ಭಾರತ-ಮಾರಿಷಸ್ ಜಂಟಿ ಘೋಷಣೆ; ವಿಶೇಷ ಆರ್ಥಿಕ ಪ್ಯಾಕೇಜ್
September 11th, 01:53 pm
ಭಾರತ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಮಾರಿಷಸ್ ಗಣರಾಜ್ಯದ ಪ್ರಧಾನಮಂತ್ರಿ ಗೌರವಾನ್ವಿತ ಸನ್ಮಾನ್ಯ ಡಾ. ನವೀನ್ಚಂದ್ರ ರಾಮಗೂಲಂ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ. ಇಬ್ಬರೂ ಪ್ರಧಾನಮಂತ್ರಿ ಇಂದು ವಾರಣಾಸಿಯಲ್ಲಿ ವ್ಯಾಪಕ ಶ್ರೇಣಿಯ ದ್ವಿಪಕ್ಷೀಯ ವಿಷಯಗಳ ಕುರಿತು ತುಂಬಾ ಫಲಪ್ರದ ಸಮಾಲೋಚನೆಗಳನ್ನು ನಡೆಸಿದರು. ಮಾರಿಷಸ್ ಸರ್ಕಾರ ಸಲ್ಲಿಸಿದ ಮನವಿ ಆಧರಿಸಿ ಭಾರತ ಮತ್ತು ಮಾರಿಷಸ್ ಜಂಟಿಯಾಗಿ ಕಾರ್ಯಗತಗೊಳಿಸಲು ಈ ಕೆಳಗಿನ ಯೋಜನೆಗಳನ್ನು ತಾತ್ವಿಕವಾಗಿ ಒಪ್ಪಿಕೊಂಡಿವೆ.