ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲಂಕಾದ ಅಧ್ಯಕ್ಷರಾದ ಮಾನ್ಯ ಅನುರ ಕುಮಾರ ದಿಸ್ಸಾನಾಯಕ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.
ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯ ಬೆಳವಣಿಗೆಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಜಾಗತಿಕ ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರುವ ಅಡೆತಡೆಗಳ ಬಗ್ಗೆ ಅವರು ಚರ್ಚೆಯಲ್ಲಿ ಒತ್ತು ನೀಡಿದರು.
ಇಡೀ ಜಗತ್ತಿನ ಹಿತಾಸಕ್ತಿಗಾಗಿ ಹಡಗು ಮಾರ್ಗಗಳನ್ನು ಮುಕ್ತ ಮತ್ತು ಸುರಕ್ಷಿತವಾಗಿಡುವ ಮಹತ್ವವನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು.
ಇಬ್ಬರೂ ನಾಯಕರು ಭಾರತ - ಶ್ರೀಲಂಕಾ ಇಂಧನ ಸಹಕಾರವನ್ನು ಬಲಪಡಿಸುವ ಮತ್ತು ಪ್ರಾದೇಶಿಕ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ವಿವಿಧ ಉಪಕ್ರಮಗಳ ಪ್ರಗತಿ ಪರಾಮರ್ಶೆ ನಡೆಸಿದರು.
ಭಾರತದ “ನೆರೆಹೊರೆ ಮೊದಲು” ನೀತಿ ಮತ್ತು “ಮಹಾಸಾಗರ್” ಮುನ್ನೋಟಕ್ಕೆ ಅನುಗುಣವಾಗಿ ಹಂಚಿತ ಸವಾಲುಗಳನ್ನು ಎದುರಿಸಲು ಒಟ್ಟಾಗಿ ನಿಕಟವಾಗಿ ಕೆಲಸ ಮಾಡುವ ಭಾರತದ ದೃಢ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು.
ಪರಸ್ಪರ ಸಂಪರ್ಕದಲ್ಲಿರಲು ಎರಡೂ ದೇಶಗಳ ನಾಯಕರು ಸಮ್ಮತಿಸಿದರು.
Spoke with President Anura Kumara Dissanayake and discussed the evolving situation in West Asia, with particular focus on disruptions affecting global energy security.
— Narendra Modi (@narendramodi) March 24, 2026
We reviewed progress on key initiatives aimed at strengthening India-Sri Lanka energy cooperation and enhancing…
ජනාධිපති අනුර කුමාර දිසානායක මැතිතුමා සමඟ බටහිර ආසියාවේ වර්ධනය වන තත්ත්වය පිළිබඳව සාකච්ඡා කළෙමි. එහිදී විශේෂයෙන් ගෝලීය බලශක්ති සුරක්ෂිතතාවයට බලපාන බාධාවන් සම්බන්ධයෙන් අවධානය යොමු කරන ලදී.
— Narendra Modi (@narendramodi) March 24, 2026
අපි ඉන්දියා-ශ්රී ලංකා බලශක්ති සහයෝගීතාවය ශක්තිමත් කිරීම සහ කලාපීය ආරක්ෂාව ඉහළ නැංවීම…
ஜனாதிபதி அநுர குமார திசாநாயக்க அவர்களுடன் , மேற்கு ஆசியாவில் மேலெழுந்துள்ள சூழ்நிலை தொடர்பாகவும், குறிப்பாக உலகளாவிய எரிசக்தி துறை பாதுகாப்பிற்கு பாதிப்பினை ஏற்படுத்தும் இடையூறுகள் குறித்தும் கலந்துரையாடப்பட்டது.
— Narendra Modi (@narendramodi) March 24, 2026
அத்துடன், இந்தியா-இலங்கை இடையில் எரிசக்தி ஒத்துழைப்பை…


