ಕವಿ ಮತ್ತು ಚಿಂತಕ ಅಂದೇ ಶ್ರೀ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

November 10th, 03:02 pm

ಅಂದೇ ಶ್ರೀ ಅವರ ಆಲೋಚನೆಗಳು ತೆಲಂಗಾಣದ ಆತ್ಮವನ್ನು ಪ್ರತಿಬಿಂಬಿಸುತ್ತವೆ. ಒಬ್ಬ ಪ್ರತಿಭಾನ್ವಿತ ಕವಿ ಮತ್ತು ಚಿಂತಕರಾಗಿದ್ದ ಅವರು ಜನರ ಧ್ವನಿಯಾಗಿದ್ದರು, ಅವರ ಹೋರಾಟಗಳು, ಆಕಾಂಕ್ಷೆಗಳು ಮತ್ತು ಅವಿನಾಭಾವ ಚೈತನ್ಯವನ್ನು ವ್ಯಕ್ತಪಡಿಸುತ್ತಿದ್ದರು. ಅವರ ಮಾತುಗಳು ಹೃದಯಗಳನ್ನು ಕಲಕುವ, ಧ್ವನಿಗಳನ್ನು ಒಂದುಗೂಡಿಸುವ ಮತ್ತು ಸಮಾಜದ ಸಾಮೂಹಿಕ ನಾಡಿಮಿಡಿತಕ್ಕೆ ಆಕಾರ ನೀಡುವ ಶಕ್ತಿಯನ್ನು ಹೊಂದಿದ್ದವು. ಅವರು ಸಾಮಾಜಿಕ ಪ್ರಜ್ಞೆಯನ್ನು ಸಾಹಿತ್ಯ ಸೌಂದರ್ಯದೊಂದಿಗೆ ಬೆರೆಸಿದ ರೀತಿ ಅತ್ಯುತ್ತಮವಾಗಿತ್ತು ಎಂದು ಶ್ರೀ ಮೋದಿ ಹೇಳಿದರು.