ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆದರ್ಶಗಳು ಮತ್ತು ಭಾರತದ ಸ್ವಾತಂತ್ರ್ಯಕ್ಕಾಗಿ ಅಚಲವಾದ ಸಮರ್ಪಣೆ ನಮಗೆ ಸ್ಫೂರ್ತಿ ನೀಡುತ್ತಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯ ಅಂಗವಾಗಿ ಆಚರಿಸಿರುವ "ಪರಾಕ್ರಮ್ ದಿವಸ್" ಸಂದರ್ಭದಲ್ಲಿ ಇಂದು ಭಾಷಣವನ್ನು ಮಾಡಿದರು. 

ವೀಡಿಯೋ ಸಂದೇಶ ನೀಡಿದ ಪ್ರಧಾನಮಂತ್ರಿಗಳು ಜನತೆಗೆ ಶುಭಾಶಯ ಕೋರಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಇಂದು ಇಡೀ ರಾಷ್ಟ್ರವು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದೆ. ನೇತಾಜಿ ಸುಭಾಸ್ ಬೋಸ್ ಅವರಿಗೆ ಗೌರವ ಸಲ್ಲಿಸಿದ ಶ್ರೀ ಮೋದಿ, ಈ ವರ್ಷದ ಪರಾಕ್ರಮ್ ದಿವಸ್‌ನ ಭವ್ಯವಾದ ಆಚರಣೆಯನ್ನು ಅವರ ಜನ್ಮಸ್ಥಳ ಒಡಿಶಾದಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಒಡಿಶಾದ ಜನತೆಗೆ ಮತ್ತು ಸರ್ಕಾರವನ್ನು ಅಭಿನಂದಿಸಿದರು. ಒಡಿಶಾದ ಕಟಕ್‌ನಲ್ಲಿ ನೇತಾಜಿಯವರ ಜೀವನ ಪರಂಪರೆಯ ಆಧಾರದ ಮೇಲೆ ಬೃಹತ್ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಲವಾರು ಕಲಾವಿದರು ನೇತಾಜಿಯವರ ಜೀವನಕ್ಕೆ ಸಂಬಂಧಿಸಿದ ಘಟನೆಗಳನ್ನು ಕ್ಯಾನ್ವಾಸ್‌ನಲ್ಲಿ ಚಿತ್ರಿಸಿದ್ದಾರೆ. ಅಲ್ಲದೇ ನೇತಾಜಿಯವರ ಕುರಿತಾದ ಅನೇಕ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ನೇತಾಜಿಯವರ ಜೀವನ ಪಯಣದ ಈ ಎಲ್ಲ ಪರಂಪರೆಗಳು ನಮ್ಮ ಯುವ ಭಾರತ ಅಥವಾ ಮೈ ಭಾರತ್‌ಗೆ ಹೊಸ ಶಕ್ತಿ ನೀಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

"ಇಂದು ನಾವು ಅಭಿವೃದ್ಧಿ ಹೊಂದಿದ ಭಾರತದ (ವಿಕಸಿತ ಭಾರತ) ಸಂಕಲ್ಪವನ್ನು ಸಾಧಿಸಲು ಮುಂದಾಗಿರುವಾಗ, ನೇತಾಜಿ ಸುಭಾಷ್‌ ಅವರ ಜೀವನ ಪರಂಪರೆಯು ನಮಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತದೆ". ನೇತಾಜಿ ಸುಭಾಷ್‌ ಬೋಸ್ ಅವರ ಪ್ರಮುಖ ಗುರಿ ಆಜಾದ್ ಹಿಂದ್ ಆಗಿತ್ತು. ಈ ಸಂಕಲ್ಪವನ್ನು ಸಾಧಿಸಲು, ಆಜಾದ್ ಹಿಂದ್ ಎಂಬ ಒಂದೇ ಮಾನದಂಡದಲ್ಲಿ ಅವರು ತಮ್ಮ ನಿರ್ಧಾರದೊಂದಿಗೆ ದೃಢವಾಗಿ ನಿಂತರು. ನೇತಾಜಿ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದರು ಮತ್ತು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು, ಅವರು ಬ್ರಿಟಿಷ್ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿ ಮತ್ತು ನೆಮ್ಮದಿಯ ಜೀವನವನ್ನು ನಡೆಸಬಹುದಿತ್ತು. ಆದಾಗ್ಯೂ, ಭಾರತ ಮತ್ತು ಇತರ ದೇಶಗಳಲ್ಲಿ ಅಲೆದಾಡುವುದರೊಂದಿಗೆ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ನೇತಾಜಿ ಕಷ್ಟಗಳು ಮತ್ತು ಸವಾಲುಗಳ ಹಾದಿಯನ್ನು ಆರಿಸಿಕೊಂಡರು. "ನೇತಾಜಿ ಸುಭಾಷ್‌ ಅವರು ಆರಾಮ ವಲಯದ ಸೌಕರ್ಯಗಳಿಗೆ ಬದ್ಧರಾಗಿರಲಿಲ್ಲ". "ಇಂದು, ನಾವೆಲ್ಲರೂ ವಿಕಸಿತ್ ಭಾರತವನ್ನು ನಿರ್ಮಿಸಲು ನಮ್ಮ ಸೌಕರ್ಯ ವಲಯಗಳಿಂದ ಹೊರಬರಬೇಕಾಗಿದೆ" ಎಂದು ಪ್ರಧಾನಮಂತ್ರಿ ಒತ್ತಾಯಿಸಿದರು. 

