ಸೆನೆಟ್ ಅಧ್ಯಕ್ಷರಾದ ಗೌರವಾನ್ವಿತ ವೇಡ್ ಮಾರ್ಕ್ ಮತ್ತು ಸದನದ ಸ್ಪೀಕರ್ ಗೌರವಾನ್ವಿತ ಜಗದೇವ್ ಸಿಂಗ್ ಅವರ ಆಹ್ವಾನದ ಮೇರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತಿನ ಜಂಟಿ ಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಿದರು. ಟ್ರಿನಿಡಾಡ್ ಮತ್ತು ಟೊಬಾಗೊ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಭಾರತದ ಮೊದಲ ಪ್ರಧಾನ ಮಂತ್ರಿ ಮೋದಿ ಅವರು, ಈ ಸಂದರ್ಭವು ಭಾರತ-ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು ಗುರುತಿಸಿದೆ ಎಂದರು.

ಸಂಸತ್ತಿನ ಜಂಟಿ ಅಧಿವೇಶನ(ಆಗಸ್ಟ್ ಹೌಸ್) ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ಮೋದಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸದಸ್ಯರಿಗೆ ವಿಶೇಷ ಶುಭಾಶಯಗಳನ್ನು ತಿಳಿಸಿದರು. ತಮಗೆ ಅತ್ಯುನ್ನತ ರಾಷ್ಟ್ರೀಯ ಗೌರವ ನೀಡಿದ್ದಕ್ಕಾಗಿ ಟ್ರಿನಿಡಾಡ್ ಮತ್ತು ಟೊಬಾಗೊ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಭಾರತೀಯ ಪ್ರಜಾಪ್ರಭುತ್ವದ ಚೈತನ್ಯದ ಬಗ್ಗೆ ವಿವರಿಸಿದ ಅವರು, ಪ್ರಜಾಪ್ರಭುತ್ವದ ತಾಯಿಯಾಗಿ ಭಾರತವು ಈ ಪದ್ಧತಿಯನ್ನು ತನ್ನ ಸಂಸ್ಕೃತಿ ಮತ್ತು ಜೀವನದಲ್ಲಿ ಅವಿಭಾಜ್ಯ ಅಂಗವಾಗಿಸಿಕೊಂಡಿದೆ. ಈ ವಿಧಾನವು ಭಾರತದ ವೈವಿಧ್ಯತೆಯು ಪ್ರವರ್ಧಮಾನಕ್ಕೆ ಬರಲು ಮತ್ತು ಸಮೃದ್ಧಿಯಾಗಲು, ಎಲ್ಲಾ ವಿಚಾರಗಳು ಸಹಬಾಳ್ವೆಯಿಂದ ಮುನ್ನಡೆಯಲು, ಸಂಸದೀಯ ಭಾಷಣಗಳು ಮತ್ತು ಸಾರ್ವಜನಿಕ ಚರ್ಚೆಗಳನ್ನು ಉತ್ಕೃಷ್ಟಗೊಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದರು.

ಟ್ರಿನಿಡಾಡ್ ಮತ್ತು ಟೊಬಾಗೊದ ಯಶಸ್ವೀ ಪ್ರಜಾಪ್ರಭುತ್ವ ಪ್ರಯಾಣಕ್ಕೆ ಪ್ರಧಾನ ಮಂತ್ರಿ ಅಭಿನಂದನೆ ಸಲ್ಲಿಸಿದರು. ಸ್ವಾತಂತ್ರ್ಯದ ಹಾದಿಯಲ್ಲಿ ಟ್ರಿನಿಡಾಡ್ ಮತ್ತು ಟೊಬಾಗೊ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುವ ಸೌಭಾಗ್ಯ ಭಾರತಕ್ಕೆ ಸಿಕ್ಕಿದೆ. ಆಧುನಿಕ ರಾಷ್ಟ್ರಗಳಾಗಿ ಎರಡೂ ದೇಶಗಳ ನಡುವಿನ ಆಳವಾಗಿ ಬೇರೂರಿರುವ ಬಾಂಧವ್ಯವು ಬಲಿಷ್ಠವಾಗಿ ಮುಂದುವರಿದಿದೆ. ಭಾರತ ಉಡುಗೊರೆಯಾಗಿ ನೀಡಿದ ಸ್ಪೀಕರ್ ಕುರ್ಚಿಯಲ್ಲಿ 2 ಪ್ರಜಾಪ್ರಭುತ್ವಗಳ ನಡುವಿನ ನಿಕಟ ಸಂಬಂಧಗಳು ಸೂಕ್ತವಾಗಿ ಪ್ರತಿಫಲಿಸುತ್ತಿವೆ. ಈ ನಿಟ್ಟಿನಲ್ಲಿ ದ್ವಿಪಕ್ಷೀಯ ಸಂಸದೀಯ ವಿನಿಮಯವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಅವರು ಕರೆ ನೀಡಿದರು. ಸದನದಲ್ಲಿ ಮಹಿಳಾ ಸಂಸದೀಯ ಸದಸ್ಯರ ಗಮನಾರ್ಹ ಉಪಸ್ಥಿತಿಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಅವರು, ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಭಾರತವು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಭಾರತದಲ್ಲಿ ತಳಮಟ್ಟದಲ್ಲಿ ಮುನ್ನಡೆಸುತ್ತಿರುವ ಮಹಿಳಾ ನಾಯಕಿಯರ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ, ದೇಶದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಶಕ್ತಿ ತುಂಬಲು 1.5 ದಶಲಕ್ಷ ಮಹಿಳೆಯರು ಚುನಾಯಿತರಾಗಿದ್ದಾರೆ ಎಂದರು.

