ಘನತೆವೆತ್ತರೇ,

ಗೌರವಾನ್ವಿತರೇ,

ನಿನ್ನೆ, ನಾವು ಒಂದು ಭೂಮಿ ಮತ್ತು ಒಂದು ಕುಟುಂಬ ಅಧಿವೇಶನಗಳಲ್ಲಿ ವ್ಯಾಪಕ ಚರ್ಚೆಗಳನ್ನು ನಡೆಸಿದೆವು. ಇಂದು ಜಿ -20 ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ದೃಷ್ಟಿಕೋನಕ್ಕೆ ಸಂಬಂಧಿಸಿದಂತೆ ಆಶಾವಾದಿ ಪ್ರಯತ್ನಗಳಿಗೆ ವೇದಿಕೆಯಾಗಿದೆ ಎಂದು ನನಗೆ ತೃಪ್ತಿ ಇದೆ.

ನಾವು ಪ್ರಸ್ತುತ ಗ್ಲೋಬಲ್ ವಿಲೇಜ್ ಪರಿಕಲ್ಪನೆಯನ್ನು ಮೀರುವ ಮತ್ತು ಜಾಗತಿಕ ಕುಟುಂಬವು ವಾಸ್ತವವಾಗುವುದನ್ನು ನೋಡುವ ಭವಿಷ್ಯದ ಬಗ್ಗೆ ಚರ್ಚಿಸುತ್ತಿದ್ದೇವೆ. ಇದು ದೇಶಗಳ ಹಿತಾಸಕ್ತಿಗಳು ಹೆಣೆದುಕೊಂಡಿರುವ ಭವಿಷ್ಯವಾಗಿದೆ, ಆದರೆ ಹೃದಯಗಳು ಪರಸ್ಪರ ಸಂಪರ್ಕ ಹೊಂದಿವೆ.

ಸ್ನೇಹಿತರೇ,

ಜಿಡಿಪಿ ಕೇಂದ್ರಿತ ವಿಧಾನದ ಬದಲು ಮಾನವ ಕೇಂದ್ರಿತ ದೃಷ್ಟಿಕೋನದತ್ತ ನಾನು ನಿರಂತರವಾಗಿ ನಿಮ್ಮ ಗಮನ ಸೆಳೆದಿದ್ದೇನೆ. ಇಂದು ಭಾರತದಂತಹ ಅನೇಕ ದೇಶಗಳು ಬಹಳಷ್ಟು ಹೊಂದಿವೆ, ಅದನ್ನು ನಾವು ಇಡೀ ಪ್ರಪಂಚದೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಮಾನವೀಯತೆಯ ಹಿತದೃಷ್ಟಿಯಿಂದ ಚಂದ್ರಯಾನ ಮಿಷನ್ ನ ದತ್ತಾಂಶವನ್ನು ಎಲ್ಲರೊಂದಿಗೂ ಹಂಚಿಕೊಳ್ಳುವ ಬಗ್ಗೆ ಭಾರತ ಮಾತನಾಡಿದೆ. ಇದು ಮಾನವ ಕೇಂದ್ರಿತ ಬೆಳವಣಿಗೆಯ ಬಗ್ಗೆ ನಮ್ಮ ಬದ್ಧತೆಗೆ ಪುರಾವೆಯಾಗಿದೆ.

ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಕೊನೆಯ ಮೈಲಿ ತಲುಪಿಸಲು ಅನುಕೂಲವಾಗುವಂತೆ ಭಾರತವು ತಂತ್ರಜ್ಞಾನವನ್ನು ಬಳಸಿಕೊಂಡಿದೆ. ನಮ್ಮ ಅತ್ಯಂತ ದೂರದ ಹಳ್ಳಿಗಳಲ್ಲಿಯೂ ಸಹ, ಸಣ್ಣ ಪ್ರಮಾಣದ ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ಬಳಸುತ್ತಿದ್ದಾರೆ.

ಭಾರತದ ಅಧ್ಯಕ್ಷತೆಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕಾಗಿ ಬಲವಾದ ಚೌಕಟ್ಟನ್ನು ಒಪ್ಪಲಾಗಿದೆ ಎಂದು ನನಗೆ ಸಂತೋಷವಾಗಿದೆ. ಅಂತೆಯೇ, "ಅಭಿವೃದ್ಧಿಗಾಗಿ ದತ್ತಾಂಶವನ್ನು ಬಳಸಿಕೊಳ್ಳುವ ಜಿ 20 ತತ್ವಗಳನ್ನು" ಸಹ ಸ್ವೀಕರಿಸಲಾಗಿದೆ.

