ರಾಜ್ಯಗಳ ಅಭಿವೃದ್ಧಿಯು ರಾಷ್ಟ್ರದ ಪ್ರಗತಿಗೆ ಇಂಧನ ನೀಡುತ್ತದೆ ಎಂಬ ಮಾರ್ಗರೂಪಿ ತತ್ವದಿಂದ ಪ್ರೇರಿತರಾಗಿ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಧ್ಯೇಯದಲ್ಲಿ ನಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ: ಪ್ರಧಾನಮಂತ್ರಿ
ವಿಶ್ವ ಶಾಂತಿಯ ಪರಿಕಲ್ಪನೆಯು ಭಾರತದ ಮೂಲಭೂತ ಚಿಂತನೆಯ ಅವಿಭಾಜ್ಯ ಅಂಗವಾಗಿದೆ: ಪ್ರಧಾನಮಂತ್ರಿ
ಪ್ರತಿಯೊಂದು ಜೀವಿಯಲ್ಲೂ ದೈವಿಕತೆಯನ್ನು ನೋಡುವವರು ನಾವು, ಸ್ವಯಂನಲ್ಲಿ ಅನಂತತೆಯನ್ನು ಗ್ರಹಿಸುವವರು ನಾವು; ಇಲ್ಲಿನ ಪ್ರತಿಯೊಂದು ಧಾರ್ಮಿಕ ಆಚರಣೆಯು ಗಂಭೀರವಾದ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ - ಪ್ರಪಂಚದ ಕಲ್ಯಾಣಕ್ಕಾಗಿ ಪ್ರಾರ್ಥನೆ, ಎಲ್ಲಾ ಜೀವಿಗಳಲ್ಲಿ ಸದ್ಭಾವನೆಗಾಗಿ ಪ್ರಾರ್ಥನೆ: ಪ್ರಧಾನಮಂತ್ರಿ
ಜಗತ್ತಿನಲ್ಲಿ ಎಲ್ಲಿಯಾದರೂ ಬಿಕ್ಕಟ್ಟು ಅಥವಾ ವಿಪತ್ತು ಸಂಭವಿಸಿದಾಗ, ಭಾರತವು ಸಹಾಯ ನೀಡಲು ವಿಶ್ವಾಸಾರ್ಹ ಪಾಲುದಾರನಾಗಿ ಮುಂದೆ ಬರುತ್ತದೆ, ಮೊದಲ ಪ್ರತಿಕ್ರಿಯೆಯಾಗಿ ಕಾರ್ಯನಿರ್ವಹಿಸುತ್ತದೆ: ಪ್ರಧಾನಮಂತ್ರಿ
"ರಾಜ್ಯಗಳ ಅಭಿವೃದ್ಧಿಯು ರಾಷ್ಟ್ರದ ಪ್ರಗತಿಗೆ ಇಂಧನ ನೀಡುತ್ತದೆ ಎಂಬ ಮಾರ್ಗದರ್ಶಿ ತತ್ವದಿಂದ ಪ್ರೇರಿತರಾಗಿ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಧ್ಯೇಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಛತ್ತೀಸ್‌ ಗಢದ ನವ ರಾಯ್‌ ಪುರದಲ್ಲಿ ಇಂದು ಆಧ್ಯಾತ್ಮಿಕ ಕಲಿಕೆ, ಶಾಂತಿ ಮತ್ತು ಧ್ಯಾನಕ್ಕಾಗಿ ಆಧುನಿಕ ಕೇಂದ್ರವಾದ "ಶಾಂತಿ ಶಿಖರ"ದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬ್ರಹ್ಮ ಕುಮಾರಿಗಳನ್ನು ಉದ್ದೇಶಿಸಿ ಭಾಷಣ ಮಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಛತ್ತೀಸ್‌ ಗಢ ರಚನೆಯಾಗಿ 25 ವರ್ಷಗಳು ತುಂಬುತ್ತಿರುವುದರಿಂದ ಇಂದು