ವಿಶ್ವ ಹತ್ಯಾಕಾಂಡದ ಸ್ಮಾರಕ ಕೇಂದ್ರ - ಯಾದ್ ವಶೆಮ್ ಗೆ ಪ್ರಧಾನಮಂತ್ರಿ ಭೇಟಿ

February 26th, 09:02 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಮಂತ್ರಿ ಮಾನ್ಯ ಶ್ರೀ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಇಂದು ಜೆರುಸಲೇಮ್ ನಲ್ಲಿರುವ ವಿಶ್ವ ಹತ್ಯಾಕಾಂಡದ ಸ್ಮಾರಕ ಕೇಂದ್ರವಾದ ಯಾದ್ ವಾಶೆಮ್ ಗೆ ಭೇಟಿ ನೀಡಿ, ಹತ್ಯಾಕಾಂಡದಲ್ಲಿ ಮೃತಪಟ್ಟವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಮಂತ್ರಿಯವರು ಸ್ಮಾರಕ ಭವನದಲ್ಲಿ ನಡೆದ ಔಪಚಾರಿಕ ದುಃಖಕರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಧಿಕೃತ ಧಾರ್ಮಿಕ ಕಾರ್ಯಕ್ರಮ ಕ್ಯಾಂಟರ್ ನಲ್ಲಿ ಎಲ್ ಮಾಲೆಹ್ ರಹಮೀಮ್ ನ ಹೃದಯಸ್ಪರ್ಶಿ ಪಠಣ ನಡೆಯಿತು. ಹತ್ಯಾಕಾಂಡದಲ್ಲಿ ಪ್ರಾಣತೆತ್ತವರ ವೈಯಕ್ತಿಕ ಜೀವನಗಾಥೆಗಳನ್ನು ಪ್ರದರ್ಶಿಸುವ ಹೆಸರುಗಳ ಪುಸ್ತಕ ಸಭಾಂಗಣಕ್ಕೂ ಪ್ರಧಾನಮಂತ್ರಿ ಭೇಟಿ ನೀಡಿದರು.

ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಪ್ರಧಾನಿ ಭೇಟಿ ನೀಡಿದರು

July 04th, 08:58 pm

ಇಂದು ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ಶ್ರೀ. ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ನ ಜೆರುಸಲೆಮ್ ನ ಯಾದ್ ವಶೆಮ್ ಸಾಮೂಹಿಕ ಬಲಿದಾನದ ಸ್ಮಾರಕಕ್ಕೆ ಭೇಟಿ ನೀಡಿದರು.