ದಾಹೋದ್‌ನಲ್ಲಿ ಆದಿಜಾತಿ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ ಅವರು ಸುಮಾರು 22,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯುಎಚ್‌ಒನ ಜಾಗತಿಕ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ, ಗಾಂಧಿನಗರದಲ್ಲಿ ಜಾಗತಿಕ ಆಯುಷ್‌ ಹೂಡಿಕೆ ಮತ್ತು ನಾವೀನ್ಯತೆ ಶೃಂಗಶಭೆಯನ್ನು ಉದ್ಘಾಟಿಸಲಿದ್ದಾರೆ.
ಬನಸ್ಕಾಂತ್‌ದ ದಿಯೋದರ್‌ನಲ್ಲಿರುವ ಬನಾಸ್‌ ಡೈರಿ ಸಂಕುಲ್‌ನಲ್ಲಿ ಬಹುವಿಧದ ಅಭಿವೃದ್ಧಿ ಯೋಜನೆಗಳ ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಗಾಂಧಿನಗರದಲ್ಲಿರುವ ಶಾಲೆಗಳ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಗಳಿಗೆ ಪ್ರಧಾನಮಂತ್ರಿ ಭೇಟಿ ನೀಡಲಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಏಪ್ರಿಲ್‌ 18 ರಿಂದ 20 ರವರೆಗೆ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಏಪ್ರಿಲ್‌ 18 ರಂದು ಸುಮಾರು ಸಂಜೆ 6 ಗಂಟೆಗೆ ಪ್ರಧಾನಮಂತ್ರಿ ಅವರು ಗಾಂಧಿನಗರದಲ್ಲಿರುವ ಶಾಲೆಗಳ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಏಪ್ರಿಲ್‌ 19 ರಂದು, ಬೆಳಗ್ಗೆ 9:40 ರ ಸುಮಾರಿಗೆ, ಅವರು ಬನಸ್ಕಾಂತದ ದಿಯೋದರ್‌ನಲ್ಲಿರುವ ಬನಾಸ್‌ ಡೈರಿ ಸಂಕುಲ್‌ನಲ್ಲಿ ಬಹುವಿಧದ ಅಭಿವೃದ್ಧಿ ಯೋಜನೆಗಳ ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.  

ನಂತರ, ಮಧ್ಯಾಹ್ನ 3:30 ರ ಸುಮಾರಿಗೆ ಅವರು ಜಾಮ್‌ನಗರದಲ್ಲಿಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯುಎಚ್‌ಒನ ಜಾಗತಿಕ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಏಪ್ರಿಲ್‌ 20 ರಂದು, ಸುಮಾರು ಬೆಳಗ್ಗೆ 10:30 ಕ್ಕೆ, ಪ್ರಧಾನಮಂತ್ರಿ ಅವರು, ಗಾಂಧಿನಗರದಲ್ಲಿ ಜಾಗತಿಕ ಆಯುಷ್‌ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ನಂತರ, ಮಧ್ಯಾಹ್ನ 3:30 ರ ಸುಮಾರಿಗೆ, ಅವರು ದಾಹೋದ್‌ನಲ್ಲಿ ನಡೆಯಲಿರುವ ಆದಿಜಾತಿ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನಂತರ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಶಾಲೆಗಳಿಗೆ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರದಲ್ಲಿಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಏಪ್ರಿಲ್‌ 18 ರಂದು ಸಂಜೆ 6 ಗಂಟೆಗೆ ಗಾಂಧಿನಗರದಲ್ಲಿರುವ ಶಾಲೆಗಳ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಕೇಂದ್ರವು ವಾರ್ಷಿಕವಾಗಿ 500 ಕೋಟಿ ಡೇಟಾ ಸೆಟ್‌ಗಳನ್ನು ಸಂಗ್ರಹಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಒಟ್ಟಾರೆ ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸಲು ದೊಡ್ಡ ಡೇಟಾ ವಿಶ್ಲೇಷಣೆ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಂಡು ಅರ್ಥಪೂರ್ಣವಾಗಿ ವಿಶ್ಲೇಷಿಸುತ್ತದೆ. ಶಿಕ್ಷ ಕರು ಮತ್ತು ವಿದ್ಯಾರ್ಥಿಗಳ ದೈನಂದಿನ ಆನ್‌ಲೈನ್‌ ಹಾಜರಾತಿಯನ್ನು ಪತ್ತೆ ಹಚ್ಚಲು ಕೇಂದ್ರವು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳ ಕಲಿಕಾ ಫಲಿತಾಂಶದ ಕೇಂದ್ರೀಕೃತ ಸಂಕಲನಾತ್ಮಕ ಮತ್ತು ಆವರ್ತಕ ಮೌಲ್ಯಮಾಪನಗಳನ್ನು ಕೈಗೊಳ್ಳುತ್ತದೆ. ಶಾಲೆಗಳ ಕಮಾಂಡ್‌ ಮತ್ತು ನಿಯಂತ್ರಣ ಕೇಂದ್ರವನ್ನು ವಿಶ್ವಬ್ಯಾಂಕ್‌ ಜಾಗತಿಕ ಅತ್ಯುತ್ತಮ ಅಭ್ಯಾಸವೆಂದು ಪರಿಗಣಿಸಿದೆ.ಇದಲ್ಲದೆ, ಭೇಟಿ ನೀಡಲು ಮತ್ತು ಇದರ ಬಗ್ಗೆ ತಿಳಿದುಕೊಳ್ಳಲು ಈ ಕೇಂದ್ರ ಇತರ ದೇಶಗಳನ್ನು ಸಹ ಆಹ್ವಾನಿಸಿದೆ. 

