ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಇಂದು ಚೆಸ್ ಚಾಂಪಿಯನ್ ಶ್ರೀ ಗುಕೇಶ್ ಡಿ ಅವರು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಗುಕೇಶ್ ಡಿ ಅವರ ಸಂಕಲ್ಪ ಮತ್ತು ಸಮರ್ಪಣೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಮತ್ತು ಅವರ ಆತ್ಮವಿಶ್ವಾಸವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು. ಆನಂತರ ನಮ್ಮ ಸಂಭಾಷಣೆ "ಯೋಗ ಮತ್ತು ಧ್ಯಾನದ ಪರಿವರ್ತಕ ಸಾಮರ್ಥ್ಯದ ವಿಷಯಗಳ ಕಡೆಗೆ ಸಾಗಿತು" ಎಂದು ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.

 'ಎಕ್ಸ್' ತಾಣದ ತಮ್ಮ ಸರಣಿ ಸಂದೇಶದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹೀಗೆ ಬರೆದಿದ್ದಾರೆ:

 “ಚೆಸ್ ಚಾಂಪಿಯನ್ ಮತ್ತು ಭಾರತದ ಹೆಮ್ಮೆ @DGukesh ಅವರೊಂದಿಗೆ ಉತ್ತಮ ಸಂವಾದವನ್ನು ನಡೆಸಿದೆ!"

"ನಾನು ಈಗ ಕೆಲವು ವರ್ಷಗಳಿಂದ ಅವರೊಂದಿಗೆ ನಿಕಟವಾಗಿ ಸಂವಹನ ನಡೆಸುತ್ತಿದ್ದೇನೆ ಮತ್ತು ಅವರ ಬಗ್ಗೆ ನನಗೆ ಹೆಚ್ಚು ಪ್ರಿಯವಾದ ವಿಷಯವೆಂದರೆ ಅವರ ನಿರ್ಣಯ ಮತ್ತು ಸಮರ್ಪಣೆ.  ಅವರ ಆತ್ಮವಿಶ್ವಾಸ ನಿಜಕ್ಕೂ ಸ್ಪೂರ್ತಿದಾಯಕ.  ವಾಸ್ತವವಾಗಿ, ಕೆಲವು ವರ್ಷಗಳಿಗೆ ಮೊದಲು,  "ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗುತ್ತಾನೆ" ಎಂದು ಅವರು ಈ ಹಿಂದೆ ಹೇಳಿದ್ದ ವೀಡಿಯೊವನ್ನು ನಾನು ನೋಡಿದ್ದೇನೆ - ಇದು ಅವರ ಸ್ವಂತ ಪ್ರಯತ್ನಗಳಿಂದ ಈಗ ಸ್ಪಷ್ಟವಾಗಿ, ವಾಸ್ತವವಾಗಿ , ಅಕ್ಷರಶಃ ಇಂದು ನಿಜವಾಗಿದೆ."

“ವಿಶ್ವಾಸದ ಜೊತೆಗೆ, ಗುಕೇಶ್ ಅವರು ಶಾಂತತೆ ಮತ್ತು ನಮ್ರತೆಯನ್ನು ಕೂಡ ಸಾಕಾರಗೊಳಿಸುತ್ತಾರೆ. ಗೆದ್ದ ನಂತರ, ಈ ಕಷ್ಟಪಟ್ಟು ಗಳಿಸಿದ ಗೆಲುವಿನ ಪ್ರಕ್ರಿಯೆಯನ್ನು ಹೇಗೆ ಸಾಕಾರಗೊಳಿಸಿದರು ಎಂಬುದನ್ನು ಅರ್ಥಮಾಡಿಕೊಂಡಾಗ ಅವರಿಗೆ ಆಗಿರುವ ಅನುಭವ ಹಾಗೂ ವೈಭವದ ಕ್ಷಣಗಳನ್ನು ಅವರು ಒಮ್ಮೆ ಮೆಲುಕು ಹಾಕಿಕೊಂಡರು.  ನಂತರ ನಮ್ಮ ಸಂಭಾಷಣೆಯು ಯೋಗ ಮತ್ತು ಧ್ಯಾನದ ಪರಿವರ್ತಕ ಸಾಮರ್ಥ್ಯದ ಸುತ್ತ ಹರಿಯಿತು."

“ಪ್ರತಿಯೊಬ್ಬ ಕ್ರೀಡಾಪಟುವಿನ ಯಶಸ್ಸಿನಲ್ಲಿ, ಅವರ ಹೆತ್ತವರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ.  ದೃಢ ಮತ್ತು ನಿರಂತರ ಪ್ರೋತ್ಸಾಹ ಮೂಲಕ ಅವರನ್ನು ಬೆಂಬಲಿಸಿದ್ದಕ್ಕಾಗಿ ನಾನು ಶ್ರೀ ಗುಕೇಶ್ ಅವರ ಪೋಷಕರನ್ನು ಅಭಿನಂದಿಸಿದೆ.  ಅವರ ಸಮರ್ಪಣೆಯು ಕ್ರೀಡೆಯನ್ನು ವೃತ್ತಿಯಾಗಿ ಮುಂದುವರಿಸುವ ಕನಸು ಕಾಣುವ ಯುವ ಆಕಾಂಕ್ಷಿಗಳ ಅಸಂಖ್ಯಾತ ಪೋಷಕರಿಗೆ ಸ್ಫೂರ್ತಿ ನೀಡುತ್ತದೆ."

"ಗುಕೇಶ್ ಅವರು ಸ್ಪರ್ಧೆಯಲ್ಲಿ ಗೆದ್ದು, ಮೂಲ ಚದುರಂಗ ಪದಕ ಹಾಗೂ ಫಲಕವನ್ನು ಸ್ವೀಕರಿಸಿದ್ದಕ್ಕಾಗಿ ನಾನು ಸಂತೋಷಪಡುತ್ತೇನೆ.  ಶ್ರೀ ಗುಕೇಶ್ ಡಿ. ಮತ್ತು ಶ್ರೀ ಡಿಂಗ್ ಲಿರೆನ್ ಇಬ್ಬರೂ ಸಹಿ ಮಾಡಿದ ಚದುರಂಗ ಫಲಕವು ದೀರ್ಘ ಕಾಲ ಕಾಪಾಡಿಕೊಳ್ಳಬೇಕಾದ ಒಂದು ಅತ್ಯಮೂಲ್ಯ ಸ್ಮರಣಿಕೆಯಾಗಿದೆ."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
As Naxalism ends in Chhattisgarh, village gets tap water for first time

Media Coverage

As Naxalism ends in Chhattisgarh, village gets tap water for first time
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 13 ಎಪ್ರಿಲ್ 2026
April 13, 2026

Nari Shakti, 7% Growth & Global Respect: PM Modi Leadership Formula India is Celebrating