ಮಾನವತೆ ಎದುರಿಸುತ್ತಿರುವ ಸವಾಲುಗಳನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ಶಾಂತಿ ಪ್ರಿಯ ಸಮಾಜಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುವ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಜಾಗತಿಕ ಸಮುದಾಯ ಬಲಪಡಿಸಬೇಕೆಂದು ಕರೆ ನೀಡಿದರು. ಜಾಗತಿಕ ಆಡಳಿತ ಸುಧಾರಣೆಗೆ ಮತ್ತು ಜಾಗತಿಕ ದಕ್ಷಿಣ ಭಾಗಕ್ಕೆ ಅದರ ಅರ್ಹತೆ ನೀಡಬೇಕೆಂದು ಕರೆ ನೀಡಿದರು. ಭಾರತ-ಕೆರಿಬಿಯನ್ ಸಮುದಾಯ(CARICOM)ದ ನಡುವೆ ಆರ್ಥಿಕ ಸಹಕಾರ ಉತ್ತೇಜಿಸುವ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ ಎಂದರು.

ಟ್ರಿನಿಡಾಡ್ಗೆ ಭಾರತೀಯರ ಆಗಮನದ 180 ವರ್ಷಗಳ ಆಚರಣೆಯನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿ, ಎರಡೂ ದೇಶಗಳ ನಡುವಿನ ಸಂಬಂಧಗಳು ಶತಮಾನಗಳಷ್ಟು ಹಳೆಯದಾದ ಬಾಂಧವ್ಯದ ಭದ್ರ ಅಡಿಪಾಯವನ್ನು ಆಧರಿಸಿವೆ, ಇವುಗಳು ಆಳವಾಗಿ ಮತ್ತು ಸಮೃದ್ಧಿಯಾಗಿ ಮುಂದುವರಿಯುತ್ತವೆ ಎಂದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
I am deeply honoured to stand before you, the elected representatives of a proud democracy and a friendly nation: PM @narendramodi during his address to the Joint Assembly of the Parliament of Trinidad & Tobago pic.twitter.com/WTbZhXFgju
— PMO India (@PMOIndia) July 4, 2025
For India, democracy is a way of life. pic.twitter.com/YrGCrMfuWC
— PMO India (@PMOIndia) July 4, 2025
India and Trinidad & Tobago share a relationship rooted in centuries-old bonds. pic.twitter.com/kfXx7Oyte5
— PMO India (@PMOIndia) July 4, 2025
We are strengthening the hands of women to build a modern India. pic.twitter.com/CfDJYTcwlD
— PMO India (@PMOIndia) July 4, 2025
We see our development as a responsibility towards others.
— PMO India (@PMOIndia) July 4, 2025
And, our priority will always be the Global South: PM @narendramodi pic.twitter.com/VshwwT5wcX
The Global South is rising. They wish to see a new and fairer world order. pic.twitter.com/B3Z7vsi2AP
— PMO India (@PMOIndia) July 4, 2025
MAHASAGAR - India's guiding vision for the Global South. pic.twitter.com/jgEyUvKjBm
— PMO India (@PMOIndia) July 4, 2025


