ಸ್ವಾಮಿ ವಿವೇಕಾನಂದರ ಪ್ರಭಾವ ಮತ್ತು ವರ್ಚಸ್ಸು ನಮ್ಮ ರಾಷ್ಟ್ರೀಯ ಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ
ರಾಜಕೀಯದಲ್ಲಿ ನಿಸ್ವಾರ್ಥ ಮತ್ತು ರಚನಾತ್ಮಕ ಕೊಡುಗೆ ನೀಡುವಂತೆ ಯುವಕರಿಗೆ ಕರೆ
ರಾಜಕೀಯ ವಂಶಾಡಳಿತ, ಸಾಮಾಜಿಕ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣ: ಪ್ರಧಾನಮಂತ್ರಿ

ನಮಸ್ಕಾರ!

ಮೊದಲನೆಯದಾಗಿ, ಪ್ರಸ್ತುತಿಯನ್ನು ಅತ್ಯಂತ ಪರಿಣಾಮಕಾರಿ, ನಿರರ್ಗಳವಾಗಿ ಮತ್ತು ನಿಖರವಾಗಿ ಮಾಡಿದ ಈ ಮೂವರು ಯುವಕರನ್ನು ನಾನು ಹೃದಯದಾಳದಿಂದ ಅಭಿನಂದಿಸುತ್ತೇನೆ. ಅವರ ವ್ಯಕ್ತಿತ್ವವು ಆತ್ಮವಿಶ್ವಾಸದಿಂದ ತುಂಬಿತ್ತು. ಈ ಮೂವರು ಯುವ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಜಿ, ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಲ್ ನಿಶಾಂಕ್‌ ಜಿ, ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರಾದ ಶ್ರೀ ಕಿರೆನ್ ರಿಜಿಜುಜಿ ಮತ್ತು ದೇಶಾದ್ಯಂತದ ನನ್ನ ಯುವ ಸಹೋದ್ಯೋಗಿಗಳೇ ನಿಮಗೆಲ್ಲರಿಗೂ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಇಂದು ನಮ್ಮೆಲ್ಲರಿಗೂ ಹೊಸ ಸ್ಫೂರ್ತಿ ನೀಡುತ್ತದೆ. ಈ ಬಾರಿ ಯುವ ಸಂಸತ್ತು ದೇಶದ ಸಂಸತ್ತಿನ ಕೇಂದ್ರ ಸಭಾಂಗಣದಲ್ಲಿ ನಡೆಯುತ್ತಿರುವುದು ಇಂದು ವಿಶೇಷವಾಗಿದೆ. ಈ ಕೇಂದ್ರ ಸಭಾಂಗಣವು ನಮ್ಮ ಸಂವಿಧಾನದ ಸಾಕ್ಷಿಯಾಗಿದೆ. ದೇಶದ ಅನೇಕ ಮಹಾನ್ ವ್ಯಕ್ತಿಗಳು ಇಲ್ಲಿ ಸ್ವತಂತ್ರ ಭಾರತಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಂಡರು ಮತ್ತು ಭಾರತದ ಭವಿಷ್ಯದ ಬಗ್ಗೆ ಚಿಂತಿಸಿದರು. ಭವಿಷ್ಯದ ಭಾರತದ ಬಗ್ಗೆ ಅವರ ಕನಸು, ಅವರ ಸಮರ್ಪಣೆ, ಧೈರ್ಯ, ಶಕ್ತಿ ಮತ್ತು ಪ್ರಯತ್ನಗಳು ಇನ್ನೂ ಸೆಂಟ್ರಲ್ ಹಾಲ್‌ನಲ್ಲಿ ಪ್ರತಿಧ್ವನಿಸುತ್ತವೆ. ಮತ್ತು, ಸ್ನೇಹಿತರೇ, ನೀವು ಇಂದು ಕುಳಿತಿರುವ ಆಸನಗಳು ಸಂವಿಧಾನವನ್ನು ರಚಿಸುವ ಪ್ರಕ್ರಿಯೆ ನಡೆಯುತ್ತಿರುವಾಗ ಈ ದೇಶದ ಕೆಲವು ಶ್ರೇಷ್ಠ ವ್ಯಕ್ತಿಗಳು ಕುಳಿತಿದ್ದ ಆಸನಗಳು. ನೀವು ಕುಳಿತಿರುವ ಆಸನವನ್ನು ಒಮ್ಮೆ ದೇಶದ ಶ್ರೇಷ್ಠರು ಬಳಸುತ್ತಿದ್ದರು ಎನ್ನುವುದನ್ನು ಊಹಿಸಿ. ದೇಶವು ನಿಮ್ಮಿಂದ ಹಲವು ನಿರೀಕ್ಷೆಗಳನ್ನು ಹೊಂದಿದೆ. ಈಗ ಸೆಂಟ್ರಲ್ ಹಾಲ್ನಲ್ಲಿ ಕುಳಿತಿರುವ ಎಲ್ಲಾ ಯುವ ಸಹೋದ್ಯೋಗಿಗಳು ಸಹ ಅದೇ ಭಾವನೆ ಹೊಂದಿರುವರು ಎಂದು ನನಗೆ ವಿಶ್ವಾಸವಿದೆ.

ನೀವು ಇಲ್ಲಿ ಮಾಡಿದ ಚರ್ಚೆಗಳು ಮತ್ತು ಮಂಥನದ ಅವಧಿಗಳು ಸಹ ಬಹಳ ಮುಖ್ಯ. ಸ್ಪರ್ಧೆಯ ವಿಜೇತರಿಗೆ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ. ಮತ್ತು ನಾನು ನಿಮ್ಮ ಮಾತನ್ನು ಕೇಳುತ್ತಿರುವಾಗ, ನನಗೆ ಒಂದು ಆಲೋಚನೆ ಹೊಳೆಯಿತು ಮತ್ತು ಆದ್ದರಿಂದ, ನಾನು ಇಂದು ನಿಮ್ಮ ಟ್ವಿಟ್ಟರ್ ಹ್ಯಾಂಡಲ್‌ನಿಂದ ನಿಮ್ಮ ಭಾಷಣಗಳನ್ನು ಟ್ವೀಟ್ ಮಾಡಬೇಕೆಂದು ನಿರ್ಧರಿಸಿದೆ. ಮತ್ತು ನಾನು ನಿಮ್ಮ ಮೂವರ ಭಾಷಣಗಳನ್ನು ಮಾತ್ರ ಟ್ವೀಟ್ ಮಾಡುತ್ತೇನೆ ಎಂದಲ್ಲ. ರೆಕಾರ್ಡ್ ಮಾಡಲಾದ ವಸ್ತುಗಳು ಲಭ್ಯವಿದ್ದರೆ, ಫೈನಲ್‌ನಲ್ಲಿದ್ದ ಎಲ್ಲರ ಭಾಷಣಗಳನ್ನು ಸಹ ನಾನು ಟ್ವೀಟ್ ಮಾಡುತ್ತೇನೆ, ಇದರಿಂದಾಗಿ ಈ ಸಂಸತ್ತು ಸಂಕೀರ್ಣದಲ್ಲಿ ನಮ್ಮ ಭವಿಷ್ಯದ ಭಾರತ ಹೇಗೆ ರೂಪ ಪಡೆಯುತ್ತಿದೆ ಎನ್ನುವುದು ದೇಶಕ್ಕೆ ತಿಳಿಯುತ್ತದೆ. ಇಂದು ನಿಮ್ಮ ಭಾಷಣವನ್ನು ಟ್ವೀಟ್ ಮಾಡುವುದು ನನಗೆ ಬಹಳ ಹೆಮ್ಮೆಯ ವಿಷಯವಾಗಿದೆ.

