ವಿಶ್ವ ಮಹಿಳಾ ದಿನದಂದು ಪ್ರಧಾನಮಂತ್ರಿ ಅವರ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ  ಡಾ. ಮಾಳ್ವಿಕ ಅಯ್ಯರ್, ‘ವಾಸ್ತವತೆಯನ್ನು ಸ್ವೀಕರಿಸುವುದು ನಮಗೆ ನಾವೇ ನೀಡುವ ಅತಿದೊಡ್ಡ ಬಹುಮಾನ’. ನಮ್ಮ ಬದುಕನ್ನು ನಾವೇ ನಿಯಂತ್ರಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ ಜೀವನದ ನಿಟ್ಟಿನಲ್ಲಿ ನಮ್ಮ ವರ್ತನೆಗಳನ್ನು ನಾವು ಖಂಡಿತ ನಿಯಂತ್ರಿಸಿಕೊಳ್ಳಬಹುದು. ಅಂತಿಮವಾಗಿ ನಾವು ನಮಗೆ ಎದುರಾಗುವ ಸವಾಲುಗಳಿಂದ ಬದುಕುಳಿಯುವುದು ಅದರಿಂದ ಮಾತ್ರ ಸಾಧ್ಯಎಂದು ಹೇಳಿದ್ದಾರೆ.  

ಡಾ. ಅಯ್ಯರ್, 13ನೇ ವರ್ಷದವರಾಗಿದ್ದಾದ ಭೀಕರ ಬಾಂಬ್ ಸ್ಫೋಟಕ್ಕೆ ತುತ್ತಾಗಿ, ತನ್ನ ಕೈ ಮತ್ತು ಕಾಲುಗಳು ಗಂಭೀರವಾಗಿ ಗಾಯಗೊಂಡಿದ್ದರೂ ಛಲದಿಂದ ಬದುಕುಳಿದಿದ್ದಾರೆ. ಆದರೆ ಅವರು ತಮ್ಮ ನಿಶ್ಚಯ ಬಿಟ್ಟುಕೊಡಲಿಲ್ಲ. ಆಕೆ ಕಠಿಣ ಶ್ರಮಪಟ್ಟರು ಮತ್ತು ಪಿಎಚ್ ಡಿ ಪಡೆಯುವವರೆಗೆ ಓದಿದರು. ಅವರುಬಿಟ್ಟು ಕೊಡುವುದು ಆಯ್ಕೆಯಾಗಬಾರದು, ನಿಮ್ಮ ಇತಿಮಿತಿಗಳನ್ನು ಮರೆಯಿರಿ ಮತ್ತು ವಿಶ್ವವನ್ನು ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ ಎದುರಿಸಿಎಂದರು

ಡಾ. ಅಯ್ಯರ್, ಬದಲಾವಣೆಗೆ ಶಿಕ್ಷಣ ಅತ್ಯಂತ ಅವಶ್ಯಕ ಎಂದು ನಂಬಿರುವವರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಟ್ವಿಟ್ಟರ್ ಮೂಲಕ ಅವರು ಹೀಗೆ ಬರೆಯುತ್ತಾರೆ. “ನಾವು ತಾರತಮ್ಯದ ವರ್ತನೆಯ ಬಗ್ಗೆ ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ಅಗತ್ಯವಿದೆ. ವಿಕಲಚೇತನರನ್ನು ದುರ್ಬಲರು ಮತ್ತು ಅವಲಂಬಿತರು ಎಂದು ತೋರಿಸುವ ಬದಲು, ಅವರನ್ನು ಮಾದರಿ ಎಂಬಂತೆ ನಾವು ಜನರಿಗೆ ತೋರಿಸುವ ಅಗತ್ಯವಿದೆ’. 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆಮಹಿಳೆ ನಮ್ಮೆಲ್ಲರಿಗೂ ಸ್ಫೂರ್ತಿಅಭಿಯಾನಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ ಡಾ. ಮಾಳ್ವಿಕ ಅಯ್ಯರ್, “ನಮ್ಮ ನಡವಳಿಕೆ ಅಥವಾ ವರ್ತನೆ ನಾವು ವಿಕಲಾಂಗತೆ ವಿರುದ್ಧ ಹೋರಾಡುವ ಅರ್ಧ ಯುದ್ಧ ಎಂದು ಭಾವಿಸಬೇಕು. ಪ್ರಧಾನಿ ಅವರುಮಹಿಳಾ ದಿನದ ಬಗ್ಗೆ ನನ್ನ ಅನಿಸಿಕೆಗಳನ್ನು ಪ್ರಸಾರ ಮಾಡಲು ಆಯ್ಕೆ ಮಾಡಿರುವುದು ಭಾರತ ದಿವ್ಯಾಂಗರ ಬಗ್ಗೆ ಶತಮಾನಗಳಷ್ಟು ಹಳೆಯದಾದ ಮೂಢನಂಬಿಕೆಗಳನ್ನು ಹೊಡೆದೋಡಿಸಿ, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಂಬುವಂತೆ ಮಾಡಿದೆಎಂದು ಹೇಳಿದ್ದಾರೆ 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

Media Coverage

"Overwhelmed By The Warmth": PM Modi Receives Grand Welcome In Uzbekistan
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಆಗಸ್ಟ್ 2026
August 29, 2026

New India, New Speed, New Stage: Missiles, Medals, Multilateralism under PM Modi