಸೂಚನೆ
ಬೊಜ್ಜಿನ ಸಮಸ್ಯೆ ಎದುರಿಸಲು ಫಿಟ್ ಇಂಡಿಯಾ ಆಂದೋಲನಕ್ಕೆ ಒತ್ತು ನೀಡುವಂತೆ ಪ್ರಧಾನಮಂತ್ರಿಕರೆ; ಎಲ್ಲರ, ವಿಶೇಷವಾಗಿ ದೇಶದ ಹೆಣ್ಣುಮಕ್ಕಳ ಪ್ರಯೋಜನಕ್ಕಾಗಿ ಅದನ್ನು ಉತ್ತೇಜಿಸಲು ಆಟಗಾರರಿಗೆ ಆಗ್ರಹ

ಪ್ರಧಾನಮಂತ್ರಿ: ಇಂದು ಬಹಳ ಮುಖ್ಯವಾದ ದಿನ. ಇದು ದೇವ್ ದೀಪಾವಳಿ ಮತ್ತು ಗುರುಪುರಬ್ ಕೂಡ. ಆದ್ದರಿಂದ, ಇದು ನಿಜಕ್ಕೂ ಬಹಳ ಮುಖ್ಯವಾದ ಸಂದರ್ಭ.

ಆಟಗಾರರು: ಗುರುಪುರಬ್ ಶುಭಾಶಯಗಳು, ಸರ್!

ಪ್ರಧಾನಮಂತ್ರಿ: ನಿಮ್ಮೆಲ್ಲರಿಗೂ ಅಭಿನಂದನೆಗಳು!

ತರಬೇತುದಾರ: ಗೌರವಾನ್ವಿತ ಪ್ರಧಾನಮಂತ್ರಿಗಳೇ, ತುಂಬು ಧನ್ಯವಾದಗಳು. ನಾವು ಇಲ್ಲಿರುವುದಕ್ಕೆ ನಮಗೆ ಅಪಾರ ಗೌರವ ಮತ್ತು ಸೌಭಾಗ್ಯ ತಂದಿದೆ ಎಂದು ನಾನು ಭಾವಿಸುತ್ತೇನೆ. ನಾನು ನಿಮಗೆ ಒಂದು ಅಭಿಯಾನದ ಬಗ್ಗೆ ಹೇಳಲು ಬಯಸುತ್ತೇನೆ. ಈ ಹೆಣ್ಣು ಮಕ್ಕಳು ಅದ್ಭುತಗಳನ್ನೇ ಮಾಡಿದ್ದಾರೆ, ನಿಜವಾಗಿಯೂ ಅದ್ಭುತ. ಕಳೆದ 2 ವರ್ಷಗಳಿಂದ, ಅವರು ತುಂಬಾ ಶ್ರಮ ಹಾಕಿದ್ದಾರೆ. ಅಪಾರ ಪ್ರಯತ್ನವನ್ನು ತೋರಿಸಿದ್ದಾರೆ. ಪ್ರತಿ ಅಭ್ಯಾಸ ಅವಧಿಯಲ್ಲೂ, ಅವರು ಪೂರ್ಣ ಗಮನ ಮತ್ತು ಶಕ್ತಿ ಹಾಕಿ ಆಡಿದರು. ಅವರ ಕಠಿಣ ಪರಿಶ್ರಮ ನಿಜವಾಗಿಯೂ ಫಲ ನೀಡಿದೆ ಎಂದು ನಾನು ಹೇಳುತ್ತೇನೆ.

ಹರ್ಮನ್‌ಪ್ರೀತ್ ಕೌರ್: ಸರ್, ನಾವು 2017ರಲ್ಲಿ ನಿಮ್ಮನ್ನು ಭೇಟಿಯಾದಾಗ ನನಗೆ ಇನ್ನೂ ನೆನಪಿದೆ. ಆ ಸಮಯದಲ್ಲಿ ನಾವು ಟ್ರೋಫಿಯೊಂದಿಗೆ ಬಂದಿರಲಿಲ್ಲ, ಆದರೆ ಇಂದು ನಾವು ಇಷ್ಟು ವರ್ಷಗಳ ಕಾಲ ಶ್ರಮಿಸಿದ ಟ್ರೋಫಿಯನ್ನು ತರಲು ಸಾಧ್ಯವಾಯಿತು ಎಂಬುದು ನಮಗೆ ತುಂಬು ಗೌರವದ ವಿಷಯ. ನೀವು ಇಂದು ನಮ್ಮ ಸಂತೋಷವನ್ನು ದ್ವಿಗುಣಗೊಳಿಸಿದ್ದೀರಿ, ಇದು ನಮಗೆ ದೊಡ್ಡ ಗೌರವವಾಗಿದೆ. ಭವಿಷ್ಯದಲ್ಲಿ ಪ್ರತಿ ಬಾರಿಯೂ ಟ್ರೋಫಿಯೊಂದಿಗೆ ನಿಮ್ಮನ್ನು ಮತ್ತೆ ಮತ್ತೆ ಭೇಟಿಯಾಗುವುದು ಮತ್ತು ನಿಮ್ಮೊಂದಿಗೆ ತಂಡದ ಫೋಟೊ ತೆಗೆದುಕೊಳ್ಳುವುದನ್ನು ಮುಂದುವರಿಸುವುದು ನಮ್ಮ ಗುರಿಯಾಗಿದೆ.

 

ಪ್ರಧಾನಮಂತ್ರಿ: ನಿಜವಾಗಿಯೂ, ನೀವೆಲ್ಲರೂ ಗಮನಾರ್ಹವಾದದ್ದನ್ನು ಮಾಡಿದ್ದೀರಿ. ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ. ಒಂದು ರೀತಿಯಲ್ಲಿ, ಅದು ಜನರ ಜೀವನದ ಭಾಗವಾಗಿದೆ. ಕ್ರಿಕೆಟ್ ಚೆನ್ನಾಗಿ ನಡೆದಾಗ, ಭಾರತಕ್ಕೆ ಸಂತೋಷವಾಗುತ್ತದೆ, ಅದು ಸ್ವಲ್ಪವಾದರೂ ಕುಗ್ಗಿದರೆ, ಇಡೀ ದೇಶವೇ ನಿರಾಶೆಗೊಳ್ಳುತ್ತದೆ. ನೀವು ಸತತ 3 ಪಂದ್ಯಗಳನ್ನು ಸೋತಾಗ, ಟ್ರೋಲಿಂಗ್ ಸೈನ್ಯವೇ ನಿಮ್ಮ ಹಿಂದೆ ಹೋಯಿತು.

ಹರ್ಮನ್‌ಪ್ರೀತ್ ಕೌರ್: 2017ರಲ್ಲಿ ನಾವು ನಿಮ್ಮನ್ನು ಭೇಟಿಯಾದಾಗ, ನಾವು ಫೈನಲ್‌ನಲ್ಲಿ ಸೋತ ನಂತರ ಹಿಂತಿರುಗಿದ್ದೆವು, ಆದರೆ ನೀವು ಆಗ ನಮಗೆ ತುಂಬಾ ಪ್ರೇರಣೆ ನೀಡಿದ್ದೀರಿ. ಮುಂದಿನ ಅವಕಾಶ ಬಂದಾಗ ನಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದು ಹೇಗೆ ಎಂದು ನೀವು ನಮಗೆ ಹೇಳಿದ್ದೀರಿ. ಇಂದು ನಾವು ಅಂತಿಮವಾಗಿ ಟ್ರೋಫಿಯೊಂದಿಗೆ ಹಿಂತಿರುಗಿದಾಗ, ನಿಮ್ಮೊಂದಿಗೆ ಮತ್ತೆ ಮಾತನಾಡಲು ತುಂಬಾ ಸಂತೋಷವಾಯಿತು.

ಪ್ರಧಾನಮಂತ್ರಿ: ಹೌದು, ಸ್ಮೃತಿ ಜಿ, ದಯವಿಟ್ಟು ನಮಗೆ ಹೇಳಿ.

ಸ್ಮೃತಿ ಮಂಧಾನ: ನಾವು 2017ರಲ್ಲಿ ಬಂದಾಗ, ನಾವು ಟ್ರೋಫಿ ತರಲು ಸಾಧ್ಯವಾಗಲಿಲ್ಲ, ಆದರೆ ನೀವು ನಿರೀಕ್ಷೆಗಳ ಬಗ್ಗೆ ನಮಗೆ ಒಂದು ಪ್ರಶ್ನೆ ಕೇಳಿದ್ದಿರಿ, ಅದಿನ ನಿಮ್ಮ ಉತ್ತರವು ಅಂದಿನಿಂದಲೂ ನನ್ನೊಂದಿಗೆ ಉಳಿದಿದೆ ಎಂಬುದು ನನಗೆ ನೆನಪಿದೆ. ಇದು ನಿಜವಾಗಿಯೂ ನಮಗೆ ಸಹಾಯ ಮಾಡಿತು. ಮುಂದಿನ 6-7 ವರ್ಷಗಳಲ್ಲಿ, ನಾವು ಹಲವಾರು ಪ್ರಯತ್ನಗಳನ್ನು ಮಾಡಿದ್ದೇವೆ, ಆದರೆ ನಾವು ವಿಶ್ವಕಪ್‌ಗಳಲ್ಲಿ ಅನೇಕ ಆಘಾತಗಳನ್ನು ಎದುರಿಸಿದ್ದೇವೆ, ಆದರೆ ಮೊದಲ ಮಹಿಳಾ ವಿಶ್ವಕಪ್ ಭಾರತಕ್ಕೆ ಬರುವುದು ಅದೃಷ್ಟ ಎಂದು ನಾನು ಭಾವಿಸುತ್ತೇನೆ.  ಸರ್, ನೀವು ಯಾವಾಗಲೂ ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ವಿಶೇಷವಾಗಿ ಈಗ, ಇಸ್ರೋದ ರಾಕೆಟ್ ಉಡಾವಣೆಗಳು ಅಥವಾ ಇನ್ನಾವುದೇ ಕ್ಷೇತ್ರದಲ್ಲಿ ಮಹಿಳೆಯರು ಮಿಂಚುತ್ತಿರುವುದನ್ನು ನೋಡುವುದಿರಲಿ, ಇದೆಲ್ಲವೂ ತುಂಬಾ ಸ್ಫೂರ್ತಿದಾಯಕವಾಗಿದೆ. ನಾವು ಅದನ್ನು ನೋಡುವ ಪ್ರತಿ ಬಾರಿಯೂ, ಉತ್ತಮವಾಗಿ ಮಾಡಲು ಮತ್ತು ದೇಶಾದ್ಯಂತ ಇತರೆ ಹುಡುಗಿಯರನ್ನು ಪ್ರೇರೇಪಿಸಲು ಇದು ನಮ್ಮನ್ನು ಇನ್ನಷ್ಟು ಉತ್ತೇಜಿಸುತ್ತದೆ.

ಪ್ರಧಾನಮಂತ್ರಿ: ಇಡೀ ರಾಷ್ಟ್ರವು ವೀಕ್ಷಿಸುತ್ತಿದೆ ಮತ್ತು ಹೆಮ್ಮೆಪಡುತ್ತಿದೆ. ನಿಮ್ಮೆಲ್ಲರಿಂದಲೂ ಮತ್ತು ನಿಮ್ಮ ಅನುಭವಗಳಿಂದಲೂ ನಾನು ನಿಜವಾಗಿಯೂ ಕೇಳಲು ಬಯಸುತ್ತೇನೆ.

ಸ್ಮೃತಿ ಮಂಧಾನ: ಸರ್, ಈ ಅಭಿಯಾನದ ಅತ್ಯುತ್ತಮ ವಿಷಯವೆಂದರೆ ಪ್ರತಿಯೊಬ್ಬ ಆಟಗಾರನಿಗೂ ಹೇಳಲು ಒಂದು ಕಥೆ ಇರುತ್ತದೆ, ಯಾರ ಕೊಡುಗೆಯೂ ಇತರರಿಗಿಂತ ಕಡಿಮೆಯಿಲ್ಲ.

 

ಸ್ಮೃತಿ ಮಂಧಾನ: ಕಳೆದ ಬಾರಿ ನೀವು ನಿರೀಕ್ಷೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಮಾತನಾಡಿದ್ದಿರಿ. ಆ ಉತ್ತರ ಯಾವಾಗಲೂ ನನ್ನ ಮನಸ್ಸಿನಲ್ಲಿ ಉಳಿಯುತ್ತದೆ. ನೀವು ಶಾಂತವಾಗಿ ಮತ್ತು ಸಂಯಮದಿಂದ ಇರುವ ರೀತಿ, ಅದು ನಮಗೆ ಆಳವಾಗಿ ಸ್ಫೂರ್ತಿದಾಯಕವಾಗಿದೆ.