ಸ್ನೇಹಿತರೇ,

ಸ್ವಾಮೀಜಿ ದೇಶ ಮತ್ತು ಸಮಾಜಕ್ಕೆ ನೀಡಿರುವುದು ಸಮಯ ಮತ್ತು ಸ್ಥಳವನ್ನು ಮೀರಿದ್ದು, ಪ್ರತಿ ಪೀಳಿಗೆಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡಲಿದೆ. ಭಾರತದಲ್ಲಿ ಯಾವುದೇ ಹಳ್ಳಿ, ನಗರ ಅಥವಾ ವ್ಯಕ್ತಿಯು ಸ್ವಾಮೀಜಿಯೊಂದಿಗೆ ಸಂಪರ್ಕ ಹೊಂದಿದೆ ಮತ್ತು ಅವರಿಂದ ಪ್ರೇರಿತರಾಗಿವೆ ಎನ್ನುವುದನ್ನು ನೀವು ಗಮನಿಸಿರಬೇಕು. ಸ್ವಾಮೀಜಿಯ ಪ್ರೇರಣೆಯು ಸ್ವಾತಂತ್ರ್ಯ ಸಂಗ್ರಾಮಕ್ಕೂ ಹೊಸ ಚೈತನ್ಯವನ್ನು ನೀಡಿತು. ಅಧೀನತೆಯ ದೀರ್ಘಾವಧಿಯು ಭಾರತವನ್ನು ತನ್ನ ಸಾವಿರಾರು ವರ್ಷಗಳ ಬಲದ ಅರ್ಥದಿಂದ ಸಂಪರ್ಕ ಕಡಿತಗೊಳಿಸಿತ್ತು. ಸ್ವಾಮಿ ವಿವೇಕಾನಂದರು ಭಾರತಕ್ಕೆ ತನ್ನ ಶಕ್ತಿಯನ್ನು ನೆನಪಿಸಿದರು, ಅದನ್ನು ಅರಿತುಕೊಂಡರು, ಮನಸ್ಸನ್ನು ಪುನರುಜ್ಜೀವನಗೊಳಿಸಿದರು ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದರು. ಆ ಸಮಯದಲ್ಲಿ ಕ್ರಾಂತಿಯ ಹಾದಿಯ ಮೂಲಕ ಅಥವಾ ಶಾಂತಿಯ ಮೂಲಕ ಸ್ವಾತಂತ್ರ್ಯಕ್ಕಾಗಿ ಯುದ್ಧ ಮಾಡುತ್ತಿದ್ದ ಜನರು ಸ್ವಾಮಿ ವಿವೇಕಾನಂದಜಿಯಿಂದ ಪ್ರೇರಿತರಾಗಿದ್ದರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಬಂಧನದ ಸಮಯದಲ್ಲಿ, ಸ್ವಾಮೀಜಿಗೆ ಸಂಬಂಧಿಸಿದ ಸಾಹಿತ್ಯ ಖಂಡಿತವಾಗಿಯೂ ಪೊಲೀಸರನ್ನು ತಲುಪಿತು. ನಂತರ ದೇಶಭಕ್ತಿ, ರಾಷ್ಟ್ರ ನಿರ್ಮಾಣ ಮತ್ತು ಸ್ವಾತಂತ್ರ್ಯದ ಕಾರಣಕ್ಕಾಗಿ ಪ್ರಾಣತ್ಯಾಗ ಮಾಡಲು ಜನರನ್ನು ಪ್ರೇರೇಪಿಸುವ ಸ್ವಾಮಿ ವಿವೇಕಾನಂದಜಿಯವರ ಆಲೋಚನೆಗಳಲ್ಲಿ ಏನಿದೆ ಮತ್ತು ಅದು ಪ್ರತಿಯೊಬ್ಬ ಯುವಕನ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಅಧ್ಯಯನ ಮಾಡಲಾಯಿತು. ಸಮಯ ಕಳೆಯಿತು ಮತ್ತು ದೇಶವು ಮುಕ್ತವಾಯಿತು, ಆದರೆ ಸ್ವಾಮೀಜಿ ನಮ್ಮ ನಡುವೆ ಇದ್ದಾರೆ, ಪ್ರತಿ ಕ್ಷಣವೂ ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ಅವರ ಆಲೋಚನಾ ಪ್ರಕ್ರಿಯೆಯಲ್ಲಿ ಎಲ್ಲೋ ಗೋಚರಿಸುತ್ತದೆ. ಆಧ್ಯಾತ್ಮಿಕತೆಯ ಬಗ್ಗೆ ಅವರು ಏನು ಹೇಳಿದರು, ರಾಷ್ಟ್ರೀಯತೆ, ರಾಷ್ಟ್ರ ನಿರ್ಮಾಣ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸೇವೆಯಿಂದ ಮಾನವೀಯತೆಯ ಸೇವೆಯ ಬಗ್ಗೆ ಅವರ ಆಲೋಚನೆಗಳು ನಮ್ಮ ಹೃದಯದಲ್ಲಿ ಹರಿಯುತ್ತಲೇ ಇವೆ. ನಿಮ್ಮ ಸಹೋದ್ಯೋಗಿಗಳು ಸಹ ಅದೇ ಭಾವನೆ ಹೊಂದಿರಬೇಕು ಎಂದು ನನಗೆ ವಿಶ್ವಾಸವಿದೆ. ನೀವು ಊಹಿಸಿದ್ದೀರಿ ಎಂದು ನಂಬಿದ್ದರೂ, ವಿವೇಕಾನಂದಜಿಯ ಚಿತ್ರಗಳನ್ನು ನೋಡಿದಾಗಲೆಲ್ಲಾ ನಿಮ್ಮೊಳಗೆ ಗೌರವದ ಭಾವನೆ ಬೆಳೆಯುತ್ತದೆ ಮತ್ತು ಶಿರಭಾಗುತ್ತದೆ.

ಸ್ನೇಹಿತರೇ,

ಸ್ವಾಮಿ ವಿವೇಕಾನಂದರು ಮತ್ತೊಂದು ಅಮೂಲ್ಯ ಉಡುಗೊರೆಯನ್ನು ನೀಡಿದ್ದಾರೆ. ಈ ಉಡುಗೊರೆ ವ್ಯಕ್ತಿಗಳು ಮತ್ತು ಸಂಸ್ಥೆಗಳ ಸೃಷ್ಟಿಯಾಗಿದೆ. ಇದನ್ನು ಬಹಳ ವಿರಳವಾಗಿ ಚರ್ಚಿಸಲಾಗಿದೆ. ಆದರೆ ನಾವು ಅಧ್ಯಯನ ಮಾಡಿದರೆ, ಸ್ವಾಮಿ ವಿವೇಕಾನಂದರು ಇನ್ನೂ ವ್ಯಕ್ತಿತ್ವವನ್ನು ಬೆಳೆಸುವ ಮತ್ತು ಅವರ ಮೌಲ್ಯಗಳು, ಸೇವೆ ಮತ್ತು ಸಮರ್ಪಣೆಯನ್ನು ಉಂಟುಮಾಡುವ ಕೆಲಸವನ್ನು ಮಾಡುತ್ತಿರುವ ಸಂಸ್ಥೆಗಳನ್ನು ಸಹ ಮುಂದೆ ತೆಗೆದುಕೊಂಡಿದ್ದಾರೆ ಎಂದು ನಮಗೆ ಕಂಡುಬರುತ್ತದೆ. ವ್ಯಕ್ತಿಯಿಂದ ಸಂಸ್ಥೆಯೊಂದನ್ನು ರಚಿಸುವುದು ಮತ್ತು ಸಂಸ್ಥೆಯಿಂದ ಹಲವಾರು ಜನರನ್ನು ರೂಪಿಸುವುದು ನಿರಂತರ, ತಡೆರಹಿತ ಮತ್ತು ಸ್ಥಿರವಾದ ಚಕ್ರವಾಗಿದ್ದು, ಅದು ನಡೆಯುತ್ತಲಿದೆ. ಜನರು ಸ್ವಾಮೀಜಿಯ ಪ್ರಭಾವಕ್ಕೆ ಒಳಗಾಗುತ್ತಾರೆ, ಸಂಸ್ಥೆಗಳನ್ನು ನಿರ್ಮಿಸಲು ಸ್ಫೂರ್ತಿ ಪಡೆಯುತ್ತಾರೆ ಮತ್ತು ಆ ಸಂಸ್ಥೆಗಳಿಂದ ಸ್ವಾಮೀಜಿ ತೋರಿಸಿದ ಮಾರ್ಗವನ್ನು ಸ್ವೀಕರಿಸುವ ಮತ್ತು ಹೊಸ ಜನರೊಂದಿಗೆ ಸಂಪರ್ಕ ಸಾಧಿಸುವ ಜನರು ಹೊರಹೊಮ್ಮುತ್ತಾರೆ. ಇಂದು, ವ್ಯಕ್ತಿಗಳಿಂದ ಸಂಸ್ಥೆಗಳಿಗೆ ಮತ್ತು ಸಂಸ್ಥೆಗಳಿಂದ ವ್ಯಕ್ತಿಗಳಿಗೆ ಈ ಚಕ್ರವು ಭಾರತದ ದೊಡ್ಡ ಶಕ್ತಿಯಾಗಿದೆ. ನೀವು ಉದ್ಯಮಶೀಲತೆಯ ಬಗ್ಗೆ ಸಾಕಷ್ಟು ಕೇಳುತ್ತೀರಿ. ಅದು ಮತ್ತೆ ಇದೇ ರೀತಿಯದ್ದಾಗಿದೆ. ಒಬ್ಬ ಅದ್ಭುತ ವ್ಯಕ್ತಿಯು ಅತ್ಯುತ್ತಮ ಕಂಪನಿಯನ್ನು ಮಾಡುತ್ತಾನೆ. ನಂತರ, ಆ ಕಂಪನಿಯಲ್ಲಿ ಅಭಿವೃದ್ಧಿ ಹೊಂದಿದ ಪರಿಸರ ವ್ಯವಸ್ಥೆಯಿಂದ ಅನೇಕ ಅದ್ಭುತ ವ್ಯಕ್ತಿಗಳು ಹೊರಹೊಮ್ಮುತ್ತಾರೆ. ವ್ಯಕ್ತಿಗಳು ಮತ್ತು ಸಂಸ್ಥೆಗಳ ಈ ಚಕ್ರವು ದೇಶದ ಮತ್ತು ಸಮಾಜದ ಪ್ರತಿಯೊಂದು ಕ್ಷೇತ್ರಕ್ಕೂ ಸಮಾನವಾಗಿ ಮುಖ್ಯವಾಗಿದೆ.

