Our government has moved a step towards fulfilling people's dreams, says the PM
Ro-Ro ferry service will start a new chapter in coastal tourism: PM Modi
Our focus is on the blue economy & we see the blue economy as integral to our vision of a new India: PM
Our mantra is 'P for P - Ports for Prosperity', says PM Modi

ನನ್ನ ಪ್ರೀತಿಯ ಸಹೋದರ, ಸಹೋದರಿಯರೇ,

ಮಿತ್ರರೇ, ತಾನು ಬೆಳೆದ ನಳನಳಿಸುವ ಬೆಳೆಯನ್ನು ಕಂಡಾಗ ರೈತನಿಗಾಗುವ ಅನುಭವ, ತಾನು ಶ್ರಮಪಟ್ಟು ಮಾಡಿದ ಮಡಿಕೆ, ಮಣ್ಣಿನ ಪಾತ್ರೆ, ಮಣ್ಣಿನ ದೀಪವನ್ನು ಕಂಡಾಗ ಕುಂಬಾರಿನಿಗಾಗುವ ಸಂತೋಷ, ಸುಂದರ ವಸ್ತ್ರವನ್ನು ಮಾಡಿದ ನಂತರ ಯಾವುದೇ ನೇಕಾರನಿಗಾಗುವ ಉತ್ಸಾಹದ ಅನುಭವ ಇಂದು ನನಗಾಗುತ್ತಿದೆ. ಇದೀಗ ಸ್ವಲ್ಪ ಹೊತ್ತಿನ ಮೊದಲು ದೇಶದ 125 ಕೋಟಿ ಭಾರತೀಯರ ಆಸೆಯನ್ನು, ಅವರ ಭಾವನೆಯನ್ನು ಹೊತ್ತು ನಾನಿಲ್ಲಿಗೆ ಆಗಮಿಸಿದ್ದೇನೆ.

ಘೋಘಾದಿಂದ ದಹೇಜ್ ಮಧ್ಯೆ ಸಮುದ್ರ ಮಾರ್ಗದಲ್ಲಿ ಕಳೆದ ಪ್ರತಿಕ್ಷಣ ಕೂಡಾ ಕಳೆದುಹೋಗುತ್ತಿರುವ ಪ್ರತಿ ನಿಮಿಷವೂ ಕೂಡಾ ಒಂದು ಇತಿಹಾಸವನ್ನು ಬರೆಯುತ್ತಿದೆ, ನೂತನ ಭವಿಷ್ಯದ ಬಾಗಿಲನ್ನು ತೆರೆಯುತ್ತಿದೆ ಎಂದು ನನಗನ್ನಿಸುತ್ತಿತ್ತು, ಇದೇ ದ್ವಾರದ ಮೂಲಕ ಮುನ್ನಡೆದು ನೂತನ ಭಾರತವನ್ನು ಬಲಿಷ್ಟವನ್ನಾಗಿ ಮಾಡೋಣ, ನವ ಭಾರತದ ಕನಸನ್ನು ನನಸು ಮಾಡೋಣ. ದೇಶದ ಜನಶಕ್ತಿಯಿಂದಲೇ ಮತ್ತು ಆ ಜನಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳುವ ಕನಸನ್ನು ಸರದಾರ್ ಪಟೇಲರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ತನಕ ಎಲ್ಲರೂ ಕಂಡಿದ್ದರು. ಇಂದು ನಾವು ಅವರ ಕನಸಿನೊಂದಿಗೆ ಹೊಂದಿಕೊಂಡ ಒಂದು ಸವಾಲನ್ನು ದಾಟಿ ಮುನ್ನಡೆದಿದ್ದೇವೆ.

ಘೋಘಾ – ದಹೇಜ್ ನಡುವಣ ಈ ಸಮುದ್ರ ಮಾರ್ಗ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನ ಕೋಟ್ಯಾನುಕೋಟಿ ಜನರ ಜೀವನವನ್ನು ಮತ್ತಷ್ಟು ಸುಖಕರವನ್ನಾಗಿ ಮಾಡಿರುವುದೇ ಅಲ್ಲದೇ ಅವರನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ.

ಈ ಸಮುದ್ರಯಾನ (ಹಡಗು) ಸೇವೆಯಿಂದ ಈ ಸಂಪೂರ್ಣ ಕ್ಷೇತ್ರದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಒಂದು ಹೊಸ ಶೆಕೆ ಪ್ರಾರಂಭವಾಗಲಿದೆ. ಈ ವ್ಯವಸ್ಥೆಯ ಸದುಪಯೋಗ ಪಡೆಯುವ ಮೂಲಕ ಇಲ್ಲಿನ ಯುವಜನರು ಹೊಸ ಉದ್ಯೋಗಾವಕಾಶಗಳನ್ನು ಪಡೆಯಲಿದ್ದಾರೆ. ಕರಾವಳಿ ಮೀನುಗಾರಿಕೆ ಮತ್ತು ಕರಾವಳಿ ಪ್ರವಾಸೋದ್ಯಮದ ಒಂದು ಹೊಸ ಅಧ್ಯಾಯ ಇದರೊಂದಿಗೆ ಪ್ರಾರಂಭವಾಗಲಿದೆ. ಭವಿಷ್ಯದಲ್ಲಿ ನಾವೆಲ್ಲರೂ ಈ ಹಡಗು ಸೇವೆಯಿಂದ.... ಇಲ್ಲಿಗೆ ಆಗಮಿಸಿರುವ ಎಲ್ಲರೂ ಗಮನವಿಟ್ಟು ಕೇಳಿ, ಭವಿಷ್ಯದಲ್ಲಿ ಈ ಹಡಗು ಸೇವೆಯಿಂದ ಹಜೀರಾ, ಪೀಪಾವಾವೋ, ಜಾಫರಾಬಾದ್, ದಮನ್ ದೀವ್ ಈ ಎಲ್ಲ ಮಹತ್ವಪೂರ್ಣ ಜಾಗಗಳನ್ನು ಈ ಹಡಗು ಸೇವೆ ಜೋಡಿಸಲಿದೆ.

ಸೂರತ್ ನಿಂದ ಮುಂದೆ ಹಾಜೀರಾವರೆಗೆ ಹಾಗೂ ಮುಂಬೈ ತನಕ ಈ ಹಡಗು ಸೇವೆಯನ್ನು ವಿಸ್ತರಿಸುವ ಸರ್ಕಾರದ ಯೋಜನೆಯಿದೆಯೆಂದು ನನಗೆ ತಿಳಿಸಲಾಯಿತು. ಕಛ್ ನ ಕರಾವಳಿಯಲ್ಲೂ ಈ ರೀತಿಯ ಯೋಜನೆಯನ್ನು ಪ್ರಾರಂಭಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಇನ್ನೂ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಪ್ರಯತ್ನಗಳಿಗೆ ನಾನು ರಾಜ್ಯ ಸರ್ಕಾರಕ್ಕೆ ಶುಭಾಶಯಗಳನ್ನು ಕೋರುತ್ತೇನೆ. ಕೇಂದ್ರ ಸರ್ಕಾರದಿಂದ ತಮಗೆ ಎಲ್ಲ ರೀತಿಯ ನೆರವು ದೊರಕುವುದೆಂಬ ಭರವಸೆಯನ್ನು ನಾನು ನೀಡುತ್ತೇನೆ.

ಸರ್ಕಾರದ ಈ ಪ್ರಯತ್ನ ದಹೇಜ್ ನಿಂದ ಹಿಡಿದು ಸಂಪೂರ್ಣ ದಕ್ಷಿಣ ಗುಜರಾತ್ ನ ಅಭಿವೃದ್ಧಿಯ ವಿಷಯದಲ್ಲಿ ಸರ್ಕಾರದ ಬದ್ಧತೆಗೆ ಒಂದು ಜೀವಂತ ಉದಾಹರಣೆಯಾಗಿದೆ. ಬರೂಚ್ ಸಹಿತ ದಕ್ಷಿಣ ಗುಜರಾತ್ ನಲ್ಲಿ ಕೈಗಾರಿಕಾ ಅಭಿವೃದ್ಧಿಗೆ ವೇಗ ನೀಡಲು ದಹೇಜ್ ಮತ್ತು ಹಾಜೀರಾದಂತಹ ಕ್ಷೇತ್ರಗಳಿಗೆ ನಾವು ವಿಶೇಷ ಗಮನ ನೀಡುತ್ತಿದ್ದೇವೆ. ಪೆಟೋಲಿಯಂ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಬಂಡವಾಳ ಕ್ಷೇತ್ರದ ಸ್ಥಾಪನೆಯ ಜತೆ ಜತೆಗೆ ರೈಲ್ವೆ ಸಂಪರ್ಕ, ರಸ್ತೆ ಜೋಡಣೆಯ ಕ್ಷೇತ್ರದಲ್ಲಿ ಆಗಿರುವ ಕಾರ್ಯಗಳನ್ನು ಬಹುಶ: ಈ ಮೊದಲು ಯಾರೂ ಯೋಚಿಸಿರಲಿಕ್ಕಿಲ್ಲ.