ಜೆಮಿಮಾ ರೊಡ್ರಿಗಸ್: ಸರ್, ನಾವು ಆ 3 ಪಂದ್ಯಗಳನ್ನು ಸೋತಾಗ ... ಒಂದು ತಂಡ ಎಷ್ಟು ಬಾರಿ ಗೆಲ್ಲುತ್ತೀದೆ ಎಂಬುದರ ಮೂಲಕ ವ್ಯಾಖ್ಯಾನಿಸಲಾಗುವುದಿಲ್ಲ, ಆದರೆ ಪತನದ ನಂತರ ನೀವು ಹೇಗೆ ಮೇಲೇರುತ್ತೀರಿ ಎಂಬುದರ ಮೂಲಕ ವ್ಯಾಖ್ಯಾನಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಈ ತಂಡವು ಅದನ್ನು ಮಾಡಿದೆ, ಅದಕ್ಕಾಗಿಯೇ ಇದು ಚಾಂಪಿಯನ್ ತಂಡವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ತಂಡದ ಬಗ್ಗೆ ನಾನು ಹೇಳುವುದೇನೆಂದರೆ ತಂಡದ ಒಗ್ಗಟ್ಟು. ಇದು ನಾನು ನೋಡಿದ ಅತ್ಯುತ್ತಮವಾದದ್ದು. ಯಾರಾದರೂ ಉತ್ತಮವಾಗಿ ಆಡಿದಾಗಲೆಲ್ಲಾ, ಎಲ್ಲರೂ ನಿಜವಾಗಿಯೂ ಸಂತೋಷಪಡುತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು, ತಾವೇ ಆ ರನ್ ಗಳಿಸಿದಂತೆ ಅಥವಾ ಆ ವಿಕೆಟ್‌ಗಳನ್ನು ಪಡೆದಂತೆ ಸಂಭ್ರಮಿಸುತ್ತಿದ್ದರು. ಯಾರಾದರೂ ನಿರಾಶೆಗೊಂಡಾಗಲೆಲ್ಲಾ, ಅವರ ಭುಜದ ಮೇಲೆ ಕೈ ಇಟ್ಟು, "ಪರವಾಗಿಲ್ಲ, ಮುಂದಿನ ಪಂದ್ಯದಲ್ಲಿ ನೀವು ಅದನ್ನು ಮಾಡುತ್ತೀರಿ" ಎಂದು ಹೇಳಲು ಯಾವಾಗಲೂ ಯಾರಾದರೂ ಇರುತ್ತಿದ್ದರು. ಅದು ಈ ತಂಡವನ್ನು ವ್ಯಾಖ್ಯಾನಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಸ್ನೇಹ್ ರಾಣಾ: ಜೆಮ್ಮಿ ಅವರ ಮಾತನ್ನು ನಾನು ಒಪ್ಪುತ್ತೇನೆ. ಯಶಸ್ಸಿನಲ್ಲಿ ಎಲ್ಲರೂ ಒಟ್ಟಿಗೆ ಇರಬೇಕೆಂದು ನಾವು ನಿರ್ಧರಿಸಿದ್ದೆವು, ಆದರೆ ನಿಜವಾದ ಪರೀಕ್ಷೆ ಎಂದರೆ ಪತನದ ಸಮಯದಲ್ಲಿ ಪರಸ್ಪರ ಬೆಂಬಲವಾಗಿ ನಿಲ್ಲುವುದು. ಒಂದು ತಂಡವಾಗಿ, ಒಂದು ಘಟಕವಾಗಿ, ಏನೇ ಸಂಭವಿಸಿದರೂ, ನಾವು ಯಾರನ್ನೂ ಹಿಂದೆ ಬಿಡುವುದಿಲ್ಲ, ನಾವು ಯಾವಾಗಲೂ ಒಬ್ಬರನ್ನೊಬ್ಬರು ಮೇಲಕ್ಕೆತ್ತುತ್ತೇವೆ ಎಂದು ನಾವು ನಿರ್ಧರಿಸಿದ್ದೇವೆ. ಅದು ನಮ್ಮ ತಂಡದ ಅತ್ಯುತ್ತಮ ಭಾಗ ಎಂದು ನಾನು ಭಾವಿಸುತ್ತೇನೆ.

ಕ್ರಾಂತಿ ಗೌಡ್: ಹರ್ಮನ್ ಡಿ ಯಾವಾಗಲೂ ಹೇಳುತ್ತಾರೆ: "ನಗುತ್ತಾ ಇರಿ!" ಆದ್ದರಿಂದ, ಯಾರಾದರೂ ಸಪ್ಪಗೆ ಅಥವಾ ಶಾಂತವಾಗಿ ಕುಳಿತಿದ್ದರೆ, ಎಲ್ಲರೂ ನಗುತ್ತಿರುವಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಒಬ್ಬರನ್ನೊಬ್ಬರು ನಗುವುದನ್ನು ನೋಡಿ ನಮಗೆಲ್ಲರಿಗೂ ಹಗುರ ಮತ್ತು ಹೆಚ್ಚು ಸಕಾರಾತ್ಮಕ ಭಾವನೆ ಮೂಡಿತು.

 

ಪ್ರಧಾನ ಮಂತ್ರಿ: ಆದರೆ ನಿಮ್ಮ ತಂಡದಲ್ಲಿ ಎಲ್ಲರನ್ನೂ ನಗಿಸುವ ಯಾರಾದರೂ ಇರಬೇಕು ಅಲ್ಲವೇ?

ಆಟಗಾರ್ತಿ: ಜೆಮ್ಮಿ ಡಿ!

ಜೆಮಿಮಾ ರೋಡ್ರಿಗಸ್: ಸರ್, ವಾಸ್ತವವಾಗಿ ಹಾರ್ಲೀನ್ ಕೂಡ! ತಂಡವನ್ನು ಒಟ್ಟಿಗೆ ಇಟ್ಟುಕೊಳ್ಳುವುದನ್ನು ಅವರು ನಿಜವಾಗಿಯೂ ಗೌರವಿಸುತ್ತಾರೆ.

ಹರ್ಲೀನ್ ಕೌರ್ ಡಿಯೋಲ್: ಸರ್, ವಾಸ್ತವವಾಗಿ, ಪ್ರತಿಯೊಂದು ತಂಡಕ್ಕೂ ಮನಸ್ಥಿತಿಯನ್ನು ಹಗುರವಾಗಿಡುವ ಕನಿಷ್ಠ ಒಬ್ಬ ವ್ಯಕ್ತಿಯಾದರೂ ಬೇಕು ಎಂದು ನಾನು ಭಾವಿಸುತ್ತೇನೆ. ಯಾರಾದರೂ ಒಬ್ಬಂಟಿಯಾಗಿ ಅಥವಾ ಶಾಂತವಾಗಿ ಕುಳಿತಿರುವುದನ್ನು ನಾನು ನೋಡಿದಾಗಲೆಲ್ಲಾ ಅಥವಾ ಬಹುಶಃ ನಾನು ಸ್ವಲ್ಪ ಸೋಮಾರಿಯಾಗಿರುವಾಗ, ನಾನು ಏನಾದರೂ ತಮಾಷೆ ಅಥವಾ ಹಗುರವಾಗಿ ಮಾಡುತ್ತೇನೆ. ನನ್ನ ಸುತ್ತಲಿನ ಜನರು ಸಂತೋಷವಾಗಿರುವಾಗ ಅದು ನನಗೆ ಒಳ್ಳೆಯದನ್ನು ನೀಡುತ್ತದೆ.

ಪ್ರಧಾನಮಂತ್ರಿ: ನೀವು ಇಲ್ಲಿಯೂ ಏನಾದರೂ ಮಾಡಿರಬೇಕು, ಸರಿಯೇ?

ಹರ್ಲೀನ್ ಕೌರ್ ಡಿಯೋಲ್: ಸರ್, ಅವರು ನಿಜವಾಗಿಯೂ ನಮ್ಮನ್ನು ಗದರಿಸಿದರು. ಅವರು ನಮ್ಮನ್ನು ಸುಮ್ಮನಿರಲು ಹೇಳಿದರು! ನಾವು ಸ್ವಲ್ಪ ಹೆಚ್ಚುವರಿ ಶಬ್ದ ಮಾಡಿದಾಗ, ಅವರು ಗದರುತ್ತಿದ್ದರು.

ಹರ್ಲೀನ್ ಕೌರ್ ಡಿಯೋಲ್: ಸರ್, ನಿಮ್ಮ ಚರ್ಮದ ಆರೈಕೆಯ ದಿನಚರಿಯ ಬಗ್ಗೆ ನಾನು ನಿಮ್ಮನ್ನು ಕೇಳಲು ಬಯಸಿದ್ದೆ! ನೀವು ನಿಜವಾಗಿಯೂ ಹೊಳೆಯುತ್ತೀರಿ, ಸರ್!

ಪ್ರಧಾನಮಂತ್ರಿ: ಪ್ರಾಮಾಣಿಕವಾಗಿ ಹೇಳುವುದಾದರೆ, ನಾನು ಆ ವಿಷಯದ ಬಗ್ಗೆ ಎಂದಿಗೂ ಹೆಚ್ಚು ಗಮನ ಹರಿಸಿಲ್ಲ.

ಆಟಗಾರರು: ಸರ್, ಲಕ್ಷಾಂತರ ಭಾರತೀಯರ ಪ್ರೀತಿಯೇ ನಿಮ್ಮನ್ನು ಹೊಳೆಯುವಂತೆ ಮಾಡುತ್ತದೆ!

ಪ್ರಧಾನಮಂತ್ರಿ: ಅದು ನಿಜ, ಅದು ನಿಜವಾಗಿಯೂ ಹಾಗೆ. ಇದು ಬಹಳ ಶಕ್ತಿಶಾಲಿ ವಿಷಯ... ಜನರ ಪ್ರೀತಿ ಮತ್ತು ಆಶೀರ್ವಾದ. ನೀವು ನೋಡಿ, ಸರ್ಕಾರದ ಮುಖ್ಯಸ್ಥನಾಗಿ ನನಗೆ ಈಗ 25 ವರ್ಷಗಳಾಗಿವೆ. ಅದು ಬಹಳ ಸಮಯ. ಇಷ್ಟೆಲ್ಲಾ ಸಮಯದ ನಂತರವೂ, ಜನರು ಇನ್ನೂ ಅಂತಹ ಪ್ರೀತಿಯನ್ನು ಸುರಿಸಿದಾಗ, ಅದು ನಿಜವಾಗಿಯೂ ಆಳವಾದ ಪರಿಣಾಮವನ್ನು ಬೀರುತ್ತದೆ.

ಕೋಚ್: ಸರ್, ಪ್ರಶ್ನೆಗಳು ಹೇಗೆ ಬಂದವು ಎಂಬುದನ್ನು ನೀವು ನೋಡಿದ್ದೀರಿ. ಅವರೆಲ್ಲರೂ ವಿಭಿನ್ನ ಪಾತ್ರಗಳು! ನಾನು ಅವರ ಮುಖ್ಯ ತರಬೇತುದಾರನಾಗಿ 2 ವರ್ಷಗಳಾಗಿವೆ, ನನ್ನ ಕೂದಲು ಈಗಾಗಲೇ ಬೂದು ಬಣ್ಣಕ್ಕೆ ತಿರುಗಿದೆ! ನಾನು ನಿಮಗೆ ಒಂದು ಕಥೆ ಹೇಳುತ್ತೇನೆ. ನಾವು ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿದ್ದೆವು, ನಾವು ಅಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದೆವು. ಆದರೆ ಶಿಷ್ಟಾಚಾರದ ಪ್ರಕಾರ, ಕೇವಲ 20 ಜನರಿಗೆ ಮಾತ್ರ ಅವಕಾಶವಿತ್ತು. ಆದ್ದರಿಂದ, ಸಹಾಯಕ ಸಿಬ್ಬಂದಿಗೆ ಹೋಗಲು ಸಾಧ್ಯವಾಗಲಿಲ್ಲ. ಆಟಗಾರರು ಮತ್ತು ಮೂವರು ನುರಿತ ತರಬೇತುದಾರರಿಗೆ ಮಾತ್ರ ಅವಕಾಶವಿತ್ತು. ನಾನು ಸಹಾಯಕ ಸಿಬ್ಬಂದಿಗೆ, "ನನಗೆ ತುಂಬಾ ವಿಷಾದವಿದೆ, ಆದರೆ ಮಿತಿ ಕೇವಲ 20 ಜನರು" ಎಂದು ಹೇಳಿದೆ. ಆದರೆ ಅವರು ಹೇಳಿದ ಒಂದು ಮಾತು ನನಗೆ ನಿಜವಾಗಿಯೂ ಮನವರಿಕೆಯಾಯಿತು. ಅವರು, "ಅದು ಸರಿ, ನಮಗೆ ಈ ಛಾಯಾಚಿತ್ರ ಬೇಡ. ನವೆಂಬರ್ 4 ಅಥವಾ 5ರಂದು ಮೋದಿ ಜಿ ಅವರೊಂದಿಗೆ ನಮಗೆ ಛಾಯಾಚಿತ್ರ ಬೇಕು ಎಂದಿದ್ದರು." ಇಂದು, ಆ ದಿನ ನಿಜವಾಗಿದೆ!