ಸ್ನೇಹಿತರೇ,

ದೇಶದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಗಮನವು ಉತ್ತಮ ವ್ಯಕ್ತಿಗಳನ್ನು ನಿರ್ಮಿಸುವತ್ತಲೂ ಇದೆ. ವ್ಯಕ್ತಿಗತ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಈ ನೀತಿಯು ಯುವಕರ ಆಶಯಗಳು, ಕೌಶಲ್ಯಗಳು, ತಿಳುವಳಿಕೆ ಮತ್ತು ನಿರ್ಧಾರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಈಗ ನೀವು ಯಾವುದೇ ವಿಷಯ, ಸಂಯೋಜನೆ ಅಥವಾ ಸ್ಟ್ರೀಮ್ ಅನ್ನು ಆಯ್ಕೆ ಮಾಡಬಹುದು. ಒಂದು ಕೋರ್ಸ್‌ಗೆ ವಿರಾಮ ನೀಡುವ ಮೂಲಕ ನೀವು ಇನ್ನೊಂದು ಕೋರ್ಸ್ ಅನ್ನು ಪ್ರಾರಂಭಿಸಬಹುದು. ಹಿಂದಿನ ಕೋರ್ಸ್‌ಗಾಗಿ ನೀವು ಮಾಡಿದ ಶ್ರಮ ಈಗ ವ್ಯರ್ಥವಾಗುವುದಿಲ್ಲ. ನೀವು ಅಧ್ಯಯನ ಮಾಡಿದ್ದಕ್ಕಾಗಿ ಪ್ರಮಾಣಪತ್ರವನ್ನು ಸಹ ಪಡೆಯುತ್ತೀರಿ ಮತ್ತು ಅದು ನಿಮಗೆ ಸಹಾಯ ಮಾಡುತ್ತದೆ.

ಸ್ನೇಹಿತರೇ,

ಇಂದು, ದೇಶದಲ್ಲಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಅವುಗಳನ್ನು ನಮ್ಮ ಯುವಕರು ಹೆಚ್ಚಾಗಿ ವಿದೇಶಗಳಲ್ಲಿ ಹುಡುಕುತ್ತಿದ್ದರು. ಅವರ ಆಧುನಿಕ ಶಿಕ್ಷಣ, ಉತ್ತಮ ಉದ್ಯಮ ಅವಕಾಶಗಳು, ಪ್ರತಿಭೆ ಗುರುತಿಸುವಿಕೆ ಮತ್ತು ಗೌರವಾನ್ವಿತ ವ್ಯವಸ್ಥೆಗಳು ಸಹಜವಾಗಿಯೇ ಅವರನ್ನು ಆಕರ್ಷಿಸಿದವು. ಈಗ, ನಾವು ಬದ್ಧರಾಗಿದ್ದೇವೆ ಮತ್ತು ದೇಶದ ನಮ್ಮ ಯುವ ಸಹೋದ್ಯೋಗಿಗಳಿಗೆ ಲಭ್ಯವಾಗಬೇಕಾದ ವ್ಯವಸ್ಥೆಗೆ ಸಹ ಪ್ರಯತ್ನಿಸುತ್ತಿದ್ದೇವೆ. ಇಂದು, ಪರಿಸರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಪರಿಸರ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ, ಅಲ್ಲಿ ನಮ್ಮ ಯುವಕರು ತಮ್ಮ ಪ್ರತಿಭೆ ಮತ್ತು ಕನಸುಗಳಿಗೆ ಅನುಗುಣವಾಗಿ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಬಹುದು. ಶಿಕ್ಷಣ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಅಥವಾ ಕಾನೂನು ವಿವರಗಳು ಎಲ್ಲದಕ್ಕೂ ಆದ್ಯತೆ ನೀಡಲಾಗುತ್ತಿದೆ. ಕೆಲವೊಂದನ್ನು ನಾವು ಮರೆಯಬಾರದು ಎಂಬ ಅಂಶಕ್ಕೂ ಸ್ವಾಮೀಜಿ ಒತ್ತು ನೀಡಿದರು. ಸ್ವಾಮೀಜಿ ದೈಹಿಕ ಮತ್ತು ಮಾನಸಿಕ ಶಕ್ತಿಗೆ ಒತ್ತು ನೀಡಿದರು. ಅವರು "ಸ್ನಾಯುಗಳ ಕಬ್ಬಿಣ ಮತ್ತು ಉಕ್ಕಿನ ನರಗಳು" ಎಂದು ಹೇಳುತ್ತಿದ್ದರು. ಅವರ ಸ್ಫೂರ್ತಿಯಿಂದಾಗಿ, ಇಂದು ಭಾರತದ ಯುವಕರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಅದು ಫಿಟ್ ಇಂಡಿಯಾ ಅಭಿಯಾನವಾಗಿರಲಿ, ಯೋಗ ಜಾಗೃತಿಯಾಗಿರಲಿ ಅಥವಾ ಆಧುನಿಕ ಕ್ರೀಡಾ ಮೂಲಸೌಕರ್ಯಗಳ ರಚನೆಯಾಗಿರಲಿ, ಇವು ಯುವಕರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಪಡಿಸುತ್ತಿವೆ.

ಸ್ನೇಹಿತರೇ,

ಇತ್ತೀಚಿನ ದಿನಗಳಲ್ಲಿ, ನೀವು ಕೆಲವು ಪದಗಳನ್ನು ಮತ್ತೆ ಮತ್ತೆ ಕೇಳುತ್ತಿರಬೇಕು – Personality Development ಮತ್ತು Team Management. ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿದ ನಂತರ ನೀವು ಅದರ ಸೂಕ್ಷ್ಮ ವ್ಯತ್ಯಾಸಗಳನ್ನು ಹೆಚ್ಚು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವ್ಯಕ್ತಿತ್ವ ಅಭಿವೃದ್ಧಿಗೆ ಅವರ ಮಂತ್ರ 'ನಿಮ್ಮನ್ನು ನಂಬಿರಿ'. ನಾಯಕತ್ವಕ್ಕಾಗಿ ಅವರ ಮಂತ್ರ ಹೀಗಿತ್ತು: ‘ಎಲ್ಲರನ್ನೂ ನಂಬಿರಿ’. ಅವರು ಹೇಳುತ್ತಿದ್ದರು: "ಹಳೆಯ ಧರ್ಮಗಳ ಪ್ರಕಾರ, ನಾಸ್ತಿಕರು ಎಂದರೆ ದೇವರನ್ನು ನಂಬದವರು. ಆದರೆ ಹೊಸ ಧರ್ಮವು ನಾಸ್ತಿಕರು ತಮ್ಮನ್ನೇ ನಂಬದವರು ಎಂದು ಹೇಳುತ್ತದೆ." ಮತ್ತು ನಾಯಕತ್ವದ ವಿಷಯಕ್ಕೆ ಬಂದಾಗ, ಅವರು ತಮ್ಮ ತಂಡವನ್ನು ಸ್ವತಃ ಮೊದಲೇ ಅವಲಂಬಿಸಿದ್ದಾರೆ. ನಾನು ಅದನ್ನು ಎಲ್ಲಿಯೋ ಓದಿದ್ದೇನೆ ಮತ್ತು ಆ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ಒಮ್ಮೆ ಸ್ವಾಮೀಜಿ ತನ್ನ ಸಹವರ್ತಿ ಸ್ವಾಮಿ ಶರದಾನಂದಜಿಯೊಂದಿಗೆ ಲಂಡನ್‌ನಲ್ಲಿ ಸಾರ್ವಜನಿಕ ಉಪನ್ಯಾಸಕ್ಕಾಗಿ ಹೋದರು. ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿತ್ತು, ಕೇಳುಗರು ಒಟ್ಟುಗೂಡಿದರು ಮತ್ತು ಸ್ವಾಭಾವಿಕವಾಗಿ, ಎಲ್ಲರೂ ಸ್ವಾಮಿ ವಿವೇಕಾನಂದರ ಭಾಷಣ ಕೇಳಲು ಬಂದಿದ್ದರು. ಆದರೆ ಅವರ ಸರದಿ ಬಂದ ಕೂಡಲೇ ಸ್ವಾಮೀಜಿ ಅವರು ನಾನು ಇಂದು ಭಾಷಣ ಮಾಡುವುದಿಲ್ಲ ಆದರೆ ಅವರ ಸಹೋದ್ಯೋಗಿ ಶಾರದಾನಂದಜಿ ಮಾಡುತ್ತಾರೆ ಎಂದು ಹೇಳಿದರು! ಶಾರದಾನಂದಜಿ ಅವರಿಗೆ ಈ ಕೆಲಸವನ್ನು ವಹಿಸಲಾಗುವುದು ಎಂದು ಊಹಿಸಿರಲಿಲ್ಲ. ಅದಕ್ಕೆ ಅವರೂ ಕೂಡ ಸಿದ್ಧರಾಗಿರಲಿಲ್ಲ. ಆದರೆ ಶಾರದಾನಂದಜಿ ಮಾತನಾಡಲು ಪ್ರಾರಂಭಿಸಿದಾಗ, ಎಲ್ಲರೂ ಆಶ್ಚರ್ಯಚಕಿತರಾದರು ಮತ್ತು ಅವರಿಂದ ಪ್ರಭಾವಿತರಾದರು. ಇದು ನಾಯಕತ್ವ ಮತ್ತು ನಿಮ್ಮ ತಂಡದ ಸದಸ್ಯರನ್ನು ನಂಬುವ ಶಕ್ತಿ! ಇಂದು, ಸ್ವಾಮಿ ವಿವೇಕಾನಂದಜಿಯ ಬಗ್ಗೆ ನಮಗೆ ತಿಳಿದಿರುವುದಕ್ಕೆ, ಸ್ವಾಮಿ ಶಾರದಾನಂದಜಿಯವರ ಕೊಡುಗೆ ಬಹಳವಿದೆ.

