ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೆಲಂಗಾಣ ರಾಜ್ಯ ಸಂಸ್ಥಾನ ದಿನದ ಅಂಗವಾಗಿ ಆ ರಾಜ್ಯದ ಜನತೆಗೆ ಶುಭ ಕೋರಿದ್ದಾರೆ‌. 

ಪ್ರಧಾನಮಂತ್ರಿ ಅವರು ತಮ್ಮ‌ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ. 

" ರಾಜ್ಯ ಉದಯ ದಿನದ ಅಂಗವಾಗಿ ತೆಲಂಗಣ ರಾಜ್ಯದ ನನ್ನ ಸಹೋದರ ಮತ್ತು ಸಹೋದರಿಗೆ ಶುಭ ಕೋರುತ್ತೇನೆ. ತೆಲಂಗಣ ಜನತೆ ಪರಿಶ್ರಮಕ್ಕೆ ಮತ್ತೊಂದು ಹೆಸರಾಗಿದ್ದಾರೆ ಮತ್ತು ರಾಷ್ಟ್ರದ ಪ್ರಗತಿಗೆ ಅಸಾಮಾನ್ಯ ಬದ್ಧತೆಯನ್ನು ಹೊಂದಿದ್ದಾರೆ. ರಾಜ್ಯದ ಸಂಸ್ಕೃತಿ ವಿಶ್ವ ವಿಖ್ಯಾತವಾಗಿದೆ. ತೆಲಂಗಾಣ ರಾಜ್ಯದ ಜನತೆಯ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ‌ " ಎಂದು ಹೇಳಿದ್ದಾರೆ.