ಸಂಸ್ಕೃತ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ, ಮಾತೆ ಕಾತ್ಯಾಯಿನಿಯ ಆಶೀರ್ವಾದ ಕೋರಿ, ಭಕ್ತಿ ಪಠಣವನ್ನು ಹಂಚಿಕೊಂಡರು

March 24th, 08:06 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತೆ ಕಾತ್ಯಾಯಿನಿಯ ಆಶೀರ್ವಾದವನ್ನು ಕೋರಿದರು ಮತ್ತು ಮಾತೆ ಜಗದಂಬೆ ಅವರ ಆರಾಧನೆಯು ಮನಸ್ಸನ್ನು ಅನಂತ ಶಕ್ತಿ ಮತ್ತು ಆಂತರಿಕ ಶಕ್ತಿಯಿಂದ ತುಂಬುತ್ತದೆ. ಆದರೆ ಅವರ ದೈವಿಕ ತೇಜಸ್ಸು ಹೃದಯವನ್ನು ಉನ್ನತ ಪ್ರಜ್ಞೆಯಿಂದ ಬೆಳಗಿಸುತ್ತದೆ ಎಂದು ಹೇಳಿದರು. ದೈವತ್ವ ಮತ್ತು ಶೌರ್ಯದ ಮೂರ್ತರೂಪವಾಗಿರುವ ದೇವಿಯ ಆಶೀರ್ವಾದದಿಂದ, ಅವರ ಎಲ್ಲಾ ಭಕ್ತರು ಅಪಾರ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೊಂದಿರಲಿ ಎಂದು ಅವರು ಪ್ರಾರ್ಥಿಸಿದರು.

ಮಾ ಅಂಬೆಯ ಪೂಜಾ ಕೈಂಕರ್ಯದಿಂದ ಸಿಗುವ ದೈವಿಕ ಅನುಗ್ರಹ ಮತ್ತು ಆಧ್ಯಾತ್ಮಿಕ ಆನಂದದ ಬಗ್ಗೆ ಪ್ರಧಾನಮಂತ್ರಿ ಪ್ರಸ್ತಾಪ

March 23rd, 08:50 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಆಧ್ಯಾತ್ಮಿಕ ಸಾರದ ಕುರಿತು ಇಂದು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಾ, ಮಾತೆ ದೇವಿಯ ಆರಾಧನೆಯಿಂದ ಸಿಗುವ ಅಗಾಧ ಶಾಂತಿ ಮತ್ತು ಶಕ್ತಿಯ ಬಗ್ಗೆ ಒತ್ತಿ ಹೇಳಿದ್ದಾರೆ. ಶ್ರೀ ಮೋದಿ ಅವರು ದೇವಿಗೆ ಸಮರ್ಪಿತವಾದ ಭಕ್ತಿಗೀತೆಯನ್ನು ಸಹ ಹಂಚಿಕೊಂಡಿದ್ದಾರೆ.

ನವರಾತ್ರಿಯ ಸಂದರ್ಭದಲ್ಲಿ ಭಕ್ತಿಯ ಅಪಾರ ಶಕ್ತಿಯ ಕುರಿತು ಪ್ರಧಾನಮಂತ್ರಿ ತಮ್ಮ ಚಿಂತನೆ ಹರಿಸಿದ್ದಾರೆ

March 22nd, 09:12 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವರಾತ್ರಿಯ ಆಧ್ಯಾತ್ಮಿಕ ಮಹತ್ವದ ಕುರಿತು ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದು, ತಾಯಿ ದೇವಿಯ ಭಕ್ತಿಯಿಂದ ದೊರೆಯುವ ಅಪಾರ ಶಕ್ತಿ ಮತ್ತು ಸಾಮರ್ಥ್ಯವನ್ನು ಸಾರಿದ್ದಾರೆ.