 

ಹರ್ಮನ್‌ಪ್ರೀತ್ ಕೌರ್: ಕೆಲವೊಮ್ಮೆ ಇದು ಯಾವಾಗಲೂ ನಮಗೆ ಏಕೆ ಸಂಭವಿಸುತ್ತದೆ ಎಂದು ಅನಿಸಿತು? ಬಹುಶಃ ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಶಾಲಿಯಾಗಲು ಅದನ್ನು ಹಾಗೆ ಬರೆಯಲಾಗಿದೆ.

ಪ್ರಧಾನಮಂತ್ರಿ: ನೀವು ಹಾಗೆ ಹೇಳುತ್ತಿರುವಾಗ, ಹರ್ಮನ್, ನಿಮ್ಮ ಮನಸ್ಸಿನಲ್ಲಿ ಏನಿತ್ತು? ಏಕೆಂದರೆ ನೀವು ಹೇಳಿದ್ದು ನಿಜವಾಗಿಯೂ ಜನರಿಗೆ ಸ್ಫೂರ್ತಿ ನೀಡುತ್ತದೆ.

ಹರ್ಮನ್‌ಪ್ರೀತ್ ಕೌರ್: ಎಲ್ಲೋ ಆಳವಾಗಿ, ನಾವು ಕೂಡ ಆ ಟ್ರೋಫಿಯನ್ನು ಎತ್ತುವ ದಿನ ಬರುತ್ತದೆ ಎಂದು ನಾವು ಯಾವಾಗಲೂ ನಂಬಿದ್ದೆವು. ಈ ತಂಡದೊಂದಿಗೆ, ಮೊದಲ ದಿನದಿಂದಲೇ ನಾವು ಅದನ್ನು ಗ್ರಹಿಸಬಲ್ಲ ವಿಶೇಷ ಭಾವನೆ ಇತ್ತು.

ಪ್ರಧಾನಮಂತ್ರಿ: ಆದರೆ "ನಮಗೆ ಇದು ಏಕೆ ಆಗುತ್ತಿದೆ?" ಎಂಬ ಆಲೋಚನೆ ನಿಮಗೆ ಬಂದಾಗ, ಅದರ ಹೊರತಾಗಿಯೂ, ನೀವು ಧೈರ್ಯವನ್ನು ಒಟ್ಟುಗೂಡಿಸಿ ಮುಂದುವರಿಯಲು ಮತ್ತು ಎಲ್ಲರಿಗೂ ಆತ್ಮವಿಶ್ವಾಸ ನೀಡಲು ಪ್ರಯತ್ನಿಸಿದ್ದೀರಿ, ಅದರ ಹಿಂದೆ ಬಲವಾದ ಕಾರಣವಿರಬೇಕು.

ಹರ್ಮನ್‌ಪ್ರೀತ್ ಕೌರ್: ಹೌದು ಸರ್. ಎಲ್ಲರಿಗೂ ಆತ್ಮವಿಶ್ವಾಸವಿದ್ದ ಕಾರಣ, ಇದಕ್ಕೆ ನಮ್ಮ ತಂಡದ ಎಲ್ಲ ಸದಸ್ಯರಿಗೂ ಶ್ರೇಯಸ್ಸು ಸಲ್ಲುತ್ತದೆ. ಪ್ರತಿ ಪಂದ್ಯಾವಳಿಯಲ್ಲೂ ನಾವು ಸುಧಾರಿಸುತ್ತಾ ಬಂದೆವು. ಸರ್(ತರಬೇತುದಾರ) ಹೇಳಿದಂತೆ, ಅವರು 2 ವರ್ಷಗಳಿಂದ ನಮ್ಮೊಂದಿಗಿದ್ದಾರೆ, ಈ ಸಮಯದಲ್ಲಿ ನಾವು ನಮ್ಮ ಮಾನಸಿಕ ಶಕ್ತಿಯ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇವೆ, ಏಕೆಂದರೆ ಏನಾಯಿತು ಎಂಬುದು ಹಿಂದಿನದು, ಮತ್ತು ನಾವು ಅದನ್ನು ಬದಲಾಯಿಸಲು ಸಾಧ್ಯವಿಲ್ಲ.

ಪ್ರಧಾನಮಂತ್ರಿ: ಹಾಗಾದರೆ ನೀವು ವರ್ತಮಾನದಲ್ಲಿ ಬದುಕಲು ಕಲಿತಿದ್ದೀರಿ.

ಹರ್ಮನ್‌ಪ್ರೀತ್ ಕೌರ್: ಹೌದು, ನಿಖರವಾಗಿ. ಅದಕ್ಕಾಗಿಯೇ ನಾನು ನಿಮಗೆ ಪ್ರಶ್ನೆ ಕೇಳಿದ್ದು, ವರ್ತಮಾನದಲ್ಲಿ ಬದುಕುವ ಈ ಕಲ್ಪನೆಯಲ್ಲಿ ಇನ್ನಷ್ಟು ಬಲವಾಗಿ ನಂಬಲು ನಮ್ಮ ತಂಡದ ಸದಸ್ಯರಿಗೆ ಸಂದೇಶ ನೀಡುವಂತಹ ಹೆಚ್ಚುವರಿ ಕೆಲಸವನ್ನು ನೀವು ಏನು ಮಾಡುತ್ತೀರಿ ಎಂಬುದರ ಬಗ್ಗೆ. ಏಕೆಂದರೆ ಅದು ನಿಜವಾಗಿಯೂ ನಮಗೆ ಸಹಾಯ ಮಾಡಿದೆ. ಅದು ನಿಮ್ಮಿಂದಲೂ ಬಂದರೆ, ನಾವು ಮತ್ತು ನಮ್ಮ ತರಬೇತುದಾರರು ಸರಿಯಾದ ಹಾದಿಯಲ್ಲಿದ್ದೇವೆ ಎಂದು ಅದು ಬಲಪಡಿಸುತ್ತದೆ.

ಪ್ರಧಾನಮಂತ್ರಿ: ಹಾಗಾದರೆ, ಡಿ ಎಸ್ ಪಿ (ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್), ಇಂದು ನೀವು ಏನು ಮಾಡುತ್ತೀರಿ? ನೀವು ಎಲ್ಲರಿಗೂ ಸೂಚನೆಗಳನ್ನು ನೀಡುತ್ತಿರಬೇಕು ಮತ್ತು ಎಲ್ಲರನ್ನೂ ನಿಯಂತ್ರಿಸುತ್ತಿರಬೇಕು, ಸರಿಯೇ?

ದೀಪ್ತಿ ಶರ್ಮಾ: ಇಲ್ಲ ಸರ್, ನಾನು ನಿಮ್ಮನ್ನು ಭೇಟಿಯಾಗಲು ಕಾಯುತ್ತಿದ್ದೆ! ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ, ಆ ಕ್ಷಣವನ್ನು ಆನಂದಿಸುತ್ತಿದ್ದೆ ಮತ್ತು ನಿಮ್ಮನ್ನು ನೋಡಲು ಕಾಯುತ್ತಿದ್ದೆ. ಆದರೆ 2017ರಲ್ಲಿ, ನಿಜವಾದ ಆಟಗಾರ ಎಂದರೆ ಪತನದ ನಂತರ ಮತ್ತೆ ಎದ್ದು ನಿಲ್ಲಲು, ವೈಫಲ್ಯದಿಂದ ಮೇಲೇರಲು ಕಲಿಯುವವನು ಎಂದು ನೀವು ನನಗೆ ಹೇಳಿದ್ದು ನನಗೆ ಇನ್ನೂ ನೆನಪಿದೆ. ನೀವು ನನಗೆ ಹೇಳಿದ್ದೀರಿ, "ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರಿ, ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ." ಆ ಮಾತುಗಳು ಯಾವಾಗಲೂ ನನ್ನನ್ನು ಪ್ರೇರೇಪಿಸಿವೆ. ನಾನು ನಿಮ್ಮ ಭಾಷಣಗಳನ್ನು ಕೇಳುತ್ತಲೇ ಇರುತ್ತೇನೆ, ಸರ್, ನನಗೆ ಸಮಯ ಸಿಕ್ಕಾಗಲೆಲ್ಲಾ. ಜನರು ಎಲ್ಲಾ ರೀತಿಯ ಮಾತುಗಳನ್ನು ಹೇಳಿದಾಗಲೂ ನೀವು ಯಾವಾಗಲೂ ತುಂಬಾ ತಂಪಾಗಿ ಮತ್ತು ಶಾಂತವಾಗಿರುತ್ತೀರಿ. ನೀವು ಎಲ್ಲವನ್ನೂ ತುಂಬಾ ಶಾಂತವಾಗಿ ನಿರ್ವಹಿಸುವ ರೀತಿ ನನ್ನ ಆಟದಲ್ಲಿ ವೈಯಕ್ತಿಕವಾಗಿ ನನಗೆ ನಿಜವಾಗಿಯೂ ಸಹಾಯ ಮಾಡುತ್ತದೆ.

 

ಪ್ರಧಾನಮಂತ್ರಿ: ನೀವು ಆ ಹನುಮಾನ್ ಜಿ ಹಚ್ಚೆ ಹಾಕಿಕೊಂಡು ತಿರುಗಾಡುತ್ತೀರಿ. ಹಾಗಾದರೆ ಹೇಳಿ, ಹನುಮಾನ್ ಜಿ ನಿಮಗೆ ಪಂದ್ಯಗಳಲ್ಲಿ ಸಹಾಯ ಮಾಡುತ್ತಾರೆಯೇ?

ದೀಪ್ತಿ ಶರ್ಮಾ: ಸರ್, ವಾಸ್ತವವಾಗಿ, ನನಗೆ ನನ್ನ ಮೇಲೆಗಿಂತ ಅವನ ಮೇಲೆ (ಭಗವಾನ್ ಹನುಮಾನ್) ಹೆಚ್ಚಿನ ನಂಬಿಕೆ ಇದೆ. ನಾನು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದಾಗಲೆಲ್ಲಾ, ನಾನು ಅವರ ಹೆಸರನ್ನು ಮಾತ್ರ ಬಳಸುತ್ತೇನೆ, ಆ ಕಷ್ಟಗಳಿಂದ ಹೊರಬರಲು ನನಗೆ ಸಾಧ್ಯವಾಗುತ್ತದೆ ಎಂದು ನನಗೆ ಅನಿಸಿದೆ. ಅವರ ಮೇಲಿನ ನನ್ನ ನಂಬಿಕೆ ಅಷ್ಟೆ ಬಲವಾಗಿದೆ.

ಪ್ರಧಾನಮಂತ್ರಿ: ನೀವು ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ “ಜೈ ಶ್ರೀ ರಾಮ್” ಎಂದು ಬರೆಯುತ್ತೀರಿ, ಸರಿಯೇ?

ದೀಪ್ತಿ ಶರ್ಮಾ: ಹೌದು ಸರ್, ಅದನ್ನು ಅಲ್ಲಿಯೂ ಬರೆದಿದ್ದೇನೆ. ಹೌದು, ಖಂಡಿತ.

ಪ್ರಧಾನಮಂತ್ರಿ: ನಂಬಿಕೆ ನಿಜವಾಗಿಯೂ ಜೀವನದಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ದೊಡ್ಡ ಪ್ರಯೋಜನವೆಂದರೆ, ಅದು ನಿಮಗೆ ಶಾಂತಿ ನೀಡುತ್ತದೆ. ನೀವು ನಿಮ್ಮ ಚಿಂತೆಗಳನ್ನು ದೇವರಿಗೆ ಒಪ್ಪಿಸಬಹುದು, ಅವರು ಇನ್ನುಳಿದ ವಿಷಯಗಳನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿದು ಶಾಂತಿಯುತವಾಗಿ ಮಲಗಬಹುದು. ಆದರೆ ಮೈದಾನದಲ್ಲಿ, ನೀವು ಆಟವನ್ನು ಸ್ವಲ್ಪ ‘ದಾದಾಗಿರಿ’(ಪ್ರಾಬಲ್ಯ)ದಿಂದ ಆಡುತ್ತೀರಿ ಎಂದು ಜನರು ಹೇಳುತ್ತಾರೆ. ಅದು ಎಷ್ಟು ನಿಜ?

ದೀಪ್ತಿ ಶರ್ಮಾ: ಇಲ್ಲ ಸರ್, ಹಾಗೆ ಏನೂ ಇಲ್ಲ! ಆದರೆ ಹೌದು, ಜನರು ಸ್ವಲ್ಪ ಭಯಪಡುವ ಒಂದು ವಿಷಯವಿದೆ, ಅದು ನನ್ನ ಎಸೆತ! ಮತ್ತು ಕೆಲವೊಮ್ಮೆ ನನ್ನ ತಂಡದ ಸದಸ್ಯರು ಸಹ ತಮಾಷೆಯಾಗಿ ಹೇಳುತ್ತಾರೆ, “ಶಾಂತವಾಗಿರಿ ಆಡಿ, ಅಷ್ಟು ಬಲವಾಗಿ ಎಸೆಯಬೇಡಿ!”