ಗ್ಲೋಬಲ್ ಸೌತ್ ಅಭಿವೃದ್ಧಿಗಾಗಿ " ಡೇಟಾ ಫಾರ್ ಡೆವಲಪ್ಮೆಂಟ್ ಕೆಪಾಸಿಟಿ ಬಿಲ್ಡಿಂಗ್ ಇನಿಶಿಯೇಟಿವ್ (ಅಭಿವೃದ್ಧಿ ಸಾಮರ್ಥ್ಯ ನಿರ್ಮಾಣ ಉಪಕ್ರಮಕ್ಕಾಗಿ ದತ್ತಾಂಶ)" ಅನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ಸ್ಟಾರ್ಟ್ ಅಪ್ 20 ಒಡಂಬಡಿಕೆ ಗುಂಪಿನ ರಚನೆಯೂ ಒಂದು ದೊಡ್ಡ ಹೆಜ್ಜೆಯಾಗಿದೆ.

ಸ್ನೇಹಿತರೇ,

ಇಂದು, ನಾವು ಹೊಸ ತಲೆಮಾರಿನ ತಂತ್ರಜ್ಞಾನಗಳಲ್ಲಿ ಅಭೂತಪೂರ್ವ ಪ್ರಮಾಣ ಮತ್ತು ವೇಗವನ್ನು ನೋಡುತ್ತಿದ್ದೇವೆ. ಕೃತಕ ಬುದ್ಧಿಮತ್ತೆ ನಮ್ಮ ಮುಂದೆ ಅಂತಹ ಉದಾಹರಣೆಯಾಗಿದೆ. 2019 ರಲ್ಲಿ, ನಾವು "ಎಐ (ಕೃತಕ ಬುದ್ಧಿಮತ್ತೆ) ತತ್ವಗಳನ್ನು" ಅಳವಡಿಸಿಕೊಂಡಿದ್ದೇವೆ. ಇಂದು, ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಬೇಕಾಗಿದೆ.

ಜವಾಬ್ದಾರಿಯುತ ಮಾನವ ಕೇಂದ್ರಿತ ಎಐ ಆಡಳಿತಕ್ಕಾಗಿ ನಾವು ಒಂದು ಚೌಕಟ್ಟನ್ನು ಸ್ಥಾಪಿಸಬೇಕೆಂದು ನಾನು ಪ್ರಸ್ತಾಪಿಸುತ್ತೇನೆ. ಈ ನಿಟ್ಟಿನಲ್ಲಿ ಭಾರತವೂ ತನ್ನ ಸಲಹೆಗಳನ್ನು ನೀಡಲಿದೆ. ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಜಾಗತಿಕ ಕಾರ್ಯಪಡೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಎಲ್ಲಾ ದೇಶಗಳು ಎಐ ಪ್ರಯೋಜನಗಳನ್ನು ಪಡೆಯುವುದು ನಮ್ಮ ಪ್ರಯತ್ನವಾಗಿದೆ.

ಸ್ನೇಹಿತರೇ,

ಇಂದು, ನಮ್ಮ ಜಗತ್ತು ಇತರ ಕೆಲವು ಜ್ವಲಂತ ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ. ಇದು ನಮ್ಮ ಎಲ್ಲಾ ದೇಶಗಳ ವರ್ತಮಾನ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸೈಬರ್ ಭದ್ರತೆ ಮತ್ತು ಕ್ರಿಪ್ಟೋ ಕರೆನ್ಸಿಯ ಸವಾಲುಗಳ ಬಗ್ಗೆ ನಮಗೆ ತಿಳಿದಿದೆ. ಕ್ರಿಪ್ಟೋ-ಕರೆನ್ಸಿ ಕ್ಷೇತ್ರವು ಎಲ್ಲರಿಗೂ ಹೊಸ ವಿಷಯವಾಗಿ ಹೊರಹೊಮ್ಮಿದೆ, ಅಂದರೆ ಸಾಮಾಜಿಕ ಕ್ರಮ, ವಿತ್ತೀಯ ಮತ್ತು ಹಣಕಾಸು ಸ್ಥಿರತೆ. ಆದ್ದರಿಂದ, ಕ್ರಿಪ್ಟೋ-ಕರೆನ್ಸಿಗಳನ್ನು ನಿಯಂತ್ರಿಸಲು ನಾವು ಜಾಗತಿಕ ಮಾನದಂಡಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಬ್ಯಾಂಕ್ ನಿಯಂತ್ರಣದ ಬಗ್ಗೆ ಬಾಸೆಲ್ ಮಾನದಂಡಗಳನ್ನು ನಾವು ಮಾದರಿಯಾಗಿ ನಮ್ಮ ಮುಂದೆ ಹೊಂದಿದ್ದೇವೆ.

