ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ಮತ್ತು ಛತ್ತೀಸ್ ಗಡ್ ಗಳಿಗೆ ಸೆಪ್ಟೆಂಬರ್ 22, 2018ರಂದು ಭೇಟಿ ನೀಡಲಿದ್ದಾರೆ.

ಒಡಿಶಾದ ತಲ್ಚೇರ್ ನಲ್ಲಿ ತಲ್ಚೇರ್ ರಸಗೊಬ್ಬರ ಘಟಕ ಪುನಶ್ಚೇತನ ಕೆಲಸ ಪ್ರಾರಂಭದ ಸಂಕೇತವಾಗಿ ಫಲಕವನ್ನು ಪ್ರಧಾನಮಂತ್ರಿ ಅವರು ಅನಾವರಣ ಮಾಡಲಿದ್ದಾರೆ. ರಸಗೊಬ್ಬರ ಘಟಕದ ಆಧಾರದಲ್ಲಿ ಕಲ್ಲಿದ್ದಲ್ಲು ಅನಿಲೀಕರಣಗೊಳ್ಳುವ ಭಾರತದ ಮೊತ್ತಮೊದಲ ಘಟಕ ಇದಾಗಿದೆ. ರಸಗೊಬ್ಬರಕ್ಕೆ ಹೆಚ್ಚುವರಿಯಾಗಿ ಈ ಘಟಕವು ನೈಸರ್ಗಿಕ ಅನಿಲವನ್ನೂ ಉತ್ಪಾದಿಸಲಿವೆ, ಹಾಗೂ ಆ ಮೂಲಕ ದೇಶದ ಇಂಧನ ಆವಶ್ಯಕತೆಗಳಿಗೆ ಕೊಡುಗೆ ನೀಡಲಿದೆ.

ಪ್ರಧಾನಮಂತ್ರಿ ಅವರು ಆನಂತರ ಝಾರ್ಸುಗುಡಕ್ಕೆ ತೆರಳಿ ವಿಮಾನನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಈ ವಿಮಾನನಿಲ್ದಾಣ ಪಶ್ಚಿಮ ಒಡಿಶಾವನ್ನು ಭಾರತದ ವಿಮಾನಯಾನ ಭೂಪಟದಲ್ಲಿ ಸೇರಿಸಲಿದೆ ಮತ್ತು ಉಡಾನ್ ಯೋಜನೆ ಮೂಲಕ ಈ ವಲಯಕ್ಕೆ ವಾಯುಯಾನ ಸಂಪರ್ಕವನ್ನು ಏರ್ಪಡಿಸಲಿದೆ.

ಪ್ರಧಾನಮಂತ್ರಿ ಅವರು ಗರ್ಜಾನ್ಬಾಹಾಲ್ ಕಲ್ಲಿದ್ದಲ್ಲು ಗಣಿಯನ್ನು ಮತ್ತು ಝಾರ್ಸುಗುಡ – ಬಾರಾಪಾಲಿ – ಸರ್ದೇಗಾ ರೈಲ್ ಲಿಂಕ್ ಗಳನ್ನು ಲೋಕಾರ್ಪಣೆ lಮಾಡಲಿದ್ದಾರೆ. ದುಲಂಗಾ ಕಲ್ಲಿದ್ದಲ್ಲು ಗಣಿಗಳಲ್ಲಿ ಕಲ್ಲಿದ್ದಲ್ಲು ಉತ್ಪಾದನೆ ಮತ್ತು ಸಾಗಾಟ ಪ್ರಾರಂಭದ ಸಂಕೇತವಾಗಿ ಫಲಕವನ್ನು ಅನಾವರಣ ಮಾಡಲಿದ್ದಾರೆ.

ಆನಂತರ ಪ್ರಧಾನಮಂತ್ರಿ ಅವರು ಜಂಜ್ಗಿರ್ ಚಂಪಾಗೆ ಆಗಮಿಸುವರು. ಸಾಂಪ್ರದಾಯಿಕ ಕೈಮಗ್ಗ ಮತ್ತು ಕೃಷಿ ಕುರಿತಾದ ವಸ್ತುಪ್ರದರ್ಶನಕ್ಕೆ ಅವರು ಭೇಟಿ ನೀಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಯೋಜನೆ ಮತ್ತು ಪೆಂಡ್ರಾ-ಅನುಪ್ಪುರ್ 3ನೇ ರೈಲ್ವೇ ಹಳಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅಲ್ಲಿ ಅವರು ನೆರೆದ ಸಭಿಕರನ್ನುದ್ಧೇಶಿಸಿ ಭಾಷಣ ಮಾಡಲಿದ್ದಾರೆ.

 
Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi Conferred With Uzbekistan's Highest Honour For Foreign Leaders

Media Coverage

PM Modi Conferred With Uzbekistan's Highest Honour For Foreign Leaders
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 30 ಆಗಸ್ಟ್ 2026
August 30, 2026

Tiranga in Tashkent, Relief in Nepal: Soft Power Meets First Responder

Vocal for Local, Nari Shakti, Real Heroes: Mann Ki Baat’s Atmanirbhar Hour