ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾನ್ ನಾಯಕ ಬಾಳಾಸಾಹೇಬ್ ಠಾಕ್ರೆ ಅವರ ಜನ್ಮ ಶತಮಾನೋತ್ಸವದಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಮಹಾರಾಷ್ಟ್ರದ ಸಾಮಾಜಿಕ-ರಾಜಕೀಯ ಭೂದೃಶ್ಯವನ್ನು ಆಳವಾಗಿ ರೂಪಿಸಿದ ಶ್ರೇಷ್ಠ ವ್ಯಕ್ತಿ ಎಂದು ಸ್ಮರಿಸಿದರು.

ಬಾಳಾಸಾಹೇಬ್ ಠಾಕ್ರೆ ಅವರು ತೀಕ್ಷ್ಣವಾದ ಬುದ್ಧಿಶಕ್ತಿ, ಶಕ್ತಿಯುತ ವಾಕ್ಚಾತುರ್ಯ ಮತ್ತು ರಾಜಿಯಾಗದ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದರು ಮತ್ತು ಜನರೊಂದಿಗೆ ಅನನ್ಯ ಸಂಪರ್ಕವನ್ನು ಹೊಂದಿದ್ದರು ಎಂದು ಪ್ರಧಾನಿ ಹೇಳಿದರು.

ಬಾಳಾಸಾಹೇಬ್ ಠಾಕ್ರೆ ಅವರು ರಾಜಕೀಯವನ್ನು ಮೀರಿ ಸಂಸ್ಕೃತಿ, ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬಗ್ಗೆ ತೀವ್ರ ಒಲವು ಹೊಂದಿದ್ದರು ಎಂದು ಪ್ರಧಾನಿ ಹೇಳಿದರು. ವ್ಯಂಗ್ಯಚಿತ್ರಕಾರರಾಗಿ ಬಾಳಾಸಾಹೇಬ್ ಅವರ ವೃತ್ತಿಜೀವನವು ಸಮಾಜದ ಬಗ್ಗೆ ಅವರ ತೀಕ್ಷ್ಣ ಅವಲೋಕನ ಮತ್ತು ವಿವಿಧ ವಿಷಯಗಳ ಬಗ್ಗೆ ಅವರ ನಿರ್ಭೀತ ವ್ಯಾಖ್ಯಾನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಸ್ಮರಿಸಿದರು.

ಮಹಾರಾಷ್ಟ್ರದ ಪ್ರಗತಿಗಾಗಿ ಬಾಳಾಸಾಹೇಬ್ ಠಾಕ್ರೆ ಅವರ ದೃಷ್ಟಿಕೋನದಿಂದ ತಾವು ಹೆಚ್ಚು ಪ್ರೇರಿತನಾಗಿದ್ದೇನೆ ಎಂದು ಹೇಳಿದ ಪ್ರಧಾನಿ, ಆ ದೃಷ್ಟಿಕೋನವನ್ನು ಈಡೇರಿಸಲು ಪ್ರಯತ್ನಗಳು ಸದಾ ಮುಂದುವರಿಯುತ್ತವೆ ಎಂದು ದೃಢಪಡಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

"ಬಾಳಾಸಾಹೇಬ್ ಠಾಕ್ರೆ ಅವರ ಜನ್ಮ ಶತಮಾನೋತ್ಸವದಂದು, ಮಹಾರಾಷ್ಟ್ರದ ಸಾಮಾಜಿಕ-ರಾಜಕೀಯ ಭೂದೃಶ್ಯವನ್ನು ಆಳವಾಗಿ ರೂಪಿಸಿದ ಶ್ರೇಷ್ಠ ವ್ಯಕ್ತಿಗೆ ನಾವು ಗೌರವ ಸಲ್ಲಿಸುತ್ತೇವೆ.

ತೀಕ್ಷ್ಣವಾದ ಬುದ್ಧಿಶಕ್ತಿ, ಶಕ್ತಿಯುತ ವಾಕ್ಚಾತುರ್ಯ ಮತ್ತು ರಾಜಿಯಾಗದ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದ ಬಾಳಾಸಾಹೇಬ್ ಅವರು ಜನರೊಂದಿಗೆ ವಿಶಿಷ್ಟ ಸಂಪರ್ಕವನ್ನು ಹೊಂದಿದ್ದರು. ರಾಜಕೀಯದ ಜತೆಗೆ, ಬಾಳಾಸಾಹೇಬ್ ಅವರು ಸಂಸ್ಕೃತಿ, ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬಗ್ಗೆ ಆಳವಾದ ಒಲವು ಹೊಂದಿದ್ದರು. ವ್ಯಂಗ್ಯಚಿತ್ರಕಾರರಾಗಿ ಅವರ ವೃತ್ತಿಜೀವನವು ಸಮಾಜದ ಬಗ್ಗೆ ಅವರ ತೀಕ್ಷ್ಣ ಅವಲೋಕನ ಮತ್ತು ವಿವಿಧ ವಿಷಯಗಳ ಬಗ್ಗೆ ಅವರ ನಿರ್ಭೀತ ವ್ಯಾಖ್ಯಾನವನ್ನು ಪ್ರತಿಬಿಂಬಿಸುತ್ತದೆ.

ಮಹಾರಾಷ್ಟ್ರದ ಪ್ರಗತಿಗಾಗಿ ಅವರ ದೃಷ್ಟಿಕೋನದಿಂದ ನಾವು ಹೆಚ್ಚು ಸ್ಫೂರ್ತಿ ಪಡೆದಿದ್ದೇವೆ ಮತ್ತು ಅದನ್ನು ಪೂರೈಸಲು ಯಾವಾಗಲೂ ಕೆಲಸ ಮಾಡುತ್ತೇವೆ."

ributes to the great Balasaheb Thackeray on his birth centenary, remembering him as a towering figure who profoundly shaped Maharashtra’s socio-political landscape.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM-KISAN crosses ₹4.27 lakh crore disbursal, over 9.35 crore farmers benefit

Media Coverage

PM-KISAN crosses ₹4.27 lakh crore disbursal, over 9.35 crore farmers benefit
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಮಾರ್ಚ್ 2026
March 25, 2026

PM Modi’s Blueprint for a Stronger India: Empowerment, Infrastructure & Economic Resilience in Action