ಸಾಧ್ಯವಾದಷ್ಟು ಬೇಗ ನಾವು ಈ ದಿಕ್ಕಿನಲ್ಲಿ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಅಂತೆಯೇ, ಜಾಗತಿಕ ಸಹಕಾರ ಮತ್ತು ಸೈಬರ್ ಭದ್ರತೆಗೆ ಚೌಕಟ್ಟು ಅತ್ಯಗತ್ಯ. ಭಯೋತ್ಪಾದನೆಯು ಸೈಬರ್ ಪ್ರಪಂಚದಿಂದ ಹೊಸ ಮಾರ್ಗಗಳು ಮತ್ತು ಹೊಸ ಧನಸಹಾಯ ವಿಧಾನಗಳನ್ನು ಬಳಸಿಕೊಳ್ಳುತ್ತಿದೆ, ಇದು ಪ್ರತಿ ರಾಷ್ಟ್ರದ ಭದ್ರತೆ ಮತ್ತು ಸಮೃದ್ಧಿಗೆ ನಿರ್ಣಾಯಕ ವಿಷಯವಾಗಿದೆ.

ನಾವು ಪ್ರತಿ ದೇಶದ ಭದ್ರತೆ ಮತ್ತು ಪ್ರತಿ ದೇಶದ ಸೂಕ್ಷ್ಮತೆಯ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ, ಒಂದು ಭವಿಷ್ಯದ ಭಾವನೆ ಬಲಗೊಳ್ಳುತ್ತದೆ.

ಸ್ನೇಹಿತರೇ,

ಜಗತ್ತನ್ನು ಉತ್ತಮ ಭವಿಷ್ಯದತ್ತ ಕೊಂಡೊಯ್ಯಲು, ಜಾಗತಿಕ ವ್ಯವಸ್ಥೆಗಳು ವರ್ತಮಾನದ ವಾಸ್ತವಗಳಿಗೆ ಅನುಗುಣವಾಗಿರುವುದು ಅವಶ್ಯಕ. ಇಂದು "ವಿಶ್ವಸಂಸ್ಥೆಯ ಭದ್ರತಾ ಮಂಡಳಿ" ಕೂಡ ಇದಕ್ಕೆ ಉದಾಹರಣೆಯಾಗಿದೆ. ವಿಶ್ವ ಸಂಸ್ಥೆ ಸ್ಥಾಪನೆಯಾದಾಗ, ಆ ಸಮಯದಲ್ಲಿ ಜಗತ್ತು ಇಂದಿನದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಆ ಸಮಯದಲ್ಲಿ ವಿಶ್ವಸಂಸ್ಥೆಯಲ್ಲಿ 51 ಸ್ಥಾಪಕ ಸದಸ್ಯರಿದ್ದರು. ಇಂದು ವಿಶ್ವಸಂಸ್ಥೆಯಲ್ಲಿ ಸೇರಿಸಲಾದ ದೇಶಗಳ ಸಂಖ್ಯೆ ಸುಮಾರು 200. ಇದರ ಹೊರತಾಗಿಯೂ, ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರು ಇನ್ನೂ ಒಂದೇ ಆಗಿದ್ದಾರೆ. ಅಂದಿನಿಂದ ಇಂದಿನವರೆಗೆ ಜಗತ್ತು ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಬದಲಾಗಿದೆ. ಅದು ಸಾರಿಗೆ, ಸಂವಹನ, ಆರೋಗ್ಯ, ಶಿಕ್ಷಣವಾಗಿರಲಿ, ಪ್ರತಿಯೊಂದು ಕ್ಷೇತ್ರವೂ ರೂಪಾಂತರಗೊಂಡಿದೆ. ಈ ಹೊಸ ವಾಸ್ತವಗಳು ನಮ್ಮ ಹೊಸ ಜಾಗತಿಕ ರಚನೆಯಲ್ಲಿ ಪ್ರತಿಬಿಂಬಿತವಾಗಬೇಕು.

ಬದಲಾಗುತ್ತಿರುವ ಸಮಯಕ್ಕೆ ಹೊಂದಿಕೊಳ್ಳಲು ವಿಫಲವಾದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅನಿವಾರ್ಯವಾಗಿ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ ಎಂಬುದು ಪ್ರಕೃತಿಯ ನಿಯಮವಾಗಿದೆ. ಕಳೆದ ವರ್ಷಗಳಲ್ಲಿ ಅನೇಕ ಪ್ರಾದೇಶಿಕ ವೇದಿಕೆಗಳು ಅಸ್ತಿತ್ವಕ್ಕೆ ಬರಲು ಕಾರಣವೇನು ಮತ್ತು ಅವು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತಿವೆ ಎಂದು ನಾವು ಮುಕ್ತ ಮನಸ್ಸಿನಿಂದ ಯೋಚಿಸಬೇಕು.