ದೀಪ್ತಿ ಶರ್ಮಾ: ಸರ್ ನಿಜವಾಗಿಯೂ ನನ್ನ ಕೈಯಲ್ಲಿ ಹನುಮಾನ್ ಜಿ ಹಚ್ಚೆ ಬಗ್ಗೆ ನನ್ನನ್ನು ವೈಯಕ್ತಿಕವಾಗಿ ಕೇಳಿದರು. ಇದರ ಹಿಂದಿನ ರಹಸ್ಯವೇನು, ನಾನು ಅವನನ್ನು ಎಷ್ಟು ಆಳವಾಗಿ ನಂಬುತ್ತೇನೆ. ನನಗೆ ನಿಜವಾಗಿಯೂ ಸ್ಪರ್ಶಿಸಿದ ವಿಷಯವೆಂದರೆ ಸರ್ ನನ್ನ ಇನ್‌ಸ್ಟಾಗ್ರಾಮ್ ಟ್ಯಾಗ್‌ಲೈನ್ ಅನ್ನು ಸಹ ತಿಳಿದಿದ್ದಾರೆ ಎಂಬುದು!

ಪ್ರಧಾನಮಂತ್ರಿ: ಹಾಗಾದರೆ ಹರ್ಮನ್, ವಿಜಯದ ನಂತರ, ನೀವು ಚೆಂಡನ್ನು ನಿಮ್ಮ ಜೇಬಿನಲ್ಲಿ ಇಟ್ಟಿರಿ... ಅದರ ಹಿಂದಿನ ಕಾರಣವೇನು? ಅದು ನೀವು ಯೋಜಿಸಿದ್ದೇನಾ ಅಥವಾ ಯಾರಾದರೂ ನಿಮಗೆ ಅದನ್ನು ಮಾಡಲು ಹೇಳಿದ್ದರಾ?

ಹರ್ಮನ್‌ಪ್ರೀತ್ ಕೌರ್: ಇಲ್ಲ ಸರ್, ಅದು ದೇವರ ಯೋಜನೆಯೂ ಆಗಿತ್ತು. ಕೊನೆಯ ಚೆಂಡು, ಕೊನೆಯ ಕ್ಯಾಚ್ ನನಗೆ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ, ಆದರೆ ಅದು ಸಂಭವಿಸಿತು. ಹಲವು ವರ್ಷಗಳ ಕಠಿಣ ಪರಿಶ್ರಮ ಮತ್ತು ಕಾಯುವಿಕೆಯ ನಂತರ, ಅದು ಅಂತಿಮವಾಗಿ ನನ್ನ ಕೈಗೆ ಬಂದಾಗ, ಅದು ನನ್ನೊಂದಿಗೆ ಇರಬೇಕು ಎಂದು ನನಗೆ ಅನಿಸಿತು. ನನ್ನ ಬ್ಯಾಗಿನಲ್ಲಿ ಇನ್ನೂ ಆ ಚೆಂಡು ಇದೆ.

 

ಪ್ರಧಾನಮಂತ್ರಿ: ಶಫಾಲಿ, ನೀವು ರೋಹ್ಟಕ್‌ನವರು. ಎಲ್ಲಾ ಕುಸ್ತಿಪಟುಗಳು ಬರುವ ಸ್ಥಳ ಅದು! ನೀವು ಈ ಜಗತ್ತಿನಲ್ಲಿ (ಕ್ರಿಕೆಟ್) ಹೇಗೆ?

ಶಫಾಲಿ ವರ್ಮಾ: ಹೌದು ಸರ್, ಕುಸ್ತಿ ಮತ್ತು ಕಬಡ್ಡಿ ಅಲ್ಲಿ ನಿಜವಾಗಿಯೂ ಜನಪ್ರಿಯವಾಗಿವೆ. ಆದರೆ ನನ್ನ ತಂದೆ ದೊಡ್ಡ ಪ್ರಭಾವ ಬೀರಿದ್ದರು ಎಂದು ನಾನು ಭಾವಿಸುತ್ತೇನೆ, ಏಕೆಂದರೆ...

ಪ್ರಧಾನಮಂತ್ರಿ: ನೀವು ಎಂದಿಗೂ ಕುಸ್ತಿಯನ್ನು ಪ್ರಯತ್ನಿಸಲಿಲ್ಲವೇ?

ಶಫಾಲಿ ವರ್ಮಾ: ಇಲ್ಲ ಸರ್, ಎಂದಿಗೂ.

ಪ್ರಧಾನಮಂತ್ರಿ: ಎಂದಿಗೂ ಸಾಧ್ಯವಿಲ್ಲವೇ?

ಶಫಾಲಿ ವರ್ಮಾ: ಇಲ್ಲ ಸರ್, ಎಂದಿಗೂ ಇಲ್ಲ.

ಪ್ರಧಾನಮಂತ್ರಿ: ಓಹ್, ನನಗೆ ಅರ್ಥವಾಯಿತು.

ಶಫಾಲಿ ವರ್ಮಾ: ನನ್ನ ತಂದೆ ಸ್ವತಃ ಕ್ರಿಕೆಟಿಗನಾಗಬೇಕೆಂದು ಬಯಸಿದ್ದರು, ಆದರೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಆ ಕನಸನ್ನು ತಮ್ಮ ಮಕ್ಕಳಿಗೆ ರವಾನಿಸಿದರು. ನನ್ನ ಸಹೋದರ ಮತ್ತು ನಾನು ಒಟ್ಟಿಗೆ ಆಡುತ್ತಿದ್ದೆವು, ನಾವು ಪಂದ್ಯಗಳನ್ನು ನೋಡುತ್ತಲೇ ಇದ್ದೆವು, ಹಾಗಾಗಿ ನಾನು ಕ್ರಿಕೆಟ್‌ನಲ್ಲಿ ಆಳವಾದ ಆಸಕ್ತಿ ಬೆಳೆಸಿಕೊಂಡು ಕ್ರಿಕೆಟಿಗಳಾದೆ.

ಪ್ರಧಾನಮಂತ್ರಿ: ಶಫಾಲಿ, ನಿಮ್ಮ ಆ ಕ್ಯಾಚ್ ನೋಡಿದಾಗ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಇತ್ತು. ಚೆಂಡನ್ನು ಹಿಡಿದ ನಂತರ ಹಲವರು ನಗುತ್ತಿದ್ದರು ಎಂಬುದು ನನಗೆ ಅರ್ಥವಾಗುತ್ತದೆ, ಆದರೆ ನೀವು ಅದನ್ನು ಹಿಡಿಯುವ ಮೊದಲು ನಗುತ್ತಿದ್ದಿರಿ! ಕಾರಣವೇನು?

ಶಫಾಲಿ ವರ್ಮಾ: ಸರ್, ನಾನು ನನ್ನೊಳಗೆ ಹೇಳಿಕೊಳ್ಳುತ್ತಿದ್ದೆ, "ನನ್ನ ಬಳಿಗೆ ಬರಲಿ, ಹಿಡಿಯುತ್ತೇನೆ - ನನ್ನ ಕೈಗೆ ಬರಲಿ!" ಎಂದು. ಆದರೆ, ಅದು ನಿಜವಾಗಿಯೂ ನನ್ನ ಬಳಿಗೆ ಬಂದಾಗ, ನನಗೆ ನಗು ತಡೆಯಲಾಗಲಿಲ್ಲ!

ಪ್ರಧಾನಮಂತ್ರಿ: ಚೆಂಡು ಬೇರೆಲ್ಲಿಗೂ ಹೋಗಲು ಸಾಧ್ಯವಿಲ್ಲ ಎಂದು ನೀವು ತುಂಬಾ ವಿಶ್ವಾಸ ಹೊಂದಿದ್ದಿರಿ ಎಂದು ನನಗೆ ಅನಿಸಿತು. ಅಷ್ಟೇನಾ?

ಶಫಾಲಿ ವರ್ಮಾ: ಸರ್, ಅದು ಬೇರೆಡೆಗೆ ಹೋಗಿದ್ದರೂ, ನಾನು ಅಲ್ಲಿಗೂ ಹಾರುತ್ತಿದ್ದೆ!

ಪ್ರಧಾನಮಂತ್ರಿ: ಆ ಕ್ಷಣದ ಭಾವನೆಗಳನ್ನು ನೀವು ವಿವರಿಸಬಹುದೇ?

ಜೆಮಿಮಾ ರೊಡ್ರಿಗಸ್: ವಾಸ್ತವವಾಗಿ ಸರ್, ಇದು ಸೆಮಿಫೈನಲ್ ಆಗಿತ್ತು, ನಾವು ಯಾವಾಗಲೂ ಆಸ್ಟ್ರೇಲಿಯಾ ವಿರುದ್ಧ ತುಂಬಾ ಹತ್ತಿರದಿಂದ ಸೋತಿದ್ದೇವೆ. ಹಾಗಾಗಿ, ನಾನು ಬ್ಯಾಟಿಂಗ್ ಮಾಡಲು ಹೋದಾಗ, ನನ್ನ ಒಂದೇ ಆಲೋಚನೆ ತಂಡಕ್ಕಾಗಿ ಇದನ್ನು ಗೆಲ್ಲಬೇಕು ಎಂದಾಗಿತ್ತು. ಏನೇ ಇರಲಿ, ನಾನು ಕೊನೆಯವರೆಗೂ ಇರಬೇಕಾಗಿತ್ತು. ನಾವು ಆ ಪರಿಸ್ಥಿತಿಯಲ್ಲಿದ್ದಾಗ, ನಾವು ಒಬ್ಬರಿಗೊಬ್ಬರು ಹೇಳುತ್ತಲೇ ಇದ್ದೆವು: ಒಂದು ದೀರ್ಘ ಪಾಲುದಾರಿಕೆ, ಕೇವಲ ಒಂದು ಘನ ಪಾಲುದಾರಿಕೆ, ಮತ್ತು ಅವರು ವಿಫಲರಾಗುತ್ತಾರೆ. ಅದನ್ನೇ ನಾವು ಮಾಡಲು ಪ್ರಯತ್ನಿಸುತ್ತಿದ್ದೆವು. ಆ ಕ್ಷಣವು ಸಾಮೂಹಿಕ ತಂಡದ ಪ್ರಯತ್ನ ಎಂದು ನಾನು ಹೇಳುತ್ತೇನೆ, ಸರ್! ಹೌದು, ಬಹುಶಃ ನಾನು ಶತಕ ಗಳಿಸಿರಬಹುದು, ಆದರೆ ಹ್ಯಾರಿ ಡಿ (ಹರ್ಮನ್‌ಪ್ರೀತ್ ಕೌರ್) ಮತ್ತು ನನ್ನ ನಡುವಿನ ಪಾಲುದಾರಿಕೆ ಸಂಭವಿಸದಿದ್ದರೆ ಅಥವಾ ದೀಪ್ತಿ ಆ ಪ್ರಭಾವಶಾಲಿ ಇನ್ನಿಂಗ್ಸ್ ಆಡದಿದ್ದರೆ, ನಂತರ ರಿಚಾ ಮತ್ತು ಅಮನ್ ಆ 8 ಎಸೆತಗಳನ್ನು 15 ರನ್‌ಗಳಿಗೆ ಆಡದಿದ್ದರೆ, ಬಹುಶಃ ನಾವು ಸೆಮಿಫೈನಲ್ ಗೆಲ್ಲುತ್ತಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಎಲ್ಲರೂ ಸಾಮೂಹಿಕವಾಗಿ "ಹೌದು, ನಮ್ಮ ತಂಡವು ಇದನ್ನು ಮಾಡಬಹುದು ಮತ್ತು ನಾವು ಮಾಡುತ್ತೇವೆ!" ಎಂಬ ನಂಬಿಕೆ ಹೊಂದಿದ್ದರು.

 

ಜೆಮಿಮಾ ರೊಡ್ರಿಗಸ್: ಅವರು (ಪ್ರಧಾನಿ) ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಪ್ರೇರೇಪಿಸಲು ಬಯಸಿದ್ದರು. ಅವರು ನಮ್ಮ ಅನುಭವ ತಿಳಿದುಕೊಳ್ಳಲು ಬಯಸಿದ್ದರು, ವಿಶ್ವಕಪ್ ಗೆದ್ದ ಅನುಭವ ಹೇಗಿತ್ತು, 3 ಪಂದ್ಯಗಳಲ್ಲಿ ಸೋತ ನಂತರ ಹೇಗಿತ್ತು ಮತ್ತು ನಾವು ಹೇಗೆ ಚೇತರಿಸಿಕೊಂಡೆವು ಎಂಬುದನ್ನು ತಿಳಿದುಕೊಳ್ಳಲು ಬಯಸಿದ್ದರು.