ಬನಸ್ಕಾಂತದ ದಿಯೋದರ್‌ನಲ್ಲಿರುವ ಬನಾಸ್‌ ಡೈರಿ ಸಂಕುಲದಲ್ಲಿಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿ ಏಪ್ರಿಲ್‌ 19ರಂದು ಸುಮಾರು ಬೆಳಗ್ಗೆ 9:40ಕ್ಕೆ 600 ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾಗಿರುವ ಹೊಸ ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹೊಸ ಡೈರಿ ಸಂಕೀರ್ಣವು ಹಸಿರುಕ್ಷೇತ್ರ ಯೋಜನೆಯಾಗಿದೆ. ಇದು ದಿನಕ್ಕೆ ಸುಮಾರು 30 ಲಕ್ಷ  ಲೀಟರ್‌ ಹಾಲು ಸಂಸ್ಕರಣೆ, ಸುಮಾರು 80 ಟನ್‌ ಬೆಣ್ಣೆ, ಒಂದು ಲಕ್ಷ  ಲೀಟರ್‌ ಐಸ್‌ ಕ್ರೀಮ…, 20 ಟನ್‌ ಮಂದಗೊಳಿಸಿದ ಹಾಲು (ಖೋವ) ಮತ್ತು 6 ಟನ್‌ ಚಾಕೊಲೇಟ್‌ ಅನ್ನು ಉತ್ಪಾದಿಸುತ್ತದೆ. ಆಲೂಗೆಡ್ಡೆ ಸಂಸ್ಕರಣಾ ಘಟಕವು ಫ್ರೆಂಚ್‌ ಫ್ರೈಸ್‌, ಆಲೂಗಡ್ಡೆ ಚಿಫ್ಸ್‌, ಆಲೂ ಟಿಕ್ಕಿ, ಪ್ಯಾಟೀಸ್‌ ಮುಂತಾದ ವಿವಿಧ ರೀತಿಯ ಸಂಸ್ಕರಿಸಿದ ಆಲೂಗಡ್ಡೆ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಇವುಗಳಲ್ಲಿ ಹಲವು ಇತರ ದೇಶಗಳಿಗೆ ರಫ್ತು ಮಾಡಲ್ಪಡುತ್ತವೆ. ಈ ಸಸ್ಯಗಳು ಸ್ಥಳೀಯ ರೈತರನ್ನು ಸಬಲೀಕರಣಗೊಳಿಸುತ್ತವೆ ಮತ್ತು ಈ ಪ್ರದೇಶದಲ್ಲಿ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡುತ್ತವೆ.