ಹಾಜೀರಾದಲ್ಲಿ ಕೂಡಾ ಮೂಲಭೂತ ಸೌಕರ್ಯಗಳ ಜತೆಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮುಂಬರುವ ವರ್ಷಗಳಲ್ಲಿ ಮುಂಬಯಿ – ದಿಲ್ಲಿ ಕೈಗಾರಿಕಾ ಕಾರಿಡಾರ್ ನ ಲಾಭ ಈ ಕ್ಷೇತ್ರಗಳಿಗೆ ದೊರೆಯಲಿದೆ. ಗುಜರಾತ್ ನ ಕಡಲ ಅಭಿವೃದ್ಧಿ ಇಡೀ ದೇಶಕ್ಕೆ ಒಂದು ಮಾದರಿಯಾಗಿದೆ. ಈಗ ಇಲ್ಲಿ ಆರಂಭವಾಗಿರುವ ರೋ – ರೋ ಹಡಗು ಸೇವೆಯ ಯೋಜನೆ ಕೂಡ ಇನ್ನಿತರ ರಾಜ್ಯಗಳಿಗೆ ಒಂದು ಮಾದರಿ ಯೋಜನೆಯಾಗಿ ಕಾರ್ಯ ನಿರ್ವಹಿಸುತ್ತದೆ.

ನಾವು ಅನೇಕ ವರ್ಷಗಳ ಸತತ ಪ್ರಯತ್ನದ ಮೂಲಕ ಈ ರೀತಿಯ ಯೋಜನೆಗಳಿಗೆ ಒದಗಬಹುದಾದ ತೊಂದರೆಗಳನ್ನು ಅರಿತು, ಅವನ್ನು ದೂರ ಮಾಡಿದ್ದೇವೆ, ಭವಿಷ್ಯದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕಾದರೆ, ತೊಂದರೆಗಳು ಆದಷ್ಟು ಕಡಿಮೆಯಾಗಬೇಕು, ಈ ದಿಕ್ಕಿನಲ್ಲಿ ಗುಜರಾತ್ ರಾಜ್ಯ ಒಂದು ದೊಡ್ಡ ಕಾರ್ಯವನ್ನು ಮಾಡಿದೆ.


ಮಿತ್ರರೇ, ಸಾವಿರಾರು ವರ್ಷಗಳಿಂದ ಜಲಮಾರ್ಗದ ವಿಷಯದಲ್ಲಿ ಭಾರತ ಬೇರೆಲ್ಲ ದೇಶಗಳಿಗಿಂತ ಬಹಳಷ್ಟು ಮುಂದಿತ್ತು. ನಮ್ಮ ತಂತ್ರಜ್ಞಾನ ಬೇರೆಲ್ಲ ದೇಶಗಳಿಗಿಂತ ಬಹಳ ಶ್ರೇಷ್ಠವಾಗಿತ್ತು. ಆದರೆ ಗುಲಾಮಗಿರಿಯ ಕಾಲಘಟ್ಟದಲ್ಲಿ ನಾವು ನಮ್ಮ ಶ್ರೇಷ್ಠತೆಯನ್ನು ಇತಿಹಾಸದಿಂದ ಕಲಿಯುವುದನ್ನು ಕಡಿಮೆ ಮಾಡಿದೆವು ಮಾತ್ರವಲ್ಲ ಮರೆಯುತ್ತಾ ಸಾಗಿದೆವು ಎಂಬುದು ಕೂಡಾ ಅಷ್ಟೇ ಸತ್ಯ. ನೂತನ ಅನ್ವೇಷಣೆಗಳು ಕಡಿಮೆಯಾಗುವುದಷ್ಟೇ ಅಲ್ಲ ನಮ್ಮಲ್ಲಿದ ಕಾರ್ಯಕ್ಷಮತೆ ಕೂಡಾ ಇತಿಹಾಸದ ಭಾಗವಾಗಿ ಹೋಯಿತು. ಯಾವ ದೇಶದ ನೌಕಾಯಾನ ಸಾಮರ್ಥ್ಯವನ್ನು ಸಂಪೂರ್ಣ ವಿಶ್ವ ಗುರುತಿಸುತ್ತಿತ್ತೋ, ಆ ದೇಶದ ಜಲ ಸಾರಿಗೆ ಸ್ವಾತಂತ್ರ್ಯಾ ನಂತರ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಯಿತು, ಎಲ್ಲರೂ ಮರೆಯುವಂತಾಯಿತು.


ಮಿತ್ರರೇ, ಇಂದು ದೇಶದ ರಸ್ತೆ ಸಾರಿಗೆಯ ಭಾಗ ಶೇಕಡಾ 55 ರಷ್ಟಿದೆ, ಸರಕು ಸಾಗಣಿಕೆಯ ಶೇಕಡಾ 35ರಷ್ಟನ್ನು ರೈಲ್ವೆ ವಹಿಸಿಕೊಂಡಿದೆ, ಆದರೆ ಅತ್ಯಂತ ಕಡಿಮೆ ವೆಚ್ಚದ ಜಲ ಸಾರಿಗೆ ಶೇಕಡಾ 5 ಅಥವಾ 6 ರಷ್ಟಿದೆ. ಆದರೆ ಬೇರೆ ದೇಶಗಳಲ್ಲಿ ಜಲ ಮಾರ್ಗ ಅಥವಾ ಸಮುದ್ರ ಸಾರಿಗೆಯ ಭಾಗ ಸರಿ ಸುಮಾರು ಶೇಕಡಾ 30ಕ್ಕಿಂತ ಹೆಚ್ಚಿದೆ. ಇದೇ ನಮಗೆ ಸವಾಲಾಗಿದ್ದು ಇದನ್ನು ಬದಲಾಯಿಸುವ ಸಂಕಲ್ಪವನ್ನಿಟ್ಟುಕೊಂಡು ನಾವು ಮುಂದುವರಿಯಬೇಕಿದೆ.


ದೇಶದ ಅರ್ಥವ್ಯವಸ್ಥೆಯ ಶೇಕಡಾ 18ರಷ್ಟು ಹೊರೆ ಸರಕು ಸಾಗಣಿಕೆಯ ಮೇಲೆ ಅವಲಂಬಿಸಿದೆ ಎಂಬು ತಿಳಿದು ತಮಗೆ ಆಶ್ಚರ್ಯವಾಗಬಹುದು. ಅಂದರೆ ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸರಕು ಸಾಣಾಣಿಕೆಗೆ ತಗುಲುವ ವೆಚ್ಚ ಬೇರೆ ದೇಶಗಳಿಗೆ ಹೋಲಿಸಿದರೆ ಬಹಳ ಅಧಿಕವಾಗಿದೆ. ಅಧಿಕ ಸಾಗಾಣಿಕಾ ವೆಚ್ಚದ ಕಾರಣದಿಂದಾಗಿ ದೇಶದ ಬಡ ವ್ಯಕ್ತಿಗೆ ಅವಶ್ಯವಾದ ವಸ್ತುವಿನ ಬೆಲೆ ಹೆಚ್ಚಾಗುತ್ತದೆ. ಜಲಸಾರಿಗೆಗೆ ಹೆಚ್ಚಿನ ಒತ್ತನ್ನು ನೀಡಿ, ಸರಕು ಸಾಗಾಣಿಕೆಯನ್ನು ಜಲ ಮಾರ್ಗದ ಮೂಲಕ ನಿರ್ವಹಿಸಿದರೆ ವೆಚ್ಚವನ್ನು ಅರ್ಧದಷ್ಟು ಕಡಿಮೆ ಮಾಡಬಹುದು. ಈ ರೀತಿ ಮಾಡಲು ನಮ್ಮ ಬಳಿ ಸಾಧನಗಳು, ಮೂಲಭೂತ ಸೌಕರ್ಯಗಳು ಮತ್ತು ಸಾಮರ್ಥ್ಯ ಎಲ್ಲವೂ ನಮ್ಮ ಬಳಿ ಇದೆ.


ಸ್ನೇಹಿತರೆ, ನಮ್ಮ ದೇಶದಲ್ಲಿ 7,500 ಕಿಲೋಮೀಟರ್ ಉದ್ದದ ಸಮುದ್ರ ತೀರ ಮತ್ತು ನದಿಗಳ ಮೂಲಕ ದೊರೆಯುವ 14,500 ಕಿಲೋ ಮೀಟರ್ ಉದ್ದದ ಆಂತರಿಕ ಜಲಮಾರ್ಗವಿದೆ. ಒಂದು ರೀತಿಯಲ್ಲಿ 21,000 ಕಿಲೋಮೀಟರ್ ಉದ್ದದ ಜಲಮಾರ್ಗವನ್ನು ನೀಡುವ ಮೂಲಕ ಭಾರತ ಮಾತೆಯ ಆಶೀರ್ವಾದ ನಮಗೆ ಈಗಾಗಲೇ ದೊರೆತಿದೆ. ವರ್ಷಗಳ ಕಾಲ ನಾವು ಈ ನಿಧಿಯನ್ನು ನಿರ್ಲಕ್ಷಿಸಿದ್ದಷ್ಟೇ ಅಲ್ಲ ಈ ನಿಧಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬ ಅರಿವೂ ಕೂಡಾ ನಮಗಿರಲಿಲ್ಲ.

