Agreement for Cooperation in Peaceful Uses of Nuclear Energy marks historic step in our engagement to build a clean energy partnership: PM
India and its economy are pursuing many transformations. Our aim is to become a major centre for manufacturing, investments: PM
We see Japan as a natural partner. We believe there is vast scope to combine our relative advantages: PM Modi
Our strategic partnership brings peace, stability and balance to the region: PM Modi in Japan
We will continue to work together for reforms of the United Nations and strive together for our rightful place in the UNSC: PM Modi
Thank Prime Minister Abe for the support extended for India’s membership of the Nuclear Suppliers Group: PM Modi

ಘನತೆವೆತ್ತ ಪ್ರಧಾನಮಂತ್ರಿ ಅಬೆ ಅವರೇ,
ಸ್ನೇಹಿತರೆ,
ಮಿನ-ಸಮ, ಕೋಂಬನ್ ವಾ
ಜಪಾನೀಸ್ ಭಾಷೆಯಲ್ಲಿರುವ ಜೆನ್ ಬೌದ್ಧ ಹೇಳಿಕೆ -“ಇಚಿಗೋ ಇಚೈ”, ಎಂದು ಹೇಳುತ್ತದೆ, ಇದರ ಅರ್ಥ ನಮ್ಮ ಪ್ರತಿಯೊಂದು ಭೇಟಿಯೂ ಅನನ್ಯ ಮತ್ತು ನಾವು ಆ ಪ್ರತಿಕ್ಷಣವನ್ನೂ ಕೂಡಿಸಿಡಬೇಕು.
ನಾನು ಜಪಾನ್ ಗೆ ಹಲವು ಬಾರಿ ಭೇಟಿ ನೀಡಿದ್ದೇನೆ, ಮತ್ತು ಇದು ಪ್ರಧಾನಮಂತ್ರಿಯಾಗಿ ನನ್ನ ಎರಡನೇ ಭೇಟಿ. ಮತ್ತು ಪ್ರತಿ ಭೇಟಿಯೂ ಅನನ್ಯ, ವಿಶಿಷ್ಟ, ಬೋಧಪ್ರದ ಮತ್ತು  ತೀರಾ ಲಾಭದಾಯಕವಾಗಿದೆ.

ನಾನು ಹಲವು ಸಂದರ್ಭಗಳಲ್ಲಿ ಘನತೆವೆತ್ತ ಅಬೆ ಅವರನ್ನು ಜಪಾನ್, ಭಾರತ ಮತ್ತು ವಿಶ್ವದ ಹಲವೆಡೆ ಭೇಟಿ ಮಾಡಿದ್ದೇನೆ, ಕಳೆದ ಕೆಲವು ವರ್ಷಗಳಲ್ಲಿ ಜಪಾನ್ ನ ಹಲವು ಉನ್ನತಮಟ್ಟದ ರಾಜಕೀಯ ಮತ್ತು ವಾಣಿಜ್ಯ ನಾಯಕರನ್ನು ಭಾರತದಲ್ಲಿ ಬರಮಾಡಿಕೊಳ್ಳುವ ಗೌರವ ಪಡೆದಿದ್ದೇನೆ.