 

ಜಾಗತಿಕವಾಗಿ ಅತ್ಯುತ್ತಮವಾಗುವುದರ ಮಹತ್ವವನ್ನು ಒತ್ತಿಹೇಳಿದರು, ಶ್ರೇಷ್ಠತೆಯನ್ನು ಆರಿಸಿಕೊಳ್ಳುವುದು ಮತ್ತು ದಕ್ಷತೆಯ ಮೇಲೆ ಕೇಂದ್ರೀಕರಿಸುವುದು ಮುಖ್ಯ. ದೇಶದ ಸ್ವಾತಂತ್ರ್ಯಕ್ಕಾಗಿ ನೇತಾಜಿ ಅವರು ಆಜಾದ್ ಹಿಂದ್ ಫೌಜ್ ಅನ್ನು ರಚಿಸಿದರು, ಪ್ರತಿ ಪ್ರದೇಶ ಮತ್ತು ವರ್ಗದ ವೀರ ಪುರುಷರು ಮತ್ತು ಮಹಿಳೆಯರನ್ನು ಒಳಗೊಂಡಂತೆ, ವಿವಿಧ ಭಾಷೆಗಳನ್ನು ಹೊಂದಿದ್ದರೂ, ಅವರ ಸಾಮಾನ್ಯ ಭಾವನೆ ದೇಶದ ಸ್ವಾತಂತ್ರ್ಯವಾಗಿತ್ತು. ಈ ಏಕತೆ ಇಂದು ವಿಕಸತ ಭಾರತಕ್ಕೆ ಮಹತ್ವದ ಪಾಠವಾಗಿದೆ. ಅಂದು ಸ್ವರಾಜ್ಯಕ್ಕೆ ಒಗ್ಗಟ್ಟು ಎಷ್ಟು ಅಗತ್ಯವೋ, ಈಗ ವಿಕಿಸಿತ ಭಾರತ್‌ಗೆ ಅದು ನಿರ್ಣಾಯಕವಾಗಿದೆ. ಜಾಗತಿಕವಾಗಿ ಭಾರತದ ಪ್ರಗತಿಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುತ್ತಿದ್ದೇವೆ. 21ನೇ ಶತಮಾನವನ್ನು ಭಾರತ ಹೇಗೆ ತನ್ನದಾಗಿಸಿಕೊಳ್ಳುತ್ತದೆ ಎಂಬುದನ್ನು ಜಗತ್ತು ಗಮನಿಸುತ್ತಿದೆ. ನೇತಾಜಿ ಸುಭಾಷ್‌ ಅವರಿಂದ ಸ್ಫೂರ್ತಿ ಪಡೆಯುವ ಮತ್ತು ಭಾರತದ ಏಕತೆಯ ಮೇಲೆ ಕೇಂದ್ರೀಕರಿಸುವ ಮಹತ್ವವನ್ನು ನಾವು ಅನುಸರಿಸಬೇಕಾಗಿದೆ. ದೇಶವನ್ನು ದುರ್ಬಲಗೊಳಿಸಲು ಮತ್ತು ಅದರ ಏಕತೆಗೆ ಭಂಗ ತರಲು ಯತ್ನಿಸುವವರ ವಿರುದ್ಧ ಜಾಗರೂಕರಾಗಿರಿ ಎಂದು ಪ್ರಧಾನಿ ಎಚ್ಚರಿಸಿದರು.

ನೇತಾಜಿ ಸುಭಾಷ್‌ ಅವರು ಭಾರತದ ಪರಂಪರೆಯ ಬಗ್ಗೆ, ಭಾರತದ ಶ್ರೀಮಂತ ಪ್ರಜಾಪ್ರಭುತ್ವದ ಇತಿಹಾಸದ ಬಗ್ಗೆ, ಅದರಿಂದ ಸ್ಫೂರ್ತಿ ಪಡೆಯುವ ಬಗ್ಗೆ ಜನರನ್ನು ಸದಾ ಉತ್ತೇಜಿಸುತ್ತಿದ್ದರು. ಇಂದು ಭಾರತವು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುತ್ತಿದೆ ಮತ್ತು ತನ್ನ ಪರಂಪರೆಯ ಬಗ್ಗೆ ಹೆಮ್ಮೆಯಿಂದ ಅಭಿವೃದ್ಧಿ ಹೊಂದುತ್ತಿದೆ ಎಂದರು.