ನಮ್ಮ ಮೊದಲ ಬಂದರು ನೀತಿ 1995ರಲ್ಲಿ ರಚನೆಯಾಯಿತು ಎಂದು ತಿಳಿದರೆ ತಮಗೆ ಆಶ್ಚರ್ಯವಾಗಬಹುದು. 1947ರಲ್ಲಿ ಸ್ವಾತಂತ್ರ ಬಂದರೂ ಬಂದರು ನೀತಿ ರಚನೆಯಾದದ್ದು 1995ರಲ್ಲಿ, ಎಷ್ಟು ವಿಳಂಬ ಮಾಡಲಾಯಿತು. ಈ ಮೊದಲು ಬಂದರು ಅಭಿವೃದ್ಧಿಗಾಗಿ ಯಾವುದೇ ದೂರದೃಷ್ಟಿಯನ್ನು ಇಟ್ಟುಕೊಂಡು ಕಾರ್ಯ ನಿರ್ವಹಣೆ ಆಗುತ್ತಿರಲಿಲ್ಲ. ಈ ಕಾರಣದಿಂದಾಗಿ ದೇಶ ಲಕ್ಷಾಂತರ ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಬೇಕಾಗಿತ್ತು.

ನಾನು ತಮಗೆ ಒಂದು ಉದಾಹರಣೆಯನ್ನು ನೀಡಬಯಸುತ್ತೇನೆ. ನಾವು ಕಲ್ಲಿದ್ದಲನ್ನು ಜಲ ಮಾರ್ಗದ ಮೂಲಕ ಸಾಗಿಸಬಯಸಿದರೆ, ಪ್ರತಿಟನ್, ಪ್ರತಿಕಿಲೋಮೀಟರ್ ಗೆ ತಗಲುವ ವೆಚ್ಚ 20 ಪೈಸೆ. ಆದರೇ ಇದೇ ಕಾರ್ಯವನ್ನು ನಾವು ರೈಲ್ವೆ ಮಾರ್ಗದ ಮೂಲಕ ಮಾಡಿದರೆ ತಗಲುವ ವೆಚ್ಚ 50 ರೂಪಾಯಿಗಳು. ಅಂದರೆ 20 ಪೈಸೆಯ ಬದಲಿಗೆ 50 ರೂಪಾಯಿಗಳು, ಇದೇ ಕಾರ್ಯವನ್ನು ರಸ್ತೆ ಮಾರ್ಗದ ಮೂಲಕ ಮಾಡಿದರೆ ವೆಚ್ಚ ಎಷ್ಟು ಪಟ್ಟು ಹೆಚ್ಚಾಗಬಹುದು ಎಂಬುದನ್ನು ತಾವು ಯೋಚಿಸಿ. ತಾವೇ ಹೇಳಿ, ನಾವು ಕಡಿಮೆ ವೆಚ್ಚದಲ್ಲಿ ಕಲ್ಲಿದ್ದಲನ್ನು ಸಾಗಾಟ ಮಾಡಬೇಕೋ ಬೇಡವೋ? ಇಂದೂ ಕೂಡಾ ಕಲ್ಲಿದ್ದಲಿನ ಸಾಗಾಣಿಕೆ ರೈಲ್ವೆ ಮಾರ್ಗದ ಮೂಲಕವೇ ನಡೆಯುತ್ತಿದೆ ಎಂದು ತಿಳಿದರೆ ತಮಗೆ ಆಶ್ಚರ್ಯವಾಗುತ್ತದೆ. ದಶಕಗಳಿಂದ ನಡೆದು ಬಂದಿರುವ ಈ ವ್ಯವಸ್ಥೆಯನ್ನು ಬದಲು ಮಾಡುವ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ಸರ್ಕಾರ ಇದಕ್ಕಾಗಿ ಸತತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಮಿತ್ರರೇ, ನಾವು ಯಾವುದಾದರೂ ಹೊಸ ಮನೆಯನ್ನು ಕೊಂಡಾಗ ಆ ಮನೆಗೆ ಬೇರೆ ಬೇರೆ ಪ್ರದೇಶಗಳಿಂದ ಇರುವ ಸಂಪರ್ಕದ ಬಗ್ಗೆ ವಿಚಾರ ಮಾಡುತ್ತೇವೆ, ರಸ್ತೆ ಮಾರ್ಗವಿದೆಯೋ ಇಲ್ಲವೋ, ರೈಲ್ವೆ ಸಂಪರ್ಕವಿದೆಯೋ, ಇಲ್ಲವೋ, ಎಲ್ಲಿಯಾದರೂ ಹೋಗಬೇಕಾದರೆ ಬಸ್ ಸೌಲಭ್ಯ ದೊರಕಬಹುದೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸುತ್ತೇವೆ. ನಾವು ಯಾವುದಾದರೂ ಹೊಸ ವ್ಯವಹಾರವನ್ನು ಪ್ರಾರಂಭಿಸಬೇಕಾದರೆ, ಆ ಪ್ರದೇಶಕ್ಕೆ ಇರಬಹುದಾದ ಸಂಪರ್ಕ ವ್ಯವಸ್ಥೆಯ ಬಗ್ಗೆ ಪರಿಶೀಲಿಸುತ್ತೇವೆ. ಆ ಪ್ರದೇಶಕ್ಕೆ ಸಾಮಾಗ್ರಿಗಳ ಸಾಗಾಟಕ್ಕೆ ಯಾವುದೇ ತೊಂದರೆಗಳೂ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುತ್ತೇವೆ.

ನಮ್ಮ ಸಾಮಾನ್ಯ ವಿಚಾರಧಾರೆಗಳು ಹೀಗಿದ್ದಾಗ, ನಮ್ಮ ಉದ್ದಿಮೆಗಳು ಸಮುದ್ರ ತೀರದಿಂದ ಏಕೆ ದೂರವಿರಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ಸಾಮಗ್ರಿಗಳು ಮತ್ತು ಸಿದ್ಧಗೊಂಡ ಸಾಮಗ್ರಿಗಳು ಜಲಮಾರ್ಗವನ್ನು ಅವಲಂಬಿಸಿದ್ದೇ ಆದಲ್ಲಿ, ಸಮುದ್ರ ತೀರದಲ್ಲೇ ಕೈಗಾರಿಕಾ ಬಂದರನ್ನು ಅಭಿವೃದ್ಧಿ ಪಡಿಸಬೇಕೆಂಬ ವಿಚಾರ ಉದ್ಭವಿಸುವುದು ಸಹಜವಲ್ಲವೇ. ಇದರಿಂದ ಸರಕು ಸಾಗಣಿಕೆಯ ವೆಚ್ಚ ಕಡಿಮೆಯಾಗುವುದಲ್ಲದೇ, ಸರಳ ವ್ಯಾಪಾರಕ್ಕೆ ಹೆಚ್ಚಿನ ನೆರವು ದೊರಕುವುದು. ದೇಶದಲ್ಲಿ ಅಗತ್ಯವಾಗಿರುವ ಕೈಗಾರಿಕೆಗಳನ್ನು ದೇಶಾದ್ಯಂತ ಎಲ್ಲಿಯಾದರೂ ಸ್ಥಾಪಿಸಬಹುದು. ಆದರೆ ಹೊರದೇಶಕ್ಕೆ ಸಾಗಿಸಬೇಕಾದ ಸಾಮಗ್ರಿಗಳ ಉತ್ಪಾದನಾ ಘಟಕಗಳನ್ನು ನಾವು ಸಮುದ್ರ ತೀರದಲ್ಲಿ ಸ್ಥಾಪಿಸಬಹುದಾದರೆ ಹೆಚ್ಚು ಅನುಕೂಲವಾಗುವುದಲ್ಲದೇ ಹೆಚ್ಚು ಲಾಭದಾಯಕವೂ ಕೂಡಾ ಆಗುವುದು.

ಸ್ನೇಹಿತರೇ, ಸಾಗಾಣಿಕ ವಲಯಗಳಲ್ಲಿ ಒಂದು ಮಾತಿದೆ, ನಾಳೆ ಬರಬಹುದಾದ ತೊಂದರೆಗಳನ್ನು ತಾವು ಇಂದು ಬಗೆಹರಿಸಿಕೊಳ್ಳುತ್ತಿದ್ದೀರೆಂದರೆ ತಾವು ಈಗಾಗಲೇ ಬಹಳಷ್ಟು ವಿಳಂಬ ಮಾಡಿದ್ದೀರಿ. ತಮ್ಮ ಸುತ್ತಮುತ್ತಲ ರಸ್ತೆಯಲ್ಲಿ ದಿನ ನಿತ್ಯ ಸಂಚಾರ ದಟ್ಟಣೆ ಆಗುತ್ತಿದ್ದು, ಅಲ್ಲಿ ಯಾರಾದರೂ ಮೇಲ್ಸೆತುವೆ ನಿರ್ಮಿಸಬೇಕೆಂದು ನಿರ್ಣಯಿಸಿದರೆ, ಆ ಮೇಲ್ಸೆತುವೆ ನಿರ್ಮಾಣವಾದ ನಂತರ ಆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಮತ್ತಷ್ಟು ಹೆಚ್ಚಿ ಮೇಲ್ಸೆತುವೆ ಮೇಲೆ ಕೂಡಾ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಇದೇ ರೀತಿ ಆಗುತ್ತಿದೆ. ಆದುದರಿಂದ ಸಾರಿಗೆ ವಲಯದಲ್ಲಿ ಕೂಡಾ ಸರ್ಕಾರ ಅವಶ್ಯಕತೆಗೆ ಅನುಗುಣವಾಗಿ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಮಂತ್ರ ಪಿ ಫಾರ್ ಪಿ. - ಪೋರ್ಟ್ಸ್ ಫಾರ್ ಪ್ರಾಸ್ಪೆರಿಟಿ - ಬಂದರು ಸಮೃದ್ಧಿಯ ಪ್ರವೇಶ ದ್ವಾರ. ಸಾಗರಮಾಲದಂತಹ ಯೋಜನೆ ಈ ದೃಷ್ಟಿಕೋನದ ಒಂದು ಸಂಕೇತ. ಈ ಯೋಜನೆಯನ್ನು 2020 – 2035 ರ ತನಕದ ಅವಶ್ಯಕತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಇದರ ಅನ್ವಯ ಸರ್ಕಾರ ಇಂದಿನಿಂದ 2035ನ್ನು ದೃಷ್ಟಿಯಲ್ಲಿಟ್ಟುಕೊಂಡು 400 ಕ್ಕೂ ಅಧಿಕ ಯೋಜನೆಗಳಿಗೆ ಬಹಳಷ್ಟು ಬಂಡವಾಳ ಹೂಡುತ್ತಿದೆ.