ನಮ್ಮ ಮಾತುಕತೆಯ ಆವರ್ತನಗಳು ನಮ್ಮ ಬಾಂಧವ್ಯದ ಉದ್ದೇಶ, ಚೈತನ್ಯ ಮತ್ತು ಆಳವನ್ನು ವಿವರಿಸುತ್ತದೆ. ಇದು ನಮ್ಮ ಜಾಗತಿಕ ಮತ್ತು ಕಾರ್ಯತಂತ್ರಾತ್ಮಕ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸುವ ಬದ್ಧತೆಯ ಮುಂದುವರಿಕೆಯನ್ನು ಪ್ರತಿಫಲಿಸುತ್ತದೆ. 
ಸ್ನೇಹಿತರೆ, ನಮ್ಮ ಇಂದಿನ ಮಾತುಕತೆಯಲ್ಲಿ ನಾನು ಮತ್ತು ಪ್ರಧಾನಮಂತ್ರಿ ಅಬೆ ಅವರು ಕಳೆದ ಶೃಂಗದಿಂದ ಇಂದಿನವರೆಗಿನ ನಮ್ಮ ಬಾಂಧವ್ಯದ ಪ್ರಗತಿಯ ಬಗ್ಗೆ ಪರಿಶೀಲಿಸಿದ್ದೇವೆ. ನಮ್ಮ ಸಹಕಾರವು ಹಲವು ರಂಗಗಳಲ್ಲಿ ಪ್ರಗತಿಯಾಗಿದೆ ಎಂಬುದು ಇಬ್ಬರಿಗೂ ಸ್ಪಷ್ಟವಾಗಿದೆ. 
ಆಳವಾದ ಆರ್ಥಿಕ ಕಾರ್ಯಕ್ರಮ, ವಾಣಿಜ್ಯದ ಪ್ರಗತಿ, ಉತ್ಪಾದನೆ ಮತ್ತು ಹೂಡಿಕೆಯ ಬಾಂಧವ್ಯ, ಶುದ್ಧ ಇಂಧನದ ಮೇಲಿನ ಗಮನ, ನಮ್ಮ ಪ್ರಜೆಗಳ ಸುರಕ್ಷತೆಯ ಪಾಲುದಾರಿಕೆ, ಮತ್ತು ಮೂಲಸೌಕರ್ಯದ ಮೇಲಿನ ಸಹಕಾರ ಮತ್ತು ಕೌಶಲ ಅಭಿವೃದ್ಧಿ ನಮ್ಮ ಆದ್ಯತೆಗಳಲ್ಲಿ ಮುಖ್ಯವಾದವುಗಳಾಗಿವೆ.

ಇಂದು, ಅಂಕಿತ ಹಾಕಲಾದ ಪರಮಾಣು ಇಂಧನದ ಶಾಂತಿಯುತ ಬಳಕೆಯ ಒಪ್ಪಂದವು ಶುದ್ಧ ಇಂಧನ ಪಾಲುದಾರಿಕೆ ನಿರ್ಮಾಣ ಮಾಡುವ ನಮ್ಮ ಕಾರ್ಯಕ್ರಮದ ಐತಿಹಾಸಿಕ ಹೆಜ್ಜೆಯಾಗಿದೆ.

ಈ ಕ್ಷೇತ್ರದಲ್ಲಿನ ನಮ್ಮ ಸಹಕಾರವು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ನೆರವಾಗಲಿದೆ. ಜಪಾನ್ ಗೆ ಸಹ ಇಂಥ ಒಪ್ಪಂದದ ಬಗ್ಗೆ ಇರುವ ವಿಶೇಷ ಮಹತ್ವವನ್ನು ನಾನು ಗುರುತಿಸುತ್ತೇನೆ.

ನಾನು ಈ ಒಬ್ಬಂದಕ್ಕೆ ತಮ್ಮ ಬೆಂಬಲ ಸೂಚಿಸಿದ ಜಪಾನ್ ಸರ್ಕಾರ ಮತ್ತು ಸಂಸತ್ತಿಗೆ ಹಾಗೂ ಅಬೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ಸ್ನೇಹಿತರೇ,


ಭಾರತ ಮತ್ತು ಅದರ ಆರ್ಥಿಕತೆ ಹಲವು ಪರಿವರ್ತನೆಗಳನ್ನು ಅನುಸರಿಸುತ್ತಿದೆ. ಉತ್ಪಾದನೆ, ಹೂಡಿಕೆ ಮತ್ತು 21ನೇ ಶತಮಾನದ ಜ್ಞಾನ ಕೈಗಾರಿಕೆಯ ಪ್ರಮುಖ ಕೇಂದ್ರವಾಗಬೇಕು ಎಂಬುದು ನಮ್ಮ ಗುರಿಯಾಗಿದೆ.