ಕ್ರಾಂತಿ ಗೌಡ್: ನಾನು ವಿಶ್ವಕಪ್ ಪಂದ್ಯದಲ್ಲಿ ಪಂದ್ಯಶ್ರೇಷ್ಠಳಾದಾಗ, ನನಗೆ ತುಂಬಾ ಹೆಮ್ಮೆ ಅನಿಸಿತು, ನನ್ನ ಹಳ್ಳಿಯೂ ಹೆಮ್ಮೆಪಡುತ್ತದೆ ಎಂದು ನನಗೆ ತಿಳಿದಿತ್ತು.

ಕ್ರಾಂತಿ ಗೌಡ್: ನಾನು ಬೌಲಿಂಗ್ ಮಾಡುವಾಗ, ಹರ್ಮನ್ ಡಿ ಯಾವಾಗಲೂ ನನಗೆ ಹೇಳುತ್ತಿದ್ದರು, "ನೀನು ವಿಕೆಟ್ ಪಡೆಯಬೇಕು. ಮೊದಲ ವಿಕೆಟ್ ಪಡೆಯುವವಳು ನೀನೇ." ಆದ್ದರಿಂದ ನಾನು ಆ ಮೊದಲ ವಿಕೆಟ್ ಪಡೆಯಲು ಅದರ ಮೇಲೆ ಗಮನ ಕೇಂದ್ರೀಕರಿಸಿದೆ.  "ನಾನು ಆ ಮೊದಲ ವಿಕೆಟ್ ಪಡೆಯುತ್ತೇನೆ" ಎಂದು ಯೋಚಿಸುತ್ತಾ ಬೌಲಿಂಗ್ ಮಾಡಿದೆ.  ನನಗೆ ಒಬ್ಬ ಅಣ್ಣನಿದ್ದಾನೆ ಮತ್ತು ಅವನು ಸಹ ಕ್ರಿಕೆಟ್ ಪ್ರೀತಿಸುತ್ತಾನೆ. ಅವನು ನಿಮ್ಮನ್ನು ತುಂಬಾ ಮೆಚ್ಚುತ್ತಾನೆ ಸರ್. ಅವನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತಿದ್ದ, ಆದರೆ ನನ್ನ ತಂದೆ ಕೆಲಸ ಕಳೆದುಕೊಂಡಾಗ, ಅವನು ಅಕಾಡೆಮಿಗೆ ಸೇರಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವನು ಸುಮ್ಮನೆ ಆಡುತ್ತಿದ್ದ. ಬಾಲ್ಯದಿಂದಲೂ, ಅವನು ಆಡುವುದನ್ನು ನೋಡಲು ನಾನು ಇಷ್ಟಪಡುತ್ತಿದ್ದೆ, ಹುಡುಗರ ಟೆನಿಸ್ ಬಾಲ್ ಕ್ರಿಕೆಟ್‌ನೊಂದಿಗೆ ಆಡುತ್ತಿದ್ದೆ. ನಂತರ, ನಮ್ಮ ಹಳ್ಳಿಯಲ್ಲಿ ಎಂಎಲ್ಎ ಟ್ರೋಫಿ ಎಂಬ ಲೆದರ್-ಬಾಲ್ ಪಂದ್ಯಾವಳಿ ಆಯೋಜಿಸಿದಾಗ, ನಾನು ಅದರಲ್ಲಿ ಭಾಗವಹಿಸಿದ್ದೆ. 2 ತಂಡಗಳು ಬಂದಿದ್ದವು. ತಂಡದಲ್ಲಿದ್ದ ಒಬ್ಬ ಹುಡುಗಿ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾದಳು, ನನಗೆ ಉದ್ದ ಕೂದಲು ಇತ್ತು, ಆದ್ದರಿಂದ ತರಬೇತುದಾರ ನನ್ನ ಬಳಿಗೆ ಬಂದು, "ನೀವು ಆಡುತ್ತೀರಾ?" ಎಂದು ಕೇಳಿದರು. ನಾನು ಹೌದು ಎಂದು ಹೇಳಿದೆ. ಅವರು ನನಗೆ ತಂಡಕ್ಕಾಗಿ ಆಡಲು ಅವಕಾಶ ನೀಡಿದರು. ಅದು ನನ್ನ ಮೊದಲ ಲೆದರ್-ಬಾಲ್ ಪಂದ್ಯ. ನಾನು ಪಂದ್ಯದ ಆಟಗಾರ್ತಿಯಾದೆ. ನಾನು 2 ವಿಕೆಟ್‌ಗಳನ್ನು ಪಡೆದು 25 ರನ್‌ಗಳನ್ನು ಗಳಿಸಿದೆ. ನನ್ನ ಕ್ರಿಕೆಟ್ ಪ್ರಯಾಣ ಹೀಗೆ ಪ್ರಾರಂಭವಾಯಿತು.

ಪ್ರಧಾನಮಂತ್ರಿ: ಶಫಾಲಿಗೂ ಕೊನೆಯ 2 ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿತು, ಸರಿಯೇ?

ಶಫಾಲಿ ವರ್ಮಾ: ಹೌದು ಸರ್. ಅದಕ್ಕೂ ಮೊದಲು, ನಾನು ದೇಶೀಯ ಪಂದ್ಯಗಳನ್ನು ಆಡುತ್ತಿದ್ದೆ. ಆದರೆ ನನಗೆ ಕರೆ ಬಂದಾಗ ... ಖಂಡಿತ, ಪ್ರತೀಕಾಗೆ ಏನಾಯಿತು ಎಂಬುದು ಯಾವುದೇ ಆಟಗಾರ್ತಿ ಯಾರಿಗೂ ಬಯಸದ ವಿಷಯವಾಗಿತ್ತು, ಆದರೆ ನನಗೆ ಕರೆ ಬಂದಾಗ, ನಾನು ನನ್ನ ಮೇಲೆ ವಿಶ್ವಾಸ ತೋರಿಸಿದೆ, ತಂಡವು ಸಹ ನನ್ನ ಮೇಲೆ ವಿಶ್ವಾಸ ತೋರಿತು. ನಾನು ತಂಡವನ್ನು ಗೆಲ್ಲಿಸಬೇಕು ಎಂದು ಮಾತ್ರ ಯೋಚಿಸುತ್ತಿದ್ದೆ, ಅದು ಹೇಗೆ ಇರಲಿ.

ಪ್ರತೀಕಾ ರಾವಲ್: ಈ ವಿಡಿಯೋದಿಂದ ನಾನು ನಿಮಗೆ ಹೇಳಬಯಸುವುದೇನೆಂದರೆ, ನಾನು ಗಾಯಗೊಂಡಾಗ, ತಂಡದಲ್ಲಿರುವ ಅನೇಕ ಜನರು, "ಪ್ರತಿಕಾಗೆ ಈ ವಿಶ್ವಕಪ್ ಗೆಲ್ಲಬೇಕೆಂದು ನಾವು ಬಯಸುತ್ತೇವೆ" ಎಂದರು. ಆ ಸಮಯದಲ್ಲಿ, ತಂಡದ ಹೊರಗಿನ ಯಾರೋ ನಂತರ ನನಗೆ ಹೇಳಿದರು ಎಂದು ನನಗೆ ತಿಳಿದಿರಲಿಲ್ಲ. ನಾನು ಹೊರಗೆ ಕುಳಿತಿದ್ದಾಗ ನಾವು ವಿಶ್ವಕಪ್ ಗೆದ್ದಾಗ, ತಾಂತ್ರಿಕವಾಗಿ ನಾನು ಅಂತಿಮ ತಂಡದಲ್ಲಿ ಇರಲಿಲ್ಲ. ನಾನು 16ನೇ ಆಟಗಾರಳಾಗಿದ್ದೆ. ಆದರೆ ಸರ್, ನಾನು ವ್ಹೀಲ್‌ಚೇರ್‌ನಲ್ಲಿದ್ದರೂ, ಅವರು ನನ್ನನ್ನು ವೇದಿಕೆಯ ಮೇಲೆ ನಿಲ್ಲಿಸಿ ಅದೇ ಗೌರವ ಮತ್ತು ಗೌರವವನ್ನು ನೀಡಿದರು. ಈ ತಂಡವು ನಿಜವಾಗಿಯೂ ಒಂದು ಕುಟುಂಬದಂತಿದೆ ಸರ್. ನೀವು ಪ್ರತಿಯೊಬ್ಬ ಆಟಗಾರನನ್ನು ಸಮಾನವಾಗಿ ಗೌರವಿಸಿದಾಗ ಮತ್ತು ಎಲ್ಲರೂ ಸೇರಿದ್ದಾರೆಂದು ಭಾವಿಸಿದಾಗ, ಆಗ ತಂಡವು ನಿಜವಾದ ಕುಟುಂಬವಾಗುತ್ತದೆ. ಮತ್ತು ಅಂತಹ ಕುಟುಂಬವು ಒಟ್ಟಿಗೆ ಆಡಿದಾಗ ಸರ್, ಆ ತಂಡವನ್ನು ಸೋಲಿಸುವುದು ತುಂಬಾ ಕಷ್ಟಕರವಾಗುತ್ತದೆ. ಅದಕ್ಕಾಗಿಯೇ ಈ ತಂಡವು ಫೈನಲ್ ಗೆಲ್ಲಲು ನಿಜವಾಗಿಯೂ ಅರ್ಹವಾಗಿದೆ.

ಪ್ರಧಾನ ಮಂತ್ರಿ: ನೀವು ಹೇಳಿದ್ದು ಸಂಪೂರ್ಣ ಸರಿ ಇದೆ. ಕೊನೆಯಲ್ಲಿ, ಕ್ರೀಡೆಯಲ್ಲಿ ತಂಡದ ಮನೋಭಾವವು ಅತ್ಯಂತ ಮುಖ್ಯವಾಗಿದೆ. ಇದು ಮೈದಾನದಲ್ಲಿ ತಂಡದ ಮನೋಭಾವದ ಬಗ್ಗೆ ಮಾತ್ರವಲ್ಲ. ನೀವು ಎಲ್ಲಾ 24 ಗಂಟೆಗಳನ್ನು ಒಟ್ಟಿಗೆ ಕಳೆದಾಗ, ಒಂದು ರೀತಿಯ ಬಾಂಧವ್ಯ ರೂಪುಗೊಳ್ಳುತ್ತದೆ. ನೀವು ಪರಸ್ಪರರ ದೌರ್ಬಲ್ಯಗಳನ್ನು ತಿಳಿದುಕೊಳ್ಳುತ್ತೀರಿ ಮತ್ತು ಅವುಗಳನ್ನು ಮರೆಮಾಚಲು ಪ್ರಯತ್ನಿಸುತ್ತೀರಿ, ನೀವು ಪರಸ್ಪರರ ಸಾಮರ್ಥ್ಯಗಳನ್ನು ಗುರುತಿಸುತ್ತೀರಿ, ಅವುಗಳನ್ನು ಬೆಂಬಲಿಸಲು ಮತ್ತು ಎತ್ತಿ ತೋರಿಸಲು ಪ್ರಯತ್ನಿಸುತ್ತೀರಿ. ಆಗ ಮಾತ್ರ ನಿಜವಾದ ತಂಡದ ಕೆಲಸ ನಡೆಯುತ್ತದೆ.

ಪ್ರಧಾನಮಂತ್ರಿ: ನಿಮ್ಮ ಆ ಕ್ಯಾಚ್ ಅತ್ಯಂತ ಪ್ರಸಿದ್ಧವಾಯಿತು, ಅಲ್ಲವೇ?

ಅಮನ್‌ಜೋತ್ ಕೌರ್: ಹೌದು, ಸರ್! ನಾನು ಮೊದಲು ಹಲವು ಕ್ಯಾಚ್ ಗಳನ್ನು ಪಡೆದಿದ್ದೇನೆ, ಆದರೆ ಯಾವುದೂ ಆ ಕ್ಯಾಚ್‌ನಷ್ಟು ಪ್ರಸಿದ್ಧವಾಗಲಿಲ್ಲ. ಮೊದಲ ಬಾರಿಗೆ, ಕ್ಯಾಚ್ ಪೂರ್ಣಗೊಳಿಸುವ ಮೊದಲು ಸ್ವಲ್ಪ ಎಡವುವುದು ಒಳ್ಳೆಯದು ಎಂದು ನನಗೆ ತಿಳಿದಿರಲಿಲ್ಲ!

 

ಪ್ರಧಾನಮಂತ್ರಿ: ನೀವು ಆ ಕ್ಯಾಚ್ ಪಡೆದಾಗ, ಅದು ಒಂದು ರೀತಿಯ ತಿರುವು ಆಯಿತು, ಅಲ್ಲವೇ?