ಈ ಬೇರೆ ಬೇರೆ ಯೋಜನೆಗಳಿಗೆ ಸುಮಾರು 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಗರಮಾಲಾ ಯೋಜನೆ ನಿಶ್ಚಿತವಾಗಿಯೂ ನವ ಭಾರತದ ಹೆಗ್ಗುರುತಾಗಲಿದೆ.

ಮಿತ್ರರೇ, ಸಮುದ್ರದ ಮೂಲಕ ಬೇರೆ ದೇಶಗಳೊಂದಿಗೆ ಸಂಬಂಧ ಸ್ಥಾಪಿಸಲು ನಮಗೆ ಅತ್ಯಾಧುನಿಕ ಬಂದರುಗಳ ಅವಶ್ಯಕತೆ ಇದೆ. ನಮ್ಮ ಆರ್ಥಿಕತೆಗೆ ಬಂದರುಗಳು ಶ್ವಾಸಕೋಶಗಳಿದ್ದಂತೆ. ಬಂದರುಗಳು ರೋಗಗ್ರಸ್ತವಾದರೆ, ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಲು ವಿಫಲವಾದರೆ, ನಾವು ಅಧಿಕ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಅದೇ ರೀತಿ ದೇಹದಲ್ಲಿ ಶ್ವಾಸಕೋಶದ ಮೂಲಕ ಆಮ್ಲಜನಕವು ಹೃದಯದಿಂದ ಪಂಪ್ ಆಗಿ ನರಗಳ ಮೂಲಕ ದೇಹದ ಬೇರೆ ಬೇರೆ ಸ್ಥಾನಗಳಿಗೆ ತಲುಪುತ್ತದೆ, ಅದೇ ರೀತಿ ಆರ್ಥಿಕತೆಯಲ್ಲಿ ಈ ಪಾತ್ರ ರೈಲು ಮಾರ್ಗ, ರಸ್ತೆಮಾರ್ಗ, ವಾಯು ಮಾರ್ಗ ಮತ್ತು ಜಲಮಾರ್ಗದ ಮೂಲಕ ನಡೆಯುತ್ತದೆ. ಅಕಸ್ಮಾತ್ ನರಗಳಲ್ಲಿ ರಕ್ತದ ಪೂರೈಕೆ ಕಡಿಮೆ ಆದರೆ, ಆಮ್ಲಜನಕದ ಕೊರತೆಯಾದರೆ, ದೇಹ ದುರ್ಬಲವಾಗುತ್ತದೆ. ಅದೇ ರೀತಿ ಸಂಪರ್ಕ ಸರಿ ಇಲ್ಲದಿದ್ದರೆ, ದೇಶದ ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತದೆ. ಆದುದರಿಂದ ಮೂಲಭೂತ ಸೌಕರ್ಯ ಮತ್ತು ಸಂಪರ್ಕ ಈ ಎರಡೂ ಕ್ಷೇತ್ರಗಳ ಬಗ್ಗೆ ಸರ್ಕಾರ ಅಧಿಕ ಒತ್ತು ನೀಡುತ್ತಿದೆ.

ಮಿತ್ರರೇ, ಸರ್ಕಾರದ ಸತತ ಪ್ರಯತ್ನದ ಫಲವಾಗಿ ಕಳೆದ ಮೂರು ವರ್ಷಗಳಲ್ಲಿ ದೇಶದ ಬಂದರು ವಲಯದಲ್ಲಿ ಒಂದು ದೊಡ್ಡ ಪರಿವರ್ತನೆ ಕಂಡು ಬಂದಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ಈ ವಲಯದಲ್ಲಿ ಸಾಮರ್ಥ್ಯ ಹೆಚ್ಚಳವಾಗಿದೆ. ನಷ್ಟದಲ್ಲಿ ನಡೆಯುತ್ತಿದ್ದ ಬಂದರುಗಳು ಮತ್ತು ಸರ್ಕಾರಿ ಕಂಪನಿಗಳ ಪರಿಸ್ಥಿತಿ ಬದಲಾಗಿದೆ. ಸರ್ಕಾರದ ಗಮನ ಬಂದರು ಸೇವೆಗೆ ಹೊಂದಿಕೊಂಡಂತಿರುವ ಕೌಶಲ್ಯಾಭಿವೃದ್ಧಿಯ ಕಡೆಗೂ ಇದೆ.

ಒಂದು ಅಂದಾಜಿನ ಪ್ರಕಾರ ಮುಂಬರುವ ದಿನಗಳಲ್ಲಿ ದೇಶದ ವಿಭಿನ್ನ ಭಾಗಗಳಲ್ಲಿ ಕೇವಲ ಸಾಗರಮಾಲ ಯೋಜನೆಯಿಂದ ಒಂದು ಕೋಟಿ ಉದ್ಯೋಗದ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ಸಾಗಣಿಕೆಯು ಸಂಪೂರ್ಣ ಆಧುನಿಕ ಹಾಗೂ ಸಂಯೋಜಿತವಾಗಿರುವಂತೆ ಸರ್ಕಾರ ಒಂದು ನೀತಿಯನ್ನು ರೂಪಿಸುತ್ತಿದೆ.

ಇಂದು ಅನೇಕ ಕಡೆ ತಾವು ಸಂಚಾರ ದಟ್ಟಣೆಯನ್ನು ಗಮನಿಸಿರುತ್ತೀರಿ. ಅದೇ ರೀತಿ ನಮ್ಮ ಬಂದರುಗಳಲ್ಲೂ ಕೂಡಾ ದಟ್ಟಣೆ ಉಂಟಾಗುತ್ತದೆ. ಬಂದರುಗಳಲ್ಲಿ ಉಂಟಾಗುವ ದಟ್ಟಣೆಯಿಂದ ಸಾಗಾಣಿಕಾ ವೆಚ್ಚ ಹೆಚ್ಚಾಗುತ್ತದೆ, ಕಾಯುವಿಕೆಯ ಸಮಯ ಅಧಿಕವಾಗಿರುತ್ತದೆ. ಹೇಗೆ ನಾವು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಕಾಯುತ್ತಿರುತ್ತೇವೆಯೋ, ಯಾವುದೇ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲವೋ, ಅದೇ ರೀತಿ ಸಮುದ್ರದಲ್ಲಿ ಹಡಗುಗಳೂ ಕೂಡಾ ಸರಕು ಇಳಿಸುವ ಮತ್ತು ಸಾಮಾನು ತುಂಬುವ ನಿರೀಕ್ಷೆಯಲ್ಲಿ ನಿಂತಿರುತ್ತವೆ. ಕೇವಲ ಹಡಗುಗಳು ಮಾತ್ರ ನಿಂತಿರುವುದಿಲ್ಲ, ಸಂಪೂರ್ಣ ಅರ್ಥವ್ಯವಸ್ಥೆ ಸ್ಥಬ್ಧವಾಗಿರುತ್ತದೆ. ಆದುದರಿಂದ ಬಂದರುಗಳ ಆಧುನೀಕರಣ ಅತ್ಯಂತ ಅವಶ್ಯಕವಾಗಿದ್ದು, ಅಡಚಣೆಗಳನ್ನು ದೂರ ಮಾಡಬೇಕಿದೆ.

ಸಾಗರಮಾಲಾ ಯೋಜನೆಯ ಮತ್ತೊಂದು ಹಂತವೆಂದರೆ ನೀಲಿ ಆರ್ಥಿಕತೆ. ಈ ಮೊದಲು ಜನರು ಕೇವಲ ಸಾಗರ ಆರ್ಥಿಕತೆಯ ಬಗ್ಗೆ ಮಾತ್ರ ತಿಳಿದುಕೊಂಡಿದ್ದರು. ಆದರೆ ನಾವೀಗ ನೀಲಿ ಆರ್ಥಿಕತೆಯ ಬಗ್ಗೆ ಮಾತನಾಡುತ್ತೇವೆ. ನೀಲಿ ಆರ್ಥಿಕತೆ ಎಂದರೆ ಆರ್ಥಿಕತೆ ಮತ್ತು ಪರಿಸರ ವಿಜ್ಞಾನದ ಮೈತ್ರಿ. ನೀಲಿ ಆರ್ಥಿಕತೆಯು, ಆರ್ಥಿಕತೆಯ ಜತೆ ಜತೆಗೆ ಸಮುದ್ರದೊಂದಿಗೆ ಸೇರಿಕೊಂಡಿರುವ ಪರಿಸರ ವ್ಯವಸ್ಥೆಗೂ ಬಲ ನೀಡಲಿದೆ.