ಸ್ನೇಹಿತರೇ,

ಆ ಕಾ;ಲದಲ್ಲಿ ನಿರ್ಭೀತ, ಸ್ಪಷ್ಟವಾದ, ಸ್ವಚ್ಛಹೃದಯದ, ಧೈರ್ಯಶಾಲಿ ಮತ್ತು ಮಹತ್ವಾಕಾಂಕ್ಷೆಯ ಯುವಕರು ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಅಡಿಪಾಯ ಎಂದು ಹೇಳಿದ್ದು ಸ್ವಾಮೀಜಿ. ಅವರು ಯುವಕರ ಮತ್ತು ಯುವ ಶಕ್ತಿಯ ಮೇಲೆ ಬಹಳ ನಂಬಿಕೆಯಿಟ್ಟಿದ್ದರು. ಈಗ ನೀವು ಅವರ ನಂಬಿಕೆಯ ಪರೀಕ್ಷೆಗೆ ಒಳಗೊಳ್ಳಬೇಕು. ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಮತ್ತು ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕಾರ್ಯ ನಿಮ್ಮೆಲ್ಲರಿಂದಲೇ ಆಗಬೇಕು. ಈಗ ನಿಮ್ಮಲ್ಲಿ ಕೆಲವರು ನಾವು ಇನ್ನೂ ವಯಸ್ಸಾಗಿಲ್ಲ ಎಂದು ಭಾವಿಸಬಹುದು. ಇದು ನಗುವ, ಆಟವಾಡುವ, ಆನಂದಿಸುವ ವಯಸ್ಸು ಎಂದುಕೊಂಡಿರಬಹುದು. ಸ್ನೇಹಿತರೇ, ಗುರಿ ಸ್ಪಷ್ಟವಾಗಿದ್ದಾಗ ಮತ್ತು ಇಚ್ಛಾಶಕ್ತಿ ಇದ್ದಾಗ, ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ವಯಸ್ಸು ತುಂಬಾ ಮುಖ್ಯವಲ್ಲ. ಇದನ್ನು ಯಾವಾಗಲೂ ನೆನಪಿಡಿ ಬ್ರಿಟಿಷರ ಆಡಳಿತದ ಸಮಯದಲ್ಲಿ, ಸ್ವಾತಂತ್ರ್ಯ ಚಳವಳಿಯನ್ನು ಯುʻವ ಪೀಳಿಗೆಯವರು ವಹಿಸಿದ್ದರು. ಶಹೀದ್ ಖುದಿರಾಮ್ ಬೋಸ್ ಅವರನ್ನು ಗಲ್ಲಿಗೇರಿಸಿದಾಗ ಅವರ ವಯಸ್ಸು ಎಷ್ಟು ಎಂದು ನಿಮಗೆ ತಿಳಿದಿದೆಯೇ? ಅವರು ಕೇವಲ 18-19 ವರ್ಷ ವಯಸ್ಸಿನವರಾಗಿದ್ದರು. ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಿದಾಗ, ಅವರ ವಯಸ್ಸು ಎಷ್ಟು? ಕೇವಲ 24 ವರ್ಷಗಳು. ಭಗವಾನ್‌ ಬಿರ್ಸಾ ಮುಂಡಾ ಹುತಾತ್ಮರಾದಾಗ, ಅವರ ವಯಸ್ಸು ಎಷ್ಟು? ಕೇವಲ 25 ವರ್ಷಗಳು. ಆ ತಲೆಮಾರಿನವರು ದೇಶದ ಸ್ವಾತಂತ್ರ್ಯಕ್ಕಾಗಿ ಬದುಕಲು ಮತ್ತು ಪ್ರಾಣತ್ಯಾಗಕ್ಕೆ ನಿರ್ಧರಿಸಿದ್ದರು. ವಿವಿಧ ವೃತ್ತಿಗಳಿಂದ ವಕೀಲರು, ವೈದ್ಯರು, ಪ್ರಾಧ್ಯಾಪಕರು, ಬ್ಯಾಂಕರ್‌ಗಳು ಮತ್ತು ಯುವ ಪೀಳಿಗೆ ಹೊರಬಂದು ನಮಗೆ ಸ್ವಾತಂತ್ರ್ಯ ತಂದುಕೊಟ್ಟರು.

ಸ್ನೇಹಿತರೇ,

ನಾವು ಈ ಅವಧಿಯಲ್ಲಿ ಜನಿಸಿದ್ದೇವೆ… ನಾನೂ ಸ್ವತಂತ್ರ ಭಾರತದಲ್ಲಿ ಹುಟ್ಟಿದ್ದೇನೆ. ನಾನು ಗುಲಾಮಗಿರಿಯನ್ನು ನೋಡಿಲ್ಲ ಮತ್ತು ನನ್ನ ಮುಂದೆ ಕುಳಿತಿರುವ ನೀವೆಲ್ಲರೂ ಸ್ವತಂತ್ರ ಭಾರತದಲ್ಲಿ ಜನಿಸಿದ್ದೀರಿ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗದ ಅವಕಾಶ ನಮಗೆ ಇರಲಿಲ್ಲ, ಆದರೆ ಸ್ವತಂತ್ರಯ ಭಾರತವನ್ನು ಮುಂದೆ ಕೊಂಡೊಯ್ಯುವ ಅವಕಾಶ ನಮಗೆ ಸಿಕ್ಕಿದೆ. ನಾವು ಈ ಅವಕಾಶವನ್ನು ಕಳೆದುಕೊಳ್ಳಬೇಕಾಗಿಲ್ಲ. ದೇಶದ ನನ್ನ ಯುವ ಸಹೋದ್ಯೋಗಿಗಳೇ, ಮುಂಬರುವ 25-26 ವರ್ಷಗಳು ಸ್ವಾತಂತ್ರ್ಯದ 75 ವರ್ಷಗಳಿಂದ ಸ್ವಾತಂತ್ರ್ಯದ 100 ವರ್ಷಗಳ ತನಕದ ಪ್ರಯಾಣದಲ್ಲಿ ಬಹಳ ಮುಖ್ಯ. 2047 ರಲ್ಲಿ 100 ವರ್ಷಗಳ ಸ್ವಾತಂತ್ರ್ಯ ಇರುತ್ತದೆ. ಈ 25-26 ವರ್ಷಗಳ ಪ್ರಯಾಣ ಬಹಳ ಮುಖ್ಯ. ಸ್ನೇಹಿತರೇ, ನೀವು ಯೋಚಿಸುವ ಪ್ರಕಾರ, ನೀವು ಇರುವ ವಯಸ್ಸು ಮತ್ತು ಈಗ ಪ್ರಾರಂಭವಾಗುವ ಅವಧಿ ನಿಮ್ಮ ಜೀವನದ ಸುವರ್ಣ ಅವಧಿ, ಅತ್ಯುತ್ತಮ ಅವಧಿ ಮತ್ತು ಅದೇ ಅವಧಿಯು ಭಾರತವನ್ನು 100 ವರ್ಷಗಳ ಸ್ವಾತಂತ್ರ್ಯಕ್ಕೆ ಕೊಂಡೊಯ್ಯುತ್ತಿದೆ. ಇದರರ್ಥ , ನಿಮ್ಮ ವೈಯಕ್ತಿಕ ಬೆಳವಣಿಗೆ ಮತ್ತು ಸ್ವಾತಂತ್ರ್ಯದ 100 ವರ್ಷಗಳ ಸಾಧನೆಗಳು ಒಟ್ಟಿಗೆ ಇವೆ ಮತ್ತು ನಿಮ್ಮ ಜೀವನದ ಸನ್ನಿಹಿತವಾದ 25-26 ವರ್ಷಗಳು ಮತ್ತು ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವ ದೇಶದ ನಡುವೆ ದೊಡ್ಡ ಹೊಂದಾಣಿಕೆಯಾಗಿದೆ. ನಿಮ್ಮ ಜೀವನದ ಈ ವರ್ಷಗಳನ್ನು ದೇಶಕ್ಕೆ ಹೆಚ್ಚಿನ ಆದ್ಯತೆಗಳಿಗೆ ನೀಡಿ ಮತ್ತು ದೇಶದ ಸೇವೆಗೆ ನೀಡಿ. ಈ ಶತಮಾನ ಭಾರತಕ್ಕೆ ಸೇರಿದೆ ಎಂದು ವಿವೇಕಾನಂದಜಿ ಹೇಳುತ್ತಿದ್ದರು. ನೀವು ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡಬೇಕು. ನೀವು ಏನೇ ಮಾಡಿದರೂ, ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ, ದೇಶದ ಹಿತಾಸಕ್ತಿ ಏನು ಎಂದು ಯೋಚಿಸಿ?

