ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಶ್ರೀಲಂಕಾದ ಭಾರತೀಯ ಮೂಲದ ತಮಿಳು ನಾಯಕರು

April 05th, 10:59 pm

ಶ್ರೀಲಂಕಾದಲ್ಲಿರುವ ಭಾರತೀಯ ಮೂಲದ ತಮಿಳು (IOT) ನಾಯಕರು ಇಂದು ರಾಜಧಾನಿ ಕೊಲಂಬೊದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿಯಾದರು. ಶ್ರೀಲಂಕಾ ಸರ್ಕಾರದ ಸಹಕಾರದೊಂದಿಗೆ 10,000 ಮನೆಗಳು, ಆರೋಗ್ಯ ಸೌಲಭ್ಯಗಳು, ಪವಿತ್ರ ಸ್ಥಳ ಸೀತಾ ಎಲಿಯಾ ದೇವಾಲಯ ಭಾರತೀಯ ಮೂಲದ ತಮಿಳರ ಅಭಿವೃದ್ಧಿ ಯೋಜನೆಗಳ ನಿರ್ಮಾಣಕ್ಕೆ ಭಾರತ ಸರ್ಕಾರ ಬೆಂಬಲ ನೀಡಲಿದೆ ಎಂದು ಎಂದು ಶ್ರೀ ಮೋದಿಯವರು ಘೋಷಿಸಿದರು.