ಪ್ರಧಾನಮಂತ್ರಿ ಅವರು ಬನಾಸ್‌ ಸಮುದಾಯ ರೇಡಿಯೊ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಪ್ರಮುಖ ವೈಜ್ಞಾನಿಕ ಮಾಹಿತಿಯನ್ನು ರೈತರಿಗೆ ಒದಗಿಸಲು ಈ ಸಮುದಾಯ ರೇಡಿಯೊ ಕೇಂದ್ರವನ್ನು ಸ್ಥಾಪಿಸಿದೆ. ಆಕಾಶವಾಣಿ ಕೇಂದ್ರವು ಸುಮಾರು 1700 ಹಳ್ಳಿಗಳ 5 ಲಕ್ಷ ಕ್ಕೂ ಹೆಚ್ಚು ರೈತರೊಂದಿಗೆ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ.

ಪಲನ್‌ಪುರನಲ್ಲಿರುವ ಬನಾಸ್‌ ಡೈರಿ ಘಟಕದಲ್ಲಿಚೀಸ್‌ ಉತ್ಪನ್ನಗಳು ಮತ್ತು ಹಾಲೊಡಕು ಪುಡಿ ಉತ್ಪಾದನೆಗೆ ವಿಸ್ತೃತ ಸೌಲಭ್ಯಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಲ್ಲದೆ, ಗುಜರಾತ್‌ನ ದಾಮಾದಲ್ಲಿ ಸ್ಥಾಪಿಸಲಾದ ಸಾವಯವ ಗೊಬ್ಬರ ಮತ್ತು ಜೈವಿಕ ಅನಿಲ ಘಟಕವನ್ನು ಪ್ರಧಾನಿ ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಖಿಮಾನ, ರತನ್‌ಪುರ - ಭಿಲ್ಡಿ, ರಾಧನ್‌ಪುರ ಮತ್ತು ಥಾವರ್‌ನಲ್ಲಿ ಸ್ಥಾಪಿಸಲಾಗುವ 100 ಟನ್‌ ಸಾಮರ್ಥ್ಯ‌ದ ನಾಲ್ಕು ಗೋಬರ್‌ ಗ್ಯಾಸ್‌ ಸ್ಥಾವರಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಾಂಪ್ರದಾಯಿಕ ಔಷಧಕ್ಕಾಗಿ ಡಬ್ಲ್ಯುಎಚ್‌ಒನ ಜಾಗತಿಕ ಕೇಂದ್ರ

ಪ್ರಧಾನಮಂತ್ರಿ ಅವರು ಏಪ್ರಿಲ್‌ 19 ರಂದು ಮಧ್ಯಾಹ್ನ 3:30 ರ ಸುಮಾರಿಗೆ ಜಾಮ್‌ಗರದಲ್ಲಿಸಾಂಪ್ರದಾಯಿಕ ಔಷಧಕ್ಕಾಗಿ ಜಾಗದಿಕ ಕೇಂದ್ರ (ಜಿಸಿಟಿಎಂ) ಗೆ ಮಾರಿಷಸ್‌ನ ಪ್ರಧಾನ ಮಂತ್ರಿ ಶ್ರೀ ಪ್ರವಿಂದ್‌ ಕುಮಾರ್‌ ಜುಗ್ನೌತ್‌ ಮತ್ತು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ)ದ ಪ್ರಧಾನ  ನಿರ್ದೇಶಕ ಡಾ. ಟೆಡ್ರೊಸ್‌ Nಬ್ರೆಯೆಸಸ್‌ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಿಸಿಟಿಎಂ ಪ್ರಪಂಚದಾದ್ಯಂತ ಸಾಂಪ್ರದಾಯಿಕ ಔಷಧಕ್ಕಾಗಿ ಮೊದಲ ಮತ್ತು ಏಕೈಕ ಜಾಗತಿಕ ಹೊರಠಾಣೆ ಕೇಂದ್ರವಾಗಿದೆ. ಇದು ಜಾಗತಿಕ ಸ್ವಾಸ್ಥ್ಯದ ಅಂತಾರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮಲಿದೆ.