18 ಮತ್ತು 19 ನೇ ಶತಮಾನದ ಕೈಗಾರಿಕಾ ಕ್ರಾಂತಿ ನೆಲದ ಮೇಲೆ ಆಗಿದ್ದರೆ 21 ನೇ ಶತಮಾನದ ಕೈಗಾರಿಕಾ ಕ್ರಾಂತಿ ಸಮುದ್ರದ ಮೂಲಕ ಆಗಲಿದೆ, ನೀಲಿ ಆರ್ಥಿಕತೆಯ ಮೂಲಕ ಉಂಟಾಗಲಿದೆ.

ಮಿತ್ರರೆ, ನಮ್ಮ ಇಂದಿನ ಅವಶ್ಯಕತೆ ಮತ್ತು ಸವಾಲುಗಳನ್ನು ಗಮನಿಸಿದಾಗ ನಮಗೆ ಸಮುದ್ರ ಶಕ್ತಿಯ ಉಪಯೋಗ ಹೆಚ್ಚು ಹೆಚ್ಚು ಪಡೆದುಕೊಳ್ಳುವುದು ಅವಶ್ಯಕವೆಂದು ಅನಿಸುತ್ತದೆ. ನೀಲಿ ಆರ್ಥಿಕತೆಯ ಸಾಮರ್ಥ್ಯ ಹೆಚ್ಚು ಉಪಯೋಗ ನವ ಭಾರತ ನಿರ್ಮಾಣಕ್ಕೆ ನೆರವಾಗಬಲ್ಲದು.

ಆಹಾರ ಸುರಕ್ಷತೆಗೆ ನೀಲಿ ಆರ್ಥಿಕತೆಯ ಉಪಯೋಗ ಪಡೆದುಕೊಳ್ಳಬಹುದು. ನಮ್ಮ ಮೀನುಗಾರ ಸಹೋದರರು ಸಮುದ್ರ ಮಣಿಯ ವ್ಯವಸಾಯ ಮಾಡಿ, ಅದರಲ್ಲಿ ಮೌಲ್ಯವರ್ಧಿತ ಸೇವೆಯನ್ನು ನೀಡುವಂತಾದರೆ ಅವರ ಆದಾಯ ಕೂಡಾ ಹೆಚ್ಚಾಗಬಲ್ಲದು. ಇದೇ ರೀತಿ ನೀಲಿ ಆರ್ಥಿಕತೆ, ಇಂಧನ ಕ್ಷೇತ್ರದಲ್ಲಿ, ಗಣಿ ಕ್ಷೇತ್ರದಲ್ಲಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೂಡಾ ನವಭಾರತಕ್ಕೆ ಒಂದು ದೊಡ್ಡ ಆಧಾರವಾಗಬಲ್ಲದು.

ಸ್ನೇಹಿತರೇ, ಈ ಸರ್ಕಾರ ದೇಶದಲ್ಲಿ ಒಂದು ನೂತನ ಕಾರ್ಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುತ್ತಿದೆ. ಜವಾಬ್ಧಾರಿಯುತ ಮತ್ತು ಉತ್ತರದಾಯಿ ಪಾರದರ್ಶಿ ಕಾರ್ಯ ಸಂಸ್ಕೃತಿಯ ಅಭಿವೃದ್ಧಿ. ಇಂದು ಇದೇ ರೀತಿಯ ಕಾರ್ಯ ವಿಧಾನದಿಂದ ವಿವಿಧ ಯೋಜನೆಗಳಲ್ಲಿ ವೇಗವಾಗಿ ಕಾರ್ಯ ನಡೆಯುತ್ತಿದೆ. ದೇಶದಲ್ಲಿ ಇಂದು ದ್ವಿಗುಣ ವೇಗದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ದ್ವಿಗುಣ ವೇಗದಲ್ಲಿ ರೈಲ್ವೆ ಹಳಿ ಜೋಡಣಾ ಕಾರ್ಯ ನಡೆಯುತ್ತಿದೆ.

ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ನಿಗಾ ವಹಿಸಲು ದ್ರೋಣ್ ನಿಂದ ಹಿಡಿದು ಉಪಗ್ರಹದ ಮೂಲಕ ಉಸ್ತುವಾರಿ ವಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಮಗೆ ಪಾಸ್ ಪೋರ್ಟ್ ಬೇಗನೆ ದೊರೆಯುವಂತಾಗಲೂ ಏನಾದರೂ ಕಾರಣವಿರಬೇಕು. ತಮಗೆ ಅಡುಗೆ ಅನಿಲ ಸಂಪರ್ಕ ಬೇಗನೆ ದೊರೆಯುವಂತಾಗಲೂ ಯಾವುದಾದರೂ ಕಾರಣವಿರಬೇಕು. ಆದಾಯ ತೆರಿಗೆ ಮರುಪಾವತಿಗಾಗಿ ತಾವು ತಿಂಗಳುಗಟ್ಟಲೆ ಕಾಯದಂತಿರಲು ಯಾವುದಾದರೂ ಸಕಾರಣವಿರಬೇಕು, ಈ ಬದಲಾವಣೆಗಳು ತಮ್ಮ ಜೀವನದಲ್ಲಿ ಕಂಡುಬರುತ್ತಿದ್ದು, ಸರ್ಕಾರದ ಕಾರ್ಯ ವಿಧಾನದಲ್ಲಿ ಮಾಡಲಾಗಿರುವ ಬದಲಾವಣೆಗಳೇ ಇದಕ್ಕೆ ಕಾರಣವಾಗಿದೆ. ಈ ಕಾರ್ಯ ವಿಧಾನದಿಂದ ದೇಶದ ಬಡವರಿಗೆ, ಮಧ್ಯಮ ವರ್ಗದ ಜನರಿಗೆ ತಂತ್ರಜ್ಞಾನದ ಸಹಕಾರದಿಂದ ಅವರ ಹಕ್ಕನ್ನು ಅವರಿಗೆ ನೀಡಲಾಗುತ್ತಿದೆ.

ಗುಜರಾತಿನಲ್ಲಿ ತಾವು ನನಗೆ ಕಲಿಸಿಕೊಟ್ಟ ವಿಷಯಗಳು ಅನುಭವ ನನಗೆ ದಿಲ್ಲಿಯಲ್ಲಿ ಕೆಲಸಕ್ಕೆ ಬರುತ್ತಿದೆ. ಹುಡುಕಿ ಹುಡುಕಿ ದಾಖಲೆಗಳನ್ನು ತೆಗೆಸುತ್ತಿದ್ದು, ದಶಕಗಳ ಕಾಲ ತೂಗುಯ್ಯಾಲೆಯಲ್ಲಿದ್ದ ಯೋಜನೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ನಾವೊಂದು “ಪ್ರಗತಿ” ಹೆಸರಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಇದರ ಮೂಲಕ ಇಲ್ಲಿಯವರೆಗೆ 9 laಲಕ್ಷ ಕೋಟಿ ರೂಪಾಯಿಗೂ ಅಧಿಕ ಯೋಜನೆಗಳ ಸಮೀಕ್ಷೆಯನ್ನು ಮಾಡಲಾಗಿದೆ. ಪ್ರಗತಿಯಲ್ಲಿ ಸಮೀಕ್ಷೆ ನಡೆಸಿದ ನಂತರ ನಾಲ್ಕು ನಾಲ್ಕು ದಶಕಗಳ ಕಾಲ ಸ್ಥಗಿತಗೊಂಡಿದ್ದ ಯೋಜನೆಗಳನ್ನು ವೇಗವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಮುಂದುವರೆದಿದ್ದೇವೆ.

ಈ ಸರ್ಕಾರ ದೇಶದಲ್ಲಿ ಪ್ರಾಮಾಣಿಕ ಅರ್ಥವ್ಯವಸ್ಥೆ ಮತ್ತು ಪ್ರಾಮಾಣಿಕ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಶೀಲವಾಗಿದೆ. ನೋಟು ಅಮಾನ್ಯೀಕರಣ ಕೇವಲ ಕಪ್ಪುಹಣವನ್ನು ತಿಜೋರಿಯಿಂದ ಹೊರತೆಗೆದು ಬ್ಯಾಂಕ್ ಗಳಿಗೆ ತಲುಪಿಸುವುದಷ್ಟೇ ಅಲ್ಲ ದೇಶಾದ್ಯಂತ ಒಂದು ರೀತಿಯ ಸ್ವಚ್ಚತಾ ಅಭಿಯಾನ ಪ್ರಾರಂಭವಾಗುವುದಕ್ಕೆ ಸಹಕಾರಿಯಾಗಿದೆ.