ಸ್ನೇಹಿತರೇ,

ಇಂದು, ಪ್ರತಿಯೊಂದು ಜಾಗತಿಕ ಸಂಸ್ಥೆಯೂ ತನ್ನ ಪ್ರಸ್ತುತತೆಯನ್ನು ಹೆಚ್ಚಿಸಲು ಸುಧಾರಣೆ ಮಾಡುವುದು ಅವಶ್ಯಕ. ಇದನ್ನು ಗಮನದಲ್ಲಿಟ್ಟುಕೊಂಡು, ನಿನ್ನೆ ನಾವು ಆಫ್ರಿಕನ್ ಒಕ್ಕೂಟವನ್ನು ಜಿ -20 ಯ ಖಾಯಂ ಸದಸ್ಯನನ್ನಾಗಿ ಮಾಡುವ ಐತಿಹಾಸಿಕ ಉಪಕ್ರಮವನ್ನು ಕೈಗೊಂಡಿದ್ದೇವೆ. ಅಂತೆಯೇ, ನಾವು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಆದೇಶವನ್ನು ವಿಸ್ತರಿಸಬೇಕಾಗಿದೆ. ಈ ದಿಕ್ಕಿನಲ್ಲಿ ನಮ್ಮ ನಿರ್ಧಾರಗಳು ತಕ್ಷಣ ಮತ್ತು ಪರಿಣಾಮಕಾರಿಯಾಗಿರಬೇಕು.

ಸ್ನೇಹಿತರೇ,

ಕ್ಷಿಪ್ರ ಬದಲಾವಣೆಯಿಂದ ಗುರುತಿಸಲ್ಪಟ್ಟ ಜಗತ್ತಿನಲ್ಲಿ, ನಮಗೆ ಪರಿವರ್ತನೆ ಮಾತ್ರವಲ್ಲ, ಸುಸ್ಥಿರತೆ ಮತ್ತು ಸ್ಥಿರತೆಯೂ ಬೇಕು. ಬನ್ನಿ! ಹಸಿರು ಅಭಿವೃದ್ಧಿ ಒಪ್ಪಂದ, ಎಸ್ ಡಿಜಿಗಳ ಕ್ರಿಯಾ ಯೋಜನೆ, ಭ್ರಷ್ಟಾಚಾರ ವಿರೋಧಿ ಉನ್ನತ ಮಟ್ಟದ ತತ್ವಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಎಂಡಿಬಿ ಸುಧಾರಣೆಗಳ ನಮ್ಮ ನಿರ್ಣಯಗಳನ್ನು ನಾವು ಫಲಪ್ರದಗೊಳಿಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ.

ಘನತೆವೆತ್ತರೇ,

ಗೌರವಾನ್ವಿತರೇ,

ಈಗ ನಾನು ನಿಮ್ಮ ಆಲೋಚನೆಗಳನ್ನು ಕೇಳಲು ಬಯಸುತ್ತೇನೆ.

ಹಕ್ಕುನಿರಾಕರಣೆ - ಇದು ಪ್ರಧಾನ ಮಂತ್ರಿ ಅವರ ಪತ್ರಿಕಾ ಹೇಳಿಕೆಯ ಅಂದಾಜು ಅನುವಾದವಾಗಿದೆ. ಮೂಲ ಪತ್ರಿಕಾ ಹೇಳಿಕೆಯನ್ನು ಹಿಂದಿಯಲ್ಲಿ ನೀಡಲಾಗಿದೆ

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s PC exports double in a year, US among top buyers

Media Coverage

India’s PC exports double in a year, US among top buyers
NM on the go

Nm on the go

Always be the first to hear from the PM. Get the App Now!
...
PM Congratulates India’s Men’s Junior Hockey Team on Bronze Medal at FIH Hockey Men’s Junior World Cup 2025
December 11, 2025

The Prime Minister, Shri Narendra Modi, today congratulated India’s Men’s Junior Hockey Team on scripting history at the FIH Hockey Men’s Junior World Cup 2025.

The Prime Minister lauded the young and spirited team for securing India’s first‑ever Bronze medal at this prestigious global tournament. He noted that this remarkable achievement reflects the talent, determination and resilience of India’s youth.

In a post on X, Shri Modi wrote:

“Congratulations to our Men's Junior Hockey Team on scripting history at the FIH Hockey Men’s Junior World Cup 2025! Our young and spirited team has secured India’s first-ever Bronze medal at this prestigious tournament. This incredible achievement inspires countless youngsters across the nation.”