Launches various new initiatives under e-court project
Pays tributes to the victims of 26/11 terrorist attack
“India is moving ahead with force and taking full pride in its diversity”
“‘We the people’ in the Preamble is a call, an oath and a trust”
“In the modern time, the Constitution has embraced all the cultural and moral emotions of the nation”
“Identity of India as the mother of democracy needs to be further strengthened”
“Azadi ka Amrit Kaal is ‘Kartavya Kaal’ for the nation”
“Be it people or institutions, our responsibilities are our first priority”
“Promote the prestige and reputation of India in the world as a team during G20 Presidency”
“Spirit of our constitution is youth-centric”
“We should talk more about the contribution of the women members of the Constituent Assembly”

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡು ಇಂದು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದರು. 1949 ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ 2015 ರಿಂದ ನವೆಂಬರ್ 26 ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ವರ್ಚುವಲ್ ಜಸ್ಟೀಸ್ ಕ್ಲಾಕ್, ಜಸ್ಟ್ಐಎಸ್ ಮೊಬೈಲ್ ಆಪ್ 2.0, ಡಿಜಿಟಲ್ ಕೋರ್ಟ್ ಮತ್ತು ಎಸ್3ವ್ಯಾಸ್ ವೆಬ್ ಸೈಟ್ ಗಳು ಸೇರಿದಂತೆ ಇ-ಕೋರ್ಟ್ ಯೋಜನೆಯ ಅಡಿಯಲ್ಲಿ ವಿವಿಧ ಹೊಸ ಉಪಕ್ರಮಗಳಿಗೆ ಪ್ರಧಾನಮಂತ್ರಿ ಅವರು ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.

ಸಂವಿಧಾನ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದ ಪ್ರಧಾನಮಂತ್ರಿ ಅವರು, 1949ರಲ್ಲಿ ಇದೇ ದಿನದಂದು ಸ್ವತಂತ್ರ ಭಾರತವು ತನ್ನ ಹೊಸ ಭವಿಷ್ಯಕ್ಕೆ ಅಡಿಪಾಯ ಹಾಕಿತ್ತು ಎಂಬುದನ್ನು ಸ್ಮರಿಸಿದರು. ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿ ಸಂವಿಧಾನ ದಿನದ ಮಹತ್ವವನ್ನು ಪ್ರಧಾನಮಂತ್ರಿ ಅವರು ಗಮನಿಸಿದರು. ಅವರು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ರಚನಾ ಸಭೆಯ ಎಲ್ಲಾ ಸದಸ್ಯರಿಗೆ ಗೌರವ ನಮನ ಸಲ್ಲಿಸಿದರು.

ಭಾರತೀಯ ಸಂವಿಧಾನದ ಅಭಿವೃದ್ಧಿ ಮತ್ತು ವಿಸ್ತರಣೆಯ ಕಳೆದ 70 ದಶಕಗಳಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಅಸಂಖ್ಯಾತ ವ್ಯಕ್ತಿಗಳ ಕೊಡುಗೆಗಳ ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಈ ವಿಶೇಷ ಸಂದರ್ಭದಲ್ಲಿ ಇಡೀ ರಾಷ್ಟ್ರದ ಪರವಾಗಿ ಅವರಿಗೆ ಧನ್ಯವಾದ ಅರ್ಪಿಸಿದರು.

ದೇಶವು ಸಂವಿಧಾನ ದಿನದ ಮಹತ್ವದ ಸಂದರ್ಭವನ್ನು ಆಚರಿಸುತ್ತಿದ್ದಾಗ ಭಾರತದ ಇತಿಹಾಸದಲ್ಲಿ ಕರಾಳ ದಿನವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ನವೆಂಬರ್ 26 ರಂದು ಭಾರತವು ತನ್ನ ಇತಿಹಾಸದಲ್ಲಿಯೇ ಅತಿದೊಡ್ಡ ಭಯೋತ್ಪಾದಕ ದಾಳಿಯನ್ನು ಮನುಕುಲದ ಶತ್ರುಗಳಿಂದ ಎದುರಿಸಿತು ಎಂದು ಸ್ಮರಿಸಿದರು. ಭೀಕರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.

ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ, ಜಗತ್ತು ಬೆಳೆಯುತ್ತಿರುವ ಆರ್ಥಿಕತೆ ಮತ್ತು ಅಂತಾರಾಷ್ಟ್ರೀಯ ವರ್ಚಸ್ಸಿನ ನಡುವೆ ಭಾರತದತ್ತ ಆಶಾಭಾವನೆಯಿಂದ ನೋಡುತ್ತಿದೆ ಎಂದು ಪ್ರಧಾನಮಂತ್ರಿ ನೆನಪಿಸಿದರು. ತನ್ನ ಸ್ಥಿರತೆಯ ಬಗ್ಗೆ ಆರಂಭಿಕ ಎಲ್ಲಾ ಆತಂಕಗಳನ್ನು ಧಿಕ್ಕರಿಸಿ, ಭಾರತವು ಪೂರ್ಣ ಬಲದಿಂದ ಮುಂದುವರಿಯುತ್ತಿದೆ ಮತ್ತು ಅದರ ವೈವಿಧ್ಯದ ಬಗ್ಗೆ ಹೆಮ್ಮೆ ಪಡುತ್ತಿದೆ ಎಂದು ಅವರು ಹೇಳಿದರು. ಈ ಯಶಸ್ಸಿಗೆ ಸಂವಿಧಾನವೇ ಕಾರಣ ಎಂದು ಅವರು ಶ್ಲಾಘಿಸಿದರು. ಮುಂದುವರಿದು, ಪ್ರಸ್ತಾವನೆಯ ಮೊದಲ ಮೂರು ಪದಗಳಾದ ' ನಾವು ಜನರು ' ಎಂದು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ' ನಾವು ಜನರು ' ಎಂಬುದು ಒಂದು ಕರೆ, ವಿಶ್ವಾಸ ಮತ್ತು ಪ್ರತಿಜ್ಞೆಯಾಗಿದೆ ಎಂದು ಹೇಳಿದರು. ಸಂವಿಧಾನದ ಈ ಮನೋಭಾವವು ವಿಶ್ವದ ಪ್ರಜಾಪ್ರಭುತ್ವದ ತಾಯಿಯಾಗಿರುವ ಭಾರತದ ಚೇತನವಾಗಿದೆ ಎಂದು ಅವರು ಹೇಳಿದರು. ಜತೆಗೆ  " ಆಧುನಿಕ ಕಾಲದಲ್ಲಿ, ಸಂವಿಧಾನವು ರಾಷ್ಟ್ರದ ಎಲ್ಲ ಸಾಂಸ್ಕೃತಿಕ ಮತ್ತು ನೈತಿಕ ಭಾವನೆಗಳನ್ನು ಅಳವಡಿಸಿಕೊಂಡಿದೆ," ಎಂದರು.

ಪ್ರಜಾಪ್ರಭುತ್ವದ ತಾಯಿಯಾಗಿ ದೇಶವು ಸಂವಿಧಾನದ ಆದರ್ಶಗಳನ್ನು ಬಲಪಡಿಸುತ್ತಿದೆ ಮತ್ತು ಜನಪರ ನೀತಿಗಳು ದೇಶದ ಬಡವರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿವೆ ಎಂದು ಪ್ರಧಾನಮಂತ್ರಿ ಅವರು ಹರ್ಷ ವ್ಯಕ್ತಪಡಿಸಿದರು. ಕಾನೂನುಗಳನ್ನು ಸಾಮಾನ್ಯ ನಾಗರಿಕರಿಗೆ ಸುಲಭವಾಗಿ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗುತ್ತಿದೆ ಮತ್ತು ಸಕಾಲಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಂಗವು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕರ್ತವ್ಯಗಳಿಗೆ ಒತ್ತು ನೀಡಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಇದು ಸಂವಿಧಾನದ ಸ್ಫೂರ್ತಿಯ ಅಭಿವ್ಯಕ್ತಿಯಾಗಿದೆ ಎಂದು ಹೇಳಿದರು. ಅಮೃತ್ ಕಾಲ್ ಅನ್ನು ' ಕರ್ತವ್ಯ ಕಾಲ ' ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ರಾಷ್ಟ್ರವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುತ್ತಿರುವ ಆಜಾದಿ ಕಾ ಅಮೃತ್ ಕಾಲ್ ನಲ್ಲಿ ಮತ್ತು ಮುಂದಿನ 25 ವರ್ಷಗಳ ಅಭಿವೃದ್ಧಿಯ ಪ್ರಯಾಣವನ್ನು ನಾವು ಪ್ರಾರಂಭಿಸುತ್ತಿರುವಾಗ, ರಾಷ್ಟ್ರದ ಕಡೆಗೆ ಕರ್ತವ್ಯದ ಮಂತ್ರವು ಮೊದಲ ಮತ್ತು ಅಗ್ರಗಣ್ಯವಾಗಿದೆ ಎಂದು ಒತ್ತಿ ಹೇಳಿದರು. " ಆಜಾದಿ ಕಾ ಅಮೃತ್ ಕಾಲ್ ದೇಶದ ಕಡೆಗೆ ಕರ್ತವ್ಯ ನಿರ್ವಹಿಸುವ ಸಮಯವಾಗಿದೆ. ಅದು ಜನರಾಗಿರಲಿ ಅಥವಾ ಸಂಸ್ಥೆಗಳಾಗಿರಲಿ, ನಮ್ಮ ಜವಾಬ್ದಾರಿಗಳು ನಮ್ಮ ಮೊದಲ ಆದ್ಯತೆಯಾಗಿದೆ,"  ಎಂದು ಪ್ರಧಾನಮಂತ್ರಿ ಹೇಳಿದರು. ಒಬ್ಬರ ' ಕರ್ತವ್ಯ ಮಾರ್ಗ ' ವನ್ನು ಅನುಸರಿಸುವ ಮೂಲಕ ದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಬಹುದು ಎಂದು ಅವರು ಪ್ರತಿಪಾದಿಸಿದರು.

