ಮಕ್ಕಳೊಂದಿಗೆ ವಿವಿಧ ವಿಷಯಗಳ ಕುರಿತು ಪ್ರಧಾನಮಂತ್ರಿಯವರು ಸಂವಾದ ನಡೆಸಿದರು
ಇತ್ತೀಚಿನ ಚಂದ್ರಯಾನ-3 ರ ಯಶಸ್ಸಿನ ಕುರಿತು ಮಕ್ಕಳು ಸಕಾರಾತ್ಮಕ ಭಾವನೆಗಳನ್ನು ಹಂಚಿಕೊಂಡರು ಮತ್ತು ಮುಂಬರುವ ಆದಿತ್ಯ L-1 ಮಿಷನ್ ಬಗ್ಗೆಯೂ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 7, ಲೋಕ ಕಲ್ಯಾಣ ಮಾರ್ಗದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನವನ್ನು ಆಚರಿಸಿದರು.

 

ವಿವಿಧ ವಿಷಯಗಳ ಕುರಿತು ಸಂವಾದ ನಡೆಸಿದ ಪ್ರಧಾನಮಂತ್ರಿಯವರಿಗೆ ಮಕ್ಕಳು ರಾಖಿ ಕಟ್ಟಿದರು. ಇತ್ತೀಚಿನ ಚಂದ್ರಯಾನ-3 ಮಿಷನ್ ನ  ಯಶಸ್ಸಿನ ಬಗ್ಗೆ ಮಕ್ಕಳು ತಮ್ಮ ಸಕಾರಾತ್ಮಕ ಭಾವನೆಗಳನ್ನು ಹಂಚಿಕೊಂಡರು ಮತ್ತು ಮುಂಬರುವ ಆದಿತ್ಯ L-1 ಮಿಷನ್ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದರು.

 

ಸಂವಾದದ ಸಮಯದಲ್ಲಿ ಮಕ್ಕಳು ಕವಿತಾ ವಾಚನ ಮಾಡಿದರು ಮತ್ತು ಹಾಡುಗಳನ್ನು ಹಾಡಿದರು. ಅವರ ವಾಕ್ಚಾತುರ್ಯದಿಂದ ಪ್ರಭಾವಿತಗೊಂಡ ಪ್ರಧಾನಮಂತ್ರಿಯವರು ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಕವತೆಗಳನ್ನು ಬರೆಯುವಂತೆ ಅವರನ್ನು ಪ್ರೋತ್ಸಾಹಿಸಿದರು. ಸ್ವಾವಲಂಬನೆಯ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಬಳಸುವಂತೆ ಮಕ್ಕಳಿಗೆ ಸಲಹೆ ನೀಡಿದರು.

 

ತಮ್ಮ ಶಿಕ್ಷಕರೊಡಗೂಡಿ ಆಗಮಿಸಿದ ವಿವಿಧ ವಿದ್ಯಾರ್ಥಿಗಳು, ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು. ಸರ್ಕಾರೇತರ ಸಂಸ್ಥೆಗಳ  ಪ್ರತಿನಿಧಿಗಳು, ವೃಂದಾವನದ ವಿಧವೆಯರು ಹಾಗೂ ಇತರರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jan Dhan accounts hold Rs 2.75 lakh crore in banks: Official

Media Coverage

Jan Dhan accounts hold Rs 2.75 lakh crore in banks: Official
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಡಿಸೆಂಬರ್ 2025
December 07, 2025

National Resolve in Action: PM Modi's Policies Driving Economic Dynamism and Inclusivity