ಜಾಗತಿಕ ಆಯುಷ್‌ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆ

ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆಯಲಿರುವ ಜಾಗತಿಕ ಆಯುಷ್‌ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಪ್ರಧಾನ ಮಂತ್ರಿ ಅವರು ಏಪ್ರಿಲ್‌ 20 ರಂದು ಬೆಳಗ್ಗೆ 10:30 ರ ಸುಮಾರಿಗೆ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿಮಾರಿಷಸ್‌ನ ಪ್ರಧಾನ ಮಂತ್ರಿ ಮತ್ತು ಡಬ್ಲ್ಯುಎಚ್‌ಒ ಡಿಜಿ ಸಹ ಉಪಸ್ಥಿತರಿರುವರು. ಮೂರು ದಿನಗಳ ಶೃಂಗಸಭೆಯು ಸುಮಾರು 90 ಪ್ರಖ್ಯಾತ ಭಾಷಣಕಾರರು ಮತ್ತು 100 ಪ್ರದರ್ಶಕರ ಉಪಸ್ಥಿತಿಯೊಂದಿಗೆ 5 ಪ್ಲೀನರಿ ಅಧಿವೇಶನಗಳು, 8 ದುಂಡುಮೇಜಿನಗಳು, 6 ಕಾರ್ಯಾಗಾರಗಳು ಮತ್ತು 2 ವಿಚಾರ ಸಂಕಿರಣಗಳಿಗೆ ಸಾಕ್ಷಿಯಾಗಲಿದೆ. ಶೃಂಗಸಭೆಯು ಹೂಡಿಕೆಯ ಸಾಮರ್ಥ್ಯ‌ವನ್ನು ಬಹಿರಂಗಪಡಿಸಲು ಸಹಾಯ ಮಾಡುತ್ತದೆ ಮತ್ತು ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮ ಪರಿಸರ ವ್ಯವಸ್ಥೆ ಮತ್ತು ಕ್ಷೇಮ ಉದ್ಯಮಕ್ಕೆ ಪೂರಕತೆಯನ್ನು ನೀಡುತ್ತದೆ. ಇದು ಉದ್ಯಮದ ನಾಯಕರು, ಶಿಕ್ಷ ಣ ತಜ್ಞರು ಮತ್ತು ವಿದ್ವಾಂಸರನ್ನು ಒಟ್ಟಿಗೆ ಸೇರಿಸಲು ಸಹಾಯ ಮಾಡುತ್ತದೆ ಮತ್ತು ಭವಿಷ್ಯದ ಸಹಯೋಗಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ದಾಹೋದ್‌ನಲ್ಲಿ ಆದಿಜಾತಿ ಮಹಾ ಸಮ್ಮೇಳನದಲ್ಲಿ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರು ಏಪ್ರಿಲ್‌ 20 ರಂದು ಮಧ್ಯಾಹ್ನ 3:30 ಕ್ಕೆ ದಾಹೋದ್‌ನಲ್ಲಿ ಆದಿಜಾತಿ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಅವರು ಸುಮಾರು 22,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಸಮ್ಮೇಳನದಲ್ಲಿ2 ಲಕ್ಷ ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.

