ಪೋಲೆಂಡ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರ್ಸಾದಲ್ಲಿರುವ ಡೋಬ್ರಿ ಮಹಾರಾಜ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು. 

ವಾರ್ಸಾದ ಗುಡ್ ಮಹಾರಾಜರ ಚೌಕದಲ್ಲಿರುವ ಈ ಸ್ಮಾರಕವು, [ಆಧುನಿಕ ಗುಜರಾತ್‌ನ ಜಾಮ್‌ನಗರದ] ನವನಗರದ ದಿಗ್ವಿಜಯಸಿಂಹ ರಂಜಿತ್ ಸಿಂಹ ಜಡೇಜಾ ಅವರ ಬಗ್ಗೆ ಪೋಲೆಂಡ್‌ ಸರ್ಕಾರ ಮತ್ತು ಅಲ್ಲಿನ ಜನರು ಹೊಂದಿರುವ ಅಪಾರ ಗೌರವ ಮತ್ತು ಕೃತಜ್ಞತೆಯನ್ನು ಸಾರುವ ಸ್ಮರಣಾರ್ಥವಾಗಿದೆ. 

ವಿಶ್ವದ ಎರಡನೆಯ ಮಹಾಯುದ್ಧದ ಸಮಯದಲ್ಲಿ, ಜಾಮ್ ಸಾಹೇಬ್ ಅವರು ಸಾವಿರಾರು ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದರು. ಇಂದು ಪೋಲೆಂಡ್‌ನಲ್ಲಿ ಡೋಬ್ರಿ ಅಂದರೆ ಉತ್ತಮ ಮಹಾರಾಜ ಎಂದು ಅವರನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವರ ಉದಾರತೆಯ ಆಳವಾದ ಪ್ರಭಾವವು ಪೋಲೆಂಡ್ ಜನಮಾನಸದಲ್ಲಿ ಉಳಿದಿದೆ. ಸ್ಮಾರಕದ ಬಳಿ, ಪ್ರಧಾನಿ ಮೋದಿಯವರು ಜಾಮ್ ಸಾಹೇಬ್ ಅವರಿಂದ ಆಶ್ರಯ ಪಡೆದ ಪೋಲೆಂಡ್ ಜನರ ವಂಶಸ್ಥರನ್ನು ಭೇಟಿ ಮಾಡಿದರು. 

ಸ್ಮಾರಕಕ್ಕೆ ಪ್ರಧಾನ ಮಂತ್ರಿಯವರ ಭೇಟಿಯು ಭಾರತ ಮತ್ತು ಪೋಲೆಂಡ್ ನಡುವಿನ ವಿಶೇಷ ಐತಿಹಾಸಿಕ ಸಂಬಂಧವನ್ನು ಎತ್ತಿ ತೋರಿಸುತ್ತದೆ, ಇದು ಉಭಯ ದೇಶಗಳ ಜನರಿಂದ ಪಾಲಿಸಿ ಪೋಷಿಸಲ್ಪಟ್ಟಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IndiaAI Mission-backed startup Avataar launches indigenous video AI model

Media Coverage

IndiaAI Mission-backed startup Avataar launches indigenous video AI model
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಜೂನ್ 2026
June 13, 2026

Viksit Bharat Accelerating: Tech, Defense, Infra & Exports Power India's Global Leap Under the Leadership of PM Modi