ಅಮನ್‌ಜೋತ್ ಕೌರ್: ಹೌದು, ಸರ್.

ಪ್ರಧಾನಮಂತ್ರಿ: ನೀವು ನಿಜವಾಗಿಯೂ ಕ್ಯಾಚ್ ತೆಗೆದುಕೊಳ್ಳುವವರೆಗೆ, ನೀವು ಚೆಂಡನ್ನು ಮಾತ್ರ ನೋಡಿರಬೇಕು. ಆದರೆ ಅದರ ನಂತರ, ನೀವು ಈಗಾಗಲೇ ಟ್ರೋಫಿಯನ್ನು ನೋಡಬಹುದೆಂದು ನನಗೆ ಖಚಿತವಾಗಿದೆ!

ಅಮನ್‌ಜೋತ್ ಕೌರ್: ಸರ್, ಆ ಕ್ಯಾಚ್‌ನಲ್ಲಿ ನನಗೆ ಅಕ್ಷರಶಃ ಟ್ರೋಫಿ ಕಾಣಿಸಿತು! ಅದರ ನಂತರ, ಅನೇಕ ತಂಡದ ಸದಸ್ಯರು ನನ್ನ ಮೇಲೆ ಹಾರಿದರು, ನನಗೆ ಉಸಿರಾಡಲು ಕಷ್ಟವಾಯಿತು. ನನ್ನ ಮೇಲೆ ಎಷ್ಟು ಜನರು ಇದ್ದಾರೆಂದು ನನಗೆ ತಿಳಿದಿರಲಿಲ್ಲ!

ಪ್ರಧಾನಮಂತ್ರಿ: ನಿಮಗೆ ಗೊತ್ತಾ, ಕಳೆದ ಬಾರಿ ಸೂರ್ಯಕುಮಾರ್ ಯಾದವ್ ಕೂಡ ಇದೇ ರೀತಿಯ ಕ್ಯಾಚ್ ಹಿಡಿದರು.

ಅಮನ್‌ಜೋತ್ ಕೌರ್: ಹೌದು, ಸರ್.

ಪ್ರಧಾನಮಂತ್ರಿ: ನಿಮ್ಮಲ್ಲಿ ಒಬ್ಬರು ಈ ಹಿಂದೆಯೂ ಕ್ಯಾಚ್ ಹಿಡಿದಿದ್ದರು, ಅದನ್ನು ನಾನು ರೀಟ್ವೀಟ್ ಮಾಡಿದ್ದೆ. ನನಗೆ ಅದು ನೆನಪಿದೆ. ಅದು ತುಂಬಾ ಪ್ರಭಾವಶಾಲಿ ಕ್ಷಣವಾಗಿತ್ತು.

ಹರ್ಲೀನ್ ಕೌರ್ ಡಿಯೋಲ್: ಹೌದು, ಸರ್! ನಾನು ಆ ಕ್ಯಾಚ್ ಪಡೆದ ಸಮಯದಲ್ಲಿ ನಾವು ಇಂಗ್ಲೆಂಡ್‌ನಲ್ಲಿದ್ದೆವು. ನಾವು ಬಹಳ ಸಮಯದಿಂದ ಅಂತಹ ಕ್ಯಾಚ್‌ಗಳನ್ನು ಅಭ್ಯಾಸ ಮಾಡುತ್ತಿದ್ದೆವು. ನಾನು ಫೀಲ್ಡಿಂಗ್ ಮಾಡುತ್ತಿದ್ದೆ ಎಂದು ನನಗೆ ನೆನಪಿದೆ, ಒಂದು ಕ್ಯಾಚ್ ಮುಂದೆ ಬಂದಿತು. ನಾನು ಓಡಿದೆ, ಆದರೆ ನಾನು ಅದನ್ನು ಸ್ವಲ್ಪ ತಪ್ಪಿಸಿಕೊಂಡೆ. ಹ್ಯಾರಿ ಡಿ ನನ್ನನ್ನು ಗದರಿಸಿ, "ನೀವು ಹಾಗೆ ಕ್ಯಾಚ್‌ಗಳನ್ನು ಹಿಡಿಯಲಾಗದಿದ್ದರೆ ಉತ್ತಮ ಫೀಲ್ಡರ್ ಆಗುವುದರ ಅರ್ಥವೇನು?" ಎಂದು ಹೇಳಿದರು. ನಂತರ ನನ್ನ ಹಿಂದೆ ನಿಂತಿದ್ದ ಜೆಮ್ಮಿ, "ಪರವಾಗಿಲ್ಲ" ಎಂದರು. ನಾನು ಅವಳನ್ನು ಕೇಳಿದೆ, "ನಾನು ಅದನ್ನು ಹಿಡಿಯಬಹುದಿತ್ತು ಎಂದು ನೀವು ಭಾವಿಸಿದ್ದಿರಾ?" "ಹೌದು, ನೀವು ಹಿಡಿಯಬಹುದಿತ್ತು" ಎಂದರು. ಹಾಗಾಗಿ ನಾನು ಅವರಿಗೆ, "2 ಓವರ್‌ಗಳು ಉಳಿದಿವೆ, ನಾನು ನಿಮಗೆ ಉತ್ತಮ ಕ್ಯಾಚ್ ಹಿಡಿದು ತೋರಿಸುತ್ತೇನೆ" ಎಂದು ಹೇಳಿದೆ. ಸರ್, ಅದರ ನಂತರ ಆ ಚೆಂಡು ಬಂತು, ನಾನು ಅದನ್ನು ಹಿಡಿದೆ!

ಪ್ರಧಾನಮಂತ್ರಿ: ಓಹ್, ನೀವು ವೈಯಕ್ತಿಕ ಸವಾಲಿನ ಮೇಲೆ ಕೆಲಸ ಮಾಡಿದ್ದೀರಿ ಎಂದು ನಾನು ನೋಡುತ್ತೇನೆ! ರಿಚಾ, ನೀವು ಎಲ್ಲೇ ಆಡಿದರೂ, ನೀವು ಪಂದ್ಯಗಳನ್ನು ಗೆಲ್ಲುತ್ತೀರಿ, ಅಲ್ಲವೇ? ನೀವು ಯಾವಾಗಲೂ ಪರಿಣಾಮ ಬೀರಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತೀರಿ!

ರಿಚಾ ಘೋಷ್: ನನಗೆ ಗೊತ್ತಿಲ್ಲ ಸರ್, ಆದರೆ ಹೌದು, ಅದು ಅಂಡರ್-19 ಆಗಿರಲಿ, ಸೀನಿಯರ್ ತಂಡವಾಗಿರಲಿ ಅಥವಾ ಡಬ್ಲ್ಯುಪಿಎಲ್ ಆಗಿರಲಿ, ನಾವು ಟ್ರೋಫಿಗಳನ್ನು ಗೆದ್ದಿದ್ದೇವೆ ಮತ್ತು ನಾನು ನಿಜವಾಗಿಯೂ ದೀರ್ಘ ಸಿಕ್ಸರ್‌ಗಳನ್ನು ಬಾರಿಸಿದ್ದೇನೆ!

ಪ್ರಧಾನಮಂತ್ರಿ: ಸರಿ, ನನಗೆ ಇನ್ನಷ್ಟು ಹೇಳಿ.

 

ರಿಚಾ ಘೋಷ್: ನಾನು ಬ್ಯಾಟಿಂಗ್ ಮಾಡುವಾಗ ... ಆ ಸಿಕ್ಸರ್‌ಗಳನ್ನು ಬಾರಿಸುವಾಗ ... ಹ್ಯಾರಿ ಡಿ, ಸ್ಮೃತಿ ಮತ್ತು ಎಲ್ಲರೂ ನನ್ನನ್ನು ನಂಬಿದ್ದರು ಎಂದು ನಾನು ಭಾವಿಸುತ್ತೇನೆ. ಯಾವುದೇ ಪರಿಸ್ಥಿತಿಯಲ್ಲಿ ಕಡಿಮೆ ಚೆಂಡುಗಳು ಮತ್ತು ಹೆಚ್ಚಿನ ರನ್‌ಗಳು ಬೇಕಾಗಿದ್ದರೂ ನಾನು ಅದನ್ನು ನಿಭಾಯಿಸಬಲ್ಲೆ ಎಂದು ಇಡೀ ತಂಡವು ನಂಬಿತ್ತು. ಆ ನಂಬಿಕೆಯು ನನಗೆ ಆತ್ಮವಿಶ್ವಾಸ ನೀಡಿತು, ಹೌದು, ನಾನು ಅದನ್ನು ಮಾಡಬಹುದು. ಅದಕ್ಕಾಗಿಯೇ ನನ್ನ ದೇಹ ಭಾಷೆ ಯಾವಾಗಲೂ ಪ್ರತಿ ಪಂದ್ಯದಲ್ಲೂ ಆ ವಿಶ್ವಾಸವನ್ನು ತೋರಿಸುತ್ತದೆ.

ರಾಧಾ ಯಾದವ್: ನಾವು 3 ಪಂದ್ಯಗಳನ್ನು ಸೋತಿದ್ದೇವೆ ಸರ್. ಆದರೆ ಅತ್ಯುತ್ತಮ ಭಾಗವೆಂದರೆ ಸೋಲಿನಲ್ಲಿಯೂ ಸಹ, ನಾವು ಒಟ್ಟಿಗೆ ಇದ್ದು ಪರಸ್ಪರ ಬೆಂಬಲಿಸುತ್ತಾ, ಪರಸ್ಪರ ಮಾತನಾಡುತ್ತಿದ್ದೆವು. ಅದು ನಿಜವಾಗಿತ್ತು ಮತ್ತು ಶುದ್ಧವಾಗಿತ್ತು. ಬಹುಶಃ ಅದಕ್ಕಾಗಿಯೇ ದೇವರು ನಮಗೆ ಈ ಟ್ರೋಫಿಯನ್ನು ಆಶೀರ್ವದಿಸಿರಬಹುದು.

ಪ್ರಧಾನಮಂತ್ರಿ: ಇಲ್ಲ, ಇಲ್ಲ, ದೇವರು ಮಾತ್ರ ಅಲ್ಲ, ನಿಮ್ಮ ಕಠಿಣ ಪರಿಶ್ರಮವೇ ಈ ವಿಜಯವನ್ನು ಗಳಿಸಿತು. ನೀವೆಲ್ಲರೂ ಈ ಕ್ಷೇತ್ರದಲ್ಲಿ ನಿಮ್ಮನ್ನು ಹೇಗೆ ಸಿದ್ಧಪಡಿಸಿಕೊಂಡಿದ್ದೀರಿ ಎಂದು ಹೇಳಿ?

ರಾಧಾ ಯಾದವ್: ಸರ್(ತರಬೇತುದಾರರು) ಹೇಳಿದಂತೆ, ನಾವು ಸ್ವಲ್ಪ ಸಮಯದಿಂದ ಉತ್ತಮ ಕ್ರಿಕೆಟ್ ಆಡುತ್ತಿದ್ದೇವೆ. ಫಿಟ್‌ನೆಸ್, ಫೀಲ್ಡಿಂಗ್ ಅಥವಾ ಕೌಶಲ್ಯದ ವಿಷಯದಲ್ಲಿ ಪ್ರತಿಯೊಂದು ರೀತಿಯ ಪರಿಸ್ಥಿತಿಗೂ ನಾವು ತಯಾರಿ ನಡೆಸುತ್ತಿದ್ದೆವು. ನಾವು ಬಹಳ ಸಮಯದಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆವು. ನಾನು ಹೇಳಿದಂತೆ, ಎಲ್ಲರೂ ಒಟ್ಟಿಗೆ ಇರುವಾಗ, ವಿಷಯಗಳು ಸುಲಭವಾಗುತ್ತವೆ. ಆದರೆ ಯಾರಾದರೂ ಒಬ್ಬಂಟಿಯಾಗಿ ಬಿಟ್ಟರೆ, ಆ ರೀತಿಯಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟಕರವಾಗುತ್ತದೆ.

ಪ್ರಧಾನಮಂತ್ರಿ: ಆದರೆ ನೀವು ಮೊದಲು ಬಹುಮಾನ ಪಡೆದಾಗ, ಅದನ್ನು ನಿಮ್ಮ ತಂದೆಗೆ ಸಹಾಯ ಮಾಡಲು ಖರ್ಚು ಮಾಡಿದ್ದೀರಿ ಎಂದು ನಾನು ಕೇಳಿದೆ.

ರಾಧಾ ಯಾದವ್: ಹೌದು, ಸರ್.

ಪ್ರಧಾನಮಂತ್ರಿ: ನಿಮ್ಮ ತಂದೆ ಯಾವಾಗಲೂ ನಿಮ್ಮನ್ನು ಸಂಪೂರ್ಣವಾಗಿ ಪ್ರೋತ್ಸಾಹಿಸುತ್ತಿದ್ದರಾ?