ಮತ್ತು, ಈ ಪಯಣದಲ್ಲಿ, ನಾವು ಜಪಾನ್ ಅನ್ನು ಸ್ವಾಭಾವಿಕ ಪಾಲುದಾರನಾಗಿ ನೋಡುತ್ತೇವೆ. ಪರಸ್ಪರ ಲಾಭಕ್ಕಾಗಿ ಶ್ರಮಿಸಲು  ನಮ್ಮ ಸಂಬಂಧಿತ ಅವಕಾಶಗಳನ್ನು ಅದು ಬಂಡವಾಳ, ತಂತ್ರಜ್ಞಾನ ಅಥವಾ ಮಾನವ ಸಂಪನ್ಮೂಲಗಳನ್ನು ಒಗ್ಗೂಡಿಸಿದರೆ ವಿಸ್ತೃತ ಅವಕಾಶಗಳಿವೆ ಎಂದು ನಾವು ನಂಬಿದ್ದೇವೆ. 
ವಿಶೇಷ ಯೋಜನೆಗಳ ವಿಚಾರದಲ್ಲಿ ನಾವು ಮುಂಬೈ-ಅಹಮದಾಬಾದ್ ಅತಿ ವೇಗದ ರೈಲು ಯೋಜನೆಯಲ್ಲಿ ಬಲವಾದ ಪ್ರಗತಿ ಸಾಧಿಸಲು ನಾವು ಗಮನ ಹರಿಸುತ್ತಿದ್ದೇವೆ. ಹಣಕಾಸು ವಲಯದಲ್ಲಿನ ಸಹಕಾರದ ಮೇಲಿನ ಒಪ್ಪಂದ ಮತ್ತು ನಮ್ಮ ಕಾರ್ಯಕ್ರಮಗಳು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೆಚ್ಚಿನ ಸಂಪನ್ಮೂಲ ನಿರ್ಧರಣೆಗೆ ನೆರವಾಗುತ್ತದೆ.

ತರಬೇತಿ ಮತ್ತು ಕೌಶಲ ಅಭಿವೃದ್ಧಿಗೆ ಸಂಬಂಧಿಸಿದಂತೆ ನಮ್ಮ ಮಾತುಕತೆ ಹೊಸ ಅವಕಾಶಗಳನ್ನು ತೆರೆದಿದೆ ಮತ್ತು ಇದು ನಮ್ಮ ಆರ್ಥಿಕ ಪಾಲುದಾರಿಕೆಯ ಮಹತ್ವದ ಅಂಶವಾಗಿದೆ. ನಾವು ಬಾಹ್ಯಾಕಾಶ ವಿಜ್ಞಾನ, ಸಾಗರ ಮತ್ತು ಭೂ ವಿಜ್ಞಾನ, ಜವಳಿ, ಕ್ರೀಡೆ, ಕೃಷಿ ಮತ್ತು ಅಂಚೆ ಬ್ಯಾಂಕಿಂಗ್ ವಲಯದಲ್ಲಿ ಹೊಸ ಪಾಲುದಾರಿಕೆಯನ್ನು ರೂಪಿಸುತ್ತಿದ್ದೇವೆ.

ಸ್ನೇಹಿತರೆ,

ನಮ್ಮ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವು ಆಳವಾದ ಸಾಂಸ್ಕೃತಿಕ ಮತ್ತು ಜನರೊಂದಿಗಿನ ಸಂಪರ್ಕದಿಂದ ಹರಸಲ್ಪಟ್ಟಿದೆ. ಕಳೆದ ವರ್ಷ ಪ್ರಧಾನಮಂತ್ರಿ ಅಬೆ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ, ನಾನು, ಅವರ ಹೆಚ್ಚಿನ ವಿಸ್ತರಣೆಗೆ ಆಧಾರ ಸೃಷ್ಟಿಸಲು ಕ್ರಮ ಕೈಗೊಳ್ಳುವ ಬದ್ಧತೆ ವ್ಯಕ್ತಪಡಿಸಿದ್ದೆ. 
ಮತ್ತು ಅದರ ಫಲವಾಗಿ, 2016ರ ಮಾರ್ಚಿಯಿಂದ ನಾವು ಬಂದಿಳಿದ ತರುವಾಯದ ವೀಸಾ ಸೌಲಭ್ಯವನ್ನು ಎಲ್ಲ ಜಪಾನ್ ರಾಷ್ಟ್ರೀಯರಿಗೂ ನೀಡಿದ್ದೇವೆ. ಅಲ್ಲದೆ ನಾವು ಅರ್ಹ ಜಪಾನ್ ವಾಣಿಜ್ಯ ವ್ಯಕ್ತಿಗಳಿಗೆ 10 ವರ್ಷಗಳ ದೀರ್ಘಾವಧಿ ವೀಸಾ ನೀಡಿಕೆಗೂ ಹೆಜ್ಜೆ ಇಟ್ಟಿದ್ದೇವೆ.