ಸ್ನೇಹಿತರೇ,

ನಮ್ಮ ಯುವಕರು ಮುಂದೆ ಬಂದು ರಾಷ್ಟ್ರದ ಭಾಗ್ಯವಿದಾತರಾಗಬೇಕು ಎಂದು ಸ್ವಾಮಿ ವಿವೇಕಾನಂದಜಿ ಹೇಳುತ್ತಿದ್ದರು. ಆದ್ದರಿಂದ, ಭಾರತದ ಭವಿಷ್ಯವನ್ನು ಮುನ್ನಡೆಸುವುದು ನಿಮ್ಮ ಜವಾಬ್ದಾರಿಯಾಗಿದೆ. ಮತ್ತು ನಿಮ್ಮ ಜವಾಬ್ದಾರಿ ದೇಶದ ರಾಜಕೀಯದ ಮೇಲೂ ಇದೆ. ಏಕೆಂದರೆ ರಾಜಕೀಯವು ದೇಶದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ಪ್ರಬಲ ಸಾಧನವಾಗಿದೆ. ಪ್ರತಿಯೊಂದು ಕ್ಷೇತ್ರಗಳಂತೆ ರಾಜಕೀಯಕ್ಕೂ ಸಾಕಷ್ಟು ಯುವಕರು ಬೇಕು. ದೇಶದ ರಾಜಕೀಯದಲ್ಲಿ ಹೊಸ ಆಲೋಚನೆ, ಹೊಸ ಶಕ್ತಿ, ಹೊಸ ಕನಸುಗಳು ಮತ್ತು ಹೊಸ ಉತ್ಸಾಹ ಬಹಳ ಅಗತ್ಯ.

ಸ್ನೇಹಿತರೇ,

ದೇಶದಲ್ಲಿ, ಯುವಕನೊಬ್ಬ ರಾಜಕೀಯಕ್ಕೆ ಪ್ರವೇಶಿಸಿದರೆ, ಅವನ ಕುಟುಂಬವು ಮಗು ದಾರಿ ತಪ್ಪುತ್ತಿದೆ ಎಂದು ಹೇಳುತ್ತಿದ್ದರು, ಏಕೆಂದರೆ ರಾಜಕೀಯವು ಹೋರಾಟಗಳು, ಹಿಂಸೆ, ಲೂಟಿ ಮತ್ತು ಭ್ರಷ್ಟಾಚಾರವನ್ನು ಪ್ರತಿನಿಧಿಸುತ್ತದೆ! ಇದನ್ನು ಹಲವಾರು ಹೆಸರುಗಳಿಂದ ಲೇಬಲ್ ಮಾಡಲಾಗಿದೆ. ಜನರು ಬದಲಾಗಬಹುದು ಆದರೆ ರಾಜಕೀಯವಲ್ಲ ಎಂದು ಹೇಳುತ್ತಿದ್ದರು. ಆದರೆ ಇಂದು ನೀವು ನೋಡುತ್ತೀರಿ, ದೇಶದ ಜನರು, ದೇಶದ ನಾಗರಿಕರು ಎಷ್ಟು ಜಾಗೃತರಾಗಿದ್ದಾರೆಂದರೆ ಅವರು ರಾಜಕೀಯದಲ್ಲಿ ಪ್ರಾಮಾಣಿಕರನ್ನು ಬೆಂಬಲಿಸುತ್ತಾರೆ, ಪ್ರಾಮಾಣಿಕ ಜನರಿಗೆ ಅವಕಾಶ ನೀಡುತ್ತಾರೆ. ದೇಶದ ಸಾಮಾನ್ಯ ಜನರು ರಾಜಕಾರಣಿಗಳೊಂದಿಗೆ ದೃಢವಾಗಿ ನಿಲ್ಲುತ್ತಾರೆ, ಅವರು ಪ್ರಾಮಾಣಿಕರು, ಸಮರ್ಪಿತರು ಮತ್ತು ಸೇವಾ ಪ್ರಜ್ಞೆಯನ್ನು ಹೊಂದಿರುತ್ತಾರೆ. ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆ ಇಂದಿನ ರಾಜಕೀಯದ ಮೊದಲ ಅಗತ್ಯ ಸ್ಥಿತಿಯಾಗಿದೆ. ಜಾಗೃತಿಯಿಂದಾಗಿ ದೇಶದಲ್ಲಿ ಈ ಸನ್ನಿವೇಶ ಸೃಷ್ಟಿಯಾಗಿದೆ. ಕೆಲವರಿಗೆ ಪರಂಪರೆಯಾಗಿದ್ದ ಭ್ರಷ್ಟಾಚಾರ ಇಂದು ಅವರಿಗೆ ಹೊರೆಯಾಗಿ ಪರಿಣಮಿಸಿದೆ. ಮತ್ತು ದೇಶದ ಸಾಮಾನ್ಯ ನಾಗರಿಕರ ಅರಿವಿನ ಶಕ್ತಿಯು ಶತ ಪ್ರಯತ್ನಗಳ ನಂತರವೂ ಜಯಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ದೇಶವು ಈಗ ಪ್ರಾಮಾಣಿಕರಿಗೆ ಪ್ರೀತಿಯನ್ನು ನೀಡುತ್ತಿದೆ, ಪ್ರಾಮಾಣಿಕರನ್ನು ಆಶೀರ್ವದಿಸುತ್ತಿದೆ, ಪ್ರಾಮಾಣಿಕರಿಗಾಗಿ ಎಲ್ಲವನ್ನೂ ಹಾಕುತ್ತದೆ ಮತ್ತು ಅವರ ಮೇಲೆ ತನ್ನ ನಂಬಿಕೆಯನ್ನು ಇಡುತ್ತಿದೆ. ಈಗ, ಸಾರ್ವಜನಿಕ ಪ್ರತಿನಿಧಿಗಳು ಸಹ ಮುಂದಿನ ಚುನಾವಣೆಯನ್ನು ಎದುರಿಸಬೇಕಾದರೆ, ಅವರ ಸಿ.ವಿ ಬಲವಾಗಿರಬೇಕು ಮತ್ತು ಅವರ ಕೆಲಸವು ಮಾತನಾಡಬೇಕು ಎಂದು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. ಆದರೆ ಸ್ನೇಹಿತರೇ, ಇನ್ನೂ ಕೆಲವು ಬದಲಾವಣೆಗಳ ಅವಶ್ಯಕತೆಯಿದೆ, ಮತ್ತು ದೇಶದ ಯುವಕರು ಈ ಬದಲಾವಣೆಗಳನ್ನು ತರಬೇಕಾಗಿದೆ. ಪ್ರಜಾಪ್ರಭುತ್ವದ ದೊಡ್ಡ ಶತ್ರುವೊಂದು ಪ್ರವರ್ಧಮಾನಕ್ಕೆ ಬರುತ್ತಿದೆ ಅದು ರಾಜಕೀಯ ವಂಶಾಡಳಿತವಾಗಿದೆ. ದೇಶದ ಮುಂದೆ ರಾಜಕೀಯ ವಂಶಾಡಳಿತವನ್ನು ಬೇರುಸಹಿತ ಕಿತ್ತುಹಾಕಬೇಕಾದ ಒಂದು ಸವಾಲಿದೆ. ಉಪನಾಮಗಳ ಆಧಾರದ ಮೇಲೆ ಮಾತ್ರ ಚುನಾವಣೆಯಲ್ಲಿ ಗೆದ್ದವರ ದಿನಗಳು ಕೊನೆಗೊಳ್ಳುತ್ತಿವೆ ಎಂಬುದು ಈಗ ನಿಜ. ಆದರೆ ರಾಜಕೀಯದಲ್ಲಿ, ಈ ವಂಶಾಡಳಿತದ ಕಾಯಿಲೆ ಸಂಪೂರ್ಣವಾಗಿ ಕೊನೆಗೊಂಡಿಲ್ಲ. ಅವರ ಕುಟುಂಬದ ರಾಜಕೀಯ ಮತ್ತು ಅವರ ಕುಟುಂಬವನ್ನು ರಾಜಕೀಯದಲ್ಲಿ ಕಾಪಾಡುವ ಬಗ್ಗೆ ಅವರ ಆಲೋಚನೆಗಳು, ಗುರಿಗಳು ಇವೆ.