ಒಂದು ವಾರದ ಅವಧಿಯಲ್ಲಿ, ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಪಡೆಯಲಿದೆ ಎಂದು ಮಾಹಿತಿ ನೀಡಿದ ಪ್ರಧಾನಮಂತ್ರಿ ಅವರು, ಒಂದು ತಂಡವಾಗಿ ವಿಶ್ವದಲ್ಲಿ ಭಾರತದ ಘನತೆ ಮತ್ತು ಖ್ಯಾತಿಯನ್ನು ಉತ್ತೇಜಿಸುವ ಅಗತ್ಯವನ್ನು ಪ್ರತಿಪಾದಿಸಿದ ಅವರು, " ಇದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ," ಎಂದರು, " ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಗುರುತನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ," ಎಂದು ಅವರು ಇದೇ ವೇಳೆ ಹೇಳಿದರು.

ಯುವ ಕೇಂದ್ರಿತ ಮನೋಭಾವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಸಂವಿಧಾನವು ಅದರ ಮುಕ್ತತೆಗೆ ಹೆಸರುವಾಸಿಯಾಗಿದೆ, ಭವಿಷ್ಯದ ಮತ್ತು ಅದರ ಆಧುನಿಕ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳಿದರು. ಭಾರತದ ಬೆಳವಣಿಗೆಯ ಕಥೆಯ ಎಲ್ಲ ಆಯಾಮಗಳಲ್ಲಿ ಯುವ ಶಕ್ತಿಯ ಪಾತ್ರ ಮತ್ತು ಕೊಡುಗೆಯನ್ನು ಅವರು ಒಪ್ಪಿಕೊಂಡರು.

ಸಮಾನತೆ ಮತ್ತು ಸಶಕ್ತೀಕರಣದಂತಹ ವಿಷಯಗಳ ಬಗ್ಗೆ ಉತ್ತಮ ತಿಳಿವಳಿಕೆ ಗಾಗಿ ಯುವಜನರಲ್ಲಿ ಭಾರತದ ಸಂವಿಧಾನದ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ನಮ್ಮ ಸಂವಿಧಾನವನ್ನು ರಚಿಸಿದ ಸಮಯ ಮತ್ತು ದೇಶದ ಮುಂದಿದ್ದ ಸಂದರ್ಭಗಳನ್ನು ಸ್ಮರಿಸಿದರು.