 

ಆಜಾದ್ ಹಿಂದ್ ಸರ್ಕಾರದ 75ನೇ ವಾರ್ಷಿಕೋತ್ಸವದಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಪ್ರಧಾನ ಮಂತ್ರಿ ಅವರು ತಮ್ಮ ಗೌರವವನ್ನು ವ್ಯಕ್ತಪಡಿಸಿದರು, ಇದು ಮರೆಯಲಾಗದ ಐತಿಹಾಸಿಕ ಸಂದರ್ಭವಾಗಿದೆ. ನೇತಾಜಿಯವರ ಪರಂಪರೆಯಿಂದ ಪ್ರೇರಿತರಾಗಿ, ಸರ್ಕಾರವು 2019ರಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ನೇತಾಜಿ ಸುಭಾಷ್‌ಗೆ ಮೀಸಲಾದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿತು, ಜೊತೆಗೆ ಅದೇ ವರ್ಷದಲ್ಲಿ ಸುಭಾಷ್‌ ಚಂದ್ರ ಬೋಸ್ ವಿಪತ್ತು ನಿರ್ವಹಣಾ ಪ್ರಶಸ್ತಿಗಳನ್ನು ಪ್ರಾರಂಭಿಸಿತು. "2021ರಲ್ಲಿ, ನೇತಾಜಿ ಅವರ ಜನ್ಮದಿನವನ್ನು ಪರಾಕ್ರಮ್ ದಿವಸ್ ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ" ಎಂದು ಶ್ರೀ ಮೋದಿ ಹೇಳಿದರು.

ಇಂಡಿಯಾ ಗೇಟ್ ಬಳಿ ನೇತಾಜಿ ಅವರ ಭವ್ಯ ಪ್ರತಿಮೆ ಸ್ಥಾಪನೆ, ಅಂಡಮಾನ್‌ನಲ್ಲಿರುವ ದ್ವೀಪಕ್ಕೆ ನೇತಾಜಿ ಹೆಸರಿಡುವುದು ಮತ್ತು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಐಎನ್‌ಎ ಸೈನಿಕರಿಗೆ ವಂದನೆ ಸಲ್ಲಿಸುವುದು. ಅವರ ಪರಂಪರೆಯನ್ನು ಗೌರವಿಸುವ ಸರ್ಕಾರದ ಬದ್ಧತೆಯನ್ನು ಸಂಕೇತಿಸುತ್ತದೆ ಎಂದರು.

"ಕಳೆದ 10 ವರ್ಷಗಳಲ್ಲಿ, ಕ್ಷಿಪ್ರ ಅಭಿವೃದ್ಧಿಯು ಸಾಮಾನ್ಯರ ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ಮಿಲಿಟರಿ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ದೇಶವು ಪ್ರದರ್ಶಿಸಿದೆ". ಕಳೆದ ದಶಕದಲ್ಲಿ 25 ಕೋಟಿ ಭಾರತೀಯರನ್ನು ಬಡತನದಿಂದ ಹೊರತರಲಾಗಿದ್ದು, ಇದು ದೊಡ್ಡ ಯಶಸ್ಸು. ಹಳ್ಳಿ ಅಥವಾ ನಗರವೇ ಆಗಿರಲಿ ಎಲ್ಲೆಡೆ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಭಾರತೀಯ ಸೇನೆಯ ಬಲದಲ್ಲಿ ಅಭೂತಪೂರ್ವ ಹೆಚ್ಚಳ ಮತ್ತು ವಿಶ್ವ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರ ಮಹತ್ವದ್ದಾಗಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ದಿನ ದೂರವಿಲ್ಲ. ನೇತಾಜಿ ಸುಭಾಷರಿಂದ ಪ್ರೇರಿತರಾಗಿ ಒಂದೇ ಗುರಿ, ಒಂದೇ ಗುರಿಯೊಂದಿಗೆ ವಿಕಸಿತ ಭಾರತಕ್ಕಾಗಿ ನಿರಂತರವಾಗಿ ಶ್ರಮಿಸಬೇಕು. ಇದು ನೇತಾಜಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭ ಹಾರೈಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Government eases defence export SOP to help local manufacturers tap global market

Media Coverage

Government eases defence export SOP to help local manufacturers tap global market
NM on the go

Nm on the go

Always be the first to hear from the PM. Get the App Now!
...
Prime Minister extends greetings on National Sports Day
August 29, 2026

The Prime Minister, Shri Narendra Modi has extended his greetings to all sports lovers on National Sports Day. Shri Modi said that the dedication, passion and determination of sportspersons make the entire nation proud.

The Prime Minister also paid homage to the legendary Major Dhyan Chand Ji, whose brilliance and contribution to Indian hockey continue to inspire generations.

Shri Modi posted on X:

“To every sports lover…your dedication, passion and determination make everyone proud.

We also pay homage to the legendary Major Dhyan Chand Ji, whose brilliance inspires generations.

#NationalSportsDay”