1400 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅವರು ಸುಮಾರು 840 ಕೋಟಿ ರೂಪಾಯಿ ವೆಚ್ಚದಲ್ಲಿನರ್ಮದಾ ನದಿಯ ಜಲಾನಯನ ಪ್ರದೇಶದಲ್ಲಿನಿರ್ಮಿಸಲಾದ ದಾಹೋದ್‌ ಜಿಲ್ಲಾ ದಕ್ಷಿಣ ಪ್ರದೇಶದ ಪ್ರಾದೇಶಿಕ ನೀರು ಸರಬರಾಜು ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಇದು ದಾಹೋದ್‌ ಜಿಲ್ಲೆ ಮತ್ತು ದೇವಗಢ್‌ ಬರಿಯಾ ನಗರದ ಸುಮಾರು 280 ಹಳ್ಳಿಗಳ ನೀರು ಸರಬರಾಜು ಅಗತ್ಯಗಳನ್ನು ಪೂರೈಸುತ್ತದೆ. ಪ್ರಧಾನಿ ಅವರು ಸುಮಾರು 335 ಕೋಟಿ ರೂಪಾಯಿ ಮೌಲ್ಯದ ದಾಹೋದ್‌ ಸ್ಮಾರ್ಟ್‌ ಸಿಟಿಯ ಐದು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಯೋಜನೆಗಳಲ್ಲಿ ಇಂಟಿಗ್ರೇಟೆಡ್‌ ಕಮಾಂಡ್‌  ಕಂಟ್ರೋಲ್‌ ಸೆಂಟರ್‌ (ಐಸಿಸಿಸಿ) ಕಟ್ಟಡ, ಬಿರುಗಾಳಿ ನೀರಿನ ಒಳಚರಂಡಿ ವ್ಯವಸ್ಥೆ, ಒಳಚರಂಡಿ ಕಾಮಗಾರಿಗಳು, ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆ ಸೇರಿವೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿಯಲ್ಲಿಪಂಚಮಹಲ್‌ ಮತ್ತು ದಾಹೋದ್‌ ಜಿಲ್ಲೆಗಳ 10,000 ಆದಿವಾಸಿಗಳಿಗೆ 120 ಕೋಟಿ  ರೂಪಾಯಿ ನೀಡಲಾಗುವುದು. ಪ್ರಧಾನಮಂತ್ರಿ ಅವರು 66 ಕೆವಿ ಘೋಡಿಯಾ ಸಬ್‌ ಸ್ಟೇಷನ್‌, ಪಂಚಾಯತ್‌ ಮನೆಗಳು, ಅಂಗನವಾಡಿಗಳು ಮತ್ತು ಇನ್ನಿತರ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿ ಅವರು ದಾಹೋದ್‌ನಲ್ಲಿರುವ ಉತ್ಪಾದನಾ ಘಟಕದಲ್ಲಿ9000 ಎಚ್‌ಪಿ ಎಲೆಕ್ಟ್ರಿಕ್‌ ಲೋಕೋಮೋಟಿವ್‌ಗಳ ತಯಾರಿಕೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಸುಮಾರು 20,000 ಕೋಟಿ ರೂಪಾಯಿ ಯೋಜನೆಯ ವೆಚ್ಚದಲ್ಲಿ1926 ರಲ್ಲಿ ಉಗಿ ಲೋಕೋಮೋಟಿವ್‌ಗಳ ಆವರ್ತಕ ಕೂಲಂಕಷ ಪರೀಕ್ಷೆಗಾಗಿ ಸ್ಥಾಪಿಸಲಾದ ದಾಹೋದ್‌ ಕಾರ್ಯಾಗಾರವನ್ನು ಮೂಲಸೌಕರ್ಯ ಸುಧಾರಣೆಗಳೊಂದಿಗೆ ಎಲೆಕ್ಟ್ರಿಕ್‌ ಲೋಕೋಮೋಟಿವ್‌ ಉತ್ಪಾದನಾ ಘಟಕಕ್ಕೆ ನವೀಕರಿಸಲಾಗುತ್ತದೆ. ಇದು 10,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ  ಉದ್ಯೋಗವನ್ನು ಒದಗಿಸುತ್ತದೆ. ಪ್ರಧಾನಮಂತ್ರಿ ಅವರು ರಾಜ್ಯ ಸರ್ಕಾರದ ಸುಮಾರು 550 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ ನೀರು ಸರಬರಾಜು ಸಂಬಂಧಿತ ಯೋಜನೆಗಳು ಸುಮಾರು 300 ಕೋಟಿ ರೂಪಾಯಿ, ದಾಹೋದ್‌ ಸ್ಮಾರ್ಟ್‌ ಸಿಟಿ ಯೋಜನೆಗಳು ಸುಮಾರು 175 ಕೋಟಿ ರೂಪಾಯಿಗಳು, ದುಧಿಮತಿ ನದಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳು, ಘೋಡಿಯಾದಲ್ಲಿ ಜಿಇಟಿಸಿಒ ಉಪಕೇಂದ್ರ ಇತ್ಯಾದಿ ಸೇರಿವೆ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Jan Dhan accounts hold Rs 2.75 lakh crore in banks: Official

Media Coverage

Jan Dhan accounts hold Rs 2.75 lakh crore in banks: Official
NM on the go

Nm on the go

Always be the first to hear from the PM. Get the App Now!
...
Prime Minister condoles loss of lives due to a mishap in Nashik, Maharashtra
December 07, 2025

The Prime Minister, Shri Narendra Modi has expressed deep grief over the loss of lives due to a mishap in Nashik, Maharashtra.

Shri Modi also prayed for the speedy recovery of those injured in the mishap.

The Prime Minister’s Office posted on X;

“Deeply saddened by the loss of lives due to a mishap in Nashik, Maharashtra. My thoughts are with those who have lost their loved ones. I pray that the injured recover soon: PM @narendramodi”