" ಆ ಸಮಯದಲ್ಲಿ ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ಏನು ನಡೆಯಿತು, ನಮ್ಮ ಯುವಕರು ಈ ಎಲ್ಲ ವಿಷಯಗಳ ಬಗ್ಗೆ ಜಾಗೃತರಾಗಿರಬೇಕು," ಎಂದು ಅವರು ಗಮನಸೆಳೆದರು. ಇದು ಸಂವಿಧಾನದಲ್ಲಿ ಅವರ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಸಂವಿಧಾನ ರಚನಾ ಸಭೆಯಲ್ಲಿ ಭಾರತವು 15 ಮಹಿಳಾ ಸದಸ್ಯರನ್ನು ಹೊಂದಿದ್ದಾಗ ಮತ್ತು ದೀನದಲಿತ ಸಮಾಜದಿಂದ ಅಲ್ಲಿಗೆ ತಲುಪಲು ಬಂದ ದಾಕ್ಷಾಯಣಿ ವೇಲಾಯುಧನ್ ಅವರಂತಹ ಮಹಿಳೆಯರನ್ನು ಪ್ರಧಾನಮಂತ್ರಿ ಉದಾಹರಣೆಯಾಗಿ ನೀಡಿದರು. ದಾಕ್ಷಾಯಿಣಿ ವೇಲಾಯುಧನ್ ಅವರಂತಹ ಮಹಿಳೆಯರ ಕೊಡುಗೆಗಳ ಬಗ್ಗೆ ವಿರಳವಾಗಿ ಚರ್ಚಿಸಲ್ಪಡುತ್ತದೆ ಎಂದು ವಿಷಾದಿಸಿದ ಪ್ರಧಾನಮಂತ್ರಿ ಅವರು, ಪರಿಶಿಷ್ಟರು ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಅವರು ಪ್ರಮುಖ ಮಧ್ಯಸ್ಥಿಕೆಗಳನ್ನು ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ದುರ್ಗಾಬಾಯಿ ದೇಶಮುಖ್, ಹಂಸ ಮೆಹ್ತಾ ಮತ್ತು ರಾಜ್ ಕುಮಾರಿ ಅಮೃತ್ ಕೌರ್ ಮತ್ತು ಇತರ ಮಹಿಳಾ ಸದಸ್ಯರ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿ ಅವರು, ಅವರು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. " ನಮ್ಮ ಯುವಕರು ಈ ಸಂಗತಿಗಳನ್ನು ತಿಳಿದುಕೊಂಡಾಗ, ಅವರು ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತಾರೆ," " ಇದು ನಮ್ಮ ಪ್ರಜಾಪ್ರಭುತ್ವ, ನಮ್ಮ ಸಂವಿಧಾನ ಮತ್ತು ದೇಶದ ಭವಿಷ್ಯವನ್ನು ಬಲಪಡಿಸುವ ಸಂವಿಧಾನದ ಬಗ್ಗೆ ನಿಷ್ಠೆಯನ್ನು ಬೆಳೆಸುತ್ತದೆ," ಎಂದು ಅವರು ಮುಂದುವರಿಸಿದರು. " ಆಜಾದಿ ಕಾ ಅಮೃತ್ ಕಾಲ್ ನಲ್ಲಿ ಇದು ದೇಶದ ಅಗತ್ಯವಾಗಿದೆ. ಈ ದಿಶೆಯಲ್ಲಿ ನಮ್ಮ ನಿರ್ಣಯಗಳಿಗೆ ಈ ಸಂವಿಧಾನ ದಿನವು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಅವರು ಹೇಳಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ಡಾ.ಡಿ.ವೈ.ಚಂದ್ರಚೂಡ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ, ಶ್ರೀ ಕಿರಣ್ ರಿಜಿಜು, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್, ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಪ್ರೊ.ಎಸ್.ಪಿ.ಬಘೇಲ್. , ಭಾರತದ ಅಟಾರ್ನಿ ಜನರಲ್, ಶ್ರೀ ಆರ್ ವೆಂಕಟರಮಣಿ, ಭಾರತದ ಸಾಲಿಸಿಟರ್ ಜನರಲ್, ಶ್ರೀ ತುಷಾರ್ ಮೆಹ್ತಾ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ವಿಕಾಸ್ ಸಿಂಗ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ
ಈ ಯೋಜನೆಯು ನ್ಯಾಯಾಲಯಗಳ ಐಸಿಟಿ ಸಕ್ರಿಯಗೊಳಿಸುವಿಕೆಯ ಮೂಲಕ ಕಕ್ಷಿದಾರರು, ವಕೀಲರು ಮತ್ತು ನ್ಯಾಯಾಂಗಕ್ಕೆ ಸೇವೆಗಳನ್ನು ಒದಗಿಸುವ ಪ್ರಯತ್ನವಾಗಿದೆ. ವರ್ಚುವಲ್ ಜಸ್ಟೀಸ್ ಕ್ಲಾಕ್, ಜಸ್ಟ್ ಐಎಸ್ ಮೊಬೈಲ್ ಆಪ್ 2.0, ಡಿಜಿಟಲ್ ಕೋರ್ಟ್ ಮತ್ತು ಎಸ್ 3ವ್ಯಾಸ್ ವೆಬ್ ಸೈಟ್ ಗಳು ಪ್ರಧಾನಮಂತ್ರಿ ಅವರು ಪ್ರಾರಂಭಿಸಿದ ಉಪಕ್ರಮಗಳಲ್ಲಿ ಸೇರಿವೆ.