ಸ್ನೇಹಿತರೆ,
ನಾವು ಭಾರತ ಮತ್ತು ಜಪಾನ್ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಪ್ತವಾಗಿ ಸಹಕಾರ ಮತ್ತು ಸಮಾಲೋಚನೆ ಮಾಡಲಿದ್ದೇವೆ. ನಾವು ವಿಶ್ವಸಂಸ್ಥೆಯ ಸುಧಾರಣೆಗೆ ಒಗ್ಗೂಡಿ ದುಡಿಯಲಿದ್ದೇವೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮ್ಮ ಹಕ್ಕಿನ ಸ್ಥಾನಕ್ಕಾಗಿ ಒಗ್ಗೂಡಿ ಶ್ರಮಿಸುತ್ತೇವೆ. 
ಪರಮಾಣು ಪೂರೈಕೆ ಗುಂಪಿನ ಸದಸ್ಯತ್ವಕ್ಕೆ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಅಬೆ ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ.

ಘನತೆವೆತ್ತ ಅಬೆ ಅವರೇ, 
ನಾವಿಬ್ಬರೂ ನಮ್ಮ ಪಾಲುದಾರಿಕೆಯ ಭವಿಷ್ಯವು ಉಜ್ವಲ ಮತ್ತು ಶ್ರೀಮಂತವಾದ್ದೆಂಬುದನ್ನು ಗುರುತಿಸಿದ್ದೇವೆ. ನಮಗೂ ಮತ್ತು ನಮ್ಮ ವಲಯಕ್ಕೂ ನಾವಿಬ್ಬರೂ ಒಗ್ಗೂಡಿ ಮಾಡುವ ಕಾರ್ಯಕ್ಕೆ ಸ್ವರೂಪ ಮತ್ತು ಅಳತೆಯ ಮಿತಿ ಇಲ್ಲ.

ಮತ್ತು, ಇದಕ್ಕೆ ಪ್ರಮುಖ ಕಾರಣ, ಇದಕ್ಕೆ ನಿಮ್ಮ ಬಲವಾದ ಮತ್ತು ಚಲನಶೀಲ ನಾಯಕತ್ವ. ನಿಮ್ಮ ಪಾಲುದಾರ ಮತ್ತು ಗೆಳೆಯನಾಗಿರುವುದು ನನಗೆ ಹೆಮ್ಮೆಯ ಸಂಗತಿ. ಈ ಶೃಂಗದಲ್ಲಿ ಮೌಲ್ಯಯುತ ಫಲಿತಾಂಶ ಹೊರಹೊಮ್ಮಿದ್ದಕ್ಕಾಗಿ ಮತ್ತು ನಿಮ್ಮ ಆತ್ಮೀಯ ಆಹ್ವಾನ ಮತ್ತು ಆತಿಥ್ಯಕ್ಕೆ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ.

ಅನತ ನೋ ಓ ಮೊತೆನಶಿ ಓ ಅರಿಗಟೋ ಗೊಜೈಮಶಿತ!
(ತಮ್ಮ ಸದೃದಯದ ಆತಿಥ್ಯಕ್ಕೆ ನನ್ನ ಧನ್ಯವಾದಗಳು)
ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s data centre boom: Mumbai cracks global top 15, Hyderabad pipeline set to surge 15x

Media Coverage

India’s data centre boom: Mumbai cracks global top 15, Hyderabad pipeline set to surge 15x
NM on the go

