ಖ್ಯಾತ ಛಾಯಾಗ್ರಾಹಕ ಶ್ರೀ ರಘು ರೈ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
April 26th, 08:34 pm
ಪ್ರಧಾನಮಂತ್ರಿ ಅವರು ಖ್ಯಾತ ಛಾಯಾಗ್ರಾಹಕ ರಘು ರೈ ಅವರ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ಅವರನ್ನು ತಮ್ಮ ಲೆನ್ಸ್( ಮಸೂರ)ದ ಮೂಲಕ ಭಾರತದ ಚೈತನ್ಯವನ್ನು ಅಮರಗೊಳಿಸಿದ ಸೃಜನಶೀಲ ದಿಗ್ಗಜ ಎಂದು ಬಣ್ಣಿಸಿದ್ದಾರೆ. ಶ್ರೀ ರಘು ರೈ ಅವರ ಕೆಲಸವು ಅಸಾಧಾರಣ ಸಂವೇದನೆ, ಆಳ ಮತ್ತು ವೈವಿಧ್ಯತೆಯಿಂದ ಗುರುತಿಸಲ್ಪಟ್ಟಿದೆ. ಭಾರತದಾದ್ಯಂತ ಜೀವನದ ಹಲವು ಅಂಶಗಳನ್ನು ಸೆರೆಹಿಡಿದು ಜನರಿಗೆ ಹತ್ತಿರವಾಗಿದ್ದರು ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಛಾಯಾಗ್ರಹಣ ಮತ್ತು ಸಾಂಸ್ಕೃತಿಕ ಜಗತ್ತಿಗೆ ಅವರ ಕೊಡುಗೆ ಅಪ್ರತಿಮ ಮತ್ತು ಅವರ ನಿಧನದಿಂದ ಕಲಾ ಸಮುದಾಯಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.