ಸ್ನೇಹಿತರೇ,

ಈ ರಾಜಕೀಯದ ವಂಶಾಡಳಿತವು ಪ್ರಜಾಪ್ರಭುತ್ವದಲ್ಲಿ ಹೊಸ ಸ್ವರೂಪದ ಸರ್ವಾಧಿಕಾರವನ್ನು ಉತ್ತೇಜಿಸುವುದರ ಜೊತೆಗೆ ದೇಶಕ್ಕೆ ಅಸಮರ್ಥತೆಯ ಹೊರೆಯಾಗಿರುತ್ತದೆ. ರಾಜಕೀಯ ವಂಶಾಡಳಿತವು ಮೊದಲು ರಾಷ್ಟ್ರದ ಬದಲು 'ನಾನು ಮತ್ತು ನನ್ನ ಕುಟುಂಬ ಮಾತ್ರ' ಎಂಬ ಭಾವನೆಯನ್ನು ಗಟ್ಟಿಗೊಳಿಸುತ್ತದೆ. ಭಾರತದಲ್ಲಿ ರಾಜಕೀಯ ಮತ್ತು ಸಾಮಾಜಿಕ ಭ್ರಷ್ಟಾಚಾರಕ್ಕೂ ಇದು ಒಂದು ದೊಡ್ಡ ಕಾರಣವಾಗಿದೆ. ವಂಶಾಡಳಿತದಿಂದ ಬೆಳೆದವರು ತಮ್ಮ ಹಿಂದಿನ ತಲೆಮಾರಿನವರ ಭ್ರಷ್ಟಾಚಾರವನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೆ, ಯಾರೂ ಅವರಿಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಭಾವಿಸುತ್ತಾರೆ. ಅವರು ತಮ್ಮ ಮನೆಗಳಲ್ಲಿ ಅದರ ಯಶಸ್ವಿ ಉದಾಹರಣೆಗಳನ್ನು ನೋಡುತ್ತಾರೆ. ಆದ್ದರಿಂದ, ಈ ಜನರಿಗೆ ಕಾನೂನಿನ ಬಗ್ಗೆ ಯಾವುದೇ ಗೌರವವಿಲ್ಲ, ಅಥವಾ ಅವರಿಗೆ ಯಾವುದೇ ಭಯವಿಲ್ಲ.

ಸ್ನೇಹಿತರೇ,

ಈ ಪರಿಸ್ಥಿತಿಯನ್ನು ಬದಲಾಯಿಸುವ ಕಾರ್ಯವು ದೇಶದ ಜಾಗೃತಿಯ ಮೇಲೆ, ದೇಶದ ಯುವ ಪೀಳಿಗೆಯ ಮೇಲೆ ಮತ್ತು, ʼರಾಷ್ಟ್ರೀಯ ಜಾಗ್ರಯಂ ವಯಂʼ ಮಂತ್ರದೊಂದಿಗೆ ಮಂತ್ರದೊಂದಿಗೆ ಬದುಕಬೇಕಾಗಿದೆ. ನೀವು ರಾಜಕೀಯಕ್ಕೆ ಗರಿಷ್ಠ ಸಂಖ್ಯೆಯಲ್ಲಿ ಬರಬೇಕು, ಹುರುಪಿನಿಂದ ಭಾಗವಹಿಸಿ. ವ್ಯವಹಾರದ ದೃಷ್ಟಿಯಿಂದಲ್ಲ. ಏನನ್ನಾದರೂ ಸಾದಿಸಿ ಹೋಗುವ ಉದ್ದೇಶದಿಂದ ಬನ್ನಿ. ನಿಮ್ಮ ಆಲೋಚನೆ, ನಿಮ್ಮ ದೃಷ್ಟಿಯೊಂದಿಗೆ ನೀವು ಮುಂದುವರಿಯಬೇಕು. ಒಟ್ಟಿಗೆ ಕೆಲಸ ಮಾಡಿ, ಕಷ್ಟಪಟ್ಟು ಕೆಲಸ ಮಾಡಿ. ನೆನಪಿಡಿ, ದೇಶದ ಸಾಮಾನ್ಯ ಯುವಕರು ರಾಜಕೀಯಕ್ಕೆ ಬರುವವರೆಗೂ ಈ ವಂಶಾಡಳಿತದ ವಿಷವು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಲೇ ಇರುತ್ತದೆ.

ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ನೀವು ರಾಜಕೀಯಕ್ಕೆ ಪ್ರವೇಶಿಸುವುದು ಅವಶ್ಯಕ. ಮತ್ತು ನಮ್ಮ ಯುವ ಇಲಾಖೆಯಿಂದ ನಿರಂತರವಾಗಿ ಅಣಕು ಸಂಸತ್ತು ಕಾರ್ಯಕ್ರಮಗಳನ್ನು ನಡೆಸುತ್ತಿರುವವರು. ಯುವ ಸ್ನೇಹಿತರು ದೇಶದ ವಿಷಯಗಳ ಬಗ್ಗೆ ಒಟ್ಟಾಗಿ ಚರ್ಚಿಸಬೇಕು. ದೇಶದ ಯುವಕರನ್ನು ಭಾರತದ ಸೆಂಟ್ರಲ್ ಹಾಲ್ಗೆ ಕರೆತರಬೇಕು. ಇದರ ಹಿಂದಿನ ಉದ್ದೇಶವೆಂದರೆ ದೇಶದ ಹೊಸ ಯುವ ಪೀಳಿಗೆಯನ್ನು ನಾವು ಸಿದ್ಧಪಡಿಸಬೇಕು ಇದರಿಂದ ಅವರು ಮುಂದಿನ ದಿನಗಳಲ್ಲಿ ದೇಶವನ್ನು ನಮ್ಮೊಂದಿಗೆ ಮುನ್ನಡೆಸಲು ಮುಂದೆ ಬರಬಹುದು ಮತ್ತು ಮುಂದುವರಿಯಬಹುದು. ನಿಮ್ಮ ಮುಂದೆ ಸ್ವಾಮಿ ವಿವೇಕಾನಂದರಂತಹ ಉತ್ತಮ ಮಾರ್ಗದರ್ಶಕರು ಇದ್ದಾರೆ. ಅವರ ಸ್ಫೂರ್ತಿಯೊಂದಿಗೆ, ನಿಮ್ಮಂತಹ ಯುವಕರು ರಾಜಕೀಯಕ್ಕೆ ಪ್ರವೇಶಿಸುತ್ತಾರೆ, ಆಗ ದೇಶವು ಬಲವಾಗಿರುತ್ತದೆ.