Nm on the go

Always be the first to hear from the PM. Get the App Now!
...
ಆಗಸ್ಟ್ 27ರಂದು 'ಖೇಲೋ ಇಂಡಿಯಾ' ಸಂವಾದದಲ್ಲಿ ಯುವಜನರನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ
August 26, 2026
'ಖೇಲೋ ಇಂಡಿಯಾ' ಸಂವಾದವು ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂಸೇವೆ, ಫಿಟ್‌ನೆಸ್‌ ಮತ್ತು ರಾಷ್ಟ್ರ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ
'ಖೇಲೋ ಇಂಡಿಯಾ' ಸಂವಾದದ ಅಡಿಯಲ್ಲಿ ನಡೆಯುವ 'ಯುವ ಸಂವಾದ'ವು ಐದು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ: ಕ್ರೀಡೆ, ಒಲಿಂಪಿಕ್ ಆಕಾಂಕ್ಷೆಗಳು, ಯುವ ನಾಯಕತ್ವ, 'ವಿಕಸಿತ ಭಾರತ' ಮತ್ತು 'ನಶಾ ಮುಕ್ತ ಯುವ' ಅಭಿಯಾನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಖೇಲೋ ಇಂಡಿಯಾ' ಸಂವಾದವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಯುವಕರಿಗೆ ಭಾರತದ ಕ್ರೀಡಾ ಪ್ರಯಾಣದಲ್ಲಿ ತೊಡಗಿಸಿಕೊಳ್ಳಲು, ಅವರ ಆಕಾಂಕ್ಷೆಗಳನ್ನು ಹಂಚಿಕೊಳ್ಳಲು ಮತ್ತು ಬಲವಾದ ಯುವಕರ ನೇತೃತ್ವದ 'ವಿಕಸಿತ ಭಾರತ'ಕ್ಕಾಗಿ ತಮ್ಮ ವಿಚಾರಗಳನ್ನು ನೀಡಲು ಸಹಾಯ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

2026ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ 'ಮೇರಾ ಯುವ ಭಾರತ್' (ಮೈ ಭಾರತ್‌) ಆಯೋಜಿಸಿರುವ ಈ ಕಾರ್ಯಕ್ರಮವು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರತಿಯೊಂದು ಜಿಲ್ಲೆಯ ಎರಡು ಕಾಲೇಜುಗಳಲ್ಲಿ ಯುವಕರ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ನಡೆಯಲಿದೆ. ಯುವಕರ ಆಕಾಂಕ್ಷೆಗಳನ್ನು ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಭಾಗದಲ್ಲಿ ಇರಿಸಿಕೊಂಡು ಸದೃಢ, ಶಿಸ್ತುಬದ್ಧ ಮತ್ತು ಕ್ರೀಡಾ ರಾಷ್ಟ್ರವನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ರಾಷ್ಟ್ರವ್ಯಾಪಿ ನಡೆಯುವ 'ಖೇಲೋ ಇಂಡಿಯಾ ಸಂವಾದ'ವು ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂ ಸೇವೆ, ಫಿಟ್ನೆಸ್ ಮತ್ತು ರಾಷ್ಟ್ರ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ. ಭಾರತದ ಯುವ ಮತ್ತು ಕ್ರೀಡಾ ಪರಿಸರ ವ್ಯವಸ್ಥೆಯ ಕುರಿತಾದ ನಿರಂತರ ಸಂವಾದದಲ್ಲಿ ಯುವಕರ ಆಲೋಚನೆಗಳು ಮತ್ತು ದೃಷ್ಟಿಕೋನಗಳಿಗೆ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ದೇಶದ ಕ್ರೀಡಾ ಮಹತ್ವಾಕಾಂಕ್ಷೆಗಳೊಂದಿಗೆ ಯುವಕರು ತೊಡಗಿಸಿಕೊಳ್ಳಲು ಇದು ನೇರ ಮಾರ್ಗವನ್ನು ಒದಗಿಸುತ್ತದೆ.