ರಾಧಾ ಯಾದವ್: ಹೌದು ಸರ್, ಎಲ್ಲಾ ಸಮಯದಲ್ಲೂ. ಆಗ ನಮ್ಮ ಕುಟುಂಬಕ್ಕೆ ಇದು ಸುಲಭವಾಗಿರಲಿಲ್ಲ, ಆದರೆ ನನ್ನ ತಂದೆ ಎಂದಿಗೂ ನನಗೆ ಹಾಗೆ ಅನಿಸುವಂತೆ ಮಾಡಲಿಲ್ಲ, ಮತ್ತು ನನ್ನ ತಾಯಿಯೂ ಹಾಗೆ ಮಾಡಲಿಲ್ಲ.

ಸ್ನೇಹ ರಾಣಾ: ಸರ್, ಇದೆಲ್ಲವೂ ವರ್ಷಗಳ ಕಠಿಣ ಪರಿಶ್ರಮದ ಫಲಿತಾಂಶ. ನಾನು ನನ್ನ ಬೌಲಿಂಗ್ ತರಬೇತುದಾರ ಆವಿಷ್ಕಾರ್ ಸರ್ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೆ. ನಿರ್ದಿಷ್ಟ ಬ್ಯಾಟರ್‌ಗಳನ್ನು ಹೇಗೆ ಎದುರಿಸಬೇಕೆಂದು ನಾವು ಚರ್ಚಿಸುತ್ತಿದ್ದೆವು. ಆ ಎಲ್ಲಾ ತಂತ್ರಗಳನ್ನು ನಾಯಕ, ಉಪನಾಯಕ ಮತ್ತು ಮುಖ್ಯ ತರಬೇತುದಾರರೊಂದಿಗೆ ರೂಪಿಸಲಾಗುತ್ತದೆ ಮತ್ತು ನಾವು ಅವುಗಳನ್ನು ಮೈದಾನದಲ್ಲಿ ಪುನರಾವರ್ತಿಸಲು ಪ್ರಯತ್ನಿಸಿದೆವು. ಅದೃಷ್ಟವಶಾತ್  ಹೆಚ್ಚಿನ ಸಮಯ, ಅವು ಕೆಲಸ ಮಾಡುತ್ತವೆ. ಸಹಜವಾಗಿ, ಯೋಜನೆಯಂತೆ ವಿಷಯಗಳು ನಡೆಯದ ಪಂದ್ಯಗಳಿವೆ, ಆದರೆ ಮುಂದಿನ ಬಾರಿ ಇನ್ನೂ ಉತ್ತಮವಾಗಿ ಮಾಡಲು ನಾವು ಯಾವಾಗಲೂ ನಮ್ಮನ್ನು ಪ್ರೇರೇಪಿಸುತ್ತೇವೆ.

ಉಮಾ ಚೆಟ್ರಿ: ಸರ್, ನಿಮ್ಮ ಮುಂದೆ ನಿಂತು ಏನು ಹೇಳಬೇಕೆಂದು ನನಗೆ ಪ್ರಾಮಾಣಿಕವಾಗಿ ತಿಳಿದಿಲ್ಲ.

ಪ್ರಧಾನಮಂತ್ರಿ: ಮನಸ್ಸಿಗೆ ಬಂದದ್ದನ್ನು ಹೇಳಿ.

ಉಮಾ ಚೆಟ್ರಿ: ಸರ್, ಅದು ನನ್ನ ಚೊಚ್ಚಲ ಪಂದ್ಯ. ನಾನು ಪ್ರತಿ ಬಾರಿ ಪದಾರ್ಪಣೆ ಮಾಡಿದಾಗ, ಹೇಗೋ ಮಳೆ ಬರುತ್ತದೆ! ಆ ದಿನವೂ ಅದು ಸಂಭವಿಸಿತು. ಮಳೆ ಬಂತು, ಆದ್ದರಿಂದ ನಾನು ವಿಕೆಟ್ ಕೀಪಿಂಗ್ ಮಾತ್ರ ಮಾಡಲು ಸಾಧ್ಯವಾಯಿತು. ಆದರೆ, ನಾನು ನಿಜವಾಗಿಯೂ ಸಂತೋಷಪಟ್ಟಿದ್ದೆ, ಏಕೆಂದರೆ ಭಾರತಕ್ಕಾಗಿ ಮತ್ತು ಅದು ಕೂಡ ವಿಶ್ವಕಪ್‌ನಲ್ಲಿ ಪದಾರ್ಪಣೆ ಮಾಡುವುದು ನನಗೆ ದೊಡ್ಡ ವಿಷಯವಾಗಿತ್ತು. ಆ ಪಂದ್ಯದ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೆ, ದೇಶಕ್ಕಾಗಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಿರ್ಧರಿಸಿದೆ. ನನ್ನ ಪ್ರಯತ್ನಗಳು ಭಾರತ ಗೆಲ್ಲಲು ಸಹಾಯ ಮಾಡುತ್ತವೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸಿದ್ದೆ. ಅತ್ಯುತ್ತಮ ಭಾಗವೆಂದರೆ ಇಡೀ ತಂಡವು ನನ್ನನ್ನು ನಂಬಿತ್ತು, ಎಲ್ಲರೂ ನನ್ನೊಂದಿಗೆ ಮಾತನಾಡಲು, ನನಗೆ ಮಾರ್ಗದರ್ಶನ ನೀಡಲು, ನನ್ನನ್ನು ಬೆಂಬಲಿಸಲು ಬರುತ್ತಿದ್ದರು, ಅದು ಬಹಳಷ್ಟು ಅರ್ಥವನ್ನು ನೀಡಿತು.

ಕೋಚ್: ಅವರು ಭಾರತಕ್ಕಾಗಿ ಆಡಿದ ಈಶಾನ್ಯದಿಂದ ಬಂದ ಮೊದಲ ಹುಡುಗಿ.

ಪ್ರಧಾನಮಂತ್ರಿ: ಅಸ್ಸಾಂನಿಂದ, ಸರಿಯೇ?

ರೇಣುಕಾ ಸಿಂಗ್ ಠಾಕೂರ್: ಹೌದು ಸರ್. ಡ್ರೆಸ್ಸಿಂಗ್ ಕೋಣೆಯ ವಾತಾವರಣವನ್ನು ಹಗುರವಾಗಿ ಮತ್ತು ಸಕಾರಾತ್ಮಕವಾಗಿಡಲು, ನಾವು ಏನಾದರೂ ಸೃಜನಾತ್ಮಕವಾಗಿ ಮಾಡಬೇಕೆಂದು ಯೋಚಿಸಿದೆವು. ಹಾಗಾಗಿ ನಾನು ನವಿಲನ್ನು ಚಿತ್ರಿಸಿದೆ, ಅದು ಸಕಾರಾತ್ಮಕತೆಯ ಸಂಕೇತವಾಗಿದೆ. ನಂತರ ನಾವು ಯೋಚಿಸಿದೆವು, ಇದನ್ನು ಇನ್ನೇನು ಇನ್ನಷ್ಟು ಆಸಕ್ತಿದಾಯಕವಾಗಿಸಬಹುದೆಂದು? ಸ್ಮೃತಿ ತನ್ನ ಅರ್ಧ ಶತಕ ಗಳಿಸಿದಾಗ, ನಾವು, "ಸರಿ, ಮುಂದೆ ನಾವು ನೂರಕ್ಕೆ ಹೋಗುತ್ತಿದ್ದೇವೆ!" ಎಂದು ಹೇಳಿದೆವು.

ಪ್ರಧಾನಮಂತ್ರಿ: ಹಾಗಾದರೆ, ನೀವು ಇಲ್ಲಿಗೆ ಬಂದಾಗ, ನೀವು ಎಲ್ಲೆಡೆ ನವಿಲುಗಳನ್ನು ನೋಡಿರಬೇಕು!

ರೇಣುಕಾ ಸಿಂಗ್ ಠಾಕೂರ್: ಹೌದು, ಸರ್! ನಾನು ಕೂಡ ಹೇಳಿದೆ.  ನಾನು ಇಲ್ಲಿ ಇನ್ನೊಂದನ್ನು ನೋಡಿದ್ದೇನೆ. ವಾಸ್ತವವಾಗಿ, ನವಿಲನ್ನು ಚಿತ್ರಿಸುವುದು ನನಗೆ ಹೇಗೆ ಮಾಡಬೇಕೆಂದು ತಿಳಿದಿರುವ ಏಕೈಕ ವಿಷಯ, ಆದ್ದರಿಂದ ನಾನು ಅದನ್ನು ಚಿತ್ರಿಸಿದೆ. ನನಗೆ ಬೇರೆ ಏನನ್ನೂ ಚಿತ್ರಿಸಲು ತಿಳಿದಿಲ್ಲ!

(ಇನ್ನೊಬ್ಬ ಆಟಗಾರ್ತಿ): ಮುಂದೆ, ಅವಳು ಪಕ್ಷಿಯನ್ನು ಚಿತ್ರಿಸಲು ಪ್ರಯತ್ನಿಸಿದಳು, ಆದರೆ ನಾವು ಅವಳಿಗೆ ಹಾಗೆ ಮಾಡಬಾರದೆಂದು ಹೇಳಿದೆವು!

ಪ್ರಧಾನಮಂತ್ರಿ: ಆದರೂ, ನಾನು ವಿಶೇಷವಾಗಿ ನಿಮ್ಮ ತಾಯಿಗೆ ನಮಸ್ಕರಿಸಬೇಕು. ಎಲ್ಲಾ ಕಷ್ಟಗಳ ಹೊರತಾಗಿಯೂ, ಅವರು ನಿಮ್ಮ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಒಂಟಿ ಪೋಷಕರಾಗಿಯೂ ಸಹ, ಅವರು ನಿಮ್ಮ ಜೀವನ ರೂಪಿಸಲು ಅವಿಶ್ರಾಂತವಾಗಿ ಶ್ರಮಿಸಿದರು, ಅದು ನಿಜಕ್ಕೂ ಗಮನಾರ್ಹವಾಗಿದೆ. ದಯವಿಟ್ಟು ಅವರಿಗೆ ನನ್ನ ಗೌರವಯುತ ನಮನಗಳನ್ನು ತಿಳಿಸಿ.

ರೇಣುಕಾ ಸಿಂಗ್ ಠಾಕೂರ್: ಹೌದು, ಸರ್, ನಾನು ಮಾಡುತ್ತೇನೆ.

ಅರುಂಧತಿ ರೆಡ್ಡಿ: ಸರ್, ಮೊದಲನೆಯದಾಗಿ, ನನ್ನ ತಾಯಿ ನಿಮಗೆ ಒಂದು ಸಂದೇಶ ನೀಡಬೇಕೆಂದು ಬಯಸಿದ್ದರು. ನಿಮ್ಮೊಂದಿಗೆ ಮಾತನಾಡಲು ನನಗೆ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ, ನೀವು ಅವರ ನಾಯಕ ಎಂದು ಹೇಳುವಂತೆ ನನಗೆ ಹೇಳಿದ್ದರು. ಅವರು ಈಗಾಗಲೇ ನನಗೆ ನಾಲ್ಕೈದು ಬಾರಿ ಕರೆ ಮಾಡಿದ್ದಾರೆ, "ನೀವು ನನ್ನ ನಾಯಕನನ್ನು ಯಾವಾಗ ಭೇಟಿಯಾಗುತ್ತೀರಿ? ನೀವು ನನ್ನ ನಾಯಕನನ್ನು ಯಾವಾಗ ಭೇಟಿಯಾಗುತ್ತೀರಿ? ಎಂದು"

ಪ್ರಧಾನಮಂತ್ರಿ: ನೀವು ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸಿದ್ದೀರಿ ಎಂದು ನಿಮಗೆ ಈಗ ಏನನಿಸುತ್ತದೆ, ರಾಷ್ಟ್ರವು ನಿಮ್ಮಿಂದ ಮುಂದೆ ಏನನ್ನು ನಿರೀಕ್ಷಿಸುತ್ತದೆ ಎಂದು ನೀವು ಭಾವಿಸುತ್ತೀರಿ? ನೀವು ಇನ್ನೇನು ಕೊಡುಗೆ ನೀಡಬಹುದು?