ಸ್ನೇಹಿತರೇ,

ಸ್ವಾಮಿ ವಿವೇಕಾನಂದಜಿ ಅವರು ಯುವಕರಿಗೆ ಬಹಳ ಮುಖ್ಯವಾದ ಮಂತ್ರವನ್ನು ನೀಡುತ್ತಿದ್ದರು. "ವಿಪತ್ತು ಅಥವಾ ಸಮಸ್ಯೆಗಿಂತ ಮುಖ್ಯವಾದುದು ಆ ವಿಪತ್ತಿನಿಂದ ಕಲಿಯುವುದು" ಎಂದು ಅವರು ಹೇಳುತ್ತಿದ್ದರು. ಅದರಿಂದ ನೀವು ಏನು ಕಲಿತಿದ್ದೀರಿ? ನಮಗೆ ಸಂಯಮ ಮತ್ತು ಧೈರ್ಯ ಬೇಕು ದುರ್ಬಲಗೊಂಡ ಯಾವುದನ್ನಾದರೂ ನಾವು ಹೇಗೆ ಮರು-ರಚಿಸುತ್ತೇವೆ ಅಥವಾ ಹೊಸ ಕಟ್ಟಡಕ್ಕೆ ಹೊಸದಾಗಿ ಅಡಿಪಾಯ ಹಾಕುತ್ತೇವೆ ಎಂದು ಯೋಚಿಸಲು ವಿಪತ್ತು ನಮಗೆ ಅವಕಾಶ ನೀಡುತ್ತದೆ. ಕೆಲವೊಮ್ಮೆ, ಬಿಕ್ಕಟ್ಟು, ದುರಂತದ ನಂತರ ನಾವು ಹೊಸದನ್ನು ಯೋಚಿಸುತ್ತೇವೆ ಮತ್ತು ಆ ಹೊಸ ಆಲೋಚನೆಯು ಇಡೀ ಭವಿಷ್ಯವನ್ನು ಹೇಗೆ ಬದಲಾಯಿಸಿತು ಎಂಬುದನ್ನು ನೋಡುತ್ತೇವೆ. ನಿಮ್ಮ ಜೀವನದಲ್ಲಿಯೂ ನೀವು ಅದನ್ನು ಅನುಭವಿಸಿರಬೇಕು. ನಾನು ಇಂದು ನಿಮ್ಮೊಂದಿಗೆ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. 2001 ರಲ್ಲಿ ಗುಜರಾತ್‌ನಲ್ಲಿ ಕಚ್‌ನಲ್ಲಿ ಭೂಕಂಪ ಸಂಭವಿಸಿದಾಗ ಎಲ್ಲವೂ ನಾಶವಾಯಿತು. ಒಂದು ರೀತಿಯಲ್ಲಿ, ಸಾವಿನ ಪದರವು ಇಡೀ ಕಚ್ ಅನ್ನು ಆವರಿಸಿತ್ತು ಮತ್ತು ಎಲ್ಲಾ ಕಟ್ಟಡಗಳು ನೆಲಸಮವಾಗಿದ್ದವು. ಆ ಪರಿಸ್ಥಿತಿಯನ್ನು ನೋಡಿದ ಜನರು, ಕಚ್ ಈಗ ಶಾಶ್ವತವಾಗಿ ಹಾಳಾಗಿದೆ ಎಂದು ಹೇಳುತ್ತಿದ್ದರು. ಈ ಭೂಕಂಪದ ಕೆಲವು ತಿಂಗಳ ನಂತರ, ಗುಜರಾತ್ ಮುಖ್ಯಮಂತ್ರಿಯಾಗುವ ಜವಾಬ್ದಾರಿಯನ್ನು ನನಗೆ ವಹಿಸಲಾಯಿತು. ಗುಜರಾತ್ ಶಾಶ್ವತವಾಗಿ ಮುಗಿದಿದೆ ಮತ್ತು ಹಾಳಾಗಿದೆ ಎಂದು ಸುತ್ತಮುತ್ತಲಿನ ಎಲ್ಲರೂ ಹೇಳುತ್ತಿದ್ದರು. ನಾವು ಹೊಸ ವಿಧಾನದೊಂದಿಗೆ ಕೆಲಸ ಮಾಡಿದೆವು, ಹೊಸ ತಂತ್ರದೊಂದಿಗೆ ಮುಂದುವರಿದವು. ನಾವು ಕಟ್ಟಡಗಳನ್ನು ಪುನರ್ನಿರ್ಮಾಣ ಮಾಡುವುದಲ್ಲದೆ, ಕಚ್‌ನನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರತಿಜ್ಞೆಯನ್ನು ತೆಗೆದುಕೊಂಡೆವು. ರಸ್ತೆಗಳಿರಲಿಲ್ಲ, ವಿದ್ಯುತ್ ವ್ಯವಸ್ಥೆ ಇರಲಿಲ್ಲ, ನೀರು ಸುಲಭವಾಗಿ ಲಭ್ಯವಿರಲಿಲ್ಲ. ನಾವು ಪ್ರತಿ ವ್ಯವಸ್ಥೆಯನ್ನು ಸುಧಾರಿಸಿದ್ದೇವೆ. ನಾವು ನೂರಾರು ಕಿಲೋಮೀಟರ್ ಉದ್ದದ ಕಾಲುವೆಗಳನ್ನು ತಯಾರಿಸಿದ್ದೇವೆ ಮತ್ತು ಪೈಪ್‌ಲೈನ್‌ನಿಂದ ನೀರನ್ನು ಕಚ್‌ಗೆ ತಂದಿದ್ದೇವೆ. ಕಚ್‌ನ ಹಳೆಯ ಸ್ಥಿತಿಯಲ್ಲಿ ಅಲ್ಲಿನ ಪ್ರವಾಸೋದ್ಯಮದ ಬಗ್ಗೆ ಯಾರೂ ಯೋಚಿಸಲಾರದು. ಇದಕ್ಕೆ ವಿರುದ್ಧವಾಗಿ, ಪ್ರತಿವರ್ಷ ಸಾವಿರಾರು ಜನರು ಕಚ್‌ ಗೆ ಪ್ರವಾಸ ಹೋಗುತ್ತಾರೆ. ಈಗ, ಪರಿಸ್ಥಿತಿ ಹೇಗಿದೆ ಎಂದರೆ ವರ್ಷಗಳ ಹಿಂದೆ ಕಚ್ ತೊರೆದ ಜನರು ಇಂದು ಮರಳಲು ಪ್ರಾರಂಭಿಸಿದ್ದಾರೆ. ಇಂದು, ರಣ ಉತ್ಸವವನ್ನು ಆನಂದಿಸಲು ಲಕ್ಷಾಂತರ ಪ್ರವಾಸಿಗರು ಕಚ್‌ಗೆ ಆಗಮಿಸುತ್ತಾರೆ. ಅಂದರೆ, ವಿಪತ್ತಿನಲ್ಲೂ ಮುಂದುವರಿಯಲು ನಮಗೆ ಅವಕಾಶ ಸಿಕ್ಕಿತು.

ಸ್ನೇಹಿತರೇ,

ಅದೇ ಸಮಯದಲ್ಲಿ, ಭೂಕಂಪದ ಸಮಯದಲ್ಲಿ ಮತ್ತೊಂದು ಪ್ರಮುಖ ಕಾರ್ಯ ನಡೆಯಿತು, ಅದು ಹೆಚ್ಚು ಚರ್ಚಿಸಲ್ಪಟ್ಟಿಲ್ಲ. ಇತ್ತೀಚಿನ ದಿನಗಳಲ್ಲಿ, ಕೊರೊನಾದ ಹಿನ್ನೆಲೆಯಲ್ಲಿ, ನೀವು ವಿಪತ್ತು ನಿರ್ವಹಣಾ ಕಾಯ್ದೆಯ ಬಗ್ಗೆ ಸಾಕಷ್ಟು ಕೇಳುತ್ತೀರಿ. ಈ ಸಮಯದಲ್ಲಿ, ಎಲ್ಲಾ ಸರ್ಕಾರದ ಆದೇಶಗಳನ್ನು ಒಂದೇ ಕಾಯಿದೆಯ ಆಧಾರದ ಮೇಲೆ ನೀಡಲಾಯಿತು. ಆದರೆ ಈ ಕಾಯಿದೆಯ ಹಿಂದೆ ಒಂದು ಕಥೆಯೂ ಇದೆ, ಇದು ಕಚ್ ಭೂಕಂಪದೊಂದಿಗೆ ಸಂಬಂಧವನ್ನು ಹೊಂದಿದೆ ಮತ್ತು ನಾನು ಅದರ ಬಗ್ಗೆ ಸಹ ಹೇಳುತ್ತೇನೆ ಮತ್ತು ನಿಮಗೆ ಸಂತೋಷವಾಗುತ್ತದೆ.