ರಾಷ್ಟ್ರೀಯ ಕಾರ್ಯಕ್ರಮದ ನಂತರ ಯುವ ಭಾಗಿದಾರರು, 'ಮೈ ಭಾರತ್' ಸ್ವಯಂಸೇವಕರು, ಸ್ಥಳೀಯ ಕ್ರೀಡಾಪಟುಗಳು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ ಸ್ಥಳೀಯ ಸಂವಾದಗಳು ನಡೆಯಲಿವೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಯುವಕರು ಮತ್ತು ಪ್ರಮುಖ ಭಾರತೀಯ ಅಥ್ಲೀಟ್‌ಗಳು ಹಾಗೂ ಪದಕ ವಿಜೇತರ ನಡುವಿನ ನೇರ ಸಂವಾದವು ಈ ಉಪಕ್ರಮದ ಪ್ರಮುಖ ಲಕ್ಷಣವಾಗಿದೆ. 'ಯುವ ಸಂವಾದ'ವು ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು, ಇದರಲ್ಲಿ ಯುವ ಭಾಗಿದಾರರನ್ನು ತಮ್ಮ ಸ್ವಂತ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ಆಹ್ವಾನಿಸಲಾಗುತ್ತದೆ. ಈ ಸಂವಾದವನ್ನು ಐದು ವಿಷಯಗಳ ಸುತ್ತ ರಚಿಸಲಾಗಿದೆ:

  • ಉತ್ತಮ ಸೌಲಭ್ಯಗಳು, ತರಬೇತಿ, ಕ್ರೀಡಾ ವಿಜ್ಞಾನ ಮತ್ತು ಎಲ್ಲರನ್ನೂ ಒಳಗೊಂ ಭಾಗವಹಿಸುವಿಕೆಯ ಮೂಲಕ ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸುಧಾರಿಸುವುದು;
  • ವೈಜ್ಞಾನಿಕ ಪ್ರತಿಭಾ ಶೋಧನೆ, ಪಾರದರ್ಶಕ ಆಯ್ಕೆ ಮತ್ತು ದೀರ್ಘಕಾಲೀನ ಕ್ರೀಡಾಪಟು ಅಭಿವೃದ್ಧಿಯ ಮೂಲಕ 2036ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಗೆ ಪ್ರತಿಭೆಗಳನ್ನು ಪೋಷಿಸುವುದು;
  • ಆಡಳಿತ ವೇದಿಕೆಗಳು ಮತ್ತು 'ಮೈ ಭಾರತ್' ನೇತೃತ್ವದ ಸ್ವಯಂಸೇವಕ ಸೇವೆಯ ಮೂಲಕ ಯುವ ನಾಯಕರನ್ನು ಸೃಷ್ಟಿಸುವುದು;
  • ನಾಗರಿಕ ಪ್ರಜ್ಞೆ, ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯಗಳು ಮತ್ತು ರಚನಾತ್ಮಕ ಸ್ವಯಂಸೇವಕ ಸೇವೆಯನ್ನು ಬೆಳೆಸುವ ಮೂಲಕ ವಿಕಸಿತ ಭಾರತಕ್ಕಾಗಿ ಯುವಕರನ್ನು ಸಬಲೀಕರಣಗೊಳಿಸುವುದು;
  • ಮಾದಕ ವ್ಯಸನದ ವಿರುದ್ಧ ಹೋರಾಡಲು ಕ್ರೀಡೆ ಮತ್ತು ಸಮಾನಮನಸ್ಕ ಜಾಲಗಳನ್ನು ಬಳಸಿಕೊಳ್ಳುವ 'ನಶಾ ಮುಕ್ತ ಯುವ ಆಂದೋಲ'ನವನ್ನು ಉತ್ತೇಜಿಸುವುದು. ಇದು 2026ರ ಆಗಸ್ಟ್ 2ರಂದು ಪ್ರಾರಂಭಿಸಲಾದ ಪ್ರಧಾನಮಂತ್ರಿಯವರ 100 ವಾರಗಳ ರಾಷ್ಟ್ರವ್ಯಾಪಿ ಅಭಿಯಾನದ ಅಡಿಯಲ್ಲಿ ಸಾಪ್ತಾಹಿಕ 'ಜನ ಭಾಗೀದಾರಿ' ಚಟುವಟಿಕೆಗಳಿಂದ ಬೆಂಬಲಿತವಾಗಿದೆ.