ಸ್ಮೃತಿ ಮಂಧಾನ: ಸರ್, ನಾವು ಯಾವುದೇ ವಿಶ್ವಕಪ್‌ಗೆ ಹೋದಾಗಲೆಲ್ಲಾ, ನಾವೆಲ್ಲರೂ ಮೊದಲು ಮಾತನಾಡುವುದು ವಿಶ್ವಕಪ್ ಗೆಲ್ಲುವುದು ಮಹಿಳಾ ಕ್ರಿಕೆಟ್ ಮೇಲೆ ಮಾತ್ರವಲ್ಲ, ಒಟ್ಟಾರೆಯಾಗಿ ಮಹಿಳಾ ಕ್ರೀಡೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ. ಇದು ಬೃಹತ್ ಪ್ರಮಾಣದಲ್ಲಿರುತ್ತದೆ ಮತ್ತು ಇದು ಭಾರತದಲ್ಲಿ ನಿಜವಾದ ಕ್ರಾಂತಿಯನ್ನು ಪ್ರಾರಂಭಿಸಬಹುದು. ಮುಂದುವರಿಯುತ್ತಾ, ನಮ್ಮ ಪ್ರಯತ್ನವು ಯಾವಾಗಲೂ ಮಹಿಳಾ ಕ್ರಿಕೆಟ್ ಅನ್ನು ಉನ್ನತೀಕರಿಸುವುದು ಮಾತ್ರವಲ್ಲ, ಭಾರತದಲ್ಲಿ ಮಹಿಳಾ ಕ್ರೀಡೆಗಳಲ್ಲಿ ಕ್ರಾಂತಿಯನ್ನುಂಟು ಮಾಡುವುದು. ಮತ್ತು ಈ ತಂಡವು ಅದನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ.

ಪ್ರಧಾನಮಂತ್ರಿ: ನೀವೆಲ್ಲರೂ ಇತರರಿಗೆ ಪ್ರೇರಣೆಯ ದೊಡ್ಡ ಸೆಲೆಯಾಗಬಹುದು ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಯಶಸ್ಸು ನಿಮಗೆ ಹೆಚ್ಚಿನ ಶಕ್ತಿ ನೀಡುತ್ತದೆ. ಉದಾಹರಣೆಗೆ, ನೀವು ಮನೆಗೆ ಹೋದಾಗ, ಸ್ವಾಭಾವಿಕವಾಗಿ ಆಚರಣೆಗಳು ಮತ್ತು ಉತ್ಸಾಹ ಇರುತ್ತದೆ. ಆದರೆ ಕೆಲವು ದಿನಗಳ ನಂತರ, ನೀವು ಓದಿದ ಶಾಲೆಗೆ, ನಿಮ್ಮ ಶಾಲೆಗೆ ಭೇಟಿ ನೀಡಿ. ಅಲ್ಲಿ ಕೇವಲ ಒಂದು ದಿನ ಕಳೆಯಿರಿ. ಮಕ್ಕಳೊಂದಿಗೆ ಮಾತನಾಡಿ. ಅವರು ನಿಮ್ಮಿಂದ ಎಲ್ಲಾ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಅವರೊಂದಿಗೆ ಮುಕ್ತವಾಗಿ ಸಂವಹನ ನಡೆಸಿ. ಶಾಲೆಯು ನಿಮ್ಮನ್ನು ಯಾವಾಗಲೂ ನೆನಪಿಸಿಕೊಳ್ಳುತ್ತದೆ, ಆ ಮಕ್ಕಳು ಆ ದಿನವನ್ನು ಎಂದಿಗೂ ಮರೆಯುವುದಿಲ್ಲ ಎಂಬುದು ನನಗೆ ಖಚಿತವಾಗಿದೆ. ನೀವು ಓದಿದ ಅದೇ ಶಾಲೆ. ನೀವು ಅನುಭವವನ್ನು ಆನಂದಿಸಿದರೆ, ನಂತರ 3 ಶಾಲೆಗಳನ್ನು ಆರಿಸಿ ಮತ್ತು ಒಂದು ವರ್ಷದಲ್ಲಿ, ಸಾಧ್ಯವಾದಾಗಲೆಲ್ಲಾ, ಪ್ರತಿಯೊಂದರಲ್ಲೂ ಒಂದು ದಿನ ಕಳೆಯಿರಿ. ನೀವು ನೋಡುತ್ತೀರಿ, ಅದು ಅವರಿಗೆ ಸ್ಫೂರ್ತಿ ನೀಡುವುದಲ್ಲದೆ, ಪ್ರತಿಯಾಗಿ ನಿಮ್ಮನ್ನು ಪ್ರೇರೇಪಿಸುತ್ತದೆ. ಎರಡನೆಯದಾಗಿ, ಫಿಟ್ ಇಂಡಿಯಾ ಚಳುವಳಿ ಇದೆ. ನಿಮಗೆ ತಿಳಿದಿರುವಂತೆ, ನಮ್ಮ ದೇಶದಲ್ಲಿ ಬೊಜ್ಜು ಒಂದು ಪ್ರಮುಖ ಸಮಸ್ಯೆಯಾಗುತ್ತಿದೆ. ಅದನ್ನು ಎದುರಿಸಲು ಫಿಟ್‌ನೆಸ್ ಉತ್ತಮ ಮಾರ್ಗವಾಗಿದೆ. ನಾನು ಯಾವಾಗಲೂ ಹೇಳುವಂತೆ, ನಿಮ್ಮ ಅಡುಗೆ ಎಣ್ಣೆಯ ಬಳಕೆಯನ್ನು 10% ಕಡಿಮೆ ಮಾಡುವಂತಹ ಸಣ್ಣ ವಿಷಯಗಳು ಸಹ ಮುಖ್ಯ. ನೀವು ಅದನ್ನು ಖರೀದಿಸುವಾಗ ಆ ಆಯ್ಕೆಯನ್ನು ಮಾಡಿ. ಜನರು ನಿಮ್ಮಿಂದ ಈ ಸಣ್ಣ, ಪ್ರಾಯೋಗಿಕ ಸಲಹೆಗಳನ್ನು ಕೇಳಿದಾಗ, ಅವರು ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ನೀವು ಯುವತಿಯರನ್ನು ಫಿಟ್ ಇಂಡಿಯಾ ಅಭಿಯಾನಕ್ಕೆ ಸೇರಲು ಪ್ರೋತ್ಸಾಹಿಸಿದರೆ, ಅದು ದೊಡ್ಡ ಬದಲಾವಣೆಯನ್ನು ತರುತ್ತದೆ. ಆದ್ದರಿಂದ, ನಿಮ್ಮೆಲ್ಲರೊಂದಿಗಿನ ಈ ಸಾಂದರ್ಭಿಕ, ಹೃತ್ಪೂರ್ವಕ ಸಂಭಾಷಣೆಯನ್ನು ನಾನು ನಿಜವಾಗಿಯೂ ಆನಂದಿಸಿದೆ. ನಿಮ್ಮಲ್ಲಿ ಕೆಲವರು ನಾನು ಮೊದಲು ಭೇಟಿಯಾಗಿದ್ದೇನೆ,, ಕೆಲವರು ಮೊದಲ ಬಾರಿಗೆ. ಆದರೆ ನಾನು ಯಾವಾಗಲೂ ನಿಮ್ಮೆಲ್ಲರನ್ನೂ ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ನಿಮಗೆ(ಪ್ರತಿಕಾ), ನೀವು ಬೇಗ ಗುಣಮುಖರಾಗಬೇಕೆಂದು ನಾನು ಬಯಸುತ್ತೇನೆ.

ಸ್ಮೃತಿ ಮಂಧಾನ: ಸರ್, ನೀವು ಹೇಳಿದ್ದನ್ನು ನಾವು ಖಂಡಿತವಾಗಿಯೂ ನೆನಪಿಸಿಕೊಳ್ಳುತ್ತೇವೆ. ಜನರೊಂದಿಗೆ ಮಾತನಾಡಲು ನಮಗೆ ಅವಕಾಶ ಸಿಕ್ಕಾಗಲೆಲ್ಲಾ, ನಾವು ಈ ಸಂದೇಶವನ್ನು ರವಾನಿಸುತ್ತೇವೆ. ನಮ್ಮ ಇಡೀ ತಂಡದಿಂದ, ಸರ್, ನೀವು ಎಂದಾದರೂ ಈ ಸಂದೇಶವನ್ನು ಎಲ್ಲಿಯಾದರೂ ಹರಡಬೇಕಾದರೆ, ನಮಗೆ ಕರೆ ಮಾಡಿ, ನಾವು ಯಾವುದೇ ಸಮಯದಲ್ಲಿ ಇರುತ್ತೇವೆ, ಏಕೆಂದರೆ ಇದು ಒಂದು ಪ್ರಮುಖ ಕಾರಣವಾಗಿದೆ.

ಪ್ರಧಾನಮಂತ್ರಿ: ನಾವೆಲ್ಲರೂ ಒಟ್ಟಾಗಿ ಸೇರಿ ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು.

ಸ್ಮೃತಿ ಮಂಧಾನ: ಹೌದು, ಸರ್.

ಪ್ರಧಾನಮಂತ್ರಿ: ಸರಿ. ನಿಮ್ಮೆಲ್ಲರಿಗೂ ಅನೇಕ, ಅನೇಕ ಶುಭಾಶಯಗಳು, ತುಂಬು ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's electronics exports cross $47 billion in 2025 on iPhone push

Media Coverage

India's electronics exports cross $47 billion in 2025 on iPhone push
NM on the go

Nm on the go

Always be the first to hear from the PM. Get the App Now!
...
List of Outcomes: Visit of His Highness Sheikh Mohamed bin Zayed Al Nahyan, President of UAE to India
January 19, 2026
S.NoAgreements / MoUs / LoIsObjectives

1

Letter of Intent on Investment Cooperation between the Government of Gujarat, Republic of India and the Ministry of Investment of the United Arab Emirates for Development of Dholera Special Investment region

To pursue investment cooperation for UAE partnership in development of the Special Investment Region in Dholera, Gujarat. The envisioned partnership would include the development of key strategic infrastructure, including an international airport, a pilot training school, a maintenance, repair and overhaul (MRO) facility, a greenfield port, a smart urban township, railway connectivity, and energy infrastructure.

2

Letter of Intent between the Indian National Space Promotion and Authorisation Centre (IN-SPACe) of India and the Space Agency of the United Arab Emirates for a Joint Initiative to Enable Space Industry Development and Commercial Collaboration

To pursue India-UAE partnership in developing joint infrastructure for space and commercialization, including launch complexes, manufacturing and technology zones, incubation centre and accelerator for space start-ups, training institute and exchange programmes.

3

Letter of Intent between the Republic of India and the United Arab Emirates on the Strategic Defence Partnership

Work together to establish Strategic Defence Partnership Framework Agreement and expand defence cooperation across a number of areas, including defence industrial collaboration, defence innovation and advanced technology, training, education and doctrine, special operations and interoperability, cyber space, counter terrorism.

4

Sales & Purchase Agreement (SPA) between Hindustan Petroleum Corporation Limited, (HPCL) and the Abu Dhabi National Oil Company Gas (ADNOC Gas)

The long-term Agreement provides for purchase of 0.5 MMPTA LNG by HPCL from ADNOC Gas over a period of 10 years starting from 2028.

5

MoU on Food Safety and Technical requirements between Agricultural and Processed Food Products Export Development Authority (APEDA), Ministry of Commerce and Industry of India, and the Ministry of Climate Change and Environment of the United Arab Emirates.

The MoU provides for sanitary and quality parameters to facilitate the trade, exchange, promotion of cooperation in the food sector, and to encourage rice, food products and other agricultural products exports from India to UAE. It will benefit the farmers from India and contribute to food security of the UAE.

S.NoAnnouncementsObjective

6

Establishment of a supercomputing cluster in India.

It has been agreed in principle that C-DAC India and G-42 company of the UAE will collaborate to set up a supercomputing cluster in India. The initiative will be part of the AI India Mission and once established the facility be available to private and public sector for research, application development and commercial use.

7

Double bilateral Trade to US$ 200 billion by 2032

The two sides agreed to double bilateral trade to over US$ 200 billion by 2032. The focus will also be on linking MSME industries on both sides and promote new markets through initiatives like Bharat Mart, Virtual Trade Corridor and Bharat-Africa Setu.

8

Promote bilateral Civil Nuclear Cooperation

To capitalise on the new opportunities created by the Sustainable Harnessing and Advancement of Nuclear Energy for Transforming India (SHANTI) Act 2025, it was agreed to develop a partnership in advance nuclear technologies, including development and deployment of large nuclear reactors and Small Modular Reactors (SMRs) and cooperation in advance reactor systems, nuclear power plant operations and maintenance, and Nuclear Safety.

9

Setting up of offices and operations of UAE companies –First Abu Dhabi Bank (FAB) and DP World in the GIFT City in Gujarat

The First Abu Dhabi Bank will have a branch in GIFT that will promote trade and investment ties. DP World will have operations from the GIFT City, including for leasing of ships for its global operations.

10

Explore Establishment of ‘Digital/ Data Embassies’

It has been agreed that both sides would explore the possibility of setting up Digital Embassies under mutually recognised sovereignty arrangements.

11

Establishment of a ‘House of India’ in Abu Dhabi

It has been agreed in Principle that India and UAE will cooperate on a flagship project to establish a cultural space consisting of, among others, a museum of Indian art, heritage and archaeology in Abu Dhabi.

12

Promotion of Youth Exchanges

It has been agreed in principle to work towards arranging visits of a group of youth delegates from either country to foster deeper understanding, academic and research collaboration, and cultural bonds between the future generations.