PM Modi presents Israeli PM Benjamin Netanyahu replicas of 2 sets of relics from Kerala
PM Modi gifts PM Netanyahu a Torah scroll donated by the Paradesi Jewish community in Kerala

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಭಾರತದಲ್ಲಿನ ಸುದೀರ್ಘ ಯಹೂದಿ ಇತಿಹಾಸದ ಪ್ರಮುಖ ಕಲಾಕೃತಿಗಳೆಂದು ಪರಿಗಣಿಸಲಾದ ಕೇರಳದ 2 ಕುರುಹುಗಳ ಪ್ರತಿಕೃತಿಗಳನ್ನು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರಿಗೆ ಸಮರ್ಪಿಸಿದರು.

ಅವುಸಾಮಾನ್ಯ ಶಕೆಯ 9-10 ನೇ ಶತಮಾನದಲ್ಲಿ ಕೆತ್ತಲಾದ ಎರಡು ಪ್ರತ್ಯೇಕ ತಾಮ್ರ ಫಲಕಗಳ ಜೊತೆಯನ್ನು ಒಳಗೊಂಡಿವೆ.

ತಾಮ್ರದ ಫಲಕಗಳ ಮೊದಲ ಸೆಟ್ ಭಾರತದಲ್ಲಿ ಕೊಚ್ಚಿನಿ ಯಹೂದಿಗಳಿಗೆ ಪ್ರೀತಿಪಾತ್ರವಾದ ಸ್ಮಾರಕವೆನಿಸಿದೆ. ಹಿಂದು ದೊರೆ, (ಭಾಸ್ಕರ ರವಿವರ್ಮಾ ಎಂದು ಗುರುತಿಸಲಾಗುವ) ಚೆರಮಾನ್ ಪೆರುಮಾಳ್ ಅವರು ಯಹೂದಿ ಮುಖಂಡ ಜೋಸೆಫ್ ರಾಬ್ಬಾನ್ ರಿಗೆ ವಂಶಪಾರಂಪರ್ಯವಾಗಿ ರಾಜ ಮರ್ಯಾದೆ ಮತ್ತು ರಾಜಭೋಗ ಅನುಭವಿಸಲು ಅಧಿಕಾರ ನೀಡಿದ ಬಗ್ಗೆ ಉಲ್ಲೇಖವಿರುವ ಇದನ್ನು ನೀಡಿದ್ದೆಂದು ಹೇಳಲಾಗುತ್ತದೆ. ಸಾಂಪ್ರದಾಯಿಕ ಯಹೂದಿ ದಾಖಲೆಯಲ್ಲಿ ಜೋಸೆಫ್ ರಬ್ಬಾನ್ ಅವರು ನಂತರ ಕ್ರಾಂಗನೋರ್ ಅಥವಾ ಅದಕ್ಕೆ ಸಮನೆಂದ ಹೇಳಲಾದ ಶಿಂಗ್ಲಿ ದೊರೆಯಾಗಿ ಪಟ್ಟಾಭಿಷಿಕ್ತರಾದರೆಂದು ತಿಳಿಯುತ್ತದೆ.

 ಕೊಚ್ಚಿನ್ ಮತ್ತು ಮಲಬಾರ್ ನ ಇತರ ಪ್ರದೇಶಗಳಿಗೆ ಯಹೂದಿಗಳು ತೆರಳುವ ಮುನ್ನ ಕ್ರಾಂಗನೋರ್ ನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಅನುಭವಿಸಿದ್ದರು. ಸ್ಥಳೀಯ ಯಹೂದಿಗಳು ಒಮ್ಮೆ ಶಿಂಗ್ಲಿ / ಕ್ರಾಂಗನೋರ್ ನಿಂದ ಹಿಡಿ ಮಣ್ಣು ತಂದು ಪ್ರತಿ ಶವಪೆಟ್ಟಿಗೆಯಲ್ಲಿ ಇಡಲಾಗಿದ್ದು ಅದನ್ನು "ಎರಡನೇ ಜೆರುಸಲೆಮ್" ಮತ್ತು ಪವಿತ್ರ ಸ್ಥಳ ಎಂದು ಸ್ಮರಿಸಲಾಗುತ್ತದೆ. ಕೊಚ್ಚಿಯ ಮಟ್ಟನ್ಚೇರಿಯ ಪರದೇಶಿ ಸಿನಗಾಗ್ (ಯಹೂದಿಗಳ ಗುಡಿ) ಸಹಕಾರದಿಂದ ಈ ಪ್ರತಿಕೃತಿಗಳ ಫಲಕವನ್ನು ನಿರ್ಮಿಸಲು ಸಾಧ್ಯವಾಗಿದೆ. 

 ಇನ್ನು ಎರಡನೇ ತಾಮ್ರ ಫಲಕಗಳ ಜೊತೆಯು ಭಾರತದೊಂದಿಗೆ ಯಹೂದಿಗಳು ವಾಣಿಜ್ಯ ಆರಂಭಿಸಿದ ದಾಖಲಾತಿ ಎಂದು ನಂಬಲಾಗಿದೆ. ಈ ಫಲಕಗಳು ಚರ್ಚ್ ಮತ್ತು ಪಶ್ಚಿಮ ಏಷ್ಯಾ ಮತ್ತು ಭಾರತೀಯ ವಾಣಿಜ್ಯ ಸಂಘಟನೆಗಳಿಗೆ ಕೊಲ್ಲಂನ ವಾಣಿಜ್ಯ ನೋಡಿಕೊಳ್ಳಲು ಸ್ಥಳೀಯ ಹಿಂದೂ ಅರಸರು ಭೂಮಿ ಮಂಜೂರು ಮಾಡಿದ ಮತ್ತು ತೆರಿಗೆ ಸವಲತ್ತು ನೀಡಿದ ಬಗ್ಗೆ ಉಲ್ಲೇಖವನ್ನು ವಿವರಿಸುತ್ತವೆ. 

 

 

 

 

 

 

 

 

 

 

 

 

 

 

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
₹10,000-crore scheme puts container manufacturing at the centre of India’s maritime push

Media Coverage

₹10,000-crore scheme puts container manufacturing at the centre of India’s maritime push
NM on the go

Nm on the go

Always be the first to hear from the PM. Get the App Now!
...
Prime Minister shares a Sanskrit Subhashitam, highlighting determination, perseverance, and continuous effort in overcoming life's challenges
August 13, 2026

Prime Minister Shri Narendra Modi shared a Sanskrit Subhashitam today, highlighting the power of determination, perseverance, and courage in overcoming life's challenges and turning adverse circumstances into favorable ones.

The Prime Minister wrote on X;

"दैवं पुरुषकारेण यः समर्थः प्रबाधितुम्।

न दैवेन विपन्नार्थः पुरुषः सोऽवसीदति॥"

A person who possesses the determination, perseverance and courage to turn adverse circumstances into favorable ones is never defeated by the challenges of life. Instead, through continuous effort and unwavering resolve, he moves forward and ultimately achieves success.