ಸ್ನೇಹಿತರೇ,

ಈ ಮೊದಲು, ನಮ್ಮ ದೇಶದಲ್ಲಿ ವಿಪತ್ತು ನಿರ್ವಹಣೆಯನ್ನು ಕೃಷಿ ಇಲಾಖೆಯ ಕೆಲಸವೆಂದು ಮಾತ್ರ ಪರಿಗಣಿಸಲಾಗಿತ್ತು, ಏಕೆಂದರೆ ವಿಪತ್ತು ಎಂದರೆ ನಮ್ಮ ದೇಶದಲ್ಲಿ ಪ್ರವಾಹ ಅಥವಾ ಬರಗಾಲ. ಭಾರಿ ಮಳೆ ಎಂದರೆ ವಿಪತ್ತು; ಸಾಕಷ್ಟು ಮಳೆ ಎಂದರೆ ವಿಪತ್ತು; ಪ್ರವಾಹದ ಸಂದರ್ಭದಲ್ಲಿ ಕೃಷಿಗೆ ಪರಿಹಾರ; ವಿಪತ್ತು ನಿರ್ವಹಣೆಯ ಪ್ರಾಥಮಿಕ ಕಾರ್ಯಗಳು ಇವು. ಆದರೆ ಗುಜರಾತ್ 2003 ರಲ್ಲಿ ಕಚ್ ಭೂಕಂಪದಿಂದ ಪಾಠಗಳನ್ನು ಸೆಳೆಯುವ ಮೂಲಕ ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ರಚಿಸಿತು. ದೇಶದಲ್ಲಿ ಮೊದಲ ಬಾರಿಗೆ ವಿಪತ್ತು ನಿರ್ವಹಣೆಯನ್ನು ಕೃಷಿ ಇಲಾಖೆಯಿಂದ ಹೊರತೆಗೆದು ಗೃಹ ಇಲಾಖೆಗೆ ವಹಿಸಲಾಯಿತು. ನಂತರ, ಗುಜರಾತ್‌ನ ಅದೇ ಕಾನೂನಿನಿಂದ ಕಲಿತು, ಕೇಂದ್ರ ಸರ್ಕಾರವು 2005 ರಲ್ಲಿ ಇಡೀ ದೇಶಕ್ಕೆ ವಿಪತ್ತು ನಿರ್ವಹಣಾ ಕಾಯ್ದೆಯನ್ನು ರೂಪಿಸಿತು. ಈಗ, ಈ ಕಾಯಿದೆಯ ಸಹಾಯದಿಂದ ದೇಶವು ಸಾಂಕ್ರಾಮಿಕ ರೋಗದ ವಿರುದ್ಧ ಇಷ್ಟು ದೊಡ್ಡ ಯುದ್ಧವನ್ನು ಮಾಡಿದೆ. ಇಂದು, ಅದೇ ಕಾರ್ಯವು ನಮ್ಮ ಲಕ್ಷಾಂತರ ಜನರ ಜೀವಗಳನ್ನು ಉಳಿಸಲು ಸಹಾಯ ಮಾಡಿತು ಮತ್ತು ಅಂತಹ ದೊಡ್ಡ ಬಿಕ್ಕಟ್ಟಿನಿಂದ ದೇಶವನ್ನು ಬಿಡುಗಡೆ ಮಾಡಲು ಸಹಕಾರಿಯಾಯಿತು. ಅಷ್ಟೇ ಅಲ್ಲ, ವಿಪತ್ತು ನಿರ್ವಹಣೆಯು ಪರಿಹಾರ ಮತ್ತು ಪರಿಹಾರ ಸಾಮಗ್ರಿಗಳಿಗೆ ಮಾತ್ರ ಸೀಮಿತವಾಗಿದ್ದಾಗ, ಇಂದು ಪ್ರಪಂಚವು ಭಾರತದ ವಿಪತ್ತು ನಿರ್ವಹಣೆಯಿಂದ ಕಲಿಯುತ್ತಿದೆ.

ಸ್ನೇಹಿತರೇ,

ಬಿಕ್ಕಟ್ಟುಗಳಲ್ಲೂ ಪ್ರಗತಿ ಸಾಧಿಸಲು ಕಲಿಯುವ ಸಮಾಜವು ತನ್ನದೇ ಆದ ಭವಿಷ್ಯವನ್ನು ಬರೆಯುತ್ತದೆ. ಆದ್ದರಿಂದ, ಇಂದು ಭಾರತ ಮತ್ತು 130 ಕೋಟಿ ಭಾರತೀಯರು ತಮ್ಮದೇ ಆದ ಭವಿಷ್ಯವನ್ನು ಬರೆಯುತ್ತಿದ್ದಾರೆ. ನೀವು ಮಾಡುವ ಪ್ರತಿಯೊಂದು ಪ್ರಯತ್ನಗಳು, ಪ್ರತಿಯೊಂದು ಸೇವಾ ಕಾರ್ಯಗಳು, ಪ್ರತಿಯೊಂದು ನಾವೀನ್ಯತೆಗಳು ಮತ್ತು ಪ್ರತಿಯೊಂದು ಪ್ರಾಮಾಣಿಕ ನಿರ್ಣಯಗಳು ಬಲವಾದ ಭವಿಷ್ಯದ ಅಡಿಪಾಯವನ್ನು ಹಾಕುತ್ತಿವೆ. ನಿಮ್ಮ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ನಿಮಗೆ ನನ್ನ ಶುಭಾಶಯಗಳು. ಈ ಮುಖಾಮುಖಿ ಅಥವಾ ವರ್ಚುವಲ್‌ ಕಾರ್ಯಕ್ರಮವನ್ನು ಏಕಕಾಲದಲ್ಲಿ ಆಯೋಜಿಸುವ ಮೂಲಕ ದೇಶದ ಯುವಜನರು ಮತ್ತು ಇಲಾಖೆಯ ಅಧಿಕಾರಿಗಳು ಈ ಯುವ ಚಳವಳಿಯನ್ನು ಮುಂದಕ್ಕೆ ಕೊಂಡೊಯ್ಯುವ ಮೆಚ್ಚುಗೆಗೆ ಅರ್ಹರು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ಯುವಕರು ಸನ್ಮಾನಕ್ಕೆ ಅರ್ಹರು ಮತ್ತು ಎಲ್ಲಾ ವಿಜೇತರಿಗೆ ನನ್ನ ಶುಭಾಶಯಗಳು. ನೀವು ಮಾತನಾಡಿದ ವಿಷಯಗಳು ಸಮಾಜದ ಬೇರುಗಳಿಗೆ ಹೋಗುವುದನ್ನು ನೀವೆಲ್ಲರೂ ಖಚಿತಪಡಿಸಿಕೊಳ್ಳಬೇಕು. ಯಶಸ್ವಿಯಾಗಿ ಮುಂದುವರಿಯುತ್ತಿರುವ ನಿಮಗೆ ನನ್ನ ಶುಭಾಶಯಗಳು. ಸಂಸತ್ ಭವನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಮಾನ್ಯ ಸ್ಪೀಕರ್‌ಗೆ ಮತ್ತೊಮ್ಮೆ ಕೃತಜ್ಞತೆ ಸಲ್ಲಿಸುವ ಮೂಲಕ ನನ್ನ ಮಾತಿಗೆ ವಿರಾಮ ನೀಡುತ್ತೇನೆ.

ಬಹಳ ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Patent application filings in India rise 30.2% to 143,000 in 2025-26: Goyal

Media Coverage

Patent application filings in India rise 30.2% to 143,000 in 2025-26: Goyal
NM on the go

Nm on the go

Always be the first to hear from the PM. Get the App Now!
...
Prime Minister pays homage to the martyrs of Jallianwala Bagh
April 13, 2026
PM shares a Sanskrit Subhashitam on nurturing benevolent forces

The Prime Minister Shri Narendra Modi, today paid his heartfelt homage to the brave martyrs of Jallianwala Bagh. Shri Modi remarked that their sacrifice stands as a powerful reminder of the indomitable spirit of our people.

The Prime Minister also shared a Sanskrit Subhashitam today highlighting the call for industrious people to nurture benevolent forces within society that make the nation prosperous, aware, and self-reliant, while firmly resisting destructive forces that create division, injustice, and discontent.

The Prime Minister wrote on X:

"On this day, we pay our heartfelt homage to the brave martyrs of Jallianwala Bagh. Their sacrifice stands as a powerful reminder of the indomitable spirit of our people. The courage and determination they displayed continue to inspire generations to uphold the values of liberty, justice and dignity.”

“ ਅੱਜ ਦੇ ਦਿਨ, ਅਸੀਂ ਜੱਲ੍ਹਿਆਂਵਾਲਾ ਬਾਗ਼ ਦੇ ਸੂਰਬੀਰ ਸ਼ਹੀਦਾਂ ਨੂੰ ਦਿਲੋਂ ਸ਼ਰਧਾਂਜਲੀ ਭੇਟ ਕਰਦੇ ਹਾਂ। ਉਨ੍ਹਾਂ ਦੀ ਕੁਰਬਾਨੀ ਸਾਡੇ ਲੋਕਾਂ ਦੇ ਕਦੇ ਨਾ ਝੁਕਣ ਵਾਲੇ ਜਜ਼ਬੇ ਦੀ ਮਜ਼ਬੂਤ ਯਾਦ ਦਿਵਾਉਂਦੀ ਹੈ। ਉਨ੍ਹਾਂ ਵੱਲੋਂ ਵਿਖਾਇਆ ਗਿਆ ਹੌਸਲਾ ਅਤੇ ਪੱਕਾ ਇਰਾਦਾ, ਆਉਣ ਵਾਲੀਆਂ ਪੀੜ੍ਹੀਆਂ ਨੂੰ ਆਜ਼ਾਦੀ, ਇਨਸਾਫ਼ ਅਤੇ ਮਾਣ-ਸਨਮਾਨ ਦੀਆਂ ਕਦਰਾਂ-ਕੀਮਤਾਂ ਉੱਤੇ ਪਹਿਰਾ ਦੇਣ ਲਈ ਲਗਾਤਾਰ ਪ੍ਰੇਰਿਤ ਕਰਦਾ ਆ ਰਿਹਾ ਹੈ।”

“जलियांवाला बाग नरसंहार के सभी अमर बलिदानियों को मेरी आदरपूर्ण श्रद्धांजलि। विदेशी हुकूमत की बर्बरता के खिलाफ उनके अदम्य साहस और स्वाभिमान की गाथा देश की हर पीढ़ी को प्रेरित करती रहेगी।

इन्द्रं वर्धन्तो अप्तुरः कृण्वन्तो विश्वमार्यम्।
अपघ्नन्तो अराव्णः॥"

O industrious people! Nurture those benevolent forces within your society that make the nation prosperous, aware and self-reliant. At the same time, firmly resist the destructive forces that create division, injustice and discontent in society.