ಇದೇ ರೀತಿ ಜಿ ಎಸ್ ಟಿ ಮೂಲಕ ದೇಶಕ್ಕೆ ಒಂದು ಹೊಸ ವ್ಯಾಪಾರ ಸಂಸ್ಕೃತಿ ದೊರೆಯುತ್ತಿದೆ. ಈ ಮೊದಲು ಲಾರಿ, ಟ್ರಕ್ ಚಾಲಕರು ತಮ್ಮ ವಾಹನಗಳನ್ನು ಚೆಕ್ ಪೋಸ್ಟ್ ಗಳಲ್ಲಿ ಗಂಟೆಗಟ್ಟಲೆ ನಿಲ್ಲಿಸಬೇಕಾಗಿತ್ತು. ಜಿ ಎಸ್ ಟಿ ಬಂದ ಬಳಿಗೆ ಎಲ್ಲ ಚೆಕ್ ಪೋಸ್ಟ್ ಗಳು ಕಡಿಮೆಯಾದವು. ಯಾವ ಸರಕು ವಾಹನ ತನ್ನ ಗಮ್ಯವನ್ನು ತಲುಪಲು ಐದು ದಿನಗಳನ್ನು ತೆಗೆದುಕೊಳ್ಳುತ್ತಿತ್ತೋ ಆ ಸಮಯ ಈಗ ಮೂರು ದಿನಕ್ಕೆ ತಲುಪಿದೆ. ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಬರಲು, ತೆಗೆದುಕೊಂಡು ಹೋಗಲು ತಗಲುತ್ತಿದ್ದ ವೆಚ್ಚ ಕಡಿಮೆಯಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ಆಗುತ್ತಿದ್ದ ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ಜಿ ಎಸ್ ಟಿ ಬಂದ ಬಳಿಕ ನಿಂತಿದೆ. ಗುತ್ತಿಗೆ ವ್ಯವಹಾರಗಳಿಂದ ಹಣ ನುಂಗುತ್ತಿದ್ದ ವ್ಯಕ್ತಿಗಳು ಮೋದಿಯ ಮೇಲೆ ಕೋಪಗೊಂಡಿರುತ್ತಾರೋ ಇಲ್ಲವೋ ನೀವೇ ಹೇಳಿ? ಅವರಿಗೆ ಮೋದಿಯ ಮೇಲೆ ಕೋಪ ಬರುತ್ತದೋ, ಇಲ್ಲವೋ? ಆದರೆ ದೇಶದ ನಾಗರಿಕರಿಗೆ ಒಳಿತಾಗಬೇಕೋ, ಬೇಡವೋ? ದೇಶದ ನಾಗರಿಕರಿಗೆ ಲಾಭವಾಗಬೇಕೋ, ಬೇಡವೋ?

ಪ್ರಾಮಾಣಿಕತೆಯಿಂದ ಎಲ್ಲ ವ್ಯವಹಾರಗಳನ್ನು ನಡೆಸುವ, ಪ್ರಾಮಾಣಿಕತೆಯಿಂದ ಹಣ ಗಳಿಸುವ ಒಂದು ರೀತಿಯ ವ್ಯಾಪಾರಿ ಸಂಸ್ಕೃತಿ ಬೆಳೆಯಬೇಕಿದೆ. ನನ್ನ ಅನುಭವದ ಪ್ರಕಾರ ಯಾವುದೇ ವ್ಯಾಪಾರಿ ಕಳ್ಳತನ ಮಾಡಲು ಬಯಸುವುದಿಲ್ಲ. ಆದರೆ ಕೆಲವು ಕಾನೂನುಗಳು, ಕೆಲವು ಅಧಿಕಾರಿಗಳು, ಕೆಲವು ರಾಜಕೀಯ ನಾಯಕರು ವ್ಯಾಪಾರಿಗಳಿಗೆ ಆ ರೀತಿ ಮಾಡುವುದನ್ನು ಅನಿವಾರ್ಯವಾಗುವಂತೆ ಮಾಡುತ್ತಾರೆ. ನಾವು ಅವರಿಗೆ ಈ ಪ್ರಾಮಾಣಿಕತೆಯ ವಾತಾವರಣವನ್ನು ನಿರ್ಮಾಣ ಮಾಡುವ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ.

ಜಿ ಎಸ್ ಟಿ ಯೊಂದಿಗೆ ಸೇರಿಕೊಳ್ಳುತ್ತಿರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ತಾವು ಗಮನಿಸಿ. ಜಿ ಎಸ್ ಟಿ ಅನುಷ್ಠಾನದ ನಂತರ ಪರೋಕ್ಷ ತೆರಿಗೆ ವ್ಯಾಪ್ತಿಗೆ 27 ಲಕ್ಷ ನಾಗರಿಕರು ಸೇರ್ಪಡೆಗೊಂಡಿದ್ದಾರೆ.

ಮಿತ್ರರೇ, ಮುಖ್ಯಧಾರೆಯಲ್ಲಿ ಸೇರಿಕೊಳ್ಳುತ್ತಿರುವ ವ್ಯಾಪಾರಿಗಳಲ್ಲಿ ಎಲ್ಲಿ ತಮ್ಮ ಹಳೆಯ ದಾಖಲೆಗಳನ್ನು ಪರಿಶೀಲಿಸುತ್ತಾರೋ ಎಂಬ ಭಯವಿದೆಯೆಂದು ನಾನು ಬಲ್ಲೆ. ಯಾರು ಪ್ರಾಮಾಣಿಕವಾಗಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬಯಸುತ್ತಾರೋ, ಮುಖ್ಯವಾಹಿನಿಯಲ್ಲಿ ಭಾಗವಹಿಸುವರೋ ಅಂತಹವರ ಯಾವುದೇ ಹಳೆಯ ದಾಖಲಾತಿಗಳನ್ನು ಯಾವುದೇ ಅಧಿಕಾರಿ ಪರಿಶೀಲಿಸುವಂತಹ ಕಾರ್ಯಕ್ಕೆ ನಾವು ಅವಕಾಶ ನೀಡುವುದಿಲ್ಲವೆಂಬ ಭರವಸೆಯನ್ನು ನಾನು ನೀಡುತ್ತೇನೆ.

ಸಹೋದರ, ಸಹೋದರಿಯರೇ, ಅನೇಕ ಸುಧಾರಣೆಗಳು ಮತ್ತು ಕಠಿಣ ನಿರ್ಧಾರಗಳ ಹೊರತಾಗಿಯೂ ದೇಶದ ಅರ್ಥವ್ಯವಸ್ಥೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಹೊರಬಂದ ಅಂಕಿಅಂಶಗಳ ಪ್ರಕಾರ ಕಲ್ಲಿದ್ದಲು, ವಿದ್ಯುತ್, ಉಕ್ಕು, ನೈಸರ್ಗಿಕ ಅನಿಲ ಇವೆಲ್ಲವುಗಳ ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ವಿದೇಶಿ ಬಂಡವಾಳ ಹೂಡಿಕೆದಾರರು ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಭಾರತದ ವಿದೇಶಿ ವಿನಿಮಯ 30 ಸಾವಿರ ಕೋಟಿ ಡಾಲರ್ ನಿಂದ 40 ಸಾವಿರ ಕೋಟಿ ಡಾಲರ್ ಗೆ ಹೆಚ್ಚಾಗಿದೆ.

ದೇಶದ ಅರ್ಥವ್ಯವಸ್ಥೆಯ ಮೂಲ ಬಹಳ ಬಲಿಷ್ಟವಾಗಿದೆ ಎಂದು ಅನೇಕರು ಸಹಮತ ವ್ಯಕ್ತಪಡಿಸಿದ್ದಾರೆ. ನಾವು ಧಾರಣಾ ಕ್ಷೇತ್ರದಲ್ಲಿ ಮಹತ್ವಪೂರ್ಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ದೇಶದ ಅಂತಿಮ ಸಮರ್ಥನೀಯತೆಯನ್ನೂ ಕೂಡಾ ಪಾಲಿಸಿಕೊಂಡು ಬರಲಾಗುವುದು. ಬಂಡವಾಳ ಹೂಡಿಕೆ ಹೆಚ್ಚಿಸಲು ಮತ್ತು ಆರ್ಥಿಕ ಅಭಿವೃದ್ಧಿಗೆ ವೇಗ ನೀಡಲು ನಾವು ಅವಶ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ.

ಸ್ನೇಹಿತರೆ, ಇದು ಬದಲಾವಣೆಯ ಕಾಲ. ಸಂಕಲ್ಪದಿಂದ ಸಿದ್ಧಿಯನ್ನು ಪಡೆಯುವ ಕಾಲ. ನಾವೆಲ್ಲರೂ ನವಭಾರತ ಕಟ್ಟುವ ಸಂಕಲ್ಪವನ್ನು ಸ್ವೀಕರಿಸಬೇಕಾಗಿದೆ, ಅದನ್ನು ಸಿದ್ಧಿಸಬೇಕಾಗಿದೆ. ಇಂದು ಇಲ್ಲ ದಹೇಜ್ – ಘೋಘಾ ಸಮುದ್ರಯಾನ ಸೇವೆಯ ಮೂಲಕ ನವಭಾರತದ ಒಂದು ಹೊಸ ಅಧ್ಯಾಯ ಪ್ರಾರಂಭವಾಗಿದೆ.

ನಾನು ತಮ್ಮೆಲ್ಲರಿಗೂ ಮತ್ತೊಮ್ಮೆ ಶುಭಾಶಯಗಳನ್ನು ಕೋರುತ್ತಾ ಈ ನೂತನ ಸೇವೆಯ ಉಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಬೇಕೆಂದು ಆಹ್ವಾನಿಸುತ್ತೇನೆ.

ಭಾರತ್ ಮಾತಾ ಕಿ ಜಯ್
ಭಾರತ್ ಮಾತಾ ಕಿ ಜಯ್
ಭಾರತ್ ಮಾತಾ ಕಿ ಜಯ್

ಎಲ್ಲರಿಗೂ ಧನ್ಯವಾದಗಳು.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Govt directs faster processing of city gas projects, hikes commercial LPG allocation to ease supply stress

Media Coverage

Govt directs faster processing of city gas projects, hikes commercial LPG allocation to ease supply stress
NM on the go

Nm on the go

Always be the first to hear from the PM. Get the App Now!
...
This is the New India that leaves no stone unturned for development: PM Modi
March 23, 2026
Today, India is moving forward with a new confidence; Now India faces challenges head-on: PM
From the Gulf to the Global West and from the Global South to neighbouring countries, India is a trusted partner for all: PM
What gets measured gets improved and ultimately gets transformed: PM
This is the new India, It is leaving no stone unturned for development: PM

नमस्कार!