ಮತುವಾ ಧರ್ಮ ಮೇಳದಲ್ಲಿ ಭಾಗವಹಿಸಿದವರು ಮತ್ತು ಭಕ್ತರಿಗೆ ಶುಭ ಕೋರಿದ ಪ್ರಧಾನಮಂತ್ರಿ

March 16th, 01:12 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮತುವಾ ಧರ್ಮ ಮೇಳದಲ್ಲಿ ಭಾಗವಹಿಸಿದ ಎಲ್ಲಾ ಭಕ್ತರು ಮತ್ತು ಭಾಗವಹಿಸುವವರಿಗೆ ಶುಭಾಶಯ ಕೋರಿದ್ದಾರೆ. ಈ ವಿಶೇಷ ಸಂದರ್ಭವು ಪೂರ್ಣ ಬ್ರಹ್ಮ ಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ ಜಯಂತಿಯ ಜತೆ ಸಂಬಂಧ ಹೊಂದಿದೆ. ನಾನು ಅವರಿಗೆ ನನ್ನ ವಿನಮ್ರ ನಮಸ್ಕಾರಗಳನ್ನು ಸಲ್ಲಿಸುತ್ತೇನೆ. ಅವರ ಚಿಂತನೆಗಳು ಮತ್ತು ಬೋಧನೆಗಳು ಹಲವಾರು ಜನರಿಗೆ ಶಕ್ತಿ ಮತ್ತು ಭರವಸೆಯನ್ನು ನೀಡುತ್ತಲೇ ಇವೆ. ಅವರು ಘನತೆ, ಸಮಾನತೆ ಮತ್ತು ಭಕ್ತಿಗಾಗಿ ಶಕ್ತಿಯುತ ಚಳವಳಿಯನ್ನು ಜಾಗೃತಗೊಳಿಸಿದರು. ಅವರು ತಲೆಮಾರುಗಳನ್ನು ಸದಾಚಾರ, ಸಾಮರಸ್ಯ ಮತ್ತು ಸಾಮೂಹಿಕ ಉನ್ನತಿಯ ಹಾದಿಯಲ್ಲಿ ನಡೆಯಲು ಪ್ರೇರೇಪಿಸಿದರು, ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಪುಲ್ವಾಮಾದ ವೀರ ಯೋಧರನ್ನು ಸ್ಮರಿಸಿದ ಪ್ರಧಾನಮಂತ್ರಿ

February 14th, 11:06 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರಲ್ಲಿ ಈ ದಿನದಂದು ಪುಲ್ವಾಮಾದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರರನ್ನು ಸ್ಮರಿಸಿದ್ದಾರೆ. ಅವರ ಭಕ್ತಿ, ಸಂಕಲ್ಪ ಮತ್ತು ರಾಷ್ಟ್ರಕ್ಕೆ ಸಲ್ಲಿಸುವ ಸೇವೆಯು ನಮ್ಮ ಸಾಮೂಹಿಕ ಪ್ರಜ್ಞೆಯಲ್ಲಿ ಶಾಶ್ವತವಾಗಿ ಉಳಿದಿದೆ ಮತ್ತು ಪ್ರತಿಯೊಬ್ಬ ಭಾರತೀಯನೂ ಅವರ ನಿರಂತರ ಧೈರ್ಯದಿಂದ ಶಕ್ತಿಯನ್ನು ಪಡೆಯುತ್ತಾನೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ರಾಷ್ಟ್ರ ಮತ್ತು ಮಾನವೀಯತೆಯ ಸೇವೆಯಲ್ಲಿ ಸಂಪೂರ್ಣ ಭಕ್ತಿಯನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

February 11th, 10:31 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರ ಮತ್ತು ಮಾನವೀಯತೆಯ ಸೇವೆಯಲ್ಲಿ ಸಂಪೂರ್ಣ ಭಕ್ತಿಯನ್ನು ವಿವರಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡರು.

ಸೋಮನಾಥದ ಕಾಲಾತೀತ ಮಹತ್ವವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

January 09th, 09:37 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥದ ಕಾಲಾತೀತ ಮಹತ್ವವನ್ನು ಪುನರುಚ್ಚರಿಸಿದರು, ಇದು ಭಾರತದ ಆಧ್ಯಾತ್ಮಿಕ ಶಕ್ತಿ ಮತ್ತು ಭಕ್ತಿಯ ಶಾಶ್ವತ ಸಾಕಾರ ಎಂದು ಬಣ್ಣಿಸಿದರು.