ವರ್ಚುವಲ್ ಜಸ್ಟೀಸ್ ಕ್ಲಾಕ್ ಎಂಬುದು ನ್ಯಾಯಾಲಯದ ಮಟ್ಟದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯ ಪ್ರಮುಖ ಅಂಕಿಅಂಶಗಳನ್ನು ಪ್ರದರ್ಶಿಸುವ ಒಂದು ಉಪಕ್ರಮವಾಗಿದ್ದು, ನ್ಯಾಯಾಲಯ ಮಟ್ಟದಲ್ಲಿ ದಾಖಲಿಸಲಾದ ಪ್ರಕರಣಗಳು, ವಿಲೇವಾರಿ ಮಾಡಲಾದ ಪ್ರಕರಣಗಳು ಮತ್ತು ದಿನ/ವಾರ/ತಿಂಗಳ ಆಧಾರದ ಮೇಲೆ ಬಾಕಿ ಉಳಿದಿರುವ ಪ್ರಕರಣಗಳ ವಿವರಗಳನ್ನು ನ್ಯಾಯಾಲಯದ ಮಟ್ಟದಲ್ಲಿ ನೀಡುತ್ತದೆ. ನ್ಯಾಯಾಲಯವು ಪ್ರಕರಣಗಳ ವಿಲೇವಾರಿಯ ಸ್ಥಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಮೂಲಕ ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿಸುವ ಪ್ರಯತ್ನ ಇದಾಗಿದೆ. ಸಾರ್ವಜನಿಕರು ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಯಾವುದೇ ನ್ಯಾಯಾಲಯ ಸ್ಥಾಪನೆಯ ವರ್ಚುವಲ್ ಜಸ್ಟೀಸ್ ಕ್ಲಾಕ್ ಅನ್ನು ಪ್ರವೇಶಿಸಬಹುದು.

ಜಸ್ಟಿಸ್ ಮೊಬೈಲ್ ಆ್ಯಪ್ 2.0 ನ್ಯಾಯಾಂಗ ಅಧಿಕಾರಿಗಳಿಗೆ ಪರಿಣಾಮಕಾರಿ ನ್ಯಾಯಾಲಯ ಮತ್ತು ಪ್ರಕರಣ ನಿರ್ವಹಣೆಗಾಗಿ ಲಭ್ಯವಿರುವ ಒಂದು ಸಾಧನವಾಗಿದೆ, ಇದು ಅವನ / ಅವಳ ನ್ಯಾಯಾಲಯ ಮಾತ್ರವಲ್ಲದೆ ಅವರ ಅಡಿಯಲ್ಲಿ ಕೆಲಸ ಮಾಡುವ ವೈಯಕ್ತಿಕ ನ್ಯಾಯಾಧೀಶರ ಬಾಕಿ ಇರುವಿಕೆ ಮತ್ತು ವಿಲೇವಾರಿಯನ್ನು ಮೇಲ್ವಿಚಾರಣೆ ಮಾಡುತ್ತದೆ. ಈ ಆಪ್ ಅನ್ನು ಹೈಕೋರ್ಟ್ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೂ ಸಹ ಲಭ್ಯವಾಗುವಂತೆ ಮಾಡಲಾಗಿದೆ, ಅವರು ಈಗ ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲ ರಾಜ್ಯಗಳು ಮತ್ತು ಜಿಲ್ಲೆಗಳ ಬಾಕಿ ಇರುವಿಕೆ ಮತ್ತು ವಿಲೇವಾರಿಯನ್ನು ಮೇಲ್ವಿಚಾರಣೆ ಮಾಡಬಹುದು.