पिछले कुछ समय में मुझे एक-दो बार टीवी9 भारतवर्ष देखने का मौका मिला है। नॉर्मली भी युद्धों और मिसाइलों पर आपका बहुत फोकस होता है और आजकल तो आपको कंटेंट की ओवरफीडिंग हो रही है। बड़े-बड़े देश टीवी9 को इतना सारा कंटेंट देने पर तुले हुए हैं, लेकिन On a Serious Note, आज विश्व जिन गंभीर परिस्थितियों से गुजर रहा है, वो अभूतपूर्व है और बेहद गंभीर है। और इन स्थितियों के बीच, आज टीवी-9 नेटवर्क ने विचारों का एक बेहद महत्वपूर्ण मंच बनाया है। आज इस समिट में आप सभी India and the world, इस विषय पर चर्चा कर रहे हैं। मैं आप सबको बधाई देता हूं। इस समिट के लिए अपनी शुभकामनाएं देता हूं। सभी अतिथियों का अभिनंदन करता हूं।

साथियों,

आज जब दुनिया, conflicts के कारण उलझी हुई है, जब इन conflicts के दुष्प्रभाव पूरी दुनिया पर दिख रहे हैं, तब India and the world की बात करना बहुत ही प्रासंगिक है। भारत आज वो देश है, जिसकी अर्थव्यवस्था तेजी से आगे बढ़ रही है। 2014 के पहले की स्थितियों को पीछे छोड़कर के आज भारत एक नए आत्मविश्वास के साथ आगे बढ़ रहा है। अब भारत चुनौतियों को टालता नहीं है बल्कि चुनौतियों से टकराता है। आप बीते 5-6 साल में देखिए, कोरोना की महामारी के बाद चुनौतियां एक के बाद एक बढ़ती ही गई हैं। ऐसा कोई साल नहीं है, जिसने भारत की, भारतीयों की परीक्षा न ली हो। लेकिन 140 करोड़ देशवासियों के एकजुट प्रयास से भारत हर आपदा का सामना करते हुए आगे बढ़ रहा है। इस समय युद्ध की परिस्थितियों में भी भारत की नीति और रणनीति देखकर, भारत का सामर्थ्य देखकर दुनिया के अनेकों देश हैरान हैं। हमारे यहां कहावत है, सांच को आंच नहीं। 28 फरवरी से दुनिया में जो उथल-पुथल मची है, इन कठोर विपरीत परिस्थितियों में भी भारत प्रगति के, विकास के, विश्वास के संकल्प के साथ आगे बढ़ रहा है। इन 23 दिनों में भारत ने अपनी Relationship Building Capacity दिखाई है, Decision Making Capacity दिखाई है और Crisis Management Capacity दिखाई है।

साथियों,

आज जब दुनिया इतने सारे खेमों में बंटी हुई है, भारत ने अभूतपूर्व और अकल्पनीय bridges बनाए हैं। Gulf से लेकर Global West तक, Global South से लेकर पड़ोसी देशों तक भारत सभी का trusted partner है। कुछ लोग पूछते हैं, हम किसके साथ हैं? तो उनको मेरा जवाब यही है कि हम भारत के साथ हैं, हम भारत के हितों के साथ हैं, शांति के साथ हैं, संवाद के साथ हैं।

साथियों,

संकट के इसी समय में जब global supply chains डगमगा रही हैं, भारत ने diversification और resilience का मॉडल पेश किया है। Energy हो, fertilizers हों या essential goods अपने नागरिकों को कम से कम परेशानी हो, इसके लिए भारत ने निरंतर प्रयास किया है और आज भी कर रहे है।

साथियों,

जब राष्ट्रनीति ही राजनीति का मुख्य आधार हो, तब देश का भविष्य सर्वोपरि होता है। लेकिन जब राजनीति में व्यक्तिगत स्वार्थ हावी हो जाता है, तब लोग देश के फ्यूचर के बजाय अपने फ्यूचर के बारे में सोचते हैं। आप ज़रा याद कीजिए 2004 से 2010 के बीच क्या हुआ था? तब कांग्रेस सरकार के समय पेट्रोल-डीजल और गैस की कीमतों का संकट आया था और तब कांग्रेस ने देश की नहीं बल्कि अपनी सत्ता की चिंता की। उस वक्त कांग्रेस ने एक लाख अड़तालीस हज़ार करोड़ रुपए के ऑयल बॉन्ड जारी किए थे और प्रधानमंत्री मनमोहन सिंह जी ने खुद कहा था कि वो आने वाली पीढ़ी पर कर्ज का बोझ डाल रहे हैं। यह जानते हुए भी कि ऑयल बॉन्ड का फैसला गलत है, जो रिमोट कंट्रोल से सरकार चला रहे थे, उन लोगों ने अपनी सत्ता बचाने के लिए यह गलत निर्णय किया क्योंकि जवाबदेही उस समय नहीं होनी थी, उस बॉन्ड पर री-पेमेंट 2020 के बाद होनी थी।

साथियों,

बीते 5-6 वर्षों में हमारी सरकार ने कांग्रेस सरकार के उस पाप को धोने का काम किया है, और इस धुलाई का खर्चा कम नहीं आया है, ऐसी लाँड्री आपने देखी नहीं होगी। 1 लाख 48 हज़ार करोड़ रुपए की जगह, देश को 3 लाख करोड़ रुपए से अधिक की पेमेंट करनी पड़ी क्योंकि इसमें ब्याज भी जुड़ गया था। यानी हमने करीब-करीब दोगुनी राशि चुकाने के लिए मजबूर हुए। आजकल कांग्रेस के जो नेता बयानों की मिसाइलें दाग रहे हैं, मिसाइल आई तो टीवी9 को मजा आएगा, उनकी इस विषय का जिक्र आते ही बोलती बंद हो जाती है।

साथियों,

पश्चिम एशिया में बनी परिस्थितियों पर मैंने आज लोकसभा में अपना वक्तव्य दिया है। दुनिया में जहां भी युद्ध हो रहे हैं, वो भारत की सीमा से दूर हैं। लेकिन आज की व्यवस्थाओं में कोई भी देश युद्धों से दुष्प्रभाव से दूर रहे, ऐसा संभव नहीं होता। अनेक देशों में तो स्थिति बहुत गंभीर हो चुकी है। और इन हालातों में हम देख रहे हैं कि राजनीतिक स्वार्थ से भरे कुछ लोग, कुछ दल, संकट के इस समय में भी अपने लिए राजनीतिक अवसर खोज रहे हैं। इसलिए मैं टीवी9 के मंच से फिर कहूंगा, यह समय संयम का है, संवेदनशीलता का है। हमने कोरोना महासंकट के दौरान भी देखा है, जब देशवासी एकजुट होकर संकट का सामना करते हैं, तो कितने सार्थक परिणाम आते हैं। इसी भाव के साथ हमें इस युद्ध से बनी परिस्थितियों का सामना करना है।

साथियों,

दुनिया की हर उथल-पुथल के बीच, भारत ने अपनी प्रगति की गति को भी बनाए रखा है। अगर मैं 28 फरवरी को युद्ध शुरू होने के बाद, बीते 23 दिनों का ही ब्यौरा दूं, तो पूरब से पश्चिम तक, उत्तर से दक्षिण तक देश में हजारों करोड़ के डेवलपमेंट प्रोजेक्ट्स का काम हुआ है। दिल्ली मेट्रो रेल के महत्वपूर्ण कॉरिडोर्स का लोकार्पण, सिलचर का हाई स्पीड कॉरिडोर का शिलान्यास, कोटा में नए एयरपोर्ट का शिलान्यास, मदुरै एयरपोर्ट को इंटरनेशनल एयरपोर्ट का दर्जा देना, ऐसे अनेक काम बीते 23 दिनों में ही हुए हैं। बीते एक महीने के दौरान ही औद्योगिक विकास को गति देने के लिए भव्य स्कीम को मंजूरी दी गई है। इसके तहत देशभर में 100 plug-and-play industrial parks विकसित किए जाएंगे। देश में Small Hydro Power Development Scheme को भी हरी झंडी दी गई है। इससे आने वाले वर्षों में 1,500 मेगावाट नई hydro power capacity जोड़ी जाएगी। इसी दौरान जल जीवन मिशन को साल 2028 तक बढ़ाने का निर्णय लिया गया है। किसानों के हित में भी अनेक बड़े निर्णय लिए गए हैं। बीते एक महीने में ही पीएम किसान सम्मान निधि के तहत 18 हजार करोड़ रुपए से अधिक सीधे किसानों के खातों में ट्रांसफर किए गए हैं। और जो हमारे MSMEs हैं, जो हमारे निर्यातक हैं, उनके लिए भी करीब 500 करोड़ रुपए के राहत पैकेज की भी घोषणा की गई है। यह सारे कदम इस बात का प्रमाण हैं कि विकसित भारत बनाने के लिए देश कितनी तेज गति से काम कर रहा है।