ಅತ್ಯಂತ ವಿಶೇಷ ದಿನವಾಗಿದೆ ಎಂದು ಹೇಳಿದರು. ಛತ್ತೀಸ್‌ ಗಢ, ಜಾರ್ಖಂಡ್ ಮತ್ತು ಉತ್ತರಾಖಂಡ್‌ ಗಳ ಜೊತೆಗೆ ಸ್ಥಾಪನೆಯಾಗಿ 25 ವರ್ಷಗಳು ಪೂರ್ಣಗೊಂಡಿವೆ . ದೇಶಾದ್ಯಂತ ಹಲವಾರು ಇತರ ರಾಜ್ಯಗಳು ಇಂದು ತಮ್ಮ ರಾಜ್ಯತ್ವ ದಿನವನ್ನು ಆಚರಿಸುತ್ತಿವೆ ಎಂದು ಹೇಳಿದರು. ಈ ಎಲ್ಲಾ ರಾಜ್ಯಗಳ ಜನತೆಗೆ ಅವರ ರಾಜ್ಯತ್ವ ದಿನದಂದು ಶ್ರೀ ಮೋದಿ ಅವರು ಶುಭಾಶಯಗಳನ್ನು ತಿಳಿಸಿದರು. "ರಾಜ್ಯಗಳ ಅಭಿವೃದ್ಧಿಯು ರಾಷ್ಟ್ರದ ಪ್ರಗತಿಗೆ ಇಂಧನ ನೀಡುತ್ತದೆ ಎಂಬ ಮಾರ್ಗದರ್ಶಿ ತತ್ವದಿಂದ ಪ್ರೇರಿತರಾಗಿ, ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಧ್ಯೇಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯಾಣದಲ್ಲಿ ಬ್ರಹ್ಮ ಕುಮಾರಿಯರಂತಹ ಸಂಸ್ಥೆಗಳು ವಹಿಸಿದ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಹಲವಾರು ದಶಕಗಳಿಂದ ಬ್ರಹ್ಮ ಕುಮಾರಿಯರ ಕುಟುಂಬದೊಂದಿಗೆ ಸಂಬಂಧ ಹೊಂದಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು. ಈ ಆಧ್ಯಾತ್ಮಿಕ ಚಳುವಳಿ ಆಲದ ಮರದಂತೆ ಬೆಳೆಯುವುದನ್ನು ತಾವು ನೋಡಿರುವುದಾಗಿ ಅವರು ಹೇಳಿದರು. 2011ರಲ್ಲಿ ಅಹಮದಾಬಾದ್‌ ನಲ್ಲಿ ನಡೆದ 'ಶಕ್ತಿಯ ಭವಿಷ್ಯ' ಕಾರ್ಯಕ್ರಮ, 2012ರಲ್ಲಿ ಸಂಸ್ಥೆಯ 75ನೇ ವಾರ್ಷಿಕೋತ್ಸವ ಮತ್ತು 2013ರಲ್ಲಿ ಪ್ರಯಾಗ್‌ ರಾಜ್ ಕಾರ್ಯಕ್ರಮವನ್ನು ಶ್ರೀ ಮೋದಿ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ದೆಹಲಿಗೆ ಬಂದ ನಂತರವೂ,ಅವರೊಂದಿಗೆ ಸಂವಹನ ನಡೆಸಿದಾಗಲೆಲ್ಲಾ, ಅದು ಆಜಾದಿ ಕಾ ಅಮೃತ್ ಮಹೋತ್ಸವ, ಸ್ವಚ್ಛ ಭಾರತ ಅಭಿಯಾನ ಅಥವಾ ಜಲ ಜನ ಅಭಿಯಾನದೊಂದಿಗೆ ಸಂಬಂಧ ಹೊಂದುವ ಅವಕಾಶಕ್ಕೆ ಸಂಬಂಧಿಸಿದ ಅಭಿಯಾನವಾಗಲಿ, ಈ ನಿಟ್ಟಿನಲ್ಲಿ ಅವರ ಪ್ರಯತ್ನಗಳ ಗಂಭೀರತೆ ಮತ್ತು ಸಮರ್ಪಣೆಯನ್ನು ತಾನು ನಿರಂತರವಾಗಿ ಗಮನಿಸಿದ್ದೇನೆ ಎಂದು ಅವರು ಹೇಳಿದರು. 

 

ಬ್ರಹ್ಮ ಕುಮಾರೀಸ್ ಸಂಸ್ಥೆಯೊಂದಿಗಿನ ತಮ್ಮ ಆಳವಾದ ವೈಯಕ್ತಿಕ ಸಂಪರ್ಕವನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭೋಚಿತವಾಗಿ ವ್ಯಕ್ತಪಡಿಸಿದರು, ದಾದಿ ಜಾನಕಿಯವರ ಪ್ರೀತಿ ಮತ್ತು ರಾಜಯೋಗಿನಿ ದಾದಿ ಹೃದಯ ಮೋಹಿನಿಯ ಮಾರ್ಗದರ್ಶನವನ್ನು ತಮ್ಮ ಜೀವನದ ಅಮೂಲ್ಯ ನೆನಪುಗಳೆಂದು ನೆನಪಿಸಿಕೊಳ್ಳುತ್ತಾರೆ. 'ಶಾಂತಿ ಶಿಖರ್ - ಶಾಂತಿಯುತ ಜಗತ್ತಿಗೆ ಅಕಾಡೆಮಿ' ಎಂಬ ಪರಿಕಲ್ಪನೆಯಲ್ಲಿ ಅವರ ಆಲೋಚನೆಗಳು ಸಾಕಾರಗೊಳ್ಳುವುದನ್ನು ನಾನು ನೋಡುತ್ತಿದ್ದೇನೆ ಎಂದು ಅವರು ಹೇಳಿದರು. ಮುಂಬರುವ ದಿನಗಳಲ್ಲಿ, ಈ ಸಂಸ್ಥೆ ಜಾಗತಿಕ ಶಾಂತಿಗಾಗಿ ಅರ್ಥಪೂರ್ಣ ಪ್ರಯತ್ನಗಳಿಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಶ್ರೀ ಮೋದಿ ಹೇಳಿದರು. ಈ ಶ್ಲಾಘನೀಯ ಉಪಕ್ರಮಕ್ಕಾಗಿ ಅವರು ಎಲ್ಲಾ ಹಾಜರಿರುವ ಮತ್ತು ಭಾರತ ಮತ್ತು ವಿದೇಶಗಳಲ್ಲಿರುವ ಬ್ರಹ್ಮಕುಮಾರೀಸ್ ಕುಟುಂಬದ ಸದಸ್ಯರಿಗೆ ಶುಭಾಶಯಗಳನ್ನು ಕೋರಿದರು. 

ಸಾಂಪ್ರದಾಯಿಕ ಹೇಳಿಕೆಯನ್ನು ಉಲ್ಲೇಖಿಸಿದ ಶ್ರೀ ಮೋದಿ ಅವರು, ನಡವಳಿಕೆಯು ಧರ್ಮ, ತಪಸ್ಸು ಮತ್ತು ಜ್ಞಾನದ ಅತ್ಯುನ್ನತ ರೂಪವಾಗಿದೆ ಮತ್ತು ನೀತಿವಂತ ನಡವಳಿಕೆಯಿಂದ ಯಾವುದನ್ನೂ ಸಾಧಿಸಲಾಗುವುದಿಲ್ಲ ಎಂದು ವಿವರಿಸಿದರು. ಪದಗಳನ್ನು ಕ್ರಿಯೆಗೆ ಅನುವಾದಿಸಿದಾಗ ನಿಜವಾದ ಪರಿವರ್ತನೆ ಸಂಭವಿಸುತ್ತದೆ ಮತ್ತು ಇದು ಬ್ರಹ್ಮಕುಮಾರೀಸ್ ಸಂಸ್ಥೆಯ ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ ಎಂದು ಅವರು ಹೇಳಿದರು. ಇಲ್ಲಿರುವ ಪ್ರತಿಯೊಬ್ಬ ಸಹೋದರಿಯೂ ಕಠಿಣ ತಪಸ್ಸು ಮತ್ತು ಆಧ್ಯಾತ್ಮಿಕ ಶಿಸ್ತಿಗೆ ಒಳಗಾಗುತ್ತಾರೆ ಎಂದು ಅವರು ಗಮನಿಸಿದರು. ಸಂಸ್ಥೆಯ ಗುರುತು ವಿಶ್ವ ಮತ್ತು ವಿಶ್ವದಲ್ಲಿ ಶಾಂತಿಗಾಗಿ ಪ್ರಾರ್ಥನೆಗೆ ಸಂಬಂಧಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಬ್ರಹ್ಮಕುಮಾರೀಸ್‌ನ ಮೊದಲ ಪ್ರಾರ್ಥನೆ "ಓಂ ಶಾಂತಿ" - ಇಲ್ಲಿ 'ಓಂ' ಬ್ರಹ್ಮ ಮತ್ತು ಇಡೀ ವಿಶ್ವವನ್ನು ಸೂಚಿಸುತ್ತದೆ ಮತ್ತು 'ಶಾಂತಿ' ಶಾಂತಿಯ ಆಕಾಂಕ್ಷೆಯನ್ನು ಸೂಚಿಸುತ್ತದೆ. ಅದಕ್ಕಾಗಿಯೇ ಬ್ರಹ್ಮಕುಮಾರೀಸ್‌ ನ ಆಲೋಚನೆಗಳು ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಪ್ರಜ್ಞೆಯ ಮೇಲೆ ಅಂತಹ ಆಳವಾದ ಪ್ರಭಾವ ಬೀರುತ್ತವೆ ಎಂದು  ಹೇಳಿದರು.

 

"ವಿಶ್ವ ಶಾಂತಿಯ ಪರಿಕಲ್ಪನೆಯು ಭಾರತದ ಮೂಲಭೂತ ಚಿಂತನೆ ಮತ್ತು ಆಧ್ಯಾತ್ಮಿಕ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದೆ" ಎಂದು ಪ್ರಧಾನಮಂತ್ರಿ ಅವರು ಹೇಳಿದರು, ಹಾಗೂ ಭಾರತವು ಪ್ರತಿಯೊಂದು ಜೀವಿಯಲ್ಲೂ ದೈವಿಕತೆಯನ್ನು ನೋಡುವ ಮತ್ತು ಸ್ವಯಂನಲ್ಲಿ ಅನಂತತೆಯನ್ನು ಗ್ರಹಿಸುವ ರಾಷ್ಟ್ರವಾಗಿದೆ ಎಂದು ಹೇಳಿದರು. ಭಾರತದಲ್ಲಿನ ಪ್ರತಿಯೊಂದು ಧಾರ್ಮಿಕ ಆಚರಣೆಯು ಪ್ರಪಂಚದ ಕಲ್ಯಾಣ ಮತ್ತು ಎಲ್ಲಾ ಜೀವಿಗಳಲ್ಲಿ ಸದ್ಭಾವನೆಗಾಗಿ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳ್ಳುತ್ತದೆ ಎಂದು ಅವರು ವಿಷಯಗಳನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿ ವಿವರಿಸಿ ಹೇಳಿದರು. ಅಂತಹ ಉದಾರ ಚಿಂತನೆ ಮತ್ತು ನಂಬಿಕೆಯ ಸರಾಗವಾದ ಸಂಗಮ ಮತ್ತು ಜಾಗತಿಕ ಕಲ್ಯಾಣದ ಚೈತನ್ಯವು ಭಾರತದ ನಾಗರಿಕತೆಯ ಪಾತ್ರದಲ್ಲಿ ಅಂತರ್ಗತವಾಗಿದೆ ಎಂದು ಶ್ರೀ ಮೋದಿ ಅವರು ಹೇಳಿದರು. ಭಾರತೀಯ ಆಧ್ಯಾತ್ಮಿಕತೆಯು ಶಾಂತಿಯ ಪಾಠವನ್ನು ಕಲಿಸುವುದಲ್ಲದೆ, ಪ್ರತಿ ಹಂತದಲ್ಲೂ ಶಾಂತಿಯ ಮಾರ್ಗವನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಸ್ವಯಂ ಸಂಯಮವು ಸ್ವಯಂ ಜ್ಞಾನಕ್ಕೆ ಕಾರಣವಾಗುತ್ತದೆ, ಸ್ವಯಂ ಜ್ಞಾನವು ಸ್ವಯಂ ಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆ ಮತ್ತು ಸ್ವಯಂ ಸಾಕ್ಷಾತ್ಕಾರವು ಆಂತರಿಕ ಶಾಂತಿಗೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದರು. ಈ ಹಾದಿಯಲ್ಲಿ ನಡೆಯುವ ಮೂಲಕ, ಶಾಂತಿ ಶಿಖರ್ ಅಕಾಡೆಮಿಯ ಅನ್ವೇಷಕರು ಜಾಗತಿಕ ಶಾಂತಿಯ ಸಾಧನಗಳಾಗುತ್ತಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಶ್ವಾಸ ವ್ಯಕ್ತಪಡಿಸಿದರು.

ಜಾಗತಿಕ ಶಾಂತಿಯ ಧ್ಯೇಯದಲ್ಲಿ, ಪ್ರಾಯೋಗಿಕ ನೀತಿಗಳು ಮತ್ತು ಪ್ರಯತ್ನಗಳಷ್ಟೇ ಕಲ್ಪನೆಗಳು ಮುಖ್ಯ ಎಂಬುದನ್ನು ಒತ್ತಿ ಹೇಳಿದ ಶ್ರೀ ಮೋದಿ ಅವರು, ಈ ದಿಕ್ಕಿನಲ್ಲಿ ಭಾರತ ತನ್ನ ಪಾತ್ರವನ್ನು ಪೂರೈಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. "ಜಗತ್ತಿನಲ್ಲಿ ಎಲ್ಲಿಯಾದರೂ ಬಿಕ್ಕಟ್ಟು ಅಥವಾ ವಿಪತ್ತು ಸಂಭವಿಸಿದಾಗ, ಭಾರಣತವು ಸಹಾಯವನ್ನು ನೀಡಲು ವಿಶ್ವಾಸಾರ್ಹ ಪಾಲುದಾರನಾಗಿ ಮುಂದೆ ಬರುತ್ತದೆ, ಮೊದಲ ಪ್ರತಿಕ್ರಿಯೆ ನೀಡುವವನಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಪ್ರಧಾನಮಂತ್ರಿ ಅವರು ವಿಷಯವನ್ನು ಉಲ್ಲೇಖಿಸಿ ಉದ್ಗರಿಸಿದರು. 

 

ಇಂದಿನ ಪರಿಸರ ಸವಾಲುಗಳ ನಡುವೆ, ಭಾರತವು ಪ್ರಪಂಚದಾದ್ಯಂತ ಪ್ರಕೃತಿ ಸಂರಕ್ಷಣೆಗೆ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಪ್ರಕೃತಿ ನಮಗೆ ನೀಡಿದ್ದನ್ನು ಸಂರಕ್ಷಿಸುವ ಮತ್ತು ಸಮೃದ್ಧಗೊಳಿಸುವ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಮೋದಿಯವರು, ನಮ್ಮ ಧರ್ಮಗ್ರಂಥಗಳು ಮತ್ತು ಸೃಷ್ಟಿಕರ್ತ ನಮಗೆ ಈ ನೀತಿಯನ್ನು ಕಲಿಸಿದ್ದಾರೆ ಎಂದು ಹೇಳಿದರು. ನಾವು ನದಿಗಳನ್ನು ತಾಯಿಯಾಗಿ, ನೀರನ್ನು ದೈವಿಕವಾಗಿ ಪರಿಗಣಿಸುತ್ತೇವೆ ಮತ್ತು ಮರಗಳಲ್ಲಿ ದೇವರ ಉಪಸ್ಥಿತಿಯನ್ನು ನೋಡುತ್ತೇವೆ. ಈ ಭಾವನೆಯು ಪ್ರಕೃತಿ ಮತ್ತು ಅದರ ಸಂಪನ್ಮೂಲಗಳ ಬಳಕೆಯನ್ನು ಮಾರ್ಗದರ್ಶಿಸುತ್ತದೆ - ಕೇವಲ ಹೊರತೆಗೆಯುವ ಉದ್ದೇಶದಿಂದಲ್ಲ, ಆದರೆ ಹಿಂದಿರುಗಿಸುವ ಮನೋಭಾವದೊಂದಿಗೆ, ಈ ಜೀವನ ವಿಧಾನವು ಜಗತ್ತಿಗೆ ಸುರಕ್ಷಿತ ಭವಿಷ್ಯಕ್ಕೆ ವಿಶ್ವಾಸಾರ್ಹ ಮಾರ್ಗವನ್ನು ನೀಡುತ್ತದೆ ಎಂದು ಹೇಳಿದರು.

ಭಾರತವು ಈಗಾಗಲೇ ಭವಿಷ್ಯದ ಬಗ್ಗೆ ತನ್ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು ಪೂರೈಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, 'ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' ಮತ್ತು ಭಾರತದ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬ ದೃಷ್ಟಿಕೋನವನ್ನು ಎತ್ತಿ ತೋರಿಸಿದರು, ಈ ವಿಚಾರಗಳೊಂದಿಗೆ ಜಗತ್ತು ಹೆಚ್ಚು ಹೆಚ್ಚು ಹೊಂದಿಕೆಯಾಗುತ್ತಿದೆ ಎಂದು ಹೇಳಿದರು. ಭಾರತವು ಭೌಗೋಳಿಕ ರಾಜಕೀಯ ಗಡಿಗಳನ್ನು ಮೀರಿ ಇಡೀ ಮಾನವೀಯತೆಗಾಗಿ ಮಿಷನ್ ಲೈಫ್ ಅನ್ನು ಪ್ರಾರಂಭಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 

 

ಸಮಾಜವನ್ನು ನಿರಂತರವಾಗಿ ಸಬಲೀಕರಣಗೊಳಿಸುವಲ್ಲಿ ಬ್ರಹ್ಮ ಕುಮಾರಿಯರಂತಹ ಸಂಸ್ಥೆಗಳ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಶಾಂತಿ ಶಿಖರ್‌ ನಂತಹ ಸಂಸ್ಥೆಗಳು ಭಾರತದ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ತುಂಬುತ್ತವೆ ಮತ್ತು ಈ ಸಂಸ್ಥೆಯಿಂದ ಹೊರಹೊಮ್ಮುವ ಶಕ್ತಿಯು ದೇಶ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಜಾಗತಿಕ ಶಾಂತಿಯ ಕಲ್ಪನೆಯೊಂದಿಗೆ ಸಂಪರ್ಕಿಸುತ್ತದೆ ಎಂದು ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿ ಅವರು ಮತ್ತೊಮ್ಮೆ ಶಾಂತಿ ಶಿಖರ್ - ಅಕಾಡೆಮಿ ಫಾರ್ ಎ ಪೀಸ್‌ ಫುಲ್ ವರ್ಲ್ಡ್ ಸ್ಥಾಪನೆಗಾಗಿ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

 

ಛತ್ತೀಸ್‌ ಗಢದ ರಾಜ್ಯಪಾಲ ಶ್ರೀ ರಾಮೆನ್ ದೇಕಾ, ಛತ್ತೀಸ್‌ ಗಢದ ಮುಖ್ಯಮಂತ್ರಿ ಶ್ರೀ ವಿಷ್ಣು ದೇವ್ ಸಾಯಿ ಮತ್ತು ಇತರ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
MSMEs’ contribution to GDP rises, exports triple, and NPA levels drop

Media Coverage

MSMEs’ contribution to GDP rises, exports triple, and NPA levels drop
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of grasping the essence of knowledge
January 20, 2026

The Prime Minister, Shri Narendra Modi today shared a profound Sanskrit Subhashitam that underscores the timeless wisdom of focusing on the essence amid vast knowledge and limited time.

The sanskrit verse-
अनन्तशास्त्रं बहुलाश्च विद्याः अल्पश्च कालो बहुविघ्नता च।
यत्सारभूतं तदुपासनीयं हंसो यथा क्षीरमिवाम्बुमध्यात्॥

conveys that while there are innumerable scriptures and diverse branches of knowledge for attaining wisdom, human life is constrained by limited time and numerous obstacles. Therefore, one should emulate the swan, which is believed to separate milk from water, by discerning and grasping only the essence- the ultimate truth.

Shri Modi posted on X;

“अनन्तशास्त्रं बहुलाश्च विद्याः अल्पश्च कालो बहुविघ्नता च।

यत्सारभूतं तदुपासनीयं हंसो यथा क्षीरमिवाम्बुमध्यात्॥”