ಡಿಜಿಟಲ್ ನ್ಯಾಯಾಲಯವು ಕಾಗದರಹಿತ ನ್ಯಾಯಾಲಯಗಳಿಗೆ ಪರಿವರ್ತನೆಯನ್ನು ಸಕ್ರಿಯಗೊಳಿಸಲು ನ್ಯಾಯಾಲಯದ ದಾಖಲೆಗಳನ್ನು ಡಿಜಿಟಲೀಕೃತ ರೂಪದಲ್ಲಿ ನ್ಯಾಯಾಧೀಶರಿಗೆ ಲಭ್ಯವಾಗುವಂತೆ ಮಾಡುವ ಒಂದು ಉಪಕ್ರಮವಾಗಿದೆ.

ಎಸ್3ಡಬ್ಲ್ಯುಎಎಎಸ್  ವೆಬ್ ಸೈಟ್ ಗಳು ಜಿಲ್ಲಾ ನ್ಯಾಯಾಂಗಕ್ಕೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿ ಮತ್ತು ಸೇವೆಗಳನ್ನು ಪ್ರಕಟಿಸಲು ವೆಬ್ ಸೈಟ್ ಗಳನ್ನು ರಚಿಸಲು, ಸಂರಚಿಸು, ನಿಯೋಜಿಸಲು ಮತ್ತು ನಿರ್ವಹಿಸಲು ಒಂದು ಚೌಕಟ್ಟಾಗಿದೆ. ಸುರಕ್ಷಿತ, ಆರೋಹ್ಯ ಮತ್ತು ಸುಗಮ್ಯ (ಪ್ರವೇಶಿಸಬಹುದಾದ) ವೆಬ್ ಸೈಟ್ ಗಳನ್ನು ರಚಿಸಲು ಸರ್ಕಾರಿ ಘಟಕಗಳಿಗಾಗಿ ಅಭಿವೃದ್ಧಿಪಡಿಸಲಾದ ಕ್ಲೌಡ್ ಸೇವೆಯೇ ಎಸ್3ಡಬ್ಲ್ಯುಎಎಎಸ್ ಆಗಿದೆ. ಇದು ಬಹುಭಾಷಾ, ನಾಗರಿಕ ಸ್ನೇಹಿ ಮತ್ತು ದಿವ್ಯಾಂಗ ಸ್ನೇಹಿಯಾಗಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian public relations industry pegged to reach ₹4,500 cr by 2030: Report

Media Coverage

Indian public relations industry pegged to reach ₹4,500 cr by 2030: Report
NM on the go

Nm on the go

Always be the first to hear from the PM. Get the App Now!
...
Prime Minister’s visit to Indonesia, Australia and New Zealand
July 03, 2026

At the invitation of the President of the Republic of Indonesia, H.E. Mr. Prabowo Subianto, Prime Minister Shri Narendra Modi will pay a visit to Indonesia from 6-8 July, 2026. This will be Prime Minister’s fourth visit to Indonesia and his first bilateral visit since the elevation of India-Indonesia ties to the level of Comprehensive Strategic Partnership in May 2018. During the visit, Prime Minister will hold bilateral discussions with President Prabowo and review the progress made in the partnership. In Jakarta, Prime Minister will address a large gathering of the Indian Diaspora. India and Indonesia share historical and warm people-to-people ties. In keeping with these special bonds, Prime Minister will visit the Prambanan Temple complex at Yogyakarta, a prominent UNESCO world heritage site in Indonesia.

From Indonesia, at the invitation of the Prime Minister of Australia, the Honourable Anthony Albanese MP, Prime Minister will travel to Melbourne from 8-10 July, 2026. In Melbourne, Prime Minister will hold bilateral discussions with Prime Minister Albanese. He will also call on the Governor General of Australia, the Honourable Ms Sam Mostyn AC. During his visit, Prime Minister will also participate in the India-Australia CEOs Forum, where he will address a gathering of top business leaders from both countries. Prime Minister will also address a large gathering of the Indian Diaspora, who constitute a strong pillar of the India-Australia relationship.

From Melbourne, at the invitation of the Prime Minister of New Zealand, Rt Honourable Christopher Luxon, Prime Minister will travel to Auckland for a state visit from 10-11 July, 2026. This will be the first state visit of an Indian Prime Minister to New Zealand in four decades. In Auckland, Prime Minister will hold bilateral discussions with Prime Minister Luxon and review the entire gamut of the bilateral relationship, which has seen significant progress in the last two years, especially in the areas of trade and commerce and defence. While in Auckland, Prime Minister will also interact with prominent business and sports personalities. In a reflection of the strong people-to-people ties that exist between India and New Zealand, Prime Minister will address a large gathering of the Indian Diaspora during the visit.