साथियों,

Management की दुनिया में एक सिद्धांत कहा जाता है - What gets measured, gets managed. लेकिन मैं इसमें एक बात और जोड़ना चाहता हूं, What gets measured, gets improved और ultimately, gets transformed. क्योंकि आकलन जागरूकता पैदा करता है। आकलन जवाबदेही तय करता है और सबसे महत्वपूर्ण आकलन संभावनाओं को जन्म देता है।

साथियों,

अगर आप 2014 से पहले के 10-11 साल और 2014 के बाद के 10-11 साल का आप आकलन करेंगे, तो यही पाएंगे कि कैसे इसी सिद्धांत पर चलते हुए, भारत ने हर सेक्टर को Transform किया है। जैसे पहले हाईवे बनते थे, करीब 11-12 किलोमीटर प्रति दिन की रफ्तार से, आज भारत करीब 30 किलोमीटर प्रतिदिन की स्पीड से हाईवे बना रहा है। पहले पोर्ट्स पर शिप का Turnaround Time, 5-6 दिन का होता था। आज वही काम, करीब-करीब 2 दिन से भी कम समय में पूरा हो रहा है। पहले Startup Culture के बारे में चर्चा ही नहीं होती थी। 2014 से पहले, हमारे देश में 400-500 स्टार्ट अप्स ही थे। आज भारत में 2 लाख से ज्यादा रजिस्ट्रर्ड स्टार्ट अप्स हैं। पहले मेडिकल education में सीटें भी सीमित थीं, करीब 50-55 हजार MBBS seats थीं, आज यह बढ़कर सवा लाख से ज्यादा हो चुकी हैं। पहले देश के Banking system से भी करोड़ों लोग बाहर थे। देश में सिर्फ 25 करोड़ के आसपास ही बैंक account थे। वहीं जनधन योजना के माध्यम से 55 करोड़ से ज्यादा बैंक अकाउंट खुले हैं। पहले हमारे देश में airports की संख्या भी 70 से कम थी। आज एयरपोर्ट्स की संख्या भी बढ़कर 160 से ज्यादा हो चुकी है।

साथियों,

पहले भी योजनाएं तो बनती थीं, लेकिन आज फर्क है, आज परिणाम दिखते हैं। पहले गति धीमी थी, आज भारत fastrack पर है। पहले संभावनाएं भी अंधकार में थीं, आज संकल्प सिद्धियों में बदल रहे हैं। इसलिए दुनिया को भी यह संदेश मिल रहा है कि यह नया भारत है। यह अपने विकास के लिए कोई कोर-कसर बाकी नहीं छोड़ रहा है।

साथियों,

आज हमारा प्रयास है कि अतीत में विकास का जो असंतुलन पैदा हो गया था, उसको अवसरों में बदला जाए। अब जैसे हमारा पूर्वी भारत है। हमारा पूर्वी भारत संसाधनों से समृद्ध है, दशकों तक वहां जिन्होंने सरकारें चलाई हैं, उनकी उपेक्षा ने पूर्वी भारत के विकास पर ब्रेक लगा दी थी। अब हालात बदल रहे हैं। जिस असम में कभी गोलियों की आवाज सुनाई देती थी, आज वहां सेमीकंडक्टर यूनिट बन रही है। ओडिशा में सेमीकंडक्टर से लेकर पेट्रोकेमिकल्स तक अनेक नए-नए सेक्टर का विकास हो रहा है। जिस बिहार में 6-7 दशक में गंगा जी पर एक बड़ा पुल बन पाया था एक, उस बिहार में पिछले एक दशक में 5 से ज्यादा नए पुल बनाए गए हैं। यूपी में कभी कट्टा मैन्युफैक्चरिंग की कहानियां कही जाती थीं, आज यूपी, मोबाइल फोन मैन्युफैक्चरिंग में दुनिया में अपनी पहचान बना रहा है।

साथियों,

पूर्वी भारत का एक और बड़ा राज्य पश्चिम बंगाल है। पश्चिम बंगाल, एक समय में भारत के कल्चर, एजुकेशन, इंडस्ट्री और ट्रेड का हब होता था। बीते 11 वर्षों में केंद्र सरकार ने पश्चिम बंगाल के विकास के लिए बड़ी मात्रा में निवेश किया है। लेकिन दुर्भाग्य से, आज वहां एक ऐसी निर्मम सरकार है, जो विकास पर ब्रेक लगाकर बैठी है। TV9 बांग्ला के जो दर्शक हैं, वो जानते हैं कि बंगाल में आयुष्मान योजना पर निर्मम सरकार ने ब्रेक लगाया हुआ है। पीएम सूर्यघर मुफ्त बिजली योजना पर ब्रेक लगाया हुआ है। पीएम आवास योजना पर ब्रेक लगाया हुआ है। चाय बागान श्रमिकों के लिए शुरू हुई योजना के लिए ब्रेक लगाया हुआ है। यानी विकास और जनकल्याण से ज्यादा प्राथमिकता निर्मम सरकार अपने राजनीतिक स्वार्थ को दे रही है।

साथियों,

देश में इस तरह की राजनीति की शुरुआत जिस दल ने की है, वो अपने गुनाहों से बच नहीं सकती और वो पार्टी है - कांग्रेस। कांग्रेस पार्टी की राजनीति का एक ही लक्ष्य रहा है, किसी भी तरह विकास का विरोध और कांग्रेस यह तब से कर रही है, जब मैं गुजरात में था। गुजरात में वर्षों तक जनता ने हमें आशीर्वाद दिया, तो कांग्रेस ने उस जनादेश को स्वीकार नहीं किया। उन्होंने गुजरात की छवि पर सवाल उठाए, उसकी प्रगति को कटघरे में खड़ा किया और जब यही विश्वास पूरे देश में दिखाई दिया, तो कांग्रेस का विरोध भी रीजनल से नेशनल हो गया।

साथियों,

जब राजनीति में विरोध, विकास के विरोध में बदल जाए, जब आलोचना देश की उपलब्धियों पर सवाल उठाने लगे, तब यह सिर्फ सरकार का विरोध नहीं रह जाता, यह देश की प्रगति से असहज होने की मानसिकता बन जाती है। आज कांग्रेस इसी मानसिकता की गुलाम बन चुकी है। आज स्थिति यह है कि देश की हर सफलता पर प्रश्न उठाया जाता है, हर उपलब्धि में कमी खोजी जाती है और हर प्रयास के असफल होने की कामना की जाती है। कोविड के समय, देश ने अपनी वैक्सीन बनाई, तो कांग्रेस ने उस पर भी संदेह जताया। Make in India की बात हुई, तो कहा गया कि यह सफल नहीं होगा, बब्बर शेर कहकर इसका मजाक उड़ाया गया। जब देश में डिजिटल इंडिया अभियान शुरू हुआ, तो उसका मजाक उड़ाया गया। लेकिन हर बार यह कांग्रेस का दुर्भाग्य और देश का सौभाग्य रहा कि भारत ने हर चुनौती को सफलता में बदला। आज भारत दुनिया की सबसे बड़ी वैक्सीनेशन ड्राइव का उदाहरण है। भारत डिजिटल पेमेंट्स में दुनिया का अग्रणी देश है। भारत मैन्युफैक्चरिंग और स्टार्टअप्स में नई ऊंचाइयों को छू रहा है।

साथियों,

लोकतंत्र में विरोध जरूरी होता है। लेकिन विरोध और विद्वेष के बीच एक रेखा होती है। सरकार का विरोध करना लोकतांत्रिक अधिकार है। लेकिन देश को बदनाम करना, यह कांग्रेस की नीयत पर सवाल खड़ा करता है। जब विरोध इस स्तर तक पहुंच जाए कि देश की उपलब्धियां भी असहज करने लगें, तो यह राजनीति नहीं, यह दृष्टिकोण की समस्या है। अभी हमने ग्लोबल AI समिट में भी देखा है। जब पूरी दुनिया भारत में जुटी हुई थी, तो कांग्रेस के लोग कपड़े फाड़ने वहां पहुंच गए थे। इन लोगों को देश की इज्जत की कितनी परवाह है, यह इसी से पता चलता है। इसलिए आज आवश्यकता है कि देशहित को, दलहित से ऊपर रखा जाए क्योंकि अंत में राजनीति से ऊपर, राष्ट्र होता है, राष्ट्र का विकास होता है।

साथियों,

आज का यह दिन भी हमें यही प्रेरणा देता है। आज के ही दिन शहीद भगत सिंह, शहीद राजगुरु और शहीद सुखदेव ने देश के लिए सर्वोच्च बलिदान दिया था। आज ही, समाजवादी आंदोलन के प्रखर आदर्श डॉ. राम मनोहर लोहिया जी की जयंती भी है। यह वो प्रेरणाएं हैं, जिन्होंने देश को हमेशा स्व से ऊपर रखा है। देशहित को सबसे ऊपर रखने की यही प्रेरणा, भारत को विकसित भारत बनाएगी। यही प्रेरणा भारत को आत्मनिर्भर बनाएगी। मुझे पूरा विश्वास है कि टीवी9 की यह समिट भी भारत के आत्मविश्वास और दुनिया के भरोसे पर, भारतीयों पर जो भरोसा है, उस भरोसे को और सशक्त करेगी। आप सभी को मेरी तरफ से बहुत-बहुत शुभकामनाएं हैं और आपके बीच आने का अवसर दिया, आप सबसे मिलने का मौका लिया, इसलिए बहुत-बहुत धन्यवाद!

नमस्‍कार!