ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹುತಾತ್ಮ ದಿನದ ಅಂಗವಾಗಿ ಮಹಾನ್ ಕ್ರಾಂತಿಕಾರಿ, ಭಾರತ ಮಾತೆಯ ವೀರ ಪುತ್ರ ಚಂದ್ರ ಶೇಖರ ಆಜಾದ್ ಅವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.

ಚಂದ್ರ ಶೇಖರ ಆಜಾದ್ ಅವರು ಭಾರತ ಮಾತೆಯನ್ನು ಗುಲಾಮಗಿರಿಯ ಸಂಕೊಲೆಯಿಂದ ಮುಕ್ತಗೊಳಿಸಲು ಎಲ್ಲವನ್ನೂ ತ್ಯಾಗ ಮಾಡಿದರು. ಆ ಕಾರಣಕ್ಕಾಗಿ ಅವರು ಸದಾ ಸ್ಮರಣೀಯರಾಗಿರುತ್ತಾರೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು. 

ಅಮರ ಕ್ರಾಂತಿಕಾರಿಯ ಪರಂಪರೆಯನ್ನು ಸ್ಮರಿಸಿಕೊಂಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಅನ್ಯಾಯದ ವಿರುದ್ಧ ದೃಢವಾಗಿ ನಿಲ್ಲುವ ಸಂಕಲ್ಪವೇ ನಿಜವಾದ ಶೌರ್ಯದ ಸಾರವೆಂದು ಚಂದ್ರಶೇಖರ ಆಜಾದ್ ಅವರ ಜೀವನ ತೋರಿಸುತ್ತದೆ. ಅವರು, ಅವರ ತಾಯ್ನಾಡಿಗಾಗಿ ಮಾಡಿದ ತ್ಯಾಗ ವೀರದ ಕಥೆಗಳು ದೇಶದ ಪ್ರತಿಯೊಂದು ಪೀಳಿಗೆಯನ್ನೂ ಸದಾ ಪ್ರೇರೇಪಿಸುತ್ತಿರುತ್ತದೆ ಎಂದು ಸಂಸ್ಕೃತ ಸುಭಾಷಿತದ ಮೂಲಕ ವಿವರಿಸಿದರು. 

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ;

“भारत माता के वीर सपूत चंद्रशेखर आजाद के बलिदान दिवस पर उन्हें मेरी आदरपूर्ण श्रद्धांजलि। उन्होंने मां भारती को गुलामी की बेड़ियों से आजाद कराने के लिए अपना सर्वस्व न्योछावर कर दिया, जिसके लिए वे सदैव स्मरणीय रहेंगे।”

“अमर क्रांतिकारी चंद्रशेखर आजाद का जीवन बताता है कि अन्याय के खिलाफ अडिग रहने का संकल्प ही सच्चा पराक्रम है। मातृभूमि के लिए उनके बलिदान की गाथा देश की हर पीढ़ी को प्रेरित करती रहेगी।

न हि शौर्यात्परं किञ्चित् त्रिषु लोकेषु विद्यते।

शूरः सर्वं पालयति सर्वं शूरे प्रतिष्ठितम् ।।”

“ಮೂರು ಲೋಕಗಳಲ್ಲಿ ಶೌರ್ಯಕ್ಕಿಂತ ಉನ್ನತವಾದ ಮತ್ತೊಂದು ತತ್ವವೇ ಇಲ್ಲ. ಚರಾಚರ ಜಗತ್ತನ್ನು ಪೋಷಿಸಿ ರಕ್ಷಿಸುವ ಮೂಲಶಕ್ತಿ ಶೌರ್ಯವೇ ಆಗಿದೆ. ಲೋಕದಲ್ಲಿನ ಸಕಲ ಮಾನ, ಸಮೃದ್ಧಿ ಮತ್ತು ಧರ್ಮವು ವೀರರ ಶೌರ್ಯದಲ್ಲಿಯೇ ನೆಲೆಗೊಂಡಿದೆ.”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
As Naxalism ends in Chhattisgarh, village gets tap water for first time

Media Coverage

As Naxalism ends in Chhattisgarh, village gets tap water for first time
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಎಪ್ರಿಲ್ 2026
April 13, 2026

Nari Shakti, 7% Growth & Global Respect: PM Modi Leadership Formula India is Celebrating