ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾರತೀಯ ಕರಾವಳಿ ಪಡೆಯ ಕಾವಲು ಹಡಗು (ಐಸಿಜಿಎಸ್) ಸಮುದ್ರ ಪ್ರತಾಪ್ ಕಾರ್ಯಾರಂಭ ಮಾಡಿರುವುದನ್ನು ಭಾರತದ ಸಾಗರ ಪಯಣದಲ್ಲಿ ಮಹತ್ವದ ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ. ಅವರು ಈ ಅತ್ಯಾಧುನಿಕ ಹಡಗಿನ ಸೇರ್ಪಡೆ ಹಲವು ಕಾರಣಗಳಿಂದ ಗಮನಾರ್ಹವಾಗಿದೆ ಎಂದು ಹೇಳಿದ್ದಾರೆ.
ಈ ಕಾರ್ಯಾರಂಭಯು ರಕ್ಷಣೆ ಮತ್ತು ಸಾಗರ ಸಾಮರ್ಥ್ಯದಲ್ಲಿ ಭಾರತದ ಆತ್ಮನಿರ್ಭರ ಭಾರತ ದೂರದೃಷ್ಟಿಗೆ ಬಲವನ್ನು ತುಂಬುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಇದು ರಾಷ್ಟ್ರದ ಭದ್ರತಾ ಸಾಮರ್ಥ್ಯವನ್ನು ವೃದ್ಧಿಸುತ್ತದೆ, ಕರಾವಳಿ ಕಣ್ಗಾವಲನ್ನು ಹೆಚ್ಚಿಸುತ್ತದೆ ಮತ್ತು ಭಾರತದ ವಿಶಾಲ ಸಾಗರ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಪರಿಸರ ಸ್ನೇಹಿ ಕಾರ್ಯಾಚರಣೆಗಳನ್ನು ಖಾತ್ರಿಪಡಿಸಿಕೊಳ್ಳಲು ಆಧುನಿಕ ತಂತ್ರಜ್ಞಾನಗಳನ್ನು ಸಂಯೋಜಿಸುವುದರೊಂದಿಗೆ ಇದು ಸುಸ್ಥಿರತೆಗೆ ದೃಢ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಶ್ರೀ ರಾಜನಾಥ್ ಸಿಂಗ್ ಅವರ X ಪೋಸ್ಟ್ಗೆ ಪ್ರತಿಕ್ರಿಯಿಸುತ್ತಾ, ಶ್ರೀ ನರೇಂದ್ರ ಮೋದಿ ಹೀಗೆ ಬರೆದಿದ್ದಾರೆ:
“ಭಾರತೀಯ ಕರಾವಳಿ ಪಡೆಯ ಕಾವಲು ಹಡಗು (ಐಸಿಜಿಎಸ್) ಸಮುದ್ರ ಪ್ರತಾಪ್ ಕಾರ್ಯಾರಂಭ ಮಾಡಿರುವುದು ಹಲವು ಕಾರಣಗಳಿಗಾಗಿ ಗಮನಾರ್ಹವಾಗಿದ್ದು, ಅದರಲ್ಲಿ ಅದು ನಮ್ಮ ಸ್ವಾವಲಂಬನೆಯ ದೂರದೃಷ್ಟಿಗೆ ಬಲವನ್ನು ತುಂಬುತ್ತದೆ, ನಮ್ಮ ಭದ್ರತಾ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಮತ್ತು ಇತರೆ ಅನುಕೂಲಗಳು ಸೇರಿದಂತೆ ಸುಸ್ಥಿರತೆಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
@IndiaCoastGuard”
The commissioning of Indian Coast Guard Ship (ICGS) Samudra Pratap is noteworthy for numerous reasons, including the fact that it adds strength to our vision of self-reliance, boosts our security apparatus and reflects a commitment to sustainability, among others.… https://t.co/tHFo7M4Abh
— Narendra Modi (@